
ಹೊಸದಿಲ್ಲಿ: ವಿರುದ್ಧ ಮೊದಲನೇ ಟಿ20 ಪಂದ್ಯದಲ್ಲಿ ಅದ್ಭುತ ಬ್ಯಾಟ್ ಮಾಡಿದ್ದ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಅವರನ್ನು ಪಾಕಿಸ್ತಾನ ಮಾಜಿ ಕ್ರಿಕೆಟಿಗ ರಮೀಝ್ ರಾಜಾ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಕಳೆದ ಭಾನುವಾರ ನಡೆದಿದ್ದ ಮೊದಲ ಟಿ20 ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಸೂರ್ಯಕುಮಾರ್, ಕೇವಲ 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಆದರೆ, ಮುಂದಿನ ಎಸೆತದಲ್ಲಿಯೇ ದುಷ್ಮಾಂಥ ಚಮೀರಾಗೆ ವಿಕೆಟ್ ಒಪ್ಪಿಸಿದ್ದರು. ಅವರ ಸ್ಪೋಟಕ ಇನಿಂಗ್ಸ್ನಲ್ಲಿ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿಗಳು ಸೇರಿದ್ದವು. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದುಕೊಂಡಿದ್ದ ಭಾರತ ತಂಡ, ಆರಂಭದಲ್ಲಿಯೇ ಎರಡು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಒಂದಾದ ಧವನ್ ಹಾಗೂ ಸೂರ್ಯಕುಮಾರ್ ಮೂರನೇ ವಿಕೆಟ್ಗೆ 62 ರನ್ ಗಳಿಸಿ ತಂಡದ ಮೊತ್ತವನ್ನು 100ರ ಗಡಿ ದಾಟಿಸುವಲ್ಲಿ ನೆರವಾಗಿದ್ದರು. ಅಂತಿಮವಾಗಿ ಭಾರತ ತನ್ನ ಪಾಲಿನ 20 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಶ್ರೀಲಂಕಾ ತಂಡ, ಭುವನೇಶ್ವರ್ ಕುಮಾರ್ ಅವರ ಮಾರಕ ಬೌಲಿಂಗ್ ದಾಳಿಗೆ ನಲುಗಿ 126 ರನ್ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ 38 ರನ್ಗಳ ಹೀನಾಯ ಸೋಲು ಅನುಭವಿಸಿತ್ತು. ಇದರೊಂದಿಗೆ ಭಾರತ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದಿತ್ತು. ಇಲ್ಲಿನ ಪರಿಸ್ಥಿತಿಗಳಲ್ಲಿ ಬ್ಯಾಟ್ ಮಾಡುವುದು ಕಠಿಣವಾಗಿದ್ದರೂ ಭಯವಿಲ್ಲದೆ ಅತ್ಯುತ್ತಮ ಪ್ರದರ್ಶನ ತೋರಿದ ಸೂರ್ಯಕುಮಾರ್ ಯಾದವ್, ರಮೀಝ್ ರಾಜಾ ಅವರ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ರಾಜಾ, ಭಾರತದ ಬ್ಯಾಟ್ಸ್ಮನ್ ಅನ್ನು ಕೊಂಡಾಡಿದ್ದಾರೆ. "ಸೂರ್ಯಕುಮಾರ್ ಯಾದವ್ ಅದ್ಭುತ ಇನಿಂಗ್ಸ್ ಆಡಿದ್ದಾರೆ. ಸೂರ್ಯ ಬ್ಯಾಟ್ ಮಾಡುತ್ತಿರುವ ಹಾದಿಯನ್ನು ನೋಡುತ್ತಿದ್ದರೆ, ಭಾರತ ತಂಡದ ಪರ ಅವರು ಆಡುತ್ತಿರುವ ಮೊದಲ ಆವೃತ್ತಿ ಎಂದು ಕಾಣಿಸುತ್ತಿರಲಿಲ್ಲ. ಅಷ್ಟರ ಮಟ್ಟಿಗೆ ಸೂರ್ಯಕುಮಾರ್, ಇಂಟರ್ನ್ಯಾಷನಲ್ ಕ್ರಿಕೆಟ್ಗೆ ತ್ವರಿತವಾಗಿ ಹೊಂದಿಕೊಂಡಿದ್ದಾರೆ. ಸ್ಲೋವರ್ ಅಥವಾ ಯಾರ್ಕರ್ ಅಥವಾ ಯಾವುದೇ ಎಸೆತ ಹಾಕಿದರೂ, ಅವುಗಳ ಮೇಲೆ ದಾಳಿ ನಡೆಸಲು ಬಲಗೈ ಬ್ಯಾಟ್ಸ್ಮನ್ ಬಳಿ ಹಲವು ಆಯ್ಕೆಗಳಿವೆ," ಎಂದು ಹೇಳಿದರು. "ಕ್ರಿಕೆಟ್ ಮನೋಧರ್ಮದಲ್ಲಿ ಸೂರ್ಯಕುಮಾರ್ ಯಾದವ್ ಶಕ್ತಿಯುತವಾಗಿದ್ದಾರೆ. ಬ್ಯಾಟಿಂಗ್ಗೆ ತುಂಬಾ ಕಠಿಣವಾಗಿದ್ದ ಸನ್ನಿವೇಶಗಳಲ್ಲಿ ಕೇವಲ 34 ಎಸೆತಗಳಿಗೆ ಅರ್ಧಶತಕ ಸಿಡಿಸುವುದು ಸುಲಭದ ಮಾತಲ್ಲ. ಅವರು ಗುಣಮಟ್ಟದ ಇನಿಂಗ್ಸ್ ಆಡಿದ್ದಾರೆ. ಅಲ್ಲದೆ, ಸ್ಥಿರ ಪ್ರದರ್ಶನದಲ್ಲಿಯೂ ಅತ್ಯುತ್ತಮವಾಗಿ ಕಾಣುತ್ತಿದ್ದಾರೆ. ಸೀಮಿತ ಓವರ್ಗಳ ಸ್ವರೂಪದಲ್ಲಿ ಸಿಗುವ ಸೀಮಿತ ಅವಕಾಶಗಳಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವುದು ತುಂಬಾ ಕಠಿಣ," ಎಂದು ತಿಳಿಸಿದರು. "ಸೂರ್ಯಕುಮಾರ್ ಯಾದವ್ ಪಂದ್ಯದಲ್ಲಿ ಯಾವುದೇ ಅಪಾಯ ತೆಗೆದುಕೊಳ್ಳುತ್ತಿರಲಿಲ್ಲ. ಅವರು ಹೊಡೆತಗಳ ಒಂದು ಶ್ರೇಣಿಯನ್ನು ಹೊಂದಿದ್ದಾರೆ. ಅವರಿಗೆ ಪಾರ್ಕ್ನಿಂದ ಹೊರಗಡೆ ಸಿಕ್ಸರ್ ಬಾರಿಸುವ ಸಾಮರ್ಥ್ಯವಿದೆ. ಹಾಗೆಯೇ ಗ್ರೌಂಡ್ ಶಾಟ್ಗಳನ್ನು ಸಹ ಆಡುತ್ತಾರೆ. ಅವರು ಖಂಡಿತವಾಗಿಯೂ ಉತ್ತಮ ಶೋಧಕ ಆಟಗಾರ," ಎಂದು ರಮೀಝ್ ರಾಜಾ ಶ್ಲಾಘಿಸಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3i8BNHg