ಪ್ರಕಾಶ್.ಜಿ ಹಾಸನ: ನಗರದಲ್ಲಿ 35 ವಾರ್ಡ್ಗಳಿದ್ದು, ವಸತಿ ಬಡಾವಣೆಯಾದರೂ ವಾಣಿಜ್ಯ ಚಟುವಟಿಕೆ ಬಿರುಸಿನಿಂದ ಸಾಗಿದ ಬಡಾವಣೆಯಿಂದ ಹಿಡಿದು ಕಸ್ತೂರಬಾ ರಸ್ತೆ, ಆರ್ಸಿ ರಸ್ತೆ, ಎಂಜಿ ರಸ್ತೆ ಹೀಗೆ ಪ್ರಮುಖ ರಸ್ತೆಗಳ ಬದಿಯಲ್ಲಿ ಹೂ, ಹಣ್ಣು, ತರಕಾರಿ, ತಿಂಡಿಗಾಡಿ, ಪಾನಿಪುರಿ, ಚುರುಮುರಿ ಇತ್ಯಾದಿ ಆಹಾರ ಪದಾರ್ಥ ಮಾರುವ ವ್ಯಾಪಾರಿಗಳು ಅಷ್ಟೇ ಏಕೆ ನಾಲ್ಕು ಸೌತೆಕಾಯಿ, ಮಾವಿನಕಾಯಿ ಇತ್ಯಾದಿ ಇಟ್ಟು ಕುಳಿತುಕೊಂಡರೂ ಪಾವತಿ ಕಡ್ಡಾಯ. ನಗರಸಭೆ ನಿಯಮದ ಅನ್ವಯ ಸುಂಕ ವಸೂಲಿ ಮಾಡಬೇಕು, ಅದಕ್ಕಾಗಿ ನಿಗದಿತ ಬಿಲ್ ನೀಡಬೇಕು ಎಂಬ ನಿಯಮವಿದ್ದರೂ ಯಾರೊಬ್ಬರಿಗೂ ಪಡೆದ ಶುಲ್ಕಕ್ಕೆ ರಶೀದಿ ನೀಡುವ ಪರಿಪಾಠವಿಲ್ಲ ಎಂಬ ದೂರು ವ್ಯಾಪಕವಾಗಿದೆ. ''ಬೈಕ್ನಲ್ಲಿ ಬರುವವರು ಎಲ್ಲಿ ಸುಂಕ ಎಂದು ಆತುರಾತುರದಲ್ಲಿ ಹಣ ಪಡೆದು ಹೋಗುವುದನ್ನು ಬಿಟ್ಟರೆ ಅವರ್ಯಾರು, ಸುಂಕ ವಸೂಲಿಗೆ ಗುತ್ತಿಗೆ ಪಡೆದವರೋ, ಅವರ ಕಡೆಯವರೋ ಎಂಬುದಕ್ಕೆ ಗುರುತಿನ ಚೀಟಿಯೂ ಇಲ್ಲ, ಕೇಳಲು ಒಂದು ರೀತಿ ಭಯದ ಕಾರಣ ಸುಮ್ಮನೆ ಕೊಟ್ಟು ಕಳುಹಿಸುತ್ತೇವೆ,'' ಎನ್ನುತ್ತಾರೆ ಕೆಲ ಹೂ ಮಾರಾಟಗಾರರು. ಅಂಗಡಿ ಮುಂದಕ್ಕೂ ಶುಲ್ಕ ಹಬ್ಬದ ದಿನಗಳಲ್ಲಿ ಕೇಳಿದಷ್ಟು ಸುಂಕ ಕೊಡಬೇಕು. ಇಲ್ಲದೆ ಹೋದಲ್ಲಿಒಂದಿಷ್ಟು ಹೆಚ್ಚುವರಿ ಪದಾರ್ಥ ಇಟ್ಟುಕೊಂಡಿದ್ದರೂ, ಕಿತ್ತು ಎಸೆಯಲು ಹಿಂಜರಿಯುವುದಿಲ್ಲ ಎಂಬುದು ವ್ಯಾಪಾರಿಗಳ ಅಳಲು. ರಸ್ತೆಬದಿ ವ್ಯಾಪಾರಿಗಳ ಹೊರತಾಗಿ ಲಕ್ಷಾಂತರ ರೂ. ಮುಂಗಡ ಕೊಟ್ಟು, ಬಾಡಿಗೆ, ಲೈಸೆನ್ಸ್ ಹೀಗೆ ಎಲ್ಲ ನಿಯಮಾವಳಿ ಪಾಲಿಸಿದ್ದರೂ, ಹಬ್ಬದ ದಿನಗಳಲ್ಲಿ ನೂರಾರು ರೂ. ಕೊಡಬೇಕು ಎಂಬ ಅಳಲು ವ್ಯಕ್ತಪಡಿಸುತ್ತಾರೆ. ತ್ಯಾಜ್ಯ ವಿಲೆಗೆ ಬೇಕು ಕೋಟಿ''ತ್ಯಾಜ್ಯ ವೈಜ್ಞಾನಿಕ ವಿಲೆಗೆ 10ರಿಂದ 15 ಕೋಟಿ ರೂ. ಬೇಕಂತೆ, ಖಾಸಗಿ ಕಂಪನಿಯವರು ಅಂತಹ ಯಂತ್ರ ಅಳವಡಿಸಲು ಮುಂದೆ ಬಂದರೂ ತ್ಯಾಜ್ಯದಿಂದ ಬಯೋ ಫ್ಯೂಯಲ್ ಅಥವಾ ಗೊಬ್ಬರ ತಯಾರಿಕೆ ಮಾಡಿದರೂ, ಹಾಕಿದ ಬಂಡವಾಳಕ್ಕೆ ಬಡ್ಡಿಯೂ ಸರಿ ಹೊಂದುವುದಿಲ್ಲ. ಹೀಗಾಗಿ ಹಾಸನಕ್ಕೆ ಬರಲು ಹಿಂಜರಿಯುತ್ತಿದ್ದಾರೆ. ಸರಕಾರ ಅಷ್ಟು ದೊಡ್ಡ ಮೊತ್ತ ಕೊಡುವುದು ಕನಸು. ಹೀಗಾಗಿ ತ್ಯಾಜ್ಯದ ಸಮಸ್ಯೆಗೆ ಸದ್ಯಕ್ಕಂತೂ ಮುಕ್ತಿ ಇಲ್ಲ ಎನ್ನುವಂತಾಗಿದೆ. ಸುಂಕ ಸಮಸ್ಯೆ ದೂರು ಬಂದಿದೆ. ಈ ಬಗ್ಗೆ ಒಂದೆರಡು ದಿನದಲ್ಲೇ ಸಮಸ್ಯೆ ಕ್ಲಿಯರ್ ಮಾಡುತ್ತೇನೆ. ರಸ್ತೆ ಬದಿ ಬಡ ವ್ಯಾಪಾರಿಗಳಿಗೆ ತೊಂದರೆ ಆಗುವುದನ್ನು ಸಹಿಸುವುದಿಲ್ಲ. ಕೃಷ್ಣಮೂರ್ತಿ ನಗರಸಭೆ ಆಯುಕ್ತ ಹಾಸನ ನಗರಸಭೆಯಿಂದ 10 ರೂ.ಗಿಂತ ಹೆಚ್ಚು ಶುಲ್ಕ ವಸೂಲಿ ಮಾಡುವಂತಿಲ್ಲ. ಹೀಗಿದ್ದರೂ ನಿತ್ಯ 30ರಿಂದ 50 ರೂ. ಕೊಡಲೇ ಬೇಕು. ರಶೀದಿಯೂ ಕೊಡಲ್ಲ. ನೊಂದ ರಸ್ತೆಬದಿ ವ್ಯಾಪಾರಿಗಳು ಹಾಸನ ಈ ಅವಧಿ ಸುಂಕ ಟೆಂಡರ್ ಮುಗಿದ ಕೂಡಲೇ ರಸ್ತೆ ಬದಿ ವ್ಯಾಪಾರಿಗಳಿಂದ ಯಾವುದೇ ಕಾರಣಕ್ಕೂ ಸುಂಕ ವಸೂಲಿ ಮಾಡುವಂತಿಲ್ಲ. 23 ಲಕ್ಷ ಸರಕಾರಕ್ಕೆ ದೊಡ್ಡ ಹೊರೆಯಲ್ಲ. ಇದು ಕೇವಲ ಭರವಸೆಯಲ್ಲ. ಮಾಡಿ ತೋರಿಸುತ್ತೇನೆ, ಬಡವರ ಪರ ನಿಲ್ಲುತ್ತೇನೆ. ಪ್ರೀತಂ ಜೆ.ಗೌಡ ಶಾಸಕ
from India & World News in Kannada | VK Polls https://ift.tt/3ciU5ki