ಮಳೆ ಲೆಕ್ಕವೇ ಉಲ್ಟಾಪಲ್ಟ! ಸರಕಾರಿ ಸಂಸ್ಥೆಗಳ ಮಾಪನದಲ್ಲಿ ಭಾರೀ ವ್ಯತ್ಯಾಸ

ಸಂತೋಷ್‌ ಕಾಚಿನಕಟ್ಟೆ ಶಿವಮೊಗ್ಗ ಅಂಕಿ ಅಂಶವನ್ನು ದಾಖಲಿಸುವ ರಾಜ್ಯ ಮತ್ತು ಕೇಂದ್ರ ಸರಕಾರಿ ಸ್ವಾಮ್ಯದ ಎರಡು ಸಂಸ್ಥೆಗಳ ನಡುವಿನ ಅಂಕಿ ಅಂಶದಲ್ಲಿ ಭಾರೀ ವ್ಯತ್ಯಾಸ ಕೃಷಿಕರು ಮತ್ತು ಜನಸಾಮಾನ್ಯರಲ್ಲಿ ಗೊಂದಲವನ್ನುಂಟು ಮಾಡಿದೆ. ಕೇಂದ್ರ ಸರಕಾರಿ ಸ್ವಾಮ್ಯದ ಭಾರತೀಯ ಹವಾಮಾನ ಇಲಾಖೆ() ಹಾಗೂ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ(ಕೆಎಸ್‌ಎನ್‌ಡಿಎಂಸಿ)ವು ಉಷ್ಣಾಂಶ, ಮಳೆ, ಚಂಡಮಾರುತ ಮತ್ತು ಇತರೆ ನೈಸರ್ಗಿಕ ವಿಕೋಪಗಳ ಮುನ್ಸೂಚನೆ ನೀಡುತ್ತವೆ. ಮಳೆ ಮತ್ತು ಉಷ್ಣಾಂಶ ಮಾಪನ ಕೇಂದ್ರಗಳು ಬೇರೆ ಬೇರೆ ಕಡೆ ಇರುವ ಕಾರಣದಿಂದ ಅಲ್ಪ ಪ್ರಮಾಣದಲ್ಲಿ ವ್ಯತ್ಯಾಸ ಸಾಮಾನ್ಯ. ಆದರೆ, ಪ್ರತಿ ಬಾರಿ ಮಳೆ, ಉಷ್ಣಾಂಶದ ಅಂಕಿ ಅಂಶದಲ್ಲಿ ಅಜಗಜಾಂತರವಾಗುತ್ತಿದೆ. ಇದು ಕೇವಲ ಯಾವುದೋ ಒಂದು ಊರು, ತಾಲೂಕಿಗೆ ಸೀಮಿತವಾಗದೆ ಎಲ್ಲ ತಾಲೂಕು, ಜಿಲ್ಲೆ ಮತ್ತು ರಾಜ್ಯದ ಅಂಕಿ ಅಂಶದಲ್ಲೂ ಭಾರೀ ಏರುಪೇರಾಗುತ್ತಿದೆ. ಒಂದು ಸಂಸ್ಥೆಯು ವಾಡಿಕೆಗಿಂತ ಕಡಿಮೆ ಮಳೆ ತೋರಿಸಿದರೆ, ಮತ್ತೊಂದು ಸಂಸ್ಥೆ ಅತಿವೃಷ್ಟಿ ತೋರಿಸುತ್ತದೆ. ಇದು ಪ್ರತಿಬಾರಿಯೂ ಮರುಕಳಿಸುತ್ತಿದೆ. ಎಷ್ಟಿದೆ ವ್ಯತ್ಯಾಸ: ಐಎಂಡಿ ಬೆಂಗಳೂರು ಕೇಂದ್ರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಜೂನ್‌ನಲ್ಲಿ 223.3(ವಾಡಿಕೆ 199.3) ಮಿ.ಮೀ., ಜುಲೈನಲ್ಲಿ 532(ವಾಡಿಕೆ 463.5) ಮಿ.ಮೀ. ಮಳೆಯಾಗಿದೆ. ಕೆಎಸ್‌ಎನ್‌ಡಿಎಂಸಿ ಮಾಹಿತಿ ಪ್ರಕಾರ ಜೂನ್‌ನಲ್ಲಿ 198(ವಾಡಿಕೆ 199) ಮಿ.ಮೀ., ಜುಲೈನಲ್ಲಿ 290(ವಾಡಿಕೆ 271)ಮಿ.ಮೀ. ಮಳೆಯಾಗಿದೆ. ಈ ಎರಡೂ ಸಂಸ್ಥೆಗಳ ನಡುವೆ ಜೂನ್‌ನಲ್ಲಿ 25 ಮಿ.ಮೀ. ಮತ್ತು ಜುಲೈನಲ್ಲಿ 242 ಮಿ.ಮೀ. ವ್ಯತ್ಯಾಸವಿದೆ. ಮತ್ತೊಂದು ಗೊಂದಲವೆಂದರೆ ವಾಡಿಕೆ ಮಳೆಯಲ್ಲೂ ಈ ಎರಡೂ ಸಂಸ್ಥೆಗಳ ನಡುವೆ ತುಂಬ ವ್ಯತ್ಯಾಸವಿದೆ. ಒಂದು ಪ್ರದೇಶದಲ್ಲಿ ಸುರಿಯಬಹುದಾದ ಸರಾಸರಿ ವಾಡಿಕೆ ಮಳೆ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಾಗುವುದು ಹೇಗೆ ಸಾಧ್ಯ ಎಂಬುದು ರೈತರ ಪ್ರಶ್ನೆ. ರಾಜ್ಯದಲ್ಲಿ ಅತಿಹೆಚ್ಚು ಮಳೆಯಾಗುವ ಜಿಲ್ಲೆಗಳಲ್ಲಿ ಒಂದಾದ ಶಿವಮೊಗ್ಗದಲ್ಲಿ ಜುಲೈನಲ್ಲಿ ಐಎಂಡಿ ಪ್ರಕಾರ 872 (ವಾಡಿಕೆ 687)ಮಿ.ಮೀ. ಇದ್ದರೆ ಕೆಎಸ್‌ಎನ್‌ಡಿಎಂಸಿ ಪ್ರಕಾರ 753(ವಾಡಿಕೆ 764.9) ಮಿ.ಮೀ. ಇದೆ. ಮತ್ತೊಂದು ಸೋಜಿಗವೆಂದರೆ ಶಿವಮೊಗ್ಗದಲ್ಲಿ ಅತಿಹೆಚ್ಚು ಮಳೆಯಾಗುವ ಹೊಸನಗರ ತಾಲೂಕಿನಲ್ಲಿ ಐಎಂಡಿ ಪ್ರಕಾರ ಜುಲೈನಲ್ಲಿ 2248(ವಾಡಿಕೆ 1140.7) ಮಿ.ಮೀ. ಅಂದರೆ ವಾಡಿಕೆಯ ಒಂದು ಪಟ್ಟು ಹೆಚ್ಚು ಮಳೆಯಾಗಿದೆ. ಆದರೆ, ಕೆಎಸ್‌ಎನ್‌ಡಿಎಂಸಿ ಪ್ರಕಾರ 1115.9(1162.7) ಮಿ.ಮೀ. ಅಂದರೆ ವಾಡಿಕೆಗಿಂತ ಶೇ.-4 ಕಡಿಮೆ ಮಳೆಯಾಗಿದೆ. ಹಾಗಾದರೆ ಇದರಲ್ಲಿ ಯಾವುದು ಸರಿ, ಯಾವುದನ್ನು ಒಪ್ಪಿಕೊಳ್ಳಬೇಕು. ರೈತರಿಗೆ ನಷ್ಟದ ಆತಂಕ: ಹೆಚ್ಚು ಅಥವಾ ಕಡಿಮೆ ಮಳೆಯಾಗಿದೆ ಎಂಬುದನ್ನು ಸ್ಥಳೀಯರು ಅಂದಾಜಿಸಬಲ್ಲರು. ಆದರೆ, ನೈಜವಾಗಿ ಎಷ್ಟು ಪ್ರಮಾಣದಲ್ಲಿ ಆಗಿದೆ ಎಂಬುದನ್ನು ಅಂಕಿ ಅಂಶಗಳೇ ಹೇಳಬೇಕು. ಅತಿವೃಷ್ಟಿ ಅಥವಾ ಅನಾವೃಷ್ಟಿಯನ್ನು ನಿರ್ಧರಿಸುವುದು ಸಹ ಈ ಅಂಕಿ ಅಂಶಗಳೆ. ಮತ್ತೊಂದು ಕಡೆ ರೈತರ ಬೆಳೆ ವಿಮೆ ವಿಷಯದಲ್ಲೂ ಈ ಎರಡು ಸಂಸ್ಥೆಗಳ ಅಂಕಿಅಂಶ ನಿರ್ಣಾಯಕ. ನೈಜವಾಗಿ ಅತಿವೃಷ್ಟಿ ಅಥವಾ ಅನಾವೃಷ್ಟಿಯಾಗಿ ರೈತರು ಬೆಳೆ ಕಳೆದುಕೊಂಡಾಗ ಈ ಸಂಸ್ಥೆಗಳು ನೀಡುವ ವ್ಯತ್ಯಾಸಾತ್ಮಕ ಅಂಕಿಅಂಶಗಳನ್ನೇ ಮುಂದಿಟ್ಟುಕೊಂಡು ವಿಮಾ ಸಂಸ್ಥೆಗಳು ರೈತರಿಗೆ ಪರಿಹಾರ ಕೊಡದಿರುವ ಅಪಾಯವೂ ಇರುತ್ತದೆ. ಕೆಎಸ್‌ಎನ್‌ಡಿಎಂಸಿ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿಒಂದರಂತೆ ರಾಜ್ಯದೆಲ್ಲೆಡೆ 6,500 ಕೇಂದ್ರಗಳನ್ನು ಅಳವಡಿಸಿದರೆ, ಐಎಂಡಿ ಸಹ ಪ್ರತಿ ತಾಲೂಕು ಮತ್ತು ಪ್ರಮುಖ ಗ್ರಾಮಗಳಲ್ಲಿ ಮಳೆ ಮಾಪನ ಕೇಂದ್ರಗಳನ್ನು ಅಳವಡಿಸಿದೆ. ಎರಡೂ ಸಂಸ್ಥೆಗಳ ಅಧಿಕಾರಿಗಳು ನಮ್ಮ ಸಂಸ್ಥೆಯ ಅಂಕಿ ಅಂಶವೇ ನಿಖರವಾಗಿದೆ. ನಾವು ವೈಜ್ಞಾನಿಕವಾಗಿ ಮಳೆ ಪ್ರಮಾಣವನ್ನು ದಾಖಲು ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಶಿವಮೊಗ್ಗ ಜಿಲ್ಲೆಯಲ್ಲೇ ಮಳೆ ಮಾಪನ ಕೇಂದ್ರಗಳು ಬಹಳಷ್ಟು ಕಡೆ ಹಲವು ವರ್ಷಗಳಿಂದ ಕೆಟ್ಟು ನಿಂತಿವೆ. ಆದರೂ ಅಲ್ಲಿನ ಮಳೆ ಮಾಹಿತಿ ತೋರಿಸಲಾಗುತ್ತಿದೆ. ಕೆಲವು ಕಡೆ ಕೇಂದ್ರಗಳ ನಿರ್ವಹಣೆ ಕೊರತೆ ಇದೆ. ಹೀಗಾಗಿ ಮಳೆ ಮಾಪನ ಸಮರ್ಥವಾಗಿ ನಡೆಯುತ್ತಿಲ್ಲ ಎಂದು ರೈತರು ಆಪಾದಿಸಿದ್ದಾರೆ. ಮಳೆ ಮಾಪನ ಕೇಂದ್ರಗಳ ನಿರ್ವಹಣೆ, ಅಂಕಿ ಅಂಶಗಳ ದೋಷಗಳ ಬಗ್ಗೆ ಬಹಳ ಹಿಂದಿನಿಂದಲೂ ಅಧಿಕಾರಿಗಳಿಗೆ ಎಚ್ಚರಿಸುತ್ತಾ ಬಂದಿದ್ದೇವೆ. ಹವಾಮಾನ ಆಧಾರಿತ ಬೆಳೆ ವಿಮೆ ಬಂದ ಬಳಿಕವಂತೂ ಬಹಳಷ್ಟು ಕಡೆ ಮಳೆಮಾಪನ ಕೇಂದ್ರಗಳು ಇದ್ದಕ್ಕಿದ್ದಂತೆ ಕೆಟ್ಟು ಹೋಗುತ್ತಿರುವುದರ ಹಿಂದೆ ವಿಮಾ ಕಂಪನಿಗಳ ಕೈವಾಡ ಇರುವುದನ್ನು ಸರಕಾರಕ್ಕೆ ಹೇಳಿದ್ದೇವೆ. ಇಷ್ಟಾಗಿಯೂ ಸರಕಾರ ಎಚ್ಚೆತ್ತುಕೊಂಡಿಲ್ಲ. ವರ್ಷಗಟ್ಟಲೆ ಕೆಟ್ಟು ನಿಂತ ಮಾಪನ ಕೇಂದ್ರಗಳಲ್ಲೂ ಪ್ರತಿದಿನ ಮಳೆಯ ಅಂಕಿ ಅಂಶ ತೋರಿಸಲು ಹೇಗೆ ಸಾಧ್ಯ ಎಂಬುದನ್ನು ಸರಕಾರವೇ ಹೇಳಬೇಕು. ಕೆ.ಟಿ.ಗಂಗಾಧರ್‌, ಮಾಜಿ ಅಧ್ಯಕ್ಷರು, ರಾಜ್ಯ ರೈತಸಂಘ. ಮಳೆ ಅಂಕಿ ಅಂಶ(ಮಿ.ಮೀ.ನಲ್ಲಿ)
ತಿಂಗಳು ಐಎಂಡಿ ಕೆಎಸ್‌ಎನ್‌ಡಿಎಂಸಿ
ಜೂನ್‌ 223. 3 198
ಜುಲೈ 532.0 290
(ಐಎಂಡಿ ಮತ್ತು ಕೆಎಸ್‌ಎನ್‌ಡಿಎಂಸಿ ನಿರ್ದೇಶಕರಿಗೆ ಹಲವು ಬಾರಿ ಕರೆ ಮಾಡಿದರೂ ಸ್ವೀಕರಿಸಲಿಲ್ಲ)


from India & World News in Kannada | VK Polls https://ift.tt/3CcHewy

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...