ಟ್ರ್ಯಾಕ್ಟರ್‌- ಜೀಪು ಪರೇಡ್‌ಗೆ ಸಜ್ಜು: ದಾವಣಗೆರೆ ಜಿಲ್ಲೆಯಲ್ಲೂ ರೈತರ ಶಕ್ತಿ ಪ್ರದರ್ಶನ​​!

: ನೂತನ ಮೂರು ಕೃಷಿ ಕಾಯಿದೆಗಳ ವಿರೋಧಿಸಿ, ಹೊಸದಿಲ್ಲಿ ರೈತರ ಹೋರಾಟ ಬೆಂಬಲಿಸಿ ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕ್ಟರ್‌ ಪರೇಡ್‌ಗೆ ಜಿಲ್ಲೆಯಲ್ಲಿ ನಾನಾ ಸಂಘಟನೆಗಳು, ದಲಿತ, ಕಮ್ಯೂನಿಸ್ಟ್‌ ಪಕ್ಷ ಸಾಥ್‌ ನೀಡಿವೆ. ಜಿಲ್ಲೆಯಿಂದ ರೈತರು ಜೀಪುಗಳ ಮೂಲಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ರಾಜಧಾನಿಗೆ ಹೋಗಲಾಗದ ರೈತರು ನಗರದಲ್ಲಿಯೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ನಗರದ ಜಯದೇವ ವೃತ್ತದಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ್‌ ಬಣ ಟ್ರ್ಯಾಕ್ಟರ್‌ ಪರೇಡ್‌ ಮಾಡಲು ತೀರ್ಮಾನಿಸಿದೆ. ಕೋಡಿಹಳ್ಳಿ ಚಂದ್ರಶೇಖರ್‌ ಬಣ ಸಹ ಪ್ರತಿಭಟನೆಗೆ ಮುಂದಾಗಿದೆ. ತೇಜಸ್ವಿ ಪಟೇಲ್‌ ನೇತೃತ್ವದ ಕಬ್ಬು ಬೆಳೆಗಾರರ ಸಂಘ ಬೆಂಗಳೂರಿಗೆ ಹೋಗಲು ಬಸ್‌ ವ್ಯವಸ್ಥೆ ಮಾಡಿದೆ. ಇಂದು ಟ್ರ್ಯಾಕ್ಟರ್‌, ಬೈಕ್‌ ರ್ಯಾಲಿ ರೈತ ಸಂಘದ ಮುಖಂಡರಾದ ಹುಚ್ಚವ್ವನಹಳ್ಳಿ ಮಂಜುನಾಥ್‌, ಗುಮ್ಮನೂರು ಬಸವರಾಜ್‌, ಕೋಲ್ಕುಂಟೆ ಹುಚ್ಚೆಂಗಪ್ಪ, ಆಲೂರು ಪರಶುರಾಮ, ಹುಚ್ಚವ್ವನಹಳ್ಳಿ ಪ್ರಕಾಶ್‌, ಶಿವಪುರ ಅರುಣ, ಆಲೂರು ಹಟ್ಟಿ ಪುಟ್ಟನಾಯ್ಕ. ನೇತೃತ್ವದಲ್ಲಿ ನಗರದಲ್ಲಿ ಬೃಹತ್‌ ಟ್ರ್ಯಾಕ್ಟರ್‌ ಮತ್ತು ಬೈಕ್‌ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ನಗರದ ಅಂಬೇಡ್ಕರ್‌ ವೃತ್ತದಲ್ಲಿ ರಾಷ್ಟ್ರಧ್ವಜಾರೋಹಣದ ಮೂಲಕ ಟ್ರ್ಯಾಕ್ಟರ್‌ ಮತ್ತು ಬೈಕ್‌ ರ್ಯಾಲಿಗೆ ಚಾಲನೆ ದೊರೆಯಲಿದೆ. ಬೆಂಗಳೂರಿನತ್ತ ಪಯಣ ಜ.26ರ ಮಂಗಳವಾರ ಹೊಸದಿಲ್ಲಿಯಲ್ಲಿ ರೈತರು ನಡೆಸುತ್ತಿರುವ ಪರ್ಯಾಯ ಗಣರಾಜ್ಯೋತ್ಸವದ ಟ್ರ್ಯಾಕ್ಟರ್‌ ಪರೇಡ್‌ ಬೆಂಬಲಿಸಿ ಬೆಂಗಳೂರಿನಲ್ಲಿ ರೈತ ಸಂಘಟನೆಗಳಿಂದ ಏರ್ಪಡಿಸಿರುವ ಟ್ರ್ಯಾಕ್ಟರ್‌ ಪರೇಡ್‌ನಲ್ಲಿ ಪಾಲ್ಗೊಳ್ಳಲು ಜಿಲ್ಲೆಯಿಂದ ಸೋಮವಾರ 10 ಟ್ರ್ಯಾಕ್ಟರ್‌, 25 ಜೀಪುಗಳಲ್ಲಿ ರೈತರು ಪ್ರಯಾಣ ಬೆಳೆಸಿದ್ದಾರೆ. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ದಾವಣಗೆರೆ ತಾಲೂಕಿನಿಂದ ಐದು, ಜಗಳೂರಿನಿಂದ ಮೂರು ಮತ್ತು ಚನ್ನಗಿರಿಯಿಂದ ಎರಡು ಟ್ರ್ಯಾಕ್ಟರ್‌ ತೆರಳಿದ್ದು, ಸೋಮವಾರ ಸಂಜೆ ಮತ್ತೆ ನಾಲ್ಕೈದು ಟ್ರ್ಯಾಕ್ಟರ್‌ಗಳಲ್ಲಿ ರೈತರು ಬೆಂಗಳೂರಿನತ್ತ ತೆರಳಿದರು. ರೈತ ಸಂಘ ಮತ್ತು ಹಸಿರು ಸೇನೆ (ಕೋಡಿಹಳ್ಳಿ ಬಣ)ಯ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ''ದಾವಣಗೆರೆಯಿಂದ ಬೆಂಗಳೂರಿಗೆ ತೆರಳಲು ದೂರವಾಗಲಿದೆ. ಆದ್ದರಿಂದ ಕಾರಿನಲ್ಲಿ ಸೋಮವಾರ ರಾತ್ರಿ ಹೋಗುತ್ತೇವೆ. ಹರಿಹರ, ಚನ್ನಗಿರಿ ಮತ್ತು ದಾವಣಗೆರೆ ಸೇರಿ ಜಿಲ್ಲೆಯಿಂದ ಹತ್ತಕ್ಕೂ ಹೆಚ್ಚು ಕಾರುಗಳಲ್ಲಿ ತೆರಳಿ ಪೆರೇಡ್‌ನಲ್ಲಿ ಪಾಲ್ಗೊಳ್ಳುತ್ತೇವೆ' ಎಂದು ವಿಕಗೆ ತಿಳಿಸಿದರು. 25 ಜೀಪುಗಳು ಬೆಂಗಳೂರಿಗೆ ಬೆಂಗಳೂರಿನಲ್ಲಿ ನಡೆಯಲಿರುವ ಟ್ರ್ಯಾಕ್ಟರ್‌-ಜಿಪ್‌ ಪೆರೇಡ್‌ನಲ್ಲಿ ಭಾಗವಹಿಸಲು ಐಕ್ಯ ಕರ್ನಾಟಕ ಹೋರಾಟ ಸಮಿತಿಯಿಂದ 25 ಜೀಪುಗಳಲ್ಲಿ ನಾನಾ ಸಂಘಟನೆಗಳ ಪದಾಧಿಕಾರಿಗಳು ತೆರಳಿದ್ದಾರೆ. ಸೋಮವಾರ ಸಂಜೆ ದಾವಣಗೆರೆಯ ಜಯದೇವ ವೃತ್ತದಿಂದ ಒಟ್ಟಾಗಿ ಐಕ್ಯ ಹೋರಾಟ ಸಮಿತಿಯಿಂದ ರಾಜಧಾನಿಗೆ ಹೋಗಿ ಪೆರೇಡ್‌ನಲ್ಲಿ ಪಾಲ್ಗೊಂಡು, ದಿಲ್ಲಿ ರೈತರ ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಸಮಿತಿ ಮುಖಂಡ, ಜಿಪಂ ಸದಸ್ಯ ತೇಜಸ್ವಿ ಪಟೇಲ್‌ ವಿಕಗೆ ತಿಳಿಸಿದ್ದಾರೆ. ಬೇಡಿಕೆಗಳು ಏನು? ಹೊಸ ಕಾಯಿದೆಗಳನ್ನು ಬೇಷರತ್‌ ವಾಪಾಸ್‌ ಪಡೆಯಬೇಕು, ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತೋತ್ಪನ್ನ ಖರೀದಿಸದಂತೆ ಕಾಯಿದೆ ಜಾರಿ ಮಾಡಬೇಕು. ಇದರಡಿ ಘೋಷಿತ ಬೆಲೆಗಿಂತ ಕಡಿಮೆ ಬೆಲೆಗೆ ಧಾನ್ಯ ಖರೀದಿಸಿದರೆ ಅವರ ಲೈಸೆನ್ಸ್‌ ರದ್ದು ಮಾಡುವುದು ಅಥವಾ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವುದು ಅಥವಾ ಜೈಲು ಶಿಕ್ಷೆಗೆ ಗುರಿಪಡಿಸುವ ಅಂಶಗಳನ್ನು ಕಾಯಿದೆ ಒಳಗೊಂಡಿರಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ದಾವಣಗೆರೆ ಜಿಲ್ಲಾ ಕೇಂದ್ರದಲ್ಲೂ ಗಣರಾಜ್ಯೋತ್ಸವ ಪೆರೇಡ್‌ಗೆ ಬದಲಾಗಿ ಟ್ರಾಕ್ಟರ್‌ ಪೆರೇಡ್‌ ನಡೆಸಲಿದ್ದು, 100ಕ್ಕೂ ಹೆಚ್ಚು ಟ್ರಾಕ್ಟರ್‌ಗಳು ಭಾಗವಹಿಸಲಿವೆ. ಹುಚ್ಚವ್ವನಹಳ್ಳಿ ಮಂಜುನಾಥ್‌, ರೈತ ಮುಖಂಡ


from India & World News in Kannada | VK Polls https://ift.tt/3cb5uER

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...