ಮಲ್ಲಪ್ಪ ಸಂಕೀನ್ ಯಾದಗಿರಿ ಯಾದಗಿರಿ: ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೆಸರಿನಲ್ಲಿ ಮಾಡಿ ಮಹಿಳೆಯೊಬ್ಬರು 75.59 ಲಕ್ಷ ರೂ. ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೊರೊನಾ ವೈರಸ್ ನಿಯಂತ್ರಣ ಮತ್ತು ನೈಸರ್ಗಿಕ ವಿಕೋಪದಡಿ ಪರಿಹಾರಕ್ಕಾಗಿ ರಾಜ್ಯ ಸರಕಾರ 3.55 ಕೋಟಿ ರೂ. ಬಿಡುಗಡೆ ಮಾಡಿದ್ದು, ಖಾತೆಯಲ್ಲಿತ್ತು. ಹೆಚ್ಚುವರಿ ಅನುದಾನ ಬೇಕಾದಲ್ಲಿ ಪತ್ರದ ಮೂಲಕ ಕೋರಿಕೆ ಸಲ್ಲಿಸುವಂತೆ ತಮ್ಮ ಅಧೀನದ ಅಧಿಕಾರಿಗಳಿಗೆ ಸೂಚನೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆ್ಯಕ್ಸಿಸ್ ಬ್ಯಾಂಕ್ ಖಾತೆಯಲ್ಲಿ ಖರ್ಚು-ವೆಚ್ಚದ ವಿವರ ಪರಿಶೀಲಿಸಿದ್ದು, 75,59,90 ರೂ. ಅಕ್ರಮವಾಗಿ ಡ್ರಾ ಆಗಿರುವುದು ಗಮನಕ್ಕೆ ಬಂದಿದೆ. ತಹಶೀಲ್ದಾರ್ ಅವರು ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಘಟನೆಗೆ ಸಂಬಂಧಿಸಿದಂತೆ ಸಂಸ್ಥೆಯ ಲಕ್ಷ್ಮಿ ಕಟ್ಟಿಮನಿ ಎಂಬುವವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಜೂ.1ರಂದು ಮಧ್ಯಾಹ್ನ 12.25ರ ಸುಮಾರಿಗೆ ಖಾತೆಯಿಂದ ಶ್ರೀಮಹಾಲಕ್ಷ್ಮಿ ಎಂಟರ್ಪ್ರೈಸಸ್ ಹೆಸರಿನಲ್ಲಿ 75,59,900 ರೂ. ವರ್ಗಾವಣೆ ಆಗಿರುವುದು ದೃಢಪಟ್ಟಿದೆ. ನಕಲಿ ಸಹಿಯುಳ್ಳ ಚೆಕ್ ಒಂದನ್ನು ಬಳಸಲಾಗಿದೆ. ಸುರಪುರ ತಹಸೀಲ್ದಾರ್ ಹೆಸರಿನಲ್ಲಿ ಫೋರ್ಜರಿ ಸಹಿ ಮಾಡಿ 75 ಲಕ್ಷ ರೂ. ವಂಚನೆಗೆ ಸಂಬಂಧಿಸಿದಂತೆ ಲಕ್ಷ್ಮಿ ಕಟ್ಟಿಮನಿ ಅವರ ಮೇಲೆ ತಹಶೀಲ್ದಾರ್ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ರಿಷಿಕೇಶ್ ಭಗವಾನ್ ಸೋನಾವಣೆ, ಎಸ್ಪಿ
from India & World News in Kannada | VK Polls https://ift.tt/2HrQl4F