ಬೆಂಗಳೂರು: ಬೆಂಗಳೂರು ಮಾತ್ರವಲ್ಲದೆ ಇದೀಗ ಇಡೀ ಕರ್ನಾಟಕದಲ್ಲಿ ಡ್ರಗ್ಸ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಅದರಲ್ಲೂ ಯಾವಾಗ ಚಂದನವನದ ಹೆಸರು ಡ್ರಗ್ಸ್ ದಂಧೆಯಲ್ಲಿ ತಳುಕು ಹಾಕಿತೋ. ಜನರಲ್ಲೂ ಈ ಬಗ್ಗೆ ಕುತೂಹಲ ಮೂಡಲು ಆರಂಭಿಸಿದೆ. ಯಾರಿಂದ ಆರಂಭವಾಗಿ ಯಾರವರೆಗೆ ಬಂದು ಈ ಡ್ರಗ್ಸ್ ಜಾಲ ನಿಲ್ಲುತ್ತೋ ಅಂತ ಅವರವರೇ ಊರಿನ ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಸಿಲಿಕಾನ್ ಸಿಟಿಯಿಂದ ಮಾಯಾನಗರಿವರೆಗು ಇದೀಗ ಡ್ರಗ್ಸ್ನ ನಶೆ ಏರಲು ಆರಂಭಿಸಿದೆಯಾದ್ರು, ಆದರ ಆ ಅಮಲನ್ನ ಇಳಿಸಲು ಅಪರಾಧ ಪತ್ತೆ ಹಚ್ಚುವ ಕೇಂದ್ರ ಅಪರಾಧ ವಿಭಾಗ ಸರ್ವ ಸನ್ನದ್ದವಾಗಿದೆ.ಡ್ರಗ್ಸ್ ವಿಚಾರ ಇದೀಗ ಭಾರೀ ಸುದ್ದಿಯಾದಂತೆ ಎಚ್ಚೆತ್ತಿರುವ ಸಿಸಿಬಿ, ಕಣ್ಣಿಗೆ ಎಣ್ಣೆ ಬಿಟ್ಟಂತೆ ಕಾದು ಕುಳಿತು ತನಿಖೆ ನಡೆಸುತ್ತಿದೆ. ಡ್ರಗ್ ಪೆಡ್ಲರ್ಗಳು, ಡೀಲರ್ಗಳ ಹಿಂದೆಯೂ ಬಿದ್ದಿದೆ. ಡ್ರಗ್ಸ್ ತಪಾಸಣೆ ಕೊಡಲಿ ಏಟು ನೀಡಲು ಎಲ್ಲಾ ರೀತಿಯ ಮಾಸ್ಟರ್ ಪ್ಲಾನ್ಗಳನ್ನು ರೂಪಿಸುತ್ತಿದೆ. ಇದೀಗ ಸಿಸಿಬಿ ಪೊಲೀಸರಿಗೆ ನೆರವು ನೀಡಲು ಮತ್ತೊಬ್ಬರು ಎಂಟ್ರಿ ಕೊಟ್ಟಿದ್ದಾರೆ.

ಬೆಂಗಳೂರು:
ಬೆಂಗಳೂರು ಮಾತ್ರವಲ್ಲದೆ ಇದೀಗ ಇಡೀ ಕರ್ನಾಟಕದಲ್ಲಿ ಡ್ರಗ್ಸ್ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ಅದರಲ್ಲೂ ಯಾವಾಗ ಚಂದನವನದ ಹೆಸರು ಡ್ರಗ್ಸ್ ದಂಧೆಯಲ್ಲಿ ತಳುಕು ಹಾಕಿತೋ. ಜನರಲ್ಲೂ ಈ ಬಗ್ಗೆ ಕುತೂಹಲ ಮೂಡಲು ಆರಂಭಿಸಿದೆ. ಯಾರಿಂದ ಆರಂಭವಾಗಿ ಯಾರವರೆಗೆ ಬಂದು ಈ ಡ್ರಗ್ಸ್ ಜಾಲ ನಿಲ್ಲುತ್ತೋ ಅಂತ ಅವರವರೇ ಊರಿನ ಕಟ್ಟೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಸಿಲಿಕಾನ್ ಸಿಟಿಯಿಂದ ಮಾಯಾನಗರಿವರೆಗು ಇದೀಗ ಡ್ರಗ್ಸ್ನ ನಶೆ ಏರಲು ಆರಂಭಿಸಿದೆಯಾದ್ರು, ಆದರ ಆ ಅಮಲನ್ನ ಇಳಿಸಲು ಅಪರಾಧ ಪತ್ತೆ ಹಚ್ಚುವ ಕೇಂದ್ರ ಅಪರಾಧ ವಿಭಾಗ ಸರ್ವ ಸನ್ನದ್ದವಾಗಿದೆ.
ಸಿಟಿ ಬಸ್ನಲ್ಲಿ ಡ್ರಗ್ಸ್!

ಯಸ್ ಕಾರು ಇನ್ನಿತರ ವಾಹನಗಳಲ್ಲಿ ಮಾತ್ರವಲ್ಲ ಡ್ರಗ್ ಡೀಲರ್ಗಳು ಇದೀಗ ಸಿಟಿ ಬಸ್ ಮೂಲಕ ಡ್ರಗ್ಸ್ ಸಾಗಿಸಲು ಮುಂದಾಗಿದ್ದಾರಂತೆ. ಸುಲಭ ಹಾಗೂ ಯಾರು ಪತ್ತೆ ಹಚ್ಚಲು ಸಾಧ್ಯವಿಲ್ಲ ಎನ್ನುವ ಉದ್ದೇಶದಿಂದ ಈ ಮಾರ್ಗದ ಮೂಲಕ ಮಾದಕ ವಸ್ತು ಸಾಗಿಸಲು ಮುಂದಾಗಿದ್ದಾರೆ. ಇದರ ಬಗ್ಗೆ ಮಾಹಿತಿ ಸಿಗುತ್ತಲೆ ಇದೀಗ ಸಿಸಿಬಿ ಪೊಲೀಸರು ಬಸ್ಗಳ ಮೇಲೆ ದಾಳಿ ಮಾಡಲು ಆರಂಭಿಸಿದ್ದಾರೆ. ಬುಧವಾರ ಮುಂಜಾನೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವ ಬಸ್ಗಳ ಮೇಲೆ ದಾಳಿ ನಡೆಸಿದ ಪೊಲೀಸರು ಪರಿಶಿಲನೆ ನಡೆಸಿದ್ದಾರೆ. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿದ್ದ ಬಸ್ಗಳು, ಖಾಸಗಿ ಬಸ್ಗಳಲ್ಲಿ ಬಂದ್ ಕೊರಿಯರ್ ಹಾಗೂ ಪಾರ್ಸೆಲ್ಗಳನ್ನು ಪೊಲೀಸರು ಪರಿಶೀಲಿಸಿದರು.ಈ ಮೂಲಕ ಏನೆ ಆಗಲಿ ಡ್ರಗ್ಸ್ ಜನರಿಗೆ ತಲುಪದಂತೆ ಮಾಡಲು ಎಲ್ಲಾ ರೀತಿಯಾಗಿ ಪ್ರಯತ್ನಿಸುತ್ತಿದೆ ಸಿಸಿಬಿ.
ಡಾಗ್ ಸ್ಕ್ಯಾಡ್ ನಿಯೋಜನೆ.!

ಡ್ರಗ್ಸ್ ಸರಬರಾಜುಗೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ರೂಪಿಸಿರುವ ಸಿಸಿಬಿ ಪಡೆ ಬುಧವಾರದಿಂದ ವಿಭಿನ್ನವಾಗಿ ಕಾರ್ಯಾಚರಿಸಲು ಆರಂಭಿಸಿದೆ. ಬಸ್ ಸೇರಿ ಯಾವುದೇ ವಾಹನಗಳಲ್ಲಿ ಡ್ರಗ್ಸ್ ಸರಬರಾಜು ಆಗದಂತೆ ತಡೆಯಲು ಡ್ರಗ್ಸ್ ಹಾಗೂ ಗಾಂಜಾ ವಾಸನೆ ಕಂಡು ಹಿಡಿಯುವ ಎಕ್ಸ್ ಪರ್ಟ್ ಶ್ವಾನಗಳನನ್ನು ಬಳಸುತ್ತಿದೆ. ರಾಣಾ, ಮುದೋಳ್, ಜರ್ಮನ್ ಶೆಫಾರ್ಡ್ ಸೇರಿ ವಿವಿಧ ತಳಿಯ ಶ್ವಾನಗಳನ್ನ ಬಳಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ. ಇದಕ್ಕಾಗಿ ಈಗಾಗಲೇ ಒಂದು ಟೀಂ ರೆಡಿಯಾಗಿದ್ದು ಬೆಂಗಳೂರಿನಿಂದ ಹೊರ ಹೋಗುವ ವಾಹನ ಹಾಗೂ ಒಳಗೆ ಬರುವ ಎಂಟ್ರಿ ಪಾಯಿಂಟ್ನಲ್ಲಿ ತಪಾಸಣೆ ನಡೆಯುತ್ತಿದೆಯಂತೆ. ಅಲ್ಲದೆ ರೈಲ್ವೇ ಸ್ಟೇಶನ್, ಎರ್ಪೋರ್ಟ್ಗಳಲ್ಲೂ ಈ ಬಗ್ಗೆ ಎಚ್ಚರಿಕೆ ವಹಿಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಹೇಗೆ ನಡೆಯುತ್ತಿದೆ ತನಿಖೆ!

ಇಂದು ಮೆಜಸ್ಟಿಕ್ನ ಆಂಧ್ರ ಬಸ್ಸ್ಟ್ಯಾಂಡ್, ಖಾಸಗಿ ಬಸ್ ನಿಲ್ಧಾಣ ಸೇರಿ ಹಲವೆಡೆ ಬಸ್ ಹಾಗೂ ಪಾರ್ಸಲ್ಗಳನ್ನ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸಿದರು. ಆದರೆ ಯಾವುದೇ ಮಾದಕ ವಸ್ತುಗಳ ಅಲ್ಲಿ ಸಿಕ್ಕಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಪೊಲೀಸ್ ಜೊತೆ ಇದ್ದಂತಹ ಶ್ವಾನ ದಳದ ( ಆ್ಯಂಟಿ ನಾರ್ಕೊಟಿಕ್ ಶ್ವಾನ ದಳ) ಸಹಾಯ ಪಡೆದುಕೊಂಡು. ಬೆಂಗಳೂರು ನಗರಕ್ಕೆ ಪ್ರವೇಶವಾಗುವಂತಹ ವಾಹನಗಳು. ಬಸ್ಗಳನ್ನು ತಪಾಸಣೆ ನಡೆಸುವ ಕಾರ್ಯವನ್ನು ಕೈಗೊಂಡಿದ್ದು,ಇನ್ನು ಮೇಲೆ ಬೆಂಗಳೂರಲ್ಲಿ ಡ್ರಗ್ಸ್ ಪೆಡ್ಲರ್ಗಳ ಆಟ ನಡೆಯಲ್ಲ ಎಂದಿದ್ದಾರೆ. ಅಲ್ಲದೆ ಸಂಪೂರ್ಣ ನಿಗಾ ಇಡುವುದಾಗಿ ತಿಳಿಸಿದ್ದಾರೆ. ಸದ್ಯ ಪೊಲೀಸರ ಜೊತೆಗೆ ಶ್ವಾನ ಕೂಡ ಫೀಲ್ಡ್ಗೆ ಇಳಿದಿದ್ದು , ಅದೆಷ್ಟು ಜನ ಪೊಲೀಸ್ ಮೆಟ್ಟಿಲು ಹತ್ತಲಿದ್ದಾರೋ ಅಂತ ಕಾದು ನೋಡಬೇಕಿದೆ.
from India & World News in Kannada | VK Polls https://ift.tt/3gYf90s