ಹೊಸದಿಲ್ಲಿ : ಸಂಪುಟ ರಚನೆಯ ಸಂದರ್ಭದಲ್ಲಿ ತ್ರಿ ಸೂತ್ರ ಪಾಲನೆಗೆ ಬಸವರಾಜ ಬೊಮ್ಮಾಯಿ ಒಲವು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅಸಮತೋಲನ ನಿವಾರಣೆ ಮಾಡುವುದಕ್ಕೆ ಆದ್ಯತೆ ನೀಡಲಾಗುವ ಸುಳಿವು ನೀಡಿದ್ದಾರೆ. ಯಾವುದವು ತ್ರಿಸೂತ್ರಗಳು? ಪ್ರಾದೇಶಿಕ ಸಮತೋಲನ ಬೊಮ್ಮಾಯಿ ಸೂತ್ರದಡಿಯಲ್ಲಿ ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ ನೀಡಲಾಗುವುದು. ಕಳೆದ ಯಡಿಯೂರಪ್ಪ ಸಂಪುಟದಲ್ಲಿ ಪ್ರಾದೇಶಿಕ ಸಮತೋಲನ ಪಾಲನೆ ಮಾಡಿಲ್ಲ ಎಂಬ ಆರೋಪ ಇತ್ತು. ಈ ನಿಟ್ಟಿನಲ್ಲಿ ಬೊಮ್ಮಾಯಿ ಸಂಪುಟದಲ್ಲಿ ಇದಕ್ಕೆ ಆದ್ಯತೆ ನೀಡುವ ಮಾಹಿತಿಯನ್ನು ಸಿಎಂ ನೀಡಿದ್ದಾರೆ. ದೆಹಲಿಯಲ್ಲಿ ಮಾತನಾಡುತ್ತಾ ಪ್ರಾದೇಶಿಕ ಸಮತೋಲನ ಕಾಪಾಡಲಾಗುವುದು ಎಂದಿದ್ದಾರೆ. ಡಿಸಿಎಂ ಸ್ಥಾನ ಯಡಿಯೂರಪ್ಪ ಸಂಪುಟದಲ್ಲಿ ಮೂವರು ಡಿಸಿಎಂಗಳು ಇದ್ದರು. ದಲಿತ, ಲಿಂಗಾಯತ, ಒಕ್ಕಲಿಗರಿಗೆ ಸ್ಥಾನ ನೀಡಲಾಗಿತ್ತು. ಆದರೆ ಹೊಸ ಸಂಪುಟದಲ್ಲಿ ಡಿಸಿಎಂ ಹುದ್ದೆ ನೀಡುವುದು ಫಿಕ್ಸಾಗಿದೆ. ಹಾಗಾದರೆ ಯಾರಿಗೆ ನೀಡಲಾಗುತ್ತದೆ ಎಂಬುದು ಕುತೂಹಲ ಕೆರಳಿದೆ. ಸಂಪುಟ ರಚನೆಯಲ್ಲಿ ಇದು ಪ್ರಮುಖವಾಗಲಿದೆ. ಹಳಬರಿಗೂ ಆದ್ಯತೆ ಹೊಸ ಸಂಪುಟದಲ್ಲಿ ಬಹುತೇಕ ಹೊಸ ಮುಖಗಳಿಗೆ ಆದ್ಯತೆ ನೀಡಲಾಗುವಯದು ಎಂದು ಹೇಳಲಾಗುತ್ತಿತ್ತು. ಆದರೆ ಬೊಮ್ಮಾಯಿ ಕೊಟ್ಟ ಮಾಹಿತಿ ಪ್ರಕಾರ ಯಡಿಯೂರಪ್ಪ ಸಂಪುಟದಲ್ಲಿ ಇದ್ದವರನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂಪುಟ ರಚನೆ ಮಾಡಲಾಗುವುದು ಎಂದಿದ್ದಾರೆ. ಹಾಗಾದಲ್ಲಿ ವಸಲಿಗರು ಹಾಗೂ ಹಿರಿಯರಿಗೂ ಆದ್ಯತೆ ಇರಲಿದೆ ಎಂಬುವುದು ಸ್ಪಷ್ಟವಾಗುತ್ತಿದೆ.ಒಟ್ಟಾರೆ ಬೊಮ್ಮಾಯಿ ತ್ರಿಸೂತ್ರ ಎಷ್ಟರ ಮಟ್ಟಿಗೆ ವರ್ಕೌಟ್ ಆಗಲಿದೆ ಎಂಬುದು ಸದ್ಯದ ಕುತೂಹಲ. ಈ ಸೂತ್ರಕ್ಕೆ ಹೈಕಮಾಂಡ್ ಏನನ್ನಲಿದೆ ಎಂಬುದು ನೋಡಬೇಕಿದೆ.
from India & World News in Kannada | VK Polls https://ift.tt/3llHmUD