ಹೊಸದಿಲ್ಲಿ: ಮಂಗಳವಾರ ರಾತ್ರಿ ನೀಡಿದ್ದ 217 ರನ್ಗಳ ಬೃಹತ್ ಗುರಿ ಬೆನ್ನತ್ತಿದ್ದ ಚೆನ್ನೈ ಸೂಪರ್ ಕಿಂಗ್ಸ್ ಪರ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲನೇ ಹಣಾಹಣಿಯಂತೆ ಈ ಪಂದ್ಯದಲ್ಲಿಯೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಅಚ್ಚರಿ ಮೂಡಿಸಿದರು. ಅಂತಿಮವಾಗಿ ಪಂದ್ಯದಲ್ಲಿ 16 ರನ್ ಗಳಿಂದ ಸೋಲು ಅನುಭವಿಸಿತ್ತು. ಚೆನ್ನೈ ಫ್ರಾಂಚೈಸಿ ಒಂದು ಹಂತದಲ್ಲಿ 9 ಓವರ್ಗಳಿಗೆ 77 ರನ್ ಗಳಿಸಿ 3 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆ ಮೂಲಕ ಪ ಮ್ಯಾಚ್ ಫಿನಿಷ್ ಮಾಡಲು ಎಂಎಸ್ ಧೋನಿಗೆ ವೇದಿಕೆ ಸಿದ್ದವಾಗಿದೆ ಎಂದೇ ಭಾವಿಸಲಾಗಿತ್ತು. ಆದರೆ, ಧೋನಿ, ಋತುರಾಜ್ ಗಾಯಕ್ವಾಡ್ ಹಾಗೂ ಕೇದಾರ್ ಜಾಧವ್ ಅವರನ್ನು ತಮಗಿಂತ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಕಳುಹಿಸಿದರು. ಪಂದ್ಯದ ಬಳಿಕ ತಾವು ಏಳನೇ ಕ್ರಮಾಂಕಕ್ಕೆ ಮೀಸಲಾಗಿದ್ದ ಬಗ್ಗೆ ವಿವರಿಸಿದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ, ನಾನು ದೀರ್ಘಕಾಲ ಕ್ರಿಕೆಟ್ನಿಂದ ದೂರ ಉಳಿದಿದ್ದೆ. ಹಾಗಾಗಿ, ಇತರರಿಗೆ ಹೆಚ್ಚು ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಈ ತೀರ್ಮಾನ ತೆಗೆದುಕೊಂಡೆ ಎಂದು ಹೇಳಿದರು. ಸ್ಯಾಮ್ ಕರನ್ ನಾಲ್ಕನೇ ಕ್ರಮಾಂಕದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಿರ್ಣಾಯಕ ಪ್ರದರ್ಶನ ತೋರಿದ್ದರು. ಅಂತಿಮವಾಗಿ ಫಾಫ್ ಡು ಪ್ಲೆಸಿಸ್ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಅವರು ಕೇವಲ 37 ಎಸೆತಗಳಲ್ಲಿ 72 ರನ್ಗಳನ್ನು ಗಳಿಸುವ ಮೂಲಕ ತಂಡದ ಗೆಲುವಿಗೆ ಹೋರಾಟ ನಡೆಸಿದ್ದರು. ಆದರೆ, ಇವರ ಪ್ರದರ್ಶನ ಚೆನ್ನೈ ಫ್ರಾಂಚೈಸಿಯ ಎರಡನೇ ಗೆಲುವಿಗೆ ಸಾಕಾಗಲಿಲ್ಲ. "ನಾನು ದೀರ್ಘ ಕಾಲ ಬ್ಯಾಟಿಂಗ್ನಿಂದ ದೂರ ಉಳಿದಿದ್ದೇನೆ. 14 ದಿನಗಳ ಕ್ವಾರಂಟೈನ್ ಅವಧಿ ನೆರವಾಗಲಿಲ್ಲ. ಹಾಗಾಗಿ, ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ವಿಭಿನ್ನ ಪ್ರಯತ್ನಗಳೊಂದಿಗೆ ಸ್ಯಾಮ್ ಕರನ್ಗೆ ಅವಕಾಶ ನೀಡಲಾಯಿತು. ಆ ಮೂಲಕ ವಿಭಿನ್ನ ಸಂಗತಿಗಳಿಗೆ ಅವಕಾಶಕ್ಕೆ ಎಡೆ ಮಾಡಿಕೊಡಲಾಗಿತ್ತು. ಇದು ಕೆಲಸ ಮಾಡಿಲ್ಲವೆಂದರೆ, ಹಿಂದಿಯಿಂದ ನೀವು ತಂಡಕ್ಕೆ ಶಕ್ತಿ ತುಂಬಬಹುದು. ಫಾಫ್ ಪಂದ್ಯದವನ್ನು ಚೆನ್ನಾಗಿ ಅಳವಡಿಸಿಕೊಂಡರು. ಸ್ಕ್ವೇರ್ ಲೆಗ್ ಅನ್ನು ನಿರ್ಲಕ್ಷಿಸಿ ಮತ್ತು ಲಾಂಗ್-ಆನ್ ಮತ್ತು ಲಾಂಗ್-ಆಫ್ ಕಡೆಗೆ ಬ್ಯಾಟ್ಸ್ಮನ್ಗಳು ಹೆಚ್ಚು ಗಮನ ಹರಿಸಿದರು." ಎಂದು ಪಂದ್ಯದ ನಂತರ ಧೋನಿ ಹೇಳಿದರು. 17 ಎಸೆತಗಳಲ್ಲಿ 29 ರನ್ಗಳನ್ನು ಗಳಿಸಿದರು. ಪಂದ್ಯದ ಕೊನೆಯ ಓವರ್ನಲ್ಲಿ ಟಾಮ್ ಕರನ್ಗೆ ಧೋನಿ ಹ್ಯಾಟ್ರಿಕ್ ಸಿಕ್ಸರ್ಗಳನ್ನು ಸಿಡಿಸಿದರು. ಸಿಎಸ್ಕೆ ಆರಂಭಿಕರಾದ ಮುರಳಿ ವಿಜಯ್ ಹಾಗೂ ಶೇನ್ ವಾಟ್ಸನ್ 6.3 ಓವರ್ಗಳಿಗೆ 56 ರನ್ ಆರಂಭಿಕ ಜತೆಯಾಟವಾಡಿದ್ದರು. ಇದರ ಹೊರತಾಗಿಯೂ ಧೋನಿ , ತಂಡಕ್ಕೆ ಇನ್ನು ಉತ್ತಮ ಆರಂಭ ಅಗತ್ಯವಿತ್ತು ಎಂದು ಹೇಳಿದರು. "217 ರನ್ಗಳ ಬೃಹತ್ ಮೊತ್ತದ ಗುರಿ ಮುಟ್ಟಬೇಕಾದರೆ ಅತ್ಯಂತ ಒಳ್ಳೆಯ ಆರಂಭ ಅವಶ್ಯಕತೆ ಇದೆ. ಸ್ಟೀವನ್ ಸ್ಮಿತ್ ಹಾಗೂ ಸಂಜು ಸ್ಯಾಮ್ಸನ್ ಅವರು ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಖಂಡಿತಾ ಅವರ ಬೌಲರ್ಗಳಿಗೆ ಪಂದ್ಯದ ಗೆಲುವಿನ ಶ್ರೇಯ ಸಲ್ಲಬೇಕು," ಎಂದು ಧೋನಿ ಹೇಳಿದರು. "ಪ್ರಥಮ ಇನಿಂಗ್ಸ್ನಲ್ಲಿ ನೀವು ನೋಡಿದ ಬಳಿಕ, ಯಾವ ಲೆನ್ತ್ ಬೌಲಿಂಗ್ ಮಾಡಬೇಕೆಂಬ ಬಗ್ಗೆ ನಿಮಗೆ ತಿಳಿದಿರುತ್ತದೆ. ರಾಜಸ್ಥಾನ್ ಸ್ಪಿನ್ನರ್ಗಳನ್ನು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದರು. ಆದರೆ, ನಮ್ಮ ಸ್ಪಿನ್ನರ್ಗಳು ಫುಲ್ ಎಸೆತಗಳನ್ನು ಹಾಕುವ ಮೂಲಕ ತಪ್ಪು ಮಾಡಿದರು. ಒಂದು ವೇಳೆ ನಾವು 200 ರನ್ಗಳಿಗೆ ನಿಯಂತ್ರಿಸಿದ್ದರೆ, ಇದು ನಮ್ಮ ಪಾಲಿಗೆ ಅತ್ಯುತ್ತಮ ಪಂದ್ಯವಾಗುತ್ತಿತ್ತು," ಎಂದು ಎಂಎಸ್ ಧೋನಿ ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3cplLnW