ಆರ್.ಶ್ರೀಧರ್ ರಾಮನಗರ ಬೆಂಗಳೂರು: ಫೆಬ್ರವರಿಯಿಂದ ಜುಲೈವರೆಗೆ ರಾಜ್ಯದಲ್ಲಿ 126 ಬಾಲ್ಯ ವಿವಾಹಗಳು ನಡೆದಿದ್ದರೆ, 1509 ಮದುವೆಗಳನ್ನು ಅಧಿಕಾರಿಗಳು ತಡೆದಿದ್ದಾರೆ. 126 ಬಾಲ್ಯ ವಿವಾಹಗಳ ಪೈಕಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವುದು 76 ಪ್ರಕರಣ ಮಾತ್ರ. ಇದು ಇಲಾಖೆ ಬಳಿ ಇರುವ ಲೆಕ್ಕ. ಯಾರ ಅರಿವಿಗೂ ಬಾರದಂತೆ ನಡೆದಿರುವ ಬಾಲ್ಯ ವಿವಾಹಗಳ ಸಂಖ್ಯೆಗಳು ಈ ಪಟ್ಟಿ ಸೇರಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ 199 ಮದುವೆಗಳನ್ನು ತಡೆದಿದ್ದರೆ, ಬೆಳಗಾವಿಯಲ್ಲಿ 114 ಮದುವೆಗಳನ್ನು ನಿಲ್ಲಿಸಲಾಗಿದೆ. ಮೈಸೂರು ಜಿಲ್ಲೆಯಲ್ಲಿ 18, ಹಾಸನ ಜಿಲ್ಲೆಯಲ್ಲಿ 17 ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ. ಪೋಕ್ಸೊ ಕಾಯಿದೆಯಡಿ ಮೈಸೂರು ಜಿಲ್ಲೆಯಲ್ಲಿ 18 ಪ್ರಕರಣಗಳು ದಾಖಲಾಗಿದ್ದರೆ, ಎರಡನೇ ಸ್ಥಾನದಲ್ಲಿರುವ ರಾಮನಗರ ಜಿಲ್ಲೆಯಲ್ಲಿ 7 ಪ್ರಕರಣಗಳು ದಾಖಲಾಗಿವೆ. ಇದು ಇಲಾಖೆ ಬಳಿ ಇರುವ ಅಧಿಕೃತ ಲೆಕ್ಕ. ಇದಕ್ಕೂ ಮೊದಲು ಆರು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ 30 ಪ್ರಕರಣಗಳು ಪತ್ತೆಯಾಗಿದ್ದವು. ಈಗ ಈ ಸಂಖ್ಯೆ ಎರಡು ಪಟ್ಟುಗಿಂತಲೂ ಹೆಚ್ಚಿದೆ. ಲಾಕ್ಡೌನ್ ವೇಳೆ ಸರಳ ಮದುವೆಗಳ ಹೆಸರಿನಲ್ಲಿ ಅದೆಷ್ಟೋ ಮಂದಿ ಮಕ್ಕಳ ಮದುವೆ ಮಾಡಿ ಮುಗಿಸಿದ್ದಾರೆ. ಅದನ್ನು ಪತ್ತೆ ಹೆಚ್ಚುವುದು ಕಷ್ಟ ಎನ್ನುವುದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ವಾದ. ಲಾಕ್ಡೌನ್ನಲ್ಲಿಯೇ ಏಕೆ? ಲಾಕ್ಡೌನ್ ವೇಳೆಯಲ್ಲಿ ಸರಕಾರಿ ಅಧಿಕಾರಿಗಳೆಲ್ಲರ ಗಮನ ಸೋಂಕು ನಿಯಂತ್ರಿಸುವುದರತ್ತಲೇ ನೆಟ್ಟಿತ್ತು. ಅದು ಬಿಟ್ಟು ಇತರ ಚಟುವಟಿಕೆಗಳತ್ತ ಗಮನ ಹರಿಸಲೂ ಅಧಿಕಾರಿಗಳಿಗೆ ಪುರಸೊತ್ತು ಇರಲಿಲ್ಲ. ಈ ಸಂದರ್ಭವನ್ನು ಬಳಸಿಕೊಂಡ ಪೋಷಕರು ತಮ್ಮ ಅಪ್ತಾಪ್ತ ವಯಸ್ಸಿನ ಮಕ್ಕಳಿಗೆ ಮದುವೆ ಮಾಡಿದ್ದಾರೆ. ಕಾಡಂಚಿನ ಬೆಟ್ಟದ ತಪ್ಪಲು ಹಾಗೂ ಕುಗ್ರಾಮಗಳಲ್ಲೇ ಇಂತಹ ಪ್ರಕರಣಗಳು ಹೆಚ್ಚಿವೆ. ಫೆಬ್ರವರಿಯಿಂದ ಜುಲೈವರೆಗಿನ ಬಾಲ್ಯ ವಿವಾಹ 1509-ಮದುವೆಗಳಿಗೆ ತಡೆ 126- ಮದುವೆ ನಡೆದಿವೆ 73- ಪ್ರಕರಣ ದಾಖಲಾಗಿವೆ
from India & World News in Kannada | VK Polls https://ift.tt/36cpUun