ಇನ್ನೂ ‘ಸ್ಮಾರ್ಟ್‌’ ಆಗದ ಬೆಂಗಳೂರು, ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಆಮೆ ನಡಿಗೆ

ನಾಗಪ್ಪ ನಾಗನಾಯಕನಹಳ್ಳಿಬೆಂಗಳೂರು: ರಾಜಧಾನಿಯು ಸ್ಮಾರ್ಟ್‌ ಸಿಟಿ ರೇಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡು ಮೂರು ವರ್ಷ ಕಳೆದರೂ ಕಾಮಗಾರಿಗಳು ಮಾತ್ರ ತೆವಳುತ್ತಾ ಸಾಗಿವೆ. ಕೆಲ ಯೋಜನೆಗಳು ಇನ್ನೂ ಡಿಪಿಆರ್‌, ಟೆಂಡರ್‌ ಪ್ರಕ್ರಿಯೆ ಹಂತದಿಂದ ಹೊರ ಬಂದೇ ಇಲ್ಲ!ಸ್ಮಾರ್ಟ್‌ ಸಿಟಿ ಯೋಜನೆಯಡಿ 921.22 ಕೋಟಿ ರೂ. ವೆಚ್ಚದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿನ ರಸ್ತೆಗಳು, ಉದ್ಯಾನ, ಮಾರುಕಟ್ಟೆ, ಬಸ್‌ ನಿಲ್ದಾಣಕ್ಕೆ ನವರೂಪ ನೀಡುವ ಯೋಜನೆಗಳೂ ಇದರಲ್ಲಿವೆ. ಆದರೆ, ಈ ಕಾರ್ಯಗಳು ವೇಗ ಪಡೆದುಕೊಂಡಿಲ್ಲ. ಉದ್ಯಾನ ನಗರಿಯು 2017ರ ಜೂನ್‌ನಲ್ಲಿ ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಯಿತು. ಇದಾಗಿ ಮೂರು ವರ್ಷ ಕಳೆದರೂ, ಈ ಯೋಜನೆಯಡಿ ಕೈಗೊಂಡಿರುವ ಒಂದೇ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ.ಟೆಂಡರ್ ‌ಶ್ಯೂರ್‌ ವಿಧಾನದಡಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಕೆಲವೊಂದು ಕಾಮಗಾರಿಗಳಷ್ಟೇ ಶುರುವಾಗಿವೆ. ಕೆಲ ಯೋಜನೆಗಳು ಡಿಪಿಆರ್‌, ಟೆಂಡರ್‌ ಹಂತದಲ್ಲಿಯೇ ಇವೆ. ಕಾಮಗಾರಿಗಳ ವಿಳಂಬದಿಂದ ಯೋಜನಾ ವೆಚ್ಚದಲ್ಲಿ ಹೆಚ್ಚಳವಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ 'ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌' ಸ್ಥಾಪಿಸಲಾಗಿದೆ. ಬಿಬಿಎಂಪಿಯು ನೋಡಲ್‌ ಏಜೆನ್ಸಿಯಾಗಿದೆ. ಆದಾಗ್ಯೂ, ಕಾಮಗಾರಿಗಳ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ.

2017ರಲ್ಲಿ ಬೆಂಗಳೂರು ಸ್ಮಾರ್ಟ್‌ ಸಿಟಿ ರೇಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡಿತ್ತು. ಆದರೆ 3 ವರ್ಷವಾದರೂ ಕಾಮಗಾರಿ ಮಾತ್ರ ತೆವಳುತ್ತಾ ಸಾಗಿದೆ. ಕೆಲ ಯೋಜನೆಗಳು ಇನ್ನೂ ಡಿಪಿಆರ್‌, ಟೆಂಡರ್‌ ಹಂತದಲ್ಲೇ ಇವೆ.


ಇನ್ನೂ ‘ಸ್ಮಾರ್ಟ್‌’ ಆಗದ ಬೆಂಗಳೂರು, ಸ್ಮಾರ್ಟ್‌ ಸಿಟಿ ಕಾಮಗಾರಿಗಳ ಆಮೆ ನಡಿಗೆ

ನಾಗಪ್ಪ ನಾಗನಾಯಕನಹಳ್ಳಿ

ಬೆಂಗಳೂರು:

ರಾಜಧಾನಿಯು ಸ್ಮಾರ್ಟ್‌ ಸಿಟಿ ರೇಸ್‌ನಲ್ಲಿ ಅರ್ಹತೆ ಗಿಟ್ಟಿಸಿಕೊಂಡು ಮೂರು ವರ್ಷ ಕಳೆದರೂ ಕಾಮಗಾರಿಗಳು ಮಾತ್ರ ತೆವಳುತ್ತಾ ಸಾಗಿವೆ. ಕೆಲ ಯೋಜನೆಗಳು ಇನ್ನೂ ಡಿಪಿಆರ್‌, ಟೆಂಡರ್‌ ಪ್ರಕ್ರಿಯೆ ಹಂತದಿಂದ ಹೊರ ಬಂದೇ ಇಲ್ಲ!

ಸ್ಮಾರ್ಟ್‌ ಸಿಟಿ ಯೋಜನೆಯಡಿ 921.22 ಕೋಟಿ ರೂ. ವೆಚ್ಚದಲ್ಲಿ ಹಲವು ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ನಗರದ ಹೃದಯ ಭಾಗದಲ್ಲಿನ ರಸ್ತೆಗಳು, ಉದ್ಯಾನ, ಮಾರುಕಟ್ಟೆ, ಬಸ್‌ ನಿಲ್ದಾಣಕ್ಕೆ ನವರೂಪ ನೀಡುವ ಯೋಜನೆಗಳೂ ಇದರಲ್ಲಿವೆ. ಆದರೆ, ಈ ಕಾರ್ಯಗಳು ವೇಗ ಪಡೆದುಕೊಂಡಿಲ್ಲ. ಉದ್ಯಾನ ನಗರಿಯು 2017ರ ಜೂನ್‌ನಲ್ಲಿ ಕೇಂದ್ರ ಸರಕಾರದ ಸ್ಮಾರ್ಟ್‌ ಸಿಟಿ ಯೋಜನೆಗೆ ಆಯ್ಕೆಯಾಯಿತು. ಇದಾಗಿ ಮೂರು ವರ್ಷ ಕಳೆದರೂ, ಈ ಯೋಜನೆಯಡಿ ಕೈಗೊಂಡಿರುವ ಒಂದೇ ಒಂದು ಕಾಮಗಾರಿಯೂ ಪೂರ್ಣಗೊಂಡಿಲ್ಲ.

ಟೆಂಡರ್ ‌ಶ್ಯೂರ್‌ ವಿಧಾನದಡಿ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಕೆಲವೊಂದು ಕಾಮಗಾರಿಗಳಷ್ಟೇ ಶುರುವಾಗಿವೆ. ಕೆಲ ಯೋಜನೆಗಳು ಡಿಪಿಆರ್‌, ಟೆಂಡರ್‌ ಹಂತದಲ್ಲಿಯೇ ಇವೆ. ಕಾಮಗಾರಿಗಳ ವಿಳಂಬದಿಂದ ಯೋಜನಾ ವೆಚ್ಚದಲ್ಲಿ ಹೆಚ್ಚಳವಾಗುತ್ತಿದೆ. ಸ್ಮಾರ್ಟ್‌ ಸಿಟಿ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ 'ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌' ಸ್ಥಾಪಿಸಲಾಗಿದೆ. ಬಿಬಿಎಂಪಿಯು ನೋಡಲ್‌ ಏಜೆನ್ಸಿಯಾಗಿದೆ. ಆದಾಗ್ಯೂ, ಕಾಮಗಾರಿಗಳ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿಯಾಗಿಲ್ಲ.



ಕೇಂದ್ರ, ರಾಜ್ಯದಿಂದ 200 ಕೋಟಿ ಬಿಡುಗಡೆ
ಕೇಂದ್ರ, ರಾಜ್ಯದಿಂದ 200 ಕೋಟಿ ಬಿಡುಗಡೆ

ಕೇಂದ್ರ ಸರಕಾರವು ಸ್ಮಾರ್ಟ್‌ ಸಿಟಿ ಯೋಜನೆಗೆ ಐದು ವರ್ಷಗಳ ಅವಧಿಗೆ 500 ಕೋಟಿ ರೂ. ನೀಡಲಿದೆ. ಪ್ರತಿ ವರ್ಷ ತಲಾ 100 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದೆ. ಉಳಿದ ಹಣವನ್ನು ರಾಜ್ಯ ಸರಕಾರವೇ ಭರಿಸಬೇಕಿದೆ. ಈವರೆಗೆ ಕೇಂದ್ರ ಸರಕಾರದಿಂದ 150 ಕೋಟಿ ಮತ್ತು ರಾಜ್ಯ ಸರಕಾರದಿಂದ 50 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ.

ಸ್ಮಾರ್ಟ್‌ ಸಿಟಿ ಸೂಚ್ಯಂಕ ಪ್ರಕಟ: ಬೆಂಗಳೂರು ರ‍್ಯಾಂಕಿಂಗ್‌ ಕುಸಿತ



ರಸ್ತೆಗಳಿಗೆ ಸಿಗದ ಸ್ಮಾರ್ಟ್‌ ರೂಪ:
ರಸ್ತೆಗಳಿಗೆ ಸಿಗದ ಸ್ಮಾರ್ಟ್‌ ರೂಪ:

ನಗರದ ಕೇಂದ್ರ ಭಾಗದಲ್ಲಿನ ಕಮರ್ಷಿಯಲ್‌ ಸ್ಟ್ರೀಟ್‌, ಕಾಮರಾಜ ರಸ್ತೆ, ಹಲಸೂರು ರಸ್ತೆ, ಡಿಕನ್ಸನ್‌ ರಸ್ತೆ, ಇನ್‌ಫೆಂಟ್ರಿ ರಸ್ತೆ, ಮಿಲ್ಲರ್ಸ್ ರಸ್ತೆ, ಮಧಿಗ್ರತ್‌ ರಸ್ತೆ, ರಾಜಭವನ ರಸ್ತೆ, ಕ್ವೀನ್ಸ್‌ ರಸ್ತೆ, ಕಸ್ತೂರಬಾ ರಸ್ತೆ, ಬ್ರಿಗೇಡ್‌ ರಸ್ತೆ ಸೇರಿದಂತೆ ಒಟ್ಟು 36 ರಸ್ತೆಗಳನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟು 29.49 ಕಿ.ಮೀ. ಉದ್ದದ ರಸ್ತೆಗಳನ್ನು ಟೆಂಡರ್‌ಶ್ಯೂರ್‌ ಮಾದರಿಯಲ್ಲಿಅಭಿವೃದ್ಧಿಪಡಿಸುತ್ತಿದ್ದು, ಇದಕ್ಕಾಗಿ 481.65 ಕೋಟಿ ರೂ. ವ್ಯಯಿಸಲಾಗುತ್ತಿದೆ. ಒಟ್ಟು 13 ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ ಗುತ್ತಿಗೆಗೆ ನೀಡಲಾಗಿದೆ.

ಸ್ಮಾರ್ಟ್‌ಸಿಟಿ ಕಾಮಗಾರಿ 2 ತಿಂಗಳಲ್ಲಿ ಪೂರ್ಣಗೊಳಿಸಿ ;ಜಗದೀಶ ಶೆಟ್ಟ

ಈವರೆಗೆ 25 ರಸ್ತೆಗಳಲ್ಲಷ್ಟೇ ಕಾಮಗಾರಿ ಆರಂಭವಾಗಿದ್ದು, ಗಡುವು ಮೀರಿದರೂ ಪೂರ್ಣಗೊಂಡಿಲ್ಲ. ಕಾಮಗಾರಿ ಮುಗಿಸಲು 12 ರಿಂದ 15 ತಿಂಗಳು ಕಾಲಾವಕಾಶ ನೀಡಲಾಗಿತ್ತು. 2019ರಲ್ಲೇ ರಸ್ತೆ ಅಭಿವೃದ್ಧಿ ಕೆಲಸಗಳು ಶುರುವಾದರೂ ಶೇ 20ರಷ್ಟು ಕಾಮಗಾರಿಗಳು ಕೂಡ ಮುಗಿದಿಲ್ಲ. ಕೊರೊನಾ ವೈರಾಣು ಸೋಂಕಿನಿಂದ ಕಾಮಗಾರಿಗಳು ಕುಂಠಿತಗೊಂಡಿವೆ. ಇದಲ್ಲದೆ, ಕಾರ್ಮಿಕರ ಕೊರತೆಯೂ ಎದುರಾಗಿದೆ. ಕಾಮಗಾರಿ ಮಂದಗತಿಯಲ್ಲಿನಡೆಯುತ್ತಿರುವುದರಿಂದ ಟ್ರಾಫಿಕ್‌ಜಾಮ್‌ ಉಂಟಾಗಿ ವಾಹನ ಸವಾರರು ತೊಂದರೆ ಅನುಭವಿಸುವಂತಾಗಿದೆ.

ಪೈಪ್‌ಗೆ ಹಾನಿ; ಗ್ಯಾಸ್‌ ಸೋರಿಕೆಯಿಂದ ಭೀತಿ; ಬೆಳಗಾವಿ ಸ್ಮಾರ್ಟ್‌ ಸಿಟಿ ರಸ್ತೆ ಕಾಮಗಾರಿ ವೇಳೆ ಅವಘಡ



ಕೆ.ಆರ್‌.ಮಾರುಕಟ್ಟೆಗೆ ನವರೂಪ:
ಕೆ.ಆರ್‌.ಮಾರುಕಟ್ಟೆಗೆ ನವರೂಪ:

ಶಿವಾಜಿನಗರ ಬಸ್‌ ನಿಲ್ದಾಣ, ಕಬ್ಬನ್‌ಪಾರ್ಕ್ ಅಭಿವೃದ್ಧಿ, ಜವಾಹರಲಾಲ್‌ ನೆಹರು ತಾರಾಲಯದಲ್ಲಿಆಡಿಟೋರಿಯಂ ಮತ್ತು ಶಿಲಾ ಉದ್ಯಾನ ಕಾಮಗಾರಿಯು ಪ್ರಗತಿಯಲ್ಲಿದೆ. 1920ರಲ್ಲಿಸ್ಥಾಪಿತವಾಗಿ 100 ವರ್ಷ ಪೂರೈಸಿರುವ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಅತ್ಯಾಧುನಿಕ ರೂಪ ನೀಡುವ ಕೆಲಸ ಶುರುವಾಗಿಲ್ಲ.

ತುಮಕೂರು ಸ್ಮಾರ್ಟ್‌ ಸಿಟಿ ದೇಶದಲ್ಲಿ ಬೆಸ್ಟ್‌..! ರಾಜ್ಯದಲ್ಲೇ ನಂಬರ್‌ ಒನ್ ರ‍್ಯಾಂಕ್.

ಸುಮಾರು 14 ಎಕರೆಯಷ್ಟು ವಿಸ್ತೀರ್ಣವಿರುವ ಕೆ.ಆರ್‌.ಮಾರುಕಟ್ಟೆಯನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಲು ವಿಸ್ತೃತ ಯೋಜನಾ ವರದಿಯನ್ನು (ಡಿಪಿಆರ್‌) ಸಿದ್ಧಪಡಿಸಲಾಗಿದೆ. ಇದಕ್ಕೆ 58.69 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ. ಆದರೆ, ಈವರೆಗೆ ಟೆಂಡರ್‌ ಕರೆದಿಲ್ಲ. ಹಾಗೆಯೇ, ಕೆ.ಆರ್‌.ಮಾರುಕಟ್ಟೆ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿಗೂ ಚಾಲನೆ ಸಿಕ್ಕಿಲ್ಲ. ಇತ್ತೀಚೆಗಷ್ಟೇ ಟೆಂಡರ್‌ ಕರೆಯಲಾಗಿದೆ.

ಸ್ಮಾರ್ಟ್‌ಸಿಟಿ ಯೋಜನೆಗೆ 4 ನಗರ, ಪ್ರಸ್ತಾವನೆ: ಭೈರತಿ ಬಸವರಾಜ್‌



​ಸ್ಮಾರ್ಟ್‌ಸಿಟಿ ಅಭಿವೃದ್ಧಿ ಕಾಮಗಾರಿಗಳು
​ಸ್ಮಾರ್ಟ್‌ಸಿಟಿ ಅಭಿವೃದ್ಧಿ ಕಾಮಗಾರಿಗಳು

ಕಾಮಗಾರಿ / ವೆಚ್ಚ (ಕೋಟಿ ರೂ.ಗಳಲ್ಲಿ)

ಟೆಂಡರ್‌ಶ್ಯೂರ್‌ ಮಾದರಿಯಲ್ಲಿ 36 ರಸ್ತೆಗಳ ಅಭಿವೃದ್ಧಿ /481.65 ಕೋಟಿ ರೂ.

ಶಿವಾಜಿನಗರ ಬಸ್‌ ನಿಲ್ದಾಣದ ಸಮಗ್ರ ಅಭಿವೃದ್ಧಿ/ 3.98 ಕೋಟಿ ರೂ.

ಕಬ್ಬನ್‌ ಉದ್ಯಾನದ ಅಭಿವೃದ್ಧಿ/ 43.61 ಕೋಟಿ ರೂ.

ವಿಧಾನಸೌಧ, ವಿಕಾಸಸೌಧ, ಎಂಎಸ್‌ ಬಿಲ್ಡಿಂಗ್‌ ಮತ್ತು ವಿವಿ ಟವರ್‌ನಲ್ಲಿಎಲ್‌ಇಡಿ ದೀಪಗಳ ಅಳವಡಿಕೆ/ 1.94 ಕೋಟಿ ರೂ.

ಕೆ.ಆರ್‌.ಮಾರುಕಟ್ಟೆ ಜಂಕ್ಷನ್‌ ಅಭಿವೃದ್ಧಿ/ 20 ಕೋಟಿ ರೂ.

ಕೆ.ಆರ್‌.ಮಾರುಕಟ್ಟೆಯ ಅಭಿವೃದ್ಧಿ/ 58.69 ಕೋಟಿ ರೂ.

ಜವಾಹರಲಾಲ್‌ ನೆಹರು ತಾರಾಲಯದಲ್ಲಿ ಸಭಾಂಗಣ ಬ್ಲಾಕ್‌ ಮತ್ತು ಶಿಲಾ ಉದ್ಯಾನ/ 32.50 ಕೋಟಿ ರೂ.

ರಶ್ಮಿ ಯೋಜನೆಯಡಿ ಮಹಿಳೆಯರಿಗೆ ಕೆಲಸದ ಸ್ಥಳದಲ್ಲಿ ರಕ್ಷಣೆ /2 ಕೋಟಿ ರೂ.

ಮೆಟ್ರೊ ನಿಲ್ದಾಣಕ್ಕೆ ಬಿಎಂಟಿಸಿ ಎಲೆಕ್ಟ್ರಿಕ್‌ ಫೀಡರ್‌ ಬಸ್/‌ 50 ಕೋಟಿ ರೂ.

ಇಂಟಿಗ್ರೇಟೆಡ್‌ ಕಮಾಂಡ್‌ ಆ್ಯಂಡ್‌ ಕಂಟ್ರೋಲ್‌ ಸೆಂಟರ್/‌ 200 ಕೋಟಿ ರೂ.

ಕೋವಿಡ್‌ ನಿರ್ವಹಣೆಗೆ ಮೂಲಸೌಕರ್ಯ ಕಲ್ಪಿಸುವುದು/ 26.86 ಕೋಟಿ ರೂ.





from India & World News in Kannada | VK Polls https://ift.tt/361RJ8p

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...