ಮಂಗಳೂರು-ಮುಂಬಯಿ ಏರ್‌ ಇಂಡಿಯಾ ನೇರ ವಿಮಾನ ಕೇರಳ ಪಾಲು; ಪ್ರಯಾಣಿಕರಿಗೆ ಅನ್ಯಾಯ!

ಆರ್‌.ಸಿ.ಭಟ್‌ ಮಂಗಳೂರು: ಪ್ರತಿ ಬಾರಿ ರೈಲ್ವೆ ಹಾಗೂ ಸಂಚಾರ ವ್ಯವಸ್ಥೆಯಲ್ಲಿ ಲಾಬಿ ದೊಡ್ಡ ಮಟ್ಟದಲ್ಲೇ ಕೆಲಸ ಮಾಡುತ್ತಿದೆ. ಇಲ್ಲೂ ಕೇರಳ ಲಾಬಿ ಕೆಲಸ ಮಾಡಿದ್ದರಿಂದ ಮಂಗಳೂರು-ಮುಂಬಯಿ ನಡುವೆ ಸಂಚರಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನೇರ ವಿಮಾನ ಇತ್ತೀಚಿನ ದಿನಗಳಲ್ಲಿ ಕೊಚ್ಚಿ ಮೂಲಕ ಸಂಚರಿಸುತ್ತಿದ್ದು, ಮಂಗಳೂರು ಪ್ರಯಾಣಿಕರಿಗೆ ಇದರಿಂದ ದೊಡ್ಡಮಟ್ಟಿನ ಅನ್ಯಾಯವಾಗುತ್ತಿದೆ. ಕೋವಿಡ್‌-19 ಕಾರಣದಿಂದ ಸ್ಥಗಿತಗೊಂಡಿದ್ದ ದೇಶೀ ವಿಮಾನ ಸೇವೆಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಮಂಗಳೂರಿನಿಂದ ಮುಂಬಯಿಗೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಎಐ 681 ಸಂಚಾರ ಆರಂಭಿಸಿತ್ತು. ಈ ಹಿಂದೆ ಮಂಗಳೂರು-ಮುಂಬಯಿ ನಡುವೆ ಈ ವಿಮಾನ ಸಂಚರಿಸುತ್ತಿದ್ದಾಗ ಪ್ರಯಾಣಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಆದರೆ ಈಗ ಕೇರಳದ ಕೊಚ್ಚಿನ್‌ಗೆ ಹೋಗಿ ಅಲ್ಲಿಂದ ಮುಂಬಯಿಗೆ ಹೋಗುವ ಕಾರಣ ಬಹುತೇಕ ಪ್ರಯಾಣಿಕರು ಏರ್‌ ಇಂಡಿಯಾ ಮೂಲಕ ಪ್ರಯಾಣಿಸುವುದನ್ನೇ ನಿಲ್ಲಿಸಿದ್ದಾರೆ. ಕೊಚ್ಚಿನ್‌ನಿಂದ ಮುಂಬಯಿಗೆ ಸಂಚರಿಸುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಕಳೆದ ವರ್ಷಾಂತ್ಯಕ್ಕೆ ಸ್ಥಗಿತಗೊಂಡಿತ್ತು. ಈ ಕಾರಣಕ್ಕೆ ಕೊಚ್ಚಿನ್‌ನಲ್ಲಿ ಭಾರಿ ವಿರೋಧ ವ್ಯಕ್ತವಾಗಿ ಪ್ರತಿಭಟನೆಗಳು ನಡೆದಿತ್ತು. ಈ ಹಂತದಲ್ಲಿ ಕೊಚ್ಚಿನ್‌ ವಿಮಾನ ಪ್ರಯಾಣಿಕರನ್ನು ಸಮಾಧಾನಪಡಿಸುವ ಪ್ರಯತ್ನವಾಗಿ ಮಂಗಳೂರು-ಮುಂಬಯಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವನ್ನು ಕೊಚ್ಚಿನ್‌ಗೆ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಪ್ರಯಾಣಕ್ಕೆ ನಾಲ್ಕು ಗಂಟೆ! ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಕೊಚ್ಚಿನ್‌ ಮೂಲಕ ಮುಂಬಯಿಗೆ ಸಂಚರಿಸುವ ಕಾರಣ ಸಂಚಾರಕ್ಕೆ ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತಿದೆ. ಮಂಗಳೂರಿನಿಂದ ಮುಂಬಯಿ ಸಂಚಾರಕ್ಕೆ ಕೇವಲ ಒಂದೂವರೆ ಗಂಟೆ ಸಾಕಾಗುತ್ತದೆ. ಆದರೆ ಈಗ ಕೊಚ್ಚಿನ್‌ ಮೂಲಕ ಸಂಚರಿಸುವ ಕಾರಣ ಮಂಗಳೂರಿನಿಂದ ಕೊಚ್ಚಿನ್‌ಗೆ 45 ನಿಮಿಷ, ಕೊಚ್ಚಿನ್‌ನಲ್ಲಿ 45 ನಿಮಿಷ ಬ್ರೇಕ್‌ ಹಾಗೂ ಕೊಚ್ಚಿನ್‌ನಿಂದ ಮುಂಬಯಿ ಸಂಚಾರಕ್ಕೆ ಎರಡೂವರೆ ಗಂಟೆ ಸೇರಿ ಒಟ್ಟು ನಾಲ್ಕು ಗಂಟೆ ತಗುಲುತ್ತಿದೆ. ಏರ್‌ ಇಂಡಿಯಾ ವಿಮಾನದ ಈ ನಿರ್ಧಾರದಿಂದ ಬಹುತೇಕ ಪ್ರಯಾಣಿಕರು ಏರ್‌ ಇಂಡಿಯಾ ಬದಲು ಇತರ ಖಾಸಗಿ ವಿಮಾನದ ಮೊರೆ ಹೋಗುತ್ತಿದ್ದಾರೆ. ಮಂಗಳೂರಿನಿಂದ ಕೊಚ್ಚಿನ್‌ಗೆ ಬೆರಳೆಣಿಗೆಯ ಪ್ರಯಾಣಿಕರು ಮಾತ್ರ ಸಂಚರಿಸುತ್ತಿರುವುದರಿಂದ ಇಲ್ಲೂ ದೊಡ್ಡಮಟ್ಟಿನ ಪ್ರಯೋಜನವಾಗುತ್ತಿಲ್ಲ. ಮಂಗಳೂರು- ಮುಂಬಯಿ ನಡುವೆ ಸಂಚರಿಸುತ್ತಿದ್ದ ಸರಕಾರಿ ಸ್ವಾಮ್ಯದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನೇರ ವಿಮಾನ ಕೇರಳದ ಲಾಬಿಯಿಂದ ಕೊಚ್ಚಿನ್‌ಗೆ ಹೋಗಿ ಅಲ್ಲಿಂದ ಮುಂಬಯಿಗೆ ಹೋಗುತ್ತಿದೆ. ಇದರಿಂದ ಕೊಚ್ಚಿ ಪ್ರಯಾಣಿಕರಿಗೆ ಮಾತ್ರ ಲಾಭವಾಗಿದೆ. ಆದರೆ ಮಂಗಳೂರಿನಿಂದ ಮುಂಬಯಿಗೆ ಸುದೀರ್ಘ ಅವಧಿಯನ್ನು ತೆಗೆದುಕೊಳ್ಳುವುದರಿಂದ ಈ ವಿಮಾನ ಸೇವೆ ಮಂಗಳೂರಿಗೆ ಇದ್ದೂ ಇಲ್ಲದಂತಾಗಿದೆ. ಸತೀಶ್ಚಂದ್ರ, ಮುಂಬಯಿ ಉದ್ಯಮಿ


from India & World News in Kannada | VK Polls https://ift.tt/3j3Ht31

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...