ಕಾರ್ಮಿಕರ ಕೈಬಿಡದ ಕಾಫಿ ಉದ್ಯಮ: ಲಕ್ಷಾಂತರ ಮಂದಿಯ ಉದ್ಯೋಗ ನಷ್ಟ ಭೀತಿಗೆ ತಿಲಾಂಜಲಿ!

ಕೆ.ಎಚ್‌.ರುದ್ರಯ್ಯ ಚಿಕ್ಕಮಗಳೂರುಕೊರೊನಾ ಮಹಾಮಾರಿಯಿಂದ ಜಗತ್ತಿನೆಲ್ಲೆಡೆ ಉದ್ಯಮ ಕ್ಷೇತ್ರ ನಷ್ಟದ ಸುಳಿಗೆ ಸಿಲುಕಿ ಲಕ್ಷಾಂತರ ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಮತ್ತೆ ಕೆಲ ಕಂಪನಿಗಳು ಅರ್ಧ ವೇತನ ನೀಡಿ, ವರ್ಕ್ ಫ್ರಾಂ ಹೋಂ ಹೆಸರಲ್ಲಿ ದುಡಿಸಿಕೊಳ್ಳುತ್ತಿವೆ. ಆದರೆ, ಲಕ್ಷಾಂತರ ನೌಕರರನ್ನು ಹೊಂದಿರುವ ಕಾಫಿ ಉದ್ಯಮ ಈವರೆಗೆ ಒಬ್ಬ ನೌಕರರನ್ನು ಕೆಲಸದಿಂದ ವಜಾ ಮಾಡಿದ ನಿದರ್ಶನವಿಲ್ಲ. ಬದಲಿಗೆ ಲಾಕ್‌ಡೌನ್‌ನಲ್ಲಿ ಹೊರಹೋಗಬಾರದು ಎಂಬ ನಿಯಮವಿದ್ದರಿಂದ ಕಾರ್ಮಿಕರಿಗೆ ಉಚಿತವಾಗಿ ಅಕ್ಕಿ, ಬೇಳೆ, ಎಣ್ಣೆ , ಕಾಳು ನೀಡಿ ತನ್ನ ಕಾರ್ಮಿಕರ ಹಿತ ಕಾಪಾಡಿದೆ. ಕಾಫಿ ಇಳುವರಿ ಇಲ್ಲ, ಸೂಕ್ತ ಬೆಲೆ ಇಲ್ಲ ಎಂದರೂ ಉದ್ಯೋಗ ನಿರಾಕರಿಸಿಲ್ಲ. ಕೊರೊನಾ ಸಂಕಷ್ಟದಲ್ಲೂ ಮೂಲ ಸೌಕರ್ಯ ಕಲ್ಪಿಸುತ್ತಿರುವುದು ಈ ಉದ್ಯಮದ ಹೆಗ್ಗಳಿಕೆ.

ಕೊರೊನಾ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿದೆ. ಹಲವಾರು ಉದ್ಯಮಗಳು ನಷ್ಟದ ಸುಳಿಯಲ್ಲಿ ಸಿಲುಕಿ ನೌಕರರು ಕೆಲಸ ಕಳೆದುಕೊಂಡಿದ್ದಾರೆ. ವ್ಯಾಪಾರಸ್ಥರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆಯೂ ಕೃಷಿ ಆಧಾರಿತ ಕಾಫಿ ಉದ್ಯಮ ತನ್ನ ಕಾರ್ಮಿಕರನ್ನು ಕೈಬಿಡದೆ ಉದ್ಯೋಗ ನೀಡಿ ಜೀವನ ಭದ್ರತೆ ಒದಗಿಸಿದೆ. ಬೆಲೆ ಇದ್ದರೆ ಬೆಳೆ ಇಲ್ಲ, ಬೆಳೆ ಇದ್ದಾಗ ಬೆಲೆ ಇರುವುದಿಲ್ಲ. ಈ ಅತಂತ್ರ ಸ್ಥಿತಿಯಲ್ಲಿಕಾಫಿ ಬೆಳೆಗಾರರು ಕೊರೊನಾ ಸಮಯದಲ್ಲೂ ಕಾರ್ಮಿಕರಿಗೆ ಉದ್ಯೋಗ ನೀಡಿರುವುದು ಉದ್ಯಮದ ಗಟ್ಟಿತನ ತೋರಿಸುತ್ತದೆ. ಸರಕಾರ ನಿಗದಿ ಪಡಿಸಿದ ಕೂಲಿ, ಆರೋಗ್ಯ ಭದ್ರತೆ, ವಸತಿ ಮತ್ತಿತರೆ ಮೂಲ ಸೌಕರ್ಯ ಕಲ್ಪಿಸುತ್ತಿರುವುದು ಈ ಉದ್ಯಮದ ಹೆಗ್ಗಳಿಕೆಯಾಗಿದೆ.


ಕಾರ್ಮಿಕರ ಕೈಬಿಡದ ಕಾಫಿ ಉದ್ಯಮ: ಲಕ್ಷಾಂತರ ಮಂದಿಯ ಉದ್ಯೋಗ ನಷ್ಟ ಭೀತಿಗೆ ತಿಲಾಂಜಲಿ!

ಕೆ.ಎಚ್‌.ರುದ್ರಯ್ಯ ಚಿಕ್ಕಮಗಳೂರು

ಕೊರೊನಾ ಮಹಾಮಾರಿಯಿಂದ ಜಗತ್ತಿನೆಲ್ಲೆಡೆ ಉದ್ಯಮ ಕ್ಷೇತ್ರ ನಷ್ಟದ ಸುಳಿಗೆ ಸಿಲುಕಿ ಲಕ್ಷಾಂತರ ಮಂದಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಮತ್ತೆ ಕೆಲ ಕಂಪನಿಗಳು ಅರ್ಧ ವೇತನ ನೀಡಿ, ವರ್ಕ್ ಫ್ರಾಂ ಹೋಂ ಹೆಸರಲ್ಲಿ ದುಡಿಸಿಕೊಳ್ಳುತ್ತಿವೆ. ಆದರೆ, ಲಕ್ಷಾಂತರ ನೌಕರರನ್ನು ಹೊಂದಿರುವ ಕಾಫಿ ಉದ್ಯಮ ಈವರೆಗೆ ಒಬ್ಬ ನೌಕರರನ್ನು ಕೆಲಸದಿಂದ ವಜಾ ಮಾಡಿದ ನಿದರ್ಶನವಿಲ್ಲ. ಬದಲಿಗೆ ಲಾಕ್‌ಡೌನ್‌ನಲ್ಲಿ ಹೊರಹೋಗಬಾರದು ಎಂಬ ನಿಯಮವಿದ್ದರಿಂದ ಕಾರ್ಮಿಕರಿಗೆ ಉಚಿತವಾಗಿ ಅಕ್ಕಿ, ಬೇಳೆ, ಎಣ್ಣೆ , ಕಾಳು ನೀಡಿ ತನ್ನ ಕಾರ್ಮಿಕರ ಹಿತ ಕಾಪಾಡಿದೆ. ಕಾಫಿ ಇಳುವರಿ ಇಲ್ಲ, ಸೂಕ್ತ ಬೆಲೆ ಇಲ್ಲ ಎಂದರೂ ಉದ್ಯೋಗ ನಿರಾಕರಿಸಿಲ್ಲ. ಕೊರೊನಾ ಸಂಕಷ್ಟದಲ್ಲೂ ಮೂಲ ಸೌಕರ್ಯ ಕಲ್ಪಿಸುತ್ತಿರುವುದು ಈ ಉದ್ಯಮದ ಹೆಗ್ಗಳಿಕೆ.



ಕಾಫಿಯಿಂದ ಉದ್ಯೋಗದ ಬದುಕು
ಕಾಫಿಯಿಂದ ಉದ್ಯೋಗದ ಬದುಕು

ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಸೇರಿ ರಾಜ್ಯದ ಮೂರು ಜಿಲ್ಲೆಗಳಿಂದ ಒಟ್ಟು 4 ಲಕ್ಷ ಹೆಕ್ಟೇರ್‌ ಕಾಫಿ ಕೃಷಿ ಭೂಮಿಯಿದೆ. 3 ಲಕ್ಷ ಬೆಳೆಗಾರರಿದ್ದಾರೆ. ಇದರಲ್ಲಿ ಶೇ.98.8ರಷ್ಟು ಸಣ್ಣ ಬೆಳೆಗಾರರಿದ್ದಾರೆ. 10 ಹೆಕ್ಟೆರ್‌ಗೂ ಮೇಲ್ಪಟ್ಟ ಬೆಳೆಗಾರರ ಸಂಖ್ಯೆ 2198 ಮಾತ್ರ. ಇವಿಷ್ಟೂ ಕಾಫಿ ತೋಟಗಳಲ್ಲಿ 7 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ದುಡಿಯುತ್ತಿದ್ದಾರೆ. ಅಲ್ಲದೆ, ಕಾಫಿ ಉದ್ಯಮ ಅವಲಂಬಿತವಾಗಿರುವ 3.50 ಲಕ್ಷ ಮಂದಿ ಹೊರಗೆ ಉದ್ಯೋಗ ಕಂಡುಕೊಂಡಿದ್ದಾರೆ.



ಕೊರೊನಾ ಸಂಕಷ್ಟದಲ್ಲೂ ಉದ್ಯೋಗ
ಕೊರೊನಾ ಸಂಕಷ್ಟದಲ್ಲೂ ಉದ್ಯೋಗ

ಕಳೆದ 20 ವರ್ಷದಿಂದ ಕಾಫಿ ಉದ್ಯಮ ನಷ್ಟದಲ್ಲಿರುವುದು ತಿಳಿದ ವಿಚಾರ. ಬೆಲೆ ಇದ್ದರೆ ಬೆಳೆ ಇಲ್ಲ, ಬೆಳೆ ಇದ್ದಾಗ ಬೆಲೆ ಇರುವುದಿಲ್ಲ. ಇಂತಹ ಅತಂತ್ರ ಸ್ಥಿತಿಯಲ್ಲಿಯೂ ಕಾಫಿ ಬೆಳೆಗಾರರು ತಮ್ಮಲ್ಲಿರುವ ಕೂಲಿ ಕಾರ್ಮಿಕರಿಗೆ ಕೊರೊನಾ ಸಮಯದಲ್ಲೂ ಉದ್ಯೋಗ ನೀಡಿರುವುದು ಉದ್ಯಮದ ಗಟ್ಟಿತನ ತೋರಿಸುತ್ತದೆ.



ಕಾಫಿ ಉದ್ಯಮ ಉಳಿಸಲು ಆಗ್ರಹ
ಕಾಫಿ ಉದ್ಯಮ ಉಳಿಸಲು ಆಗ್ರಹ

ಕಾರ್ಮಿಕರಿಗೆ ವರ್ಷ ಪೂರ್ತಿ ಉದ್ಯೋಗ ನೀಡುತ್ತಿರುವ ಕಾಫಿ ಬೆಳೆಗಾರರ ಅವಶ್ಯಕತೆ ಹಾಗೂ ಉದ್ಯಮದ ಗಟ್ಟಿತನ ಏನೆಂಬುದನ್ನು ಕೇಂದ್ರ ಸರಕಾರ ಇನ್ನಾದರೂ ಅರಿಯಬೇಕಿದೆ. ಕಾಫಿ ಉದ್ಯಮ ಪುನಶ್ಚೇತನಗೊಳಿಸಿದರೆ ಸಾಕಷ್ಟು ಉದ್ಯೋಗ ಸೃಜಿಸಲಿದೆ ಎಂಬುದನ್ನು ಸರಕಾರ ಮನಗಂಡು ಅಳಿವಿನಂಚಿನಲ್ಲಿರುವ ಕಾಫಿ ಉದ್ಯಮ ಉಳಿಸಬೇಕು ಎಂಬುದು ಬೆಳೆಗಾರರು ಮತ್ತು ಈ ಉದ್ಯಮ ಅವಲಂಬಿತ ಉದ್ಯೋಗಿಗಳ ಆಗ್ರಹವಾಗಿದೆ.



​ವರ್ಷವಿಡೀ ಉದ್ಯೋಗ
​ವರ್ಷವಿಡೀ ಉದ್ಯೋಗ

ಕಾಫಿ ತೋಟ ವರ್ಷಪೂರ್ತಿ ಕೆಲಸ ಬಯಸುತ್ತದೆ. ಕಳೆ, ಗೊಬ್ಬರ, ಕೀಟನಾಶಕ ಸಿಂಪಡಣೆ, ಕೊಯ್ಲು, ಸಂಸ್ಕರಣೆ ಹೀಗೆ ಹತ್ತಾರು ಕೆಲಸಗಳು ವರ್ಷವಿಡೀ ಇರುತ್ತವೆ. ನಿಗದಿತ ಸಮಸಯಕ್ಕೆ ಯಾವೊಂದು ಕೆಲಸ ತಪ್ಪಿದರೂ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹೀಗಾಗಿ ಮಾಡಿಸಬೇಕಾದ ಎಲ್ಲ ಕೆಲಸವನ್ನೂ ಕೊರೊನಾ ನಿಯಮ ಪಾಲನೆಯಡಿ ಮಾಸ್ಕ್‌, ಸ್ಯಾನಿಟೈಸರ್‌ ಮತ್ತಿತರೆ ಸುರಕ್ಷತಾ ಕ್ರಮದೊಂದಿಗೆ ಮಾಡಿಸಲಾಗುತ್ತಿದೆ.

ಕಾಫಿ, ಮೆಣಸಿಗೆ ಮಳೆ ಕಂಟಕ: ವರುಣನ ಆರ್ಭಟಕ್ಕೆ ನೆಲಕಚ್ಚುತ್ತಿರುವ ಬೆಳೆ, ಇಳುವರಿ ಕುಂಠಿತ!



ಕೇಂದ್ರದ ನೆರವು ಅಗತ್ಯ
ಕೇಂದ್ರದ ನೆರವು ಅಗತ್ಯ

ಕಾರ್ಮಿಕರಿಗೆ ನಾವು ಎಂದೂ ಕೆಲಸ ನಿರಾಕರಿಸಿಲ್ಲ. ಕಾರ್ಮಿಕರ ಕೊರತೆ ಇರುವುದರಿಂದ ಸಾಕಷ್ಟು ಜನ ಬಂದರೂ ಉದ್ಯೋಗ ನೀಡುತ್ತೇವೆ. ಕೋವಿಡ್‌-19 ಲಾಕ್‌ಡೌನ್‌ ವೇಳೆ ಉಚಿತವಾಗಿ ಅಕ್ಕಿ ಬೇಳೆ ನೀಡಿ ಸಹಕರಿಸಿದ್ದೇವೆ. ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ನೀಡಿರುವುದು ಕಾಫಿ ಉದ್ಯಮ. ಉದ್ಯಮ ಇಂದು ಸಂಕಷ್ಟಕ್ಕೆ ಸಿಲುಕಿದೆ. ಪುನಶ್ಚೇತನಕ್ಕೆ ಕೆಂದ್ರ ಸರಕಾರ ಪ್ರೋತ್ಸಾಹ ನೀಡಬೇಕು. ಶೇ.98 ರಷ್ಟು ಸಣ್ಣ ಬೆಳೆಗಾರರನ್ನೇ ಹೊಂದಿರುವ ಈ ಉದ್ಯಮ ಉಳಿಸಲು ಕೇಂದ್ರದ ನೆರವು ಅಗತ್ಯ.

ಮುರುಳಿಧರ ಎಸ್‌.ಬಕ್ಕರವಳ್ಳಿ, ಕರ್ನಾಟಕ ಬೆಳೆಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ





from India & World News in Kannada | VK Polls https://ift.tt/3hVbD7j

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...