ತವರು ಮನೆಯಿಂದ ತೆರಳುವಾಗ ಬಿಕ್ಕಿ ಬಿಕ್ಕಿ ಅತ್ತದ್ದೆ ಮುಳುವಾಯ್ತು,ಹೃದಯಾಘಾತದಿಂದ ವಧು ಸಾವು!

ಸೋನೆಪುರ್‌: ಅಲ್ಲಿ ಸಂತೋಷ ತೇಲಾಡುತ್ತಿತ್ತು. ಮದುವೆಯಿಂದಾಗಿ ಎಲ್ಲರ ಮುಖದಲ್ಲಿ ಮಂದಹಾಸ ರಾರಾಜಿಸುತ್ತಿತ್ತು. ಆದರೆ ಇವರ ನಗು ಜವರಾಯನಿಗೆ ಇಷ್ಟವಿರಲಿಲ್ಲವೋ ಏನೋ? ಒಂದೇ ಕ್ಷಣದಲ್ಲಿ ಆ ಮದುವೆ ಮನೆಯವರ ಸಂತೋಷ ನಿಂತುಬಿಟ್ಟಿದೆ. ಅಷ್ಟು ಹೊತ್ತು ಶಬ್ಧದಿಂದ ಕಿಕ್ಕಿರಿದ ಜಾಗ ಇದೀಗ ಸ್ಮಶಾನ ಮೌನಕ್ಕೆ ಜಾರಿ ಬಿಟ್ಟಿದೆ. ಹೌದು, ವಧುವಿಗೆ ಹಠಾತ್‌ ಸಂಭವಿಸಿ ಸಂಭ್ರಮಾಚರಣೆಯ ಮನೆ ಶೋಕಕ್ಕೆ ತಿರುಗಿದೆ. ಈ ಘಟನೆ ಒಡಿಶಾದ ಸೋನೆಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆ ವಿವರ!ಸೋನೆಪುರ ಜಿಲ್ಲೆಯ ಜುಲುಂಡಾ ಗ್ರಾಮದ ಗುಪ್ತೇಶ್ವರಿ ಸಾಹು ಯಾನೆ ರೋಸಿಯವರ ವಿವಾಹ ಬಿಸಿಕೇಶನ್ ಎಂಬಾತನ ಜೊತೆ ನಡೆದಿದೆ. ನಂತರ ಇತ್ತ ಕುಟುಂಬಸ್ಥರು ರೋಸಿಯನ್ನು ಅತ್ತೆ ಮನೆಗೆ ತವರು ಮನೆಯಿಂದ ಕಳುಹಿಸುವ ಸಂಪ್ರಾದಾಯ ನಡೆಸಲು ಮುಂದಾಗಿದ್ದಾರೆ. ಈ ವೇಳೆ ರೋಸಿ ತವರು ಮನೆಯನ್ನು ಬಿಡುವ ಬಗ್ಗೆ ನೆನೆದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಇದು ಆಕೆಯ ದೇಹಕ್ಕೆ ಸಮಸ್ಯೆ ತಂದೊಡ್ಡಿದೆ. ಏಕಾಏಕಿ ರೋಸಿಗೆ ಹೃದಯಾಘಾತ ಸಂಭವಿಸಿದೆ. ಕೂಡಲೇ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಗೆ ರೋಸಿಯನ್ನು ಕರೆದುಕೊಂಡು ಹೋದರು ಕೂಡ ಆಕೆಯನ್ನು ರಕ್ಷಿಸಲು ಆಗಿಲ್ಲ. ರೋಸಿ ಸಾವನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಥಳೀಯರು ರೋಸಿಯ ತಂದೆ ಕೆಲ ತಿಂಗಳ ಹಿಂದೆ ಸಾವನಪ್ಪಿದ್ದರು. ಆಕೆಯ ಸಂಬಂಧಿಕರು ಹಾಗೂ ಕೆಲವು ಸಾಮಾಜಿಕ ಕಾರ್ಯಕರ್ತರು ಸೇರಿಕೊಂಡು ಈ ಮದುವೆಯನ್ನು ಮಾಡಿದ್ದಾರೆ. ತಂದೆ ಕಳೆದುಕೊಂಡ ದುಃಖದಿಂದ ತೀವ್ರ ನೋವು ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಅದೇನೆ ಇದ್ದರೂ ಭಾರೀ ಸಂತೋಷದಿಂದ ಇದ್ದ ಮನೆ ಈಗ ಸ್ಮಶಾನ ಮೌನಕ್ಕೆ ಜಾರಿರುವುದು ನಿಜಕ್ಕೂ ವಿಪರ್ಯಾಸ. ಅತ್ತ ತವರು ಮನೆಯವರು ಅತ್ತ ಗಂಡನ ಮನೆಯವರು ಈಗ ತೀವ್ರ ದುಃಖದಲ್ಲಿದ್ದಾರೆ.


from India & World News in Kannada | VK Polls https://ift.tt/2NXYrG3

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...