ಸಿಎಂ ಕಾರ್ಯಾಲಯದ ಮೇಲೆ ‘ಪಕ್ಷ-ಸಂಘ’ದ ಹಿಡಿತ?; ಬಿಎಸ್‌ವೈ ಅವಧಿಯ 19 ಸಿಬ್ಬಂದಿಗೆ ಗೇಟ್‌ಪಾಸ್‌!

ಬೆಂಗಳೂರು: ಬಿಜೆಪಿ ವರಿಷ್ಠರ ಸೂಚನೆ ಅನುಸಾರ ಮುಖ್ಯಮಂತ್ರಿಯವರ ಆಪ್ತ ಕಾರ್ಯಾಲಯದ ಮೇಲೆ ಪಕ್ಷ ಮತ್ತು ಸಂಘ ಪರಿವಾರ ಹಿಡಿತ ಸಾಧಿಸುವ ನಿರೀಕ್ಷೆಯಿದೆ. ಯಡಿಯೂರಪ್ಪ ಅವಧಿಯಲ್ಲಿ ಸಿಎಂ ಕಾರ್ಯಾಲಯದಲ್ಲಿದ್ದ 19 ಸಿಬ್ಬಂದಿಯನ್ನು ಹಾಲಿ ಸಿಎಂ ಬಿಡುಗಡೆಗೊಳಿಸಿದ್ದಾರೆ. ಇವರಲ್ಲಿ ನಿಕಟಪೂರ್ವ ಸಿಎಂ ಅವರ ಸಲಹೆಗಾರರ ಹುದ್ದೆಯಲ್ಲಿದ್ದವರೂ ಇದ್ದರು. ಹೊರಗುತ್ತಿಗೆ ಸಿಬ್ಬಂದಿ ಸೇರಿ ಸಿಎಂ ಕಚೇರಿಯಲ್ಲೂ 100ಕ್ಕೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಯಾರನ್ನು ಮುಂದುವರಿಸಬೇಕು ಎಂಬ ಬಗ್ಗೆ ಪಕ್ಷ ಮತ್ತು ಸಂಘದ ಕಡೆಯಿಂದ ನಿರ್ದೇಶನ ಬರುವ ಸಾಧ್ಯತೆಯಿದೆ. ಈ ಸಂಬಂಧ ಪಕ್ಷದಿಂದ ಪರಾಮರ್ಶೆ ನಡೆಸಲಾಗಿದೆ. ಅದರಂತೆಯೇ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಯವರ ವಿವೇಚನೆಯಂತೆ ಅವರ ಕಚೇರಿಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ವಿಚಾರದಲ್ಲೂ ಪಕ್ಷದಿಂದ ಸೂಚನೆ ಬಂದಿದ್ದು, ಸರಕಾರದ ವರ್ಚಸ್ಸು ಹೆಚ್ಚಿಸುವ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಬೇಕು. ಪರಿಣಿತರು, ತಜ್ಞರನ್ನು ಮಾತ್ರ ಪರಿಗಣಿಸಬೇಕು ಎಂಬ ಸೂಚನೆ ಕೊಡಲಾಗಿದೆ ಎನ್ನಲಾಗಿದೆ. ಮುಖ್ಯಮತ್ರಿ ಕಾರ್ಯಾಲಯದಲ್ಲಿ ಬಿಜೆಪಿ ಪರವಾಗಿರುವವರು ಇದ್ದರೆ ಆಡಳಿತದಲ್ಲಿನ ಲೋಪದೋಷಗಳನ್ನ ತಿಳಿದುಕೊಳ್ಳಲು ಸಾಧ್ಯ ಹಾಗೂ ಮಾಹಿತಿಗಳು ಪ್ರತಿಪಕ್ಷಗಳ ಮುಖಂಡರಿಗೆ ಸೋರಿಕೆ ಆಗುವುದನ್ನು ತಡೆಯಲು ಸಾಧ್ಯ ಎನ್ನಲಾಗಿದೆ.


from India & World News in Kannada | VK Polls https://ift.tt/3jeKaQF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...