ಬಿಲ್‌ ಪಾವತಿಸದ್ದಕ್ಕೆ ನವಜಾತ ಶಿಶುವನ್ನೇ ಖರೀದಿಸಿದ್ದ ಆಸ್ಪತ್ರೆಗೆ ಬೀಗ..! 2 ದಿನದಲ್ಲಿ ಉತ್ತರಿಸಲು ನೋಟಿಸ್‌

ಆಗ್ರಾ: ಚಿಕಿತ್ಸೆಯ ಬಿಲ್‌ ಪಾವತಿಸಲು ಹಣವಿಲ್ಲದ್ದಕ್ಕೆ ನವಜಾತ ಶಿಶುವನ್ನು ಲಕ್ಷ ರೂಪಾಯಿಗೆ ಖರೀದಿಸಿದ್ದ ಆಸ್ಪತ್ರೆಯ ಬಗ್ಗೆ ವರದಿ ಪ್ರಕಟವಾದ ಮರುದಿನವೇ ಮೇಲೆ ಜಿಲ್ಲಾ ಆರೋಗ್ಯ ಇಲಾಖೆ ದಾಳಿ ನಡೆಸಿದ್ದು, ಆಸ್ಪತ್ರೆಯನ್ನು ಜಫ್ತಿ ಮಾಡಲಾಗಿದೆ. ಜೊತೆಗೆ ಜಿಲ್ಲಾಧಿಕಾರಿ ಪ್ರಭು ಎನ್‌.ಸಿಂಗ್‌ ಅವರ ಆದೇಶದಂತೆ ಆಸ್ಪತ್ರೆ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಗಿದೆ. ಆರೋಗ್ಯ ಇಲಾಖೆ ದಾಳಿ ಮಾಡಿದ ಸಮಯದಲ್ಲಿ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರು, ಪ್ಯಾರಾಮೆಡಿಕಲ್‌ ಸಿಬ್ಬಂದಿ ಕರ್ತವ್ಯದಲ್ಲಿರಲಿಲ್ಲ. ಯಾವುದೇ ರೋಗಿಗೆ ಚಿಕಿತ್ಸೆ ನೀಡಲಾಗುತ್ತಿದ್ದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಸ್ಪತ್ರೆಯನ್ನು ಸೀಲ್‌ ಮಾಡಿದ ನಂತರ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಘಟನೆ ಬಗ್ಗೆ ಎರಡು ದಿನಗಳೊಳಗೆ ವಿವರಣೆ ನೀಡುವಂತೆ ಆಡಳಿತ ಮಂಡಳಿಗೆ ನೋಟಿಸ್‌ ನೀಡಲಾಗಿದೆ. ಜಿಲ್ಲಾಡಳಿತದ ಆದೇಶದಂತೆ ಜೆಪಿ ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ನೋಂದಣಿಯ ದಾಖಲೆಗಳನ್ನು ತೋರಿಸಲು ಆಸ್ಪತ್ರೆಯ ಸಿಬ್ಬಂದಿಗೆ ಆಗಲಿಲ್ಲ. ಯಾವೊಬ್ಬ ವೈದ್ಯ ಹಾಗೂ ಪ್ಯಾರಾಮೆಡಿಕಲ್‌ ಸಿಬ್ಬಂದಿ ಕರ್ತವ್ಯದಲ್ಲಿರಲಿಲ್ಲ. ಅದಕ್ಕಾಗಿ ಆಸ್ಪತ್ರೆಯನ್ನು ಸೀಲ್‌ ಮಾಡಲಾಗಿದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರ ಡಾ.ಆರ್‌.ಸಿ.ಪಾಂಡೆ ಹೇಳಿದ್ದಾರೆ. ಇನ್ನು, ಜಿಲ್ಲಾಧಿಕಾರಿ ಆದೇಶದ ನಂತರ, ಹೆಚ್ಚುವರಿ ನಗರ ಆಯುಕ್ತ ವಿಮಲ್‌ ಕಿಶೋರ್‌ ಗುಪ್ತಾ ಮತ್ತು ಡಿಎಸ್‌ಪಿ ವಿಕಾಸ್‌ ಕುಮಾರ್‌ ಜೈಸ್ವಾಲ್‌ ಮೆಹತಾಬ್‌ ಬಾಗ್‌ ಸಮೀಪದ ಶಂಭು ನಗರದಲ್ಲಿ ವಾಸವಿರುವ ದಲಿತ ಕುಟುಂಬವನ್ನು ಭೇಟಿ ಮಾಡಿ ಬಂದಿದ್ದಾರೆ. ಮಗುವಿನ ತಾಯಿ ಬಬಿತಾ ಅಧಿಕಾರಿಗಳಿಗೆ ತಮ್ಮ ಮಗುವನ್ನು ವಾಪಸ್‌ ಪಡೆಯಲು ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಘಟನೆ ಬಗ್ಗೆ ವಿವರಣಾತ್ಮಕ ತನಿಖೆ ನಡೆಯುತ್ತಿದೆ. ಆರೋಪ ಸಾಬೀತಾದರೆ ಎಫ್‌ಐಆರ್‌ ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಭು ಎನ್‌.ಸಿಂಗ್‌ ಹೇಳಿದ್ದಾರೆ. ಇನ್ನು, ಮಕ್ಕಳ ಹಕ್ಕುಗಳ ಕಾರ್ಯಕರ್ತ ನರೇಶ್‌ ಪರಾಸ್‌ ಆಸ್ಪತ್ರೆಯ ವಿರುದ್ಧ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ನೀಡಿದ್ದು, ಐಪಿಸಿ ಸೆಕ್ಷನ್‌ 370 ಪ್ರಕಾರ ಕೇಸ್‌ ದಾಖಲಿಸಿ ಎಂದು ಹೇಳಿದ್ದಾರೆ.


from India & World News in Kannada | VK Polls https://ift.tt/32O8ZdZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...