ಸರಳ ನಾಡಹಬ್ಬಕ್ಕೆ ಮೊರೆ, ಉದ್ಯಮಕ್ಕೆ ಬರೆ: ಹೋಟೆಲ್‌, ಪ್ರವಾಸೋದ್ಯಮಕ್ಕೆ ಹೊಡೆತ

ಆತೀಶ್‌ ಬಿ. ಕನ್ನಾಳೆ ಶಿವಮೊಗ್ಗ: ಶಿವಮೊಗ್ಗದಲ್ಲಿ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ನಾಡ ಹಬ್ಬವನ್ನು ಆಯೋಜಿಸಲಾಗುತ್ತಿತ್ತು. ಕೃಷಿ ಕ್ಷೇತ್ರ, ಯುವಜನರು, ಮಹಿಳೆ, ಮಕ್ಕಳು, ಆಹಾರ, ಮೋಜು ಮತ್ತು ಸಾಹಸ ಕ್ರೀಡೆ ಕೇಂದ್ರಿತವಾಗಿ ಹಲವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿತ್ತು. ರಾಜ್ಯ ಮಟ್ಟದ ಕುಸ್ತಿ ಮತ್ತಿತರ ಕ್ರೀಡೆಗಳನ್ನು ಆಯೋಜಿಸುವುದರಿಂದ ರಾಜ್ಯದ ನಾನಾ ಭಾಗಗಳಿಂದ ಇಲ್ಲಿಗೆ ಸ್ಪರ್ಧಿಗಳು, ಸಾರ್ವಜನಿಕರು ಆಗಮಿಸುತ್ತಿದ್ದರು. ನಿತ್ಯ ನೂರಾರು ಜನ ಶಿವಮೊಗ್ಗ ನಗರಕ್ಕೆ ಬಂದು ಹಬ್ಬದಲ್ಲಿ ಮಿಂದೇಳುವುದಲ್ಲದೇ ಪ್ರವಾಸಿ ತಾಣಗಳಿಂದ ಕಣ್ಮನ ತುಂಬಿಕೊಳ್ಳುತ್ತಿದ್ದರು. ಆದರೆ, ಈ ವರ್ಷ ಕೊರೊನಾ ಮಹಾಮಾರಿ ಈ ಸೌಭಾಗ್ಯಕ್ಕೆ ತಡೆಯೊಡ್ಡಿದೆ. ದಸರಾದಲ್ಲಿ ಭಾಗವಹಿಸಲು ಬಂದ ಬಹುತೇಕರು ಹೋಟೆಲ್‌, ಲಾಡ್ಜ್‌ಗಳಲ್ಲಿ ತಂಗುತ್ತಿದ್ದರು. ಹೀಗಾಗಿ, ಪರೋಕ್ಷವಾಗಿ ಇದು ಹೋಟೆಲ್‌ ಉದ್ಯಮವನ್ನೂ ಚೇತರಿಕೆಗೂ ಸಹಕಾರಿಯಾಗುತ್ತಿತ್ತು. ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಹೋಟೆಲ್‌ ಮತ್ತು ಲಾಡ್ಜ್‌ಗಳಿಗೆ ಶೇ.10ರಷ್ಟು ಬೇಡಿಕೆ ಹೆಚ್ಚುತ್ತಿತ್ತು. ಶಿವಮೊಗ್ಗ ನಗರವೊಂದರಲ್ಲಿಯೇ 45 ಲಾಡ್ಜ್‌, 20-25 ಮಧ್ಯಮ ಕ್ಲಾಸ್‌ ರೆಸ್ಟೋರೆಂಟ್‌, 150-200 ಕ್ಯಾಂಟೀನ್‌ಗಳಿವೆ. ಅವುಗಳಿಗೆ ದಸರಾದ 9 ದಿನ ಸೇರಿ ಸರಾಸರಿ 1.10 ಕೋಟಿ ರೂ. ಆದಾಯವಾಗುತ್ತಿತ್ತು. ಈ ವರ್ಷ ಎಲ್ಲವೂ ಕೈತಪ್ಪಿದಂತಾಗಿದೆ. ತಾಣಗಳ ಸ್ಥಿತಿ ಹೊರತೇನಲ್ಲ. ಆನೆ ಉತ್ಸವಕ್ಕೆ ಸಾಕಷ್ಟು ಜನ ಆಗಮಿಸುತ್ತಿದ್ದರು. ಶಿವಮೊಗ್ಗ ಮೃಗಾಲಯ, ಜೋಗಕ್ಕೂ ಭೇಟಿ ನೀಡುತ್ತಿದ್ದರು. ಅದರಿದಾಂಗಿ, ಸ್ಥಳೀಯ ಹೋಟೆಲ್‌, ಹೋಮ್‌ಸ್ಟೇಗಳಲ್ಲಿವಹಿವಾಟು ಹೆಚ್ಚಾಗುತ್ತಿತ್ತು. ಈಗ ಅವೆಲ್ಲವುಗಳ ಮೇಲೆ ಪರಿಣಾಮ ಬೀರಲಿದೆ. ಗುಳೆ ಬಂದು ವ್ಯಾಪಾರ ಜಿಲ್ಲೆಯ ವಿವಿಧೆಡೆ 9 ದಿನ ಒಂದಿಲ್ಲೊಂದು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಅದರಿಂದಾಗಿ ಸಹಜವಾಗಿಯೇ ಬೀದಿ ವ್ಯಾಪಾರಿಗಳಿಗೂ ಲಾಭವಾಗುತ್ತಿತ್ತು. ಅದೂ ಕೈತಪ್ಪಲಿದೆ. ಇದರೊಂದಿಗೆ, ಬಲೂನ್‌ ಸೇರಿದಂತೆ ವಿವಿಧ ವಸ್ತುಗಳನ್ನು ಮಾರಾಟ ಮಾಡುವುದಕ್ಕಾಗಿಯೇ ಹಲವು ಅಲೆಮಾರಿ ಕುಟುಂಬಗಳು ಶಿವಮೊಗ್ಗಕ್ಕೆ ಹಬ್ಬಕ್ಕೂ ಮುನ್ನವೇ ಬಂದು ಠಿಕಾಣಿ ಹೂಡುತ್ತಿದ್ದರು. ಆಟಿಕೆಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದರು. ಅವರ ಆದಾಯವೂ ಖೋತಾ ಆಗಲಿದೆ. ಈಗಾಗಲೇ ಕೋವಿಡ್‌ನಿಂದಾಗಿ ವಿಧಿಸಿದ್ದ ಲಾಕ್‌ಡೌನ್‌ಗೆ ಈ ವರ್ಗ ತತ್ತರಿಸಿ ಹೋಗಿದೆ. ಈಗ ಹಬ್ಬಗಳ ಸರಳ ಆಚರಣೆಯಿಂದಾಗಿ ಅವರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಕೋವಿಡ್‌ ಸೋಂಕು ಹರಡಬಾರದೆಂಬ ಉದ್ದೇಶದಿಂದ ಪಾಲಿಕೆ ಸರಳ ಆಚರಣೆಗೆ ಮುಂದಾಗಿರುವುದನ್ನು ಸ್ವಾಗತಿಸುತ್ತೇನೆ. ಕಳೆದ ವರ್ಷದ ಉಳಿಕೆ ಹಣವೇ 24 ಲಕ್ಷ ರೂ. ಇದೆ. ದುಂದು ವೆಚ್ಚ ಮಾಡದೇ ಮೆಗ್ಗಾನ್‌ ಜಿಲ್ಲಾಸ್ಪತ್ರೆಗೆ ಸಾರ್ವಜನಿಕರ ಹಿತಕ್ಕಾಗಿ ವೆಂಟಿಲೇಟರ್‌ ಕೊಡುಗೆಯಾಗಿ ನೀಡಬೇಕು. ಅದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಎಚ್‌.ಸಿ.ಯೋಗೇಶ್‌, ಮಹಾನಗರ ಪಾಲಿಕೆ ಪ್ರತಿಪಕ್ಷ ನಾಯಕ, ಶಿವಮೊಗ್ಗ ಶಿವಮೊಗ್ಗ ದಸರಾ ಬ್ರಾಂಡ್‌ ಆಗಲಿ ನಾಡ ಹಬ್ಬ ದಸರಾ ವೇಳೆ ಶಿವಮೊಗ್ಗಕ್ಕೆ ಸಾಕಷ್ಟು ಜನ ಹರಿದು ಬರುತ್ತಿದ್ದರಿಂದ ಶೇ.10ರಷ್ಟು ವಹಿವಾಟು ಹೆಚ್ಚಾಗುತ್ತಿತ್ತು. ಅಂದಾಜು 1.10 ಕೋಟಿ ರೂ. ಆದಾಯ ಬರುತ್ತಿತ್ತು. ಒಂದುವೇಳೆ, ಮೈಸೂರು, ಮಡಿಕೇರಿ ಮಾದರಿಯಲ್ಲಿಇಲ್ಲಿಯೂ ಮಲೆನಾಡಿನ ಪರಂಪರೆ, ಸೊಗಡು ಬಿಂಬಿಸಿ, ಬ್ರಾಂಡ್‌ ಆಗಿಸಿದ್ದಲ್ಲಿಬಹುಶಃ ಇನ್ನಷ್ಟು ಅರ್ಥಪೂರ್ಣ, ಅದ್ಧೂರಿಯಾಗಿ ಆಚರಿಸಬಹುದು. ಈ ನಿಟ್ಟಿನಲ್ಲಿ ಬರುವ ವರ್ಷವಾದರೂ ಗಂಭೀರ ಚಿಂತನೆಯಾಗಲಿ. ಎನ್‌.ಗೋಪಿನಾಥ್‌, ಹೋಟೆಲ್‌ ಉದ್ಯಮಿ


from India & World News in Kannada | VK Polls https://ift.tt/2EtprbF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...