ಕಾಫಿ, ಮೆಣಸಿಗೆ ಮಳೆ ಕಂಟಕ: ವರುಣನ ಆರ್ಭಟಕ್ಕೆ ನೆಲಕಚ್ಚುತ್ತಿರುವ ಬೆಳೆ, ಇಳುವರಿ ಕುಂಠಿತ!

ವಿನಯ್‌ ಕೂಡುರಸ್ತೆ ಸಕಲೇಶಪುರ: ಸಾಮಾನ್ಯವಾಗಿ ತಾಲೂಕಿನಲ್ಲಿ ಜೂನ್‌, ಜುಲೈ ಅಂಚಿನಲ್ಲಿ ಭಾರಿ ಸುರಿದರೆ ಸೆಪ್ಟೆಂಬರ್‌ನಲ್ಲಿ ಹದವಾದ ಮಳೆ ಸುರಿಯುತ್ತದೆ. ಆದರೆ ಈ ಬಾರಿ ಜೂನ್‌ ಹಾಗೂ ಜುಲೈ 2ನೇ ವಾರದವರೆಗೂ ಹೆಚ್ಚಿನ ಮಳೆ ಬಾರದ ಕಾರಣ ತಾಲೂಕಿನಲ್ಲಿ ಮಳೆ ಕೊರತೆ ಉಂಟಾಗಿತ್ತು. ಆಗಸ್ಟ್‌ನಲ್ಲಿ ವಾಡಿಕೆ 455 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಆಗಿದ್ದು ಬರೋಬ್ಬರಿ 1099 ಮಿ.ಮೀ ಮಳೆ. ಇದರ ಪರಿಣಾಮ ತಾಲೂಕಿನಲ್ಲಿ ವ್ಯಾಪಕ ಬೆಳೆ ಹಾನಿ ಸಂಭವಿಸಿತ್ತು. ಅಧಿಕ ಮಳೆಯಿಂದಾಗಿ , , ಭತ್ತದ ಬೆಳೆಗಳಿಗೆ ನೇರ ಹಾನಿಯುಂಟಾಗಿತ್ತು. ಇದಾದ ನಂತರ ಸೆಪ್ಟೆಂಬರ್‌ ತಿಂಗಳಲ್ಲಿ ಸೆ.1ರಿಂದ 16ರವರೆಗೆ ವಾಡಿಕೆಯಂತೆ 96 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 171 ಮಿ.ಮೀ. ಮಳೆಯಾಗಿದ್ದು, ಶೇ.78ಕ್ಕೂ ಹೆಚ್ಚು ಅಧಿಕ ಮಳೆಯಾಗಿದೆ. ಜತೆಗೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಜಿಟಿ ಜಿಟಿ ಮಳೆಗೆ ತಾಲೂಕಿನಲ್ಲಿ ಸಂಪೂರ್ಣವಾದ ಶೀತದ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಕಾಫಿ, ಮೆಣಸು, ಅಡಿಕೆ ಉದುರುತ್ತಿದ್ದು, ಶೇ.30ಕ್ಕೂ ಹೆಚ್ಚು ಇಳುವರಿ ಕಡಿಮೆಯಾಗುವ ಸಾಧ್ಯತೆಯಿರುವುದರಿಂದ ಬೆಳೆಗಾರರು ಆತಂಕದಲ್ಲಿದ್ದಾರೆ. ಕಾಡಾನೆ ಕಾಟಮಳೆ ಜತೆಗೆ ಕಾಡಾನೆಗಳ ಹಾವಳಿ ಸಹ ಮಿತಿ ಮೀರಿದ್ದು, ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಸುರಿಯುತ್ತಿರುವ ಮಳೆಯಿಂದಾಗಿ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಜನರು ಶೀತ, ನೆಗಡಿ, ಕೆಮ್ಮು, ಜ್ವರಕ್ಕೆ ತುತ್ತಾಗುತ್ತಿದ್ದಾರೆ. ಒಂದೆಡೆ ಕೊರೊನಾ ಸೋಂಕಿನ ಭೀತಿ ಮತ್ತೊಂದೆಡೆ ಶೀತದ ಹಾವಳಿಯಿಂದ ಜನ ಯಾವುದು ಕೊರೊನಾ, ಯಾವುದು ಶೀತ ಎಂದು ತಿಳಿಯದೆ ಆತಂಕಕ್ಕೆ ಈಡಾಗುತ್ತಿದ್ದಾರೆ. ಮಳೆಗೆ ಹೆದರಿರುವ ಜನ ಕಳೆದ ಒಂದು ವಾರದಿಂದ ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣದತ್ತ ಸುಳಿಯದ ಕಾರಣ ವ್ಯಾಪಾರ ವ್ಯವಹಾರ ಕೂಡ ಇಳಿಮುಖಗೊಂಡಿದೆ. ಪ್ರವಾಸೋದ್ಯಮಕ್ಕೂ ತೀವ್ರ ಪೆಟ್ಟು ಕೊರೊನಾದ ಜತೆಗೆ ಮಳೆಯಿಂದಾಗಿ ತಾಲೂಕಿನ ಪ್ರವಾಸೋದ್ಯಮಕ್ಕೂ ತೀವ್ರ ಪೆಟ್ಟು ಬಿದ್ದಿದೆ. ಪ್ರವಾಸಿಗರು ಈ ಹಿಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಾರದಿರುವುದರಿಂದ ತಾಲೂಕಿನ ಆರ್ಥಿಕತೆಗೆ ತೀವ್ರ ಪೆಟ್ಟು ಬಿದ್ದಿದೆ. ಸರಕಾರ ಮಳೆಹಾನಿ ಪರಿಹಾರಕ್ಕೆ ಇನ್ನು ಯಾವುದೇ ಸಣ್ಣ ಮೊತ್ತದ ಪರಿಹಾರ ಬಿಡುಗಡೆ ಮಾಡದಿರುವುದರಿಂದ ರೈತರು ಪಡಿಪಾಟಲು ಅನುಭವಿಸಬೇಕಾಗಿದೆ. ಮಲೆನಾಡಿನಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಸುರಿಯುತ್ತಿರುವ ಮಳೆ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದು, ಮಳೆ ನಿಂತಲ್ಲಿ ಮಾತ್ರ ಜನ ನೆಮ್ಮದಿಯ ನಿಟ್ಟುಸಿರು ಬಿಡಲು ಸಾಧ್ಯ ಎನ್ನುತ್ತಾರೆ ಸ್ಥಳೀಯರು. ಹೆಚ್ಚುವರಿ ಮಳೆಯಿಂದಾಗಿ ಅಪಾರ ಪ್ರಮಾಣದ ಕಾಫಿ, ಮೆಣಸು, ಭತ್ತ, ಅಡಿಕೆ ನಾಶಗೊಂಡಿದೆ. ಜತೆಯಲ್ಲಿ ಕಾಡಾನೆಗಳ ಕಾಟ ಜನ ಜೀವನವನ್ನು ಸಂಕಷ್ಟಕ್ಕೆ ದೂಡಿದೆ. ಸರಕಾರ ಇತ್ತ ಗಮನಹರಿಸಿ ಮಲೆನಾಡಿಗೆ ಸೂಕ್ತ ಪರಿಹಾರ ನೀಡಬೇಕು. ಗೊದ್ದು ಉಮೇಶ್‌ ಕಾಫಿ ಬೆಳೆಗಾರ ಅಕಾಲಿಕ ಮಳೆಯಿಂದಾಗಿ ಕಾಫಿ, ಮೆಣಸು, ಅಡಕೆ, ಭತ್ತದ ಬೆಳೆಗಳಿಗೆ ಹಾನಿಯುಂಟಾಗಿದೆ. ಇದರಿಂದಾಗಿ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಜಗದೀಶ್‌ ಹೆತ್ತೂರು


from India & World News in Kannada | VK Polls https://ift.tt/3mJuVjI

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...