ಮನುಕುಮಾರ್ ಎಚ್.ಕೆ. ದೊಡ್ಡಬಳ್ಳಾಪುರ ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ: ಅಗತ್ಯ ವಸ್ತುಗಳ ಏರಿಕೆಯಿಂದ ಗ್ರಾಹಕರು ಕಂಗಾಲಾಗಿದ್ದಾರೆ. ಒಂದೆಡೆ ಕೆಲಸ ಇಲ್ಲದೆ ಹಣಕ್ಕಾಗಿ ಪರದಾಡುವ ಪರಿಸ್ಥಿತಿ, ಇದರ ಜತೆ ಮತ್ತೆ ಬೆಲೆ ಏರಿಕೆಯ ಬಿಸಿ. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿದ್ದು, ಬೆಳೆ ನಾಶವಾಗಿರುವ ಕಾರಣ ಬೆಲೆ ದಿನೇದಿನೆ ಏರಿಕೆಯಾಗುತ್ತಿದೆ. ಈರುಳ್ಳಿ, ಟೊಮೇಟೊ ಬೆಲೆ ಏರಿಕೆಯ ಬೆನ್ನಲ್ಲೇ ಉಳಿದ ತರಕಾರಿಗಳ ಬೆಲೆಯೂ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಅಮದು, ರಫ್ತು ಸ್ಥಗಿತಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಕೊರತೆ ಮತ್ತು ನಮ್ಮ ದೇಶದಿಂದ ರಫ್ತು ಮಾಡುತ್ತಿದ್ದ ವಸ್ತುಗಳ ವಹಿವಾಟು ಸ್ಥಗಿತವು ಬೆಲೆ ಏರಿಕೆಗೆ ಒಂದು ಕಾರಣವಾಗಿದೆ. ಜನರ ಅವಶ್ಯಕತೆಗಿಂತ ಕಡಿಮೆ ಬೆಳೆ ಬೆಳೆಯುತ್ತಿರುವುದರಿಂದ ತರಕಾರಿಗಳ ಕೊರತೆ ಉಂಟಾಗುತ್ತಿದೆ. ಕೆಲ ಬೆಳೆ ನಾಶ ಆಗಿರುವುದರಿಂದ ಬೆಲೆ ಏರಿಕೆ ಆಗುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕೊರೊನಾದಿಂದ ಕೆಲ ಕಂಪನಿಗಳು ಆರ್ಥಿಕ ನಷ್ಟಕ್ಕೀಡಾಗಿ, ಮುಚ್ಚಿದ್ದು ಇವುಗಳನ್ನೇ ನಂಬಿ ಜೀವನ ಮಾಡುತ್ತಿದ್ದ ಕೆಲವರಿಗೆ ನಿರುದ್ಯೋಗದಿಂದ ಹಣ ಹೊಂದಿಸಲು ತೊಂದರೆಯಾಗಿದೆ. ಏರಿಕೆಯಾಗಿರುವ ವಸ್ತುಗಳ ಪಟ್ಟಿ ವಸ್ತುಗಳು ಹಿಂದಿನ ಬೆಲೆ ಈಗಿನ ಬೆಲೆ (ರೂ.ಗಳಲ್ಲಿ 1ಕೆಜಿಗೆ)- ಅಡುಗೆ ಎಣ್ಣೆ- 115
- ಮೊಟ್ಟೆ 5- 6
- ಟೊಮೇಟೊ-20- 40
- ಈರುಳ್ಳಿ 50- 80
- ಆಲೂಗಡ್ಡೆ 25- 45
- ಬೀನ್ಸ್ 70 -120
- ಕೋಳಿ 120- 180
- ಮಾಂಸ 500- 700
from India & World News in Kannada | VK Polls https://ift.tt/3cp8mvY