ಕೊಂಕಣ್‌ ರೈಲ್ವೆ ಮೂಲಕ ಗುಜರಾತ್‌ಗೆ ಅಡಿಕೆ ಸಾಗಾಟ: ಇಂದು ಸಾಂಕೇತಿಕ ಚಾಲನೆ

ಪುತ್ತೂರು: ರೈಲ್ವೆ, ಕೃಷಿಕರು, ವ್ಯಾಪಾರಿಗಳಿಗೆ ಲಾಭ ತರುವ ನಿಟ್ಟಿನಲ್ಲಿ ಮೂಲಕ ಗುಜರಾತ್‌ಗೆ ಸಾಗಾಟಕ್ಕೆ ಸಾಂಕೇತಿಕವಾಗಿ ಸೆ.23ರಂದು ಬೆಳಗ್ಗೆ 9.30 ಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ಚಾಲನೆ ನೀಡಲಾಗುವುದು. ಈ ನಿಟ್ಟಿನಲ್ಲಿ ಎಲ್ಲ ಮಾತುಕತೆಗಳನ್ನು ಮಾಡಲಾಗಿದ್ದು, ಅ.3ರಂದು ಎಪಿಎಂಸಿಯಲ್ಲಿ ನಡೆಯುವ ವಿವಿಧ ಕಾಮಗಾರಿಗಳ ಉದ್ಘಾಟನಾ ಸಂದರ್ಭದಲ್ಲಿ ಅಧಿಕೃತ ಚಾಲನೆಯನ್ನು ಸಚಿವರ ಸಮ್ಮುಖದಲ್ಲಿ ಮಾಡಲಾಗುವುದು ಎಂದು ಕೊಂಕಣ್‌ ರೈಲ್ವೆ ಎಂಜಿನಿಯರ್‌ ಸುರೇಶ್‌ ಗೌಡ ತಿಳಿಸಿದ್ದಾರೆ. ಅವರು ಮಂಗಳವಾರ ಎಪಿಎಂಸಿ ಸಭಾಂಗಣದಲ್ಲಿ ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಈ ವಿಷಯ ತಿಳಿಸಿದರು. ಪುತ್ತೂರು, ಸುಳ್ಯ, ಬೆಳ್ತಂಗಡಿ ಮುಂತಾದ ಕರಾವಳಿ ಜಿಲ್ಲೆಗಳಿಂದ ರೈತರು ಬೆಳೆಯುವ ಕೃಷಿ ಉತ್ಪನ್ನ ಆಧಾರಿತ ವಸ್ತುಗಳನ್ನು ಡೋರ್‌ ಟು ಡೋರ್‌ ಡೆಲಿವರಿ ಮಾಡುವ ನಿಟ್ಟಿನಲ್ಲಿ ಎಲ್ಲ ಸಿದ್ಧತೆ ಮಾಡಲಾಗಿದೆ. ಸಂಬಂಧಪಟ್ಟ ಟ್ರಾನ್ಸ್‌ಪೋರ್ಟರ್‌ಗಳಿಂದ, ಎಪಿಎಂಸಿ, ಕ್ಯಾಂಪ್ಕೋದಿಂದ ಹಸಿರು ನಿಶಾನೆ ಸಿಕ್ಕಿದೆ ಎಂದು ಅವರು ತಿಳಿಸಿದರು. ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ಮಾತನಾಡಿ, ಮೊದಲಿಗೆ ಬುಧವಾರ ಕ್ಯಾಂಪ್ಕೋ ವತಿಯಿಂದ ಅಡಿಕೆ ರೈಲಿನ ಮೂಲಕ ಸಾಗಾಟ ಮಾಡಲಾಗುವುದು. ಹೀಗೆ ಸೆ.26ರ ತನಕ ಪ್ರಾಯೋಗಿಕವಾಗಿ ರೈಲಿನಲ್ಲಿ ಅಡಿಕೆ ಸಾಗಾಟ ಮಾಡಲಾಗುವುದು. ಈ ಮಧ್ಯೆ ಉಂಟಾಗುವ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಲಾಗುವುದು ಎಂದರು. ರೈಲ್ವೇ ಅಂಡರ್‌ ಪಾಸ್‌ ಕುರಿತು ಕಳೆದ 2014ರಂತೆ ಮೂಲಸೌಕರ್ಯ ಇಲಾಖೆ ಹಾಗೂ ಎಪಿಎಂಸಿ ಚರ್ಚಿಸಿದಂತೆ 50-50 ಖರ್ಚು ಭರಿಸುವುದೆಂದು ಚರ್ಚೆಯಾಗಿದೆ. ಈ ಕುರಿತು ಮತ್ತೊಮ್ಮೆ ಹುಬ್ಬಳ್ಳಿ ವಲಯಕ್ಕೆ ಹೊಸ ಲೆಟರ್‌ ನೀಡಬೇಕಾಗಿದೆ. ಅದಕ್ಕಾಗಿ ಗುರುವಾರ ರಾಜ್ಯ ಸರಕಾರದ ಲೆಟರ್‌ನೊಂದಿಗೆ ತೆರಳಲಾಗುವುದು ಎಂದು ದಿನೇಶ್‌ ಮೆದು ತಿಳಿಸಿದರು. ಸೆ.26ರಂದು ಎಪಿಎಂಸಿ ಪ್ರಾಂಗಣದಲ್ಲಿ ನಿಗರಿಯಾಗಿದ್ದ ವಿವಿಧ ಕಾಮಗಾರಿಗಳ ಉದ್ಘಾಟನಾ ಕಾರ್ಯಕ್ರಮವನ್ನು ವಿಧಾನಸಭಾ ಅಧಿವೇಶನದ ಹಿನ್ನಲೆಯಲ್ಲಿ ಮುಂದೂಡಲಾಗಿದ್ದು, ಅ.3 ರಂದು ನಡೆಯಲಿದೆ. ಈ ಕುರಿತ ಕಾರ್ಯಕ್ರಮಗಳ ವಿವರಗಳನ್ನು ಅಧ್ಯಕ್ಷ ದಿನೇಶ್‌ ಮೆದು ಸಭೆಯ ಮುಂದಿಟ್ಟರು. ಉಳಿದಂತೆ ಎಪಿಎಂಸಿಯಲ್ಲಿ ಆಗಸ್ಟ್‌ ತಿಂಗಳ ಬಂದಿರುವ ಆದಾಯ, ಖರ್ಚುಗಳ ಲೆಕ್ಕಪತ್ರವನ್ನು, ಹಿಂದಿನ ಸಭೆಯ ನಡಾವಳಿಯನ್ನು ಕಾರ್ಯದರ್ಶಿ ರಾಮಚಂದ್ರ ಸಭೆಯ ಮುಂದಿಟ್ಟರು. ಉಪಾಧ್ಯಕ್ಷ ಮಂಜುನಾಥ್‌ ಎನ್‌.ಎಸ್‌., ಸದಸ್ಯರಾದ ಬೂಡಿಯಾರ್‌ ರಾಧಾಕೃಷ್ಣ ರೈ, ಬಾಲಕೃಷ್ಣ ಸುವರ್ಣ, ಮೇದಪ್ಪ ಗೌಡ, ಕುಶಾಲಪ್ಪ ಗೌಡ, ಕಾರ್ತಿಕ್‌ ಬೆಳ್ಳಿಪ್ಪಾಡಿ, ಎಚ್‌.ಅಬ್ದುಲ್‌ ಶುಕೂರ್‌, ತ್ರಿವೇಣಿ ಪೆರ್ವೋಡಿ, ತೀರ್ಥಾನಂದ ದುಗ್ಗಳ, ಪುಲಸ್ತತ್ರ್ಯ ರೈ, ಕೃಷ್ಣ ಕುಮಾರ್‌, ಬಾಬು ಟಿ., ರೈಲ್ವೇ ಎಂಜಿನಿಯರ್‌ಗಳು, ಅಧಿಕಾರಿಗಳು ಉಪಸ್ಥಿತರಿದ್ದರು.


from India & World News in Kannada | VK Polls https://ift.tt/3iVGySp

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...