ಹೊಸದಿಲ್ಲಿ: ಕೊರೊನಾ ಮಾರ್ಗಸೂಚಿಯಂತೆ ದೆಹಲಿಯಲ್ಲಿ ಸಂಜೆ ಸಚಿವ ಸುರೇಶ ಅಂಗಡಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಸಂಬಂಧಿ ಹಾಗೂ ಸಚಿವ ತಿಳಿಸಿದ್ದಾರೆ. ಸದ್ಯ ದೆಹಲಿಯಲ್ಲಿರುವ ಶೆಟ್ಟರ್, ಬುಧವಾರ ರಾತ್ತಿಯೇ ಸಚಿವ ಸುರೇಶ ಅಂಗಡಿ ನಿವಾಸಕ್ಕೆ ತೆರಳಿದ್ದರು. ಸುರೇಶ್ ಅಂಗಡಿ ಅವರ ಒಬ್ಬರು ಪುತ್ರಿ ಡಾ.ಸ್ಫೂರ್ತಿ ಬೆಳಗಾವಿಯಿಂದ ನವದೆಹಲಿಗೆ ಬರಲಿದ್ದು, ಅವರು ಬಂದ ನಂತರ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು. ಇನ್ನು ಹೊಸದಿಲ್ಲಿಯಲ್ಲಿಯ ದ್ವಾರಕಾದಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ತಿಳಿಸಿರುವ ಸಚಿವರು, ಕೊರೊನಾದ ಎಲ್ಲಾ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುವುದು ಎಂದಿದ್ದಾರೆ. ಇನ್ನು ಕುಟುಂಬದ ಮೂಲಗಳ ಪ್ರಕಾರ ದೆಹಲಿಯಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿದುಬಂದಿದೆ. ಇನ್ನು ಬೆಳಗಾವಿಲ್ಲಿಯೇ ಅಂಗಡಿ ಅವರ ಅಂತ್ಯಸಂಸ್ಕಾರ ನಡೆಸಲು ರಾಜ್ಯ ಸರಕಾರ ನಿರ್ಧರಿಸಿತ್ತು. ಆದರೆ ಕೊರೊನಾ ಪಾಸಿಟಿವ್ ಇದ್ದಿದ್ದರಿಂದ ಕೇಂದ್ರ ಸರಕಾರ ಇದಕ್ಕೆ ಅವಕಾಶ ನೀಡಿಲ್ಲ.
from India & World News in Kannada | VK Polls https://ift.tt/2RR2C4L