ವರುಣನ ಅಬ್ಬರಕ್ಕೆ ನಲುಗಿದ ಮುಂಬಯಿ: ಮನೆ-ರಸ್ತೆ ತುಂಬೆಲ್ಲ ನೀರು, ಜನರಿಗೆ ಹೊರಗೆ ಬರದಂತೆ ಸೂಚನೆ!

ಮುಂಬಯಿ: ಮಾಯಾನಗರಿ ಮುಂಬಯಿನಲ್ಲಿ ವರುಣ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಅಲ್ಲಿನ ಪಾಲಿಕೆ ಮಹಿತಿ ಪ್ರಕಾರ 173 ಮಿಮೀ ನಷ್ಟು ಮಳೆ ಸದ್ಯ ಮುಂಬಯಿನಲ್ಲಿ ಸುರಿಯುತ್ತಿದೆಯಂತೆ. ಭಾರೀ ಮಳೆಯಿಂದಾಗಿ ರಸ್ತೆಗಳೆಲ್ಲ ಸಂಪೂರ್ಣ ನದಿಯಾಗಿ ಬದಲಾಗಿದ್ದು ರೈಲು ಸೇರಿ ಹಲವು ಸೇವೆಗಳು ಸ್ಥಗಿತಗೊಂಡಿದೆ. ಇನ್ನು ಮುಂಬಯಿನ ಭೆಂಡಿ ಬಜಾರ್, ಗೋಲ್ ಟೆಂಪಲ್, ನಾನಾ ಚೌಕ್, ಮುಂಬೈ ಸೆಂಟ್ರಲ್ ಜಂಕ್ಷನ್, ಬಾವ್ಲಾ ಕಾಂಪೌಂಡ್, ಜೆಜೆ ಜಂಕ್ಷನ್, ಹಿಂದ್ಮಾತಾ, ಕಲಾ ಚೌಕಿ, ಸರ್ತಿ ಬಾರ್ ಮತ್ತು ವರ್ಲಿ ಸೇರಿ ಹಲವೆಡೆ ಭಾರೀ ಮಳೆಯಾಗುತ್ತಿದ್ದ ಜನರು ಹೊರಗೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ, ಮನೆಗಳ ಒಳಗೆ ನೀರು ನಿಂತು ಅಸ್ತವ್ಯಸ್ತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ, ಕಚೇರಿಗಳು ಸದ್ಯ ಅಕ್ಷರಶಃ ನದಿಯಾಗಿ ಬದಲಾಗಿವೆ. ಹೀಗಾಗಿ ಖಾಸಗಿ ಹಾಗೂ ಸರಕಾರಿ ಕಚೇರಿಗಳಿಗೆ ಪಾಲಿಕೆ ರಜೆ ಘೋಷಣೆ ಮಾಡಿದೆ. ಅಲ್ಲದೆ ಅನಗತ್ಯವಾಗಿ ಮನೆ ಹೊರಗೆ ಬರದಂತೆ ಪಾಲಿಕೆ ಸೂಚನೆ ಕೂಡ ನೀಡಿದೆ. ಇನ್ನು ಮಳೆಯ ಬಿಸಿ ರೈಲು ಸಂಚಾರಕ್ಕೂ ತಟ್ಟಿದ್ದು ಮುಂಬಯಿಗೆ ಬರುವ ಹಾಗೂ ತೆರಳುವ ಎಲ್ಲಾ ರೈಲುಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಇನ್ನು ರೈಲು ಟ್ರ್ಯಾಕ್‌ನಲ್ಲಿ ಸಂಪೂರ್ಣವಾಗಿ ನೀರು ತುಂಬಿದ್ದು ಇಂದು ಯಾವುದೇ ರೈಲು ಸಂಚಾರ ಸಾಧ್ಯವಾಗುವುದಿಲ್ಲ ರಂದು ರೈಲ್ವೆ ಮೂಲಗಳು ತಿಳಿಸಿವೆ. ಇನ್ನು ಬಸ್‌ಸ್ಟ್ಯಾಂಡ್‌ಗಳಲ್ಲಿಯು ಸಂಪೂರ್ಣವಾಗಿ ನೀರು ತುಂಬಿದೆ.


from India & World News in Kannada | VK Polls https://ift.tt/2EqvSfB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...