ವಿಘ್ನೇಶ್ವರನ ತಯಾರಿಕರಿಗೆ ಕೊರೊನಾ ವಿಘ್ನ; ಹಬ್ಬ ಸಮೀಪವಾದರೂ ಗಣಪತಿ ಮೂರ್ತಿಗಿಲ್ಲ ಬೇಡಿಕೆ!

ಆದರ್ಶ ಕೋಡಿ ದೊಡ್ಡಬಳ್ಳಾಪುರ ಕೋವಿಡ್‌ನಿಂದಾಗಿ ಸಾಮಾಜಿಕ ಅಂತರಕ್ಕೆ ಆದ್ಯತೆ ನೀಡಲಾಗುತ್ತಿದೆ. ಹೆಚ್ಚು ಜನ ಒಂದೆಡೆ ಸೇರಿ ಹಬ್ಬಗಳನ್ನು ಆಚರಿಸುವುದಕ್ಕೂ ನಿಬಂಧನೆಗಳಿವೆ. ಈ ಪರಿಸ್ಥಿತಿ ವರ್ಷವೂ ಕೂಡ ಗಣೇಶನ ಪ್ರತಿಷ್ಠಾನೆಗೆ ಅವಕಾಶ ನೀಡಲಾಗುತ್ತದೆಯೋ ಇಲ್ಲವೋ ಎಂಬ ಗೊಂದಲವಿದೆ. ಇದರಿಂದಾಗಿ, ದೊಡ್ಡ ಗಾತ್ರದ ಗಣೇಶ ಮೂರ್ತಿ ತಯಾರಿಕೆಗೆ ಇದುವರೆಗೆ ಯಾರೂ ಆರ್ಡರ್‌ ಬಾರದೆ ಮನೆಗಳಲ್ಲಿಇಡುವ ಗಣಪತಿ ತಯಾರಿಕೆ ಮಾತ್ರ ಮುಂದುವರೆದಿದೆ. ಮೂರನೇ ಅಲೆ ಆತಂಕಗಣಪತಿಯ ಹಬ್ಬಕ್ಕೆ ತಿಂಗಳಿದ್ದರೂ ಈಗಾಗಲೇ ಮೂರನೇ ಅಲೆಯ ಆಂತಕ ಎದುರಾಗಿದೆ. ಸಾಮೂಹಿಕ ಆಚರಣೆಗೆ ಅವಕಾಶ ನೀಡುವುದೇ ಕಷ್ಟ. ಹೀಗಾಗಿ, ಮೂರ್ತಿಗಳಿಗೆ ಬೇಡಿಕೆಯೇ ಬಾರದಿದ್ದರೆ ನಷ್ಟ ಆಗಬಹುದೆಂಬ ಕಾರಣಕ್ಕೆ ತಯಾರಕರು ದೊಡ್ಡ ಗಾತ್ರದ ಮೂರ್ತಿಗಳ ತಯಾರಿಕೆಯನ್ನೇ ಆರಂಭಿಸಿಲ್ಲ. ಜತೆಗೆ, ಸರಕಾರದಿಂದ ಹಬ್ಬಗಳ ಆಚರಣೆಯ ಬಗ್ಗೆ ಸೂಚನೆಗಳು ಬಾರದಿರುವುದರಿಂದ ಹಬ್ಬ ಆಚರಣೆಯ ಬಗ್ಗೆಯೇ ಸಾಕಷ್ಟು ಪ್ರಶ್ನೆಗಳಿವೆ. ಇವೆಲ್ಲವುಗಳ ಮಧ್ಯೆ ಈ ವೃತ್ತಿಯನ್ನೇ ನಂಬಿಕೊಂಡಿರುವ ಅದೆಷ್ಟೋ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಪ್ರತಿವರ್ಷ ಹಬ್ಬಕ್ಕೆ 2-3 ತಿಂಗಳು ಇರುವಾಗಲೇ ಬೇಡಿಕೆ ಹೆಚ್ಚಾಗಿ ಬರುತ್ತಿತ್ತು. ಕೈಗೆ ಬಿಡುವೇ ಇರುತ್ತಿರಲಿಲ್ಲ. ಆದರೆ, ಈ ವರ್ಷ ಕೊರೊನಾದಿಂದಾಗಿ ಮೂರ್ತಿ ತಯಾರಕರ ಮನೆಯಲ್ಲಿಇಂತಹ ದೃಶ್ಯವೇ ಕಾಣಸಿಗುತ್ತಿಲ್ಲ. ಮನೆಯಲ್ಲಿ ಪ್ರತಿಷ್ಠಾಪಿಸುವ ಅರ್ಧ, ಮುಕ್ಕಾಲು ಅಡಿ ಎತ್ತರದ ಮೂರ್ತಿಗಳ ತಯಾರಿಕೆಗೆ ಮಾತ್ರ ಕೋರಿಕೆ ಪಡೆದು ಕೆಲಸ ಮಾಡಲಾಗುತ್ತಿದೆ. ಲಕ್ಷದಿಂದ ಸಾವಿರಕ್ಕಿಳಿದ ಆದಾಯಕೊರೊನಾ ಮುನ್ನ ಪ್ರತಿ ಗಣಪತಿ ತಯಾರಿಕರ ಕುಟುಂಬಗಳು ವಾರ್ಷಿಕವಾಗಿ 2-4 ಲಕ್ಷ ಆದಾಯಗಳಿಸುತ್ತಿದ್ದರು. 20-50 ಬೃಹತ್‌ ಗಾತ್ರದ ಗಣಪತಿಗಳಿಗೆ ಬೇಡಿಕೆ ಬರುತ್ತಿತ್ತು. ಆದರೆ ಕಳೆದ ವರ್ಷ ಕೋವಿಡ್‌ ಸಮಯದಲ್ಲಾದ ನಷ್ಟ ಸುಧಾರಿಸಿಕೊಳ್ಳುವಷ್ಟರಲ್ಲಿ ಈ ಬಾರಿಯ ಗಣೇಶನ ಹಬ್ಬ ಕೊರೊನಾ ಎರಡನೇ ಅಲೆ ಹಾಗೂ 3ನೇ ಅಲೆಯ ಆತಂಕದಿಂದ ಮಂಕಾಗಿದ್ದು, ಗಣಪತಿ ಮೂರ್ತಿಗಳು ಮತ್ತಷ್ಟು ಬೇಡಿಕೆ ಕಳೆದುಕೊಳ್ಳುವ ಆಂತಕವಿದೆ ಎಂದು ಗುಂಡ್ಮುಗೆರೆ ಗಣಪತಿ ತಯಾರಕ ಮಂಜುನಾಥ್‌ ತಿಳಿಸಿದ್ದಾರೆ. ಮಣ್ಣಿನ ಗಣಪತಿ ತಯಾರಿ ಈ ಬಾರಿ ಗಣೇಶನ ಮೂರ್ತಿ ತಯಾರಕರು ಬೃಹತ್‌ ಪ್ರಮಾಣದಲ್ಲಿ ಗಣೇಶ ಮೂರ್ತಿ ತಯಾರಿಕೆಗೆ ಮುಂದಾಗಿಲ್ಲ. ಶೇ.10ರಷ್ಟು ಮಾತ್ರ ಮೂರ್ತಿ ತಯಾರಿಸಿ ಇಟ್ಟುಕೊಂಡಿದ್ದಾರೆ. ಬಹುತೇಕರು ಮನೆಯಲ್ಲಿ ಕೂರಿಸುವ ಸಂಪ್ರದಾಯ ಇಟ್ಟುಕೊಂಡಿರುವುದರಿಂದ 2 ಅಡಿಗಿಂತ ಹೆಚ್ಚು ಎತ್ತರ ಗಣೇಶ ಮೂರ್ತಿ ಮಾಡುತ್ತಿಲ್ಲ. ಜತೆಗೆ ಮಣ್ಣಿನ ಗಣಪತಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆಡಂಬರದ ಗಣಪತಿ ತಯಾರಿಸಿ ಬೇಡಿಕೆ ಬಾರದಿದ್ದರೆ ನಷ್ಟ ಹೆಚ್ಚು. ಮನೆ ಬಳಕೆಗೆ ಆಗುವಷ್ಟು ಮಾತ್ರ ಮೂರ್ತಿ ತಯಾರಿಸ ಲಾಗುತ್ತದೆ. ಆದರೆ ಅದಕ್ಕೂ ಇದುವರೆಗೂ ಒಂದೇ ಒಂದು ಆರ್ಡರ್‌ ಬಂದಿಲ್ಲ. ಮುಂದಿನ ದಿನದಲ್ಲಿಏನಾಗುತ್ತದೋ ಎಂಬ ಆತಂಕವಿದೆ ಎಂದು ಗದಗದ ಗಣಪತಿ ತಯಾರಕ ಅರುಣ್‌ ತಿಳಿಸಿದ್ದಾರೆ. ಮೂರ್ತಿಗೆ ಮಳೆ ಕಂಟಕಗಣೇಶ ಮೂರ್ತಿ ಗಳಿಗೆ ಒಂದೆಡೆ ಬೇಡಿಕೆಯಿಲ್ಲದೆ ಸಂಕಷ್ಟ ಎದುರಾಗಿದೆ. ಇದೀಗ ಉತ್ತರ ಕರ್ನಾಟಕ, ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಬೀಳುತ್ತಿದೆ.ಇದರಿಂದ ತಯಾರಾದ ಮೂರ್ತಿಗಳು ಒಣಗದೆ ಹಾಳಾಗುತ್ತಿದೆ. ಕೆಲವೆಡೆ ಮೂರ್ತಿ ತಯಾರಿಕೆಗೂ ಕಷ್ಟವಾಗುತ್ತಿದೆ.ಇದರಿಂದಾಗಿ ಮೂರ್ತಿ ತಯಾರಿಕೆ ಮತ್ತಷ್ಟು ಸಂಕಷ್ಟ ಎದುರಾಗಿದೆ.


from India & World News in Kannada | VK Polls https://ift.tt/3Cgt9hU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...