Mukesh Ambani Residence ಸ್ಫೋಟಕ ಪತ್ತೆ ಪ್ರಕರಣ: ಸಚಿನ್ ವಾಜೆ ಮಾಸ್ಟರ್‌ಮೈಂಡ್ ಎಂದ ಎನ್‌ಐಎ

ಮುಂಬಯಿ: ಉದ್ಯಮಿ ಅವರ ಆಂಟಿಲಿಯಾ ನಿವಾಸದ ಮುಂದೆ ಸ್ಕಾರ್ಪಿಯೋ ವಾಹನದಲ್ಲಿ ಸ್ಫೋಟಕಗಳನ್ನು ಇರಿಸಿದ ಪ್ರಕರಣದಲ್ಲಿ, ವಜಾಗೊಂಡಿರುವ ಪೊಲೀಸ್ ಅಧಿಕಾರಿ ಅವರೇ ಮುಖ್ಯ ಸಂಚುಕೋರ ಎಂದು ಹೇಳಿದೆ. ಫೆಬ್ರವರಿ 25ರಂದು ಕಾರ್ಮಿಖಲ್ ರಸ್ತೆಯಲ್ಲಿರುವ ಮುಕೇಶ್ ಅಂಬಾನಿ ನಿವಾಸದ ಹೊರಭಾಗದಲ್ಲಿ ಪತ್ತೆಯಾದ ಕಾರಿನಲ್ಲಿ ಸ್ಫೋಟಕ ಇರಿಸಿದ್ದಲ್ಲದೆ, ಕಾರಿನ ಮಾಲೀಕ ಹತ್ಯೆಯಲ್ಲಿಯೂ ವಾಜೆ ಪ್ರಮುಖ ಪಾತ್ರ ವಹಿಸಿದ್ದಾಗಿ ಎನ್‌ಐಎ ಸಲ್ಲಿಸಿರುವ ಹೇಳಿದೆ. 2002ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಆರೋಪಿಯ ಲಾಕಪ್‌ ಡೆತ್ ವಿವಾದದ ಬಳಿಕ 16 ವರ್ಷಗಳ ದೀರ್ಘಕಾಲದ ಅಮಾನತಿನ ಬಳಿಕ ಸಚಿನ್ ವಾಜೆ ಅವರನ್ನು 2020ರ ಜೂನ್‌ನಲ್ಲಿ ಸೇವೆಗೆ ಮರಳಿ ಸೇರಿಸಿಕೊಳ್ಳಲಾಗಿತ್ತು. ಅವರು ತಮ್ಮ ಹಿಂದಿನ ಖ್ಯಾತ ಪತ್ತೇದಾರ/ಎನ್‌ಕೌಂಟರ್ ಪರಿಣತ ಎಂಬ ಬಿರುದನ್ನು ಮರಳಿ ಸಂಪಾದಿಸುವ ಬಯಕೆ ಹೊಂದಿದ್ದರು. ಹೀಗಾಗಿ ಜಿಲೆಟಿನ್ ಕಡ್ಡಿಗಳನ್ನು ವಾಹನದಲ್ಲಿ ಇರಿಸಿ ಮುಕೇಶ್ ಅಂಬಾನಿಗೆ ಬೆದರಿಕೆ ಪತ್ರವನ್ನು ಇಟ್ಟಿದ್ದರು. ಈ ಘಟನೆಯು ಭಯೋತ್ಪಾದನಾ ಸಂಚು ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಸಚಿನ್ ವಾಜೆ, ನಿವೃತ್ತ ಎನ್‌ಕೌಂಟರ್ ಪರಿಣತ ಪ್ರದೀಪ್ ಶರ್ಮಾ ಮತ್ತು ಇನ್‌ಸ್ಪೆಕ್ಟರ್ ಸುನಿಲ್ ಮಾನೆ ಸೇರಿದಂತೆ 10 ಮಂದಿ ಆರೋಪಿಗಳ ವಿರುದ್ಧ ಎನ್‌ಐಎ, ವಿಶೇಷ ನ್ಯಾಯಾಧೀಶ ಪ್ರಶಾಂತ್ ಆರ್ ಸಿಟ್ರೆ ಅವರಿಗೆ ಶುಕ್ರವಾರ ಆರೋಪಪಟ್ಟಿ ಸಲ್ಲಿಸಿದೆ. ಮನ್ಸುಖ್ ಹಿರೇನ್ ಬಲಿಪಶುಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಬಳಿಕ, ಮುಂದಾಗುವ ತೊಂದರೆಗಳನ್ನು ಅರಿತಿದ್ದ ವಾಜೆ, ವಾಹನವನ್ನು ಇರಿಸಿದ್ದು ತಾನೇ ಎಂದು ಒಪ್ಪಿಕೊಳ್ಳುವಂತೆ ಮನ್ಸುಖ್ ಹಿರೇನ್ ಮೇಲೆ ಒತ್ತಡ ಹೇರಿದ್ದರು. ವಿಷಯ ತಣ್ಣಗಾಗುವವರೆಗೂ ಅಡಗಿಕೊಂಡಿರುವಂತೆ ಮತ್ತು ಅದಕ್ಕೆ ಬೇಕಾದ ಎಲ್ಲ ಅನುಕೂಲಗಳನ್ನೂ ಒದಗಿಸುವುದಾಗಿ ಹೇಳಿದ್ದರು. ಆದರೆ ಇದನ್ನು ಹಿರೇನ್ ನಿರಾಕರಿಸಿದ್ದರು. ತಮ್ಮ ಗುಟ್ಟು ರಟ್ಟಾಗುವ ಸಾಧ್ಯತೆ ಅರಿತ ವಾಜೆ, ಸಹ ಆರೋಪಿಗಳಾದ ಸುನಿಲ್ ಮಾನೆ ಹಾಗೂ ಪ್ರದೀಪ್ ಶರ್ಮಾ ಜತೆಗೂಡಿ ಮನ್ಸುಖ್ ಹಿರೇನ್‌ನನ್ನು ಹತ್ಯೆ ಮಾಡಿ ಅದು ಆತ್ಮಹತ್ಯೆಯಂತೆ ಬಿಂಬಿಸಲು ಪ್ರಯತ್ನಿಸಿದ್ದರು. ತಿಹಾರ್ ಜೈಲಿನಿಂದ ಸಂದೇಶನಿವೃತ್ತ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಹಿನ್ನೆಲೆ ಕೂಡ ಸಾಕಷ್ಟು ಅನುಮಾನಾಸ್ಪದವಾಗಿದೆ. ವ್ಯವಸ್ಥಿತವಾಗಿ ಸಂಚು ರೂಪಿಸಿದ್ದ ವಾಜೆ, ತನ್ನ ಸ್ಕಾರ್ಪಿಯೋ ಕಳುವಾಗಿದೆ ಎಂದು ಸುಳ್ಳು ದೂರು ನೀಡುವಂತೆ ಹಿರೇನ್‌ಗೆ ಸೂಚಿಸಿದ್ದರು. ಆ ಕಾರನ್ನು ಸ್ವತಃ ವಾಜೆ ಕೊಂಡೊಯ್ದಿದ್ದರು. ಇದು ಜೈಶ್ ಉಲ್ ಹಿಂದ್ ಎಂಬ ಉಗ್ರ ಸಂಘಟನೆಯ ಕೃತ್ಯ ಎಂದು ಬಿಂಬಿಸಲು ಪ್ರಯತ್ನಿಸಿದ್ದರು. ಪ್ರಕರಣವು ಗಮ್ದೇವಿ ಪೊಲೀಸ್ ಠಾಣೆಯಿಂದ ಸಿಐಯು ಮುಂಬಯಿಗೆ ವರ್ಗಾವಣೆಯಾದ ಬಳಿಕ ವಾಜೆ ತನಿಖಾಧಿಕಾರಿಯಾಗಿದ್ದರು. ಪೊಲೀಸ್ ಅಧಿಕಾರಿ ಪಾತ್ರದಿಲ್ಲಿ ವಿಶೇಷ ಘಟಕವು ತಿಹಾರ್ ಜೈಲಿನಿಂದ ಮೊಬೈಲ್ ಹ್ಯಾಂಡ್‌ಸೆಟ್ ಒಂದನ್ನು ವಶಪಡಿಸಿಕೊಂಡಿತ್ತು. ಅಲ್ಲಿಂದಲೇ ಜೈಶ್ ಉಲ್ ಹಿಂದ್ ಸಂಘಟನೆ ಹೆಸರಿನಲ್ಲಿ ಟೆಲಿಗ್ರಾಂ ಖಾತೆ ಸೃಷ್ಟಿಯಾಗಿತ್ತು. ಜೈಶ್ ಉಲ್ ಹಿಂದ್ ಸಂಘಟನೆಯು ಈ ಕೃತ್ಯ ಹಾಗೂ ಸಂದೇಶ ತನಗೆ ಸಂಬಂಧಿಸಿದ್ದಲ್ಲ ಎಂದು ಹೇಳಿತ್ತು. ವಾಜೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಯ ಪರವಾಗಿ ಈ ರೀತಿ ಸೃಷ್ಟಿ ಮಾಡಲಾಗಿತ್ತು. ಇದರಲ್ಲಿ ಮತ್ತೊಬ್ಬ ಹಿರಿಯ ಪೊಲೀಸ್ ಅಧಿಕಾರಿಯ ಪಾತ್ರ ಇದೆ ಎಂಬ ಅನುಮಾನದಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎನ್‌ಐಎ ಹೇಳಿದೆ. ಹಿರೇನ್ ಹತ್ಯೆಗೆ 45 ಲಕ್ಷ ರೂ ಪಾವತಿಪೊಲೀಸ್ ಅಧಿಕಾರಿ ಸುನಿಲ್ ಮಾನೆ, ಮನ್ಸುಖ್ ಹಿರೇನ್‌ನನ್ನು ಇತರೆ ಆರೋಪಿಗಳಾದ ಸಂತೋಷ್ ಶೆಲಾರ್, ಆನಂದ್ ಜಾಧವ್, ಸತೀಶ್ ಮೋತ್ಕುರಿ ಮತ್ತು ಮನೀಶ್ ಸೋನಿ ಕೈಗೆ ಒಪ್ಪಿಸಿದ್ದರು. ಅವರು ಹಿರೇನ್ ಕೊಲೆ ಮಾಡಿ, ಕೊಳ್ಳವೊಂದರಲ್ಲಿ ದೇಹವನ್ನು ಎಸೆದಿದ್ದರು. ಮಾರ್ಚ್ 4ರಂದು ಕಲ್ವಾದಲ್ಲಿ ಹಿರೇನ್ ದೇಹ ಪತ್ತೆಯಾಗಿತ್ತು. ಹಿರೇನ್ ಹತ್ಯೆಗಾಗಿಯೇ ಒಬ್ಬ ಆರೋಪಿಗೆ 45 ಲಕ್ಷ ರೂ ಪಾವತಿಸಲಾಗಿತ್ತು. ಈ ಹತ್ಯೆ ಸಂಚು ರೂಪಿಸಲು ಆರೋಪಿಗಳು ಪ್ರತ್ಯೇಕ ಹ್ಯಾಂಡ್‌ಸೆಟ್‌ಗಳು, ಹಾಗೂ ಬೇನಾಮಿ ಸಿಮ್‌ ಕಾರ್ಡ್‌ಗಳನ್ನು ಬಳಸಿದ್ದರು. ಇವುಗಳನ್ನು ವಿನಾಯಕ ಶಿಂದೆ ಹಾಗೂ ನರೇಶ್ ಗೋರ್ ಪೂರೈಸಿದ್ದರು. ಸಿಐಯು ಮುಂಬಯಿ ತನಿಖೆ ವೇಳೆ ಸಂಗ್ರಹಿಸಿದ್ದ ಎಲ್ಲ ಪುರಾವೆಗಳನ್ನೂ ನಾಶಪಡಿಸಲು ವಾಜೆ, ಎಪಿಐ ರಿಯಾಜುದ್ದೀನ್ ಕಾಜಿ ಜತೆ ಸಂಚು ನಡೆಸಿದ್ದರು. ಸುಮಾರು 10,000 ಪುಟಗಳ ಆರೋಪಪಟ್ಟಿಯನ್ನು ಎನ್‌ಐಎ ಸಲ್ಲಿಸಿದ್ದು, ತನಿಖೆ ಮುಂದುವರಿಸುವುದಾಗಿ ತಿಳಿಸಿದೆ. ಯುಎಪಿಎ ಕಾಯ್ದೆಯಡಿಯಲ್ಲಿನ 180 ದಿನಗಳ ನಿಗದಿತ ಸಮಯಕ್ಕೂ ಎರಡು ದಿನಗಳ ಮುನ್ನವಷ್ಟೇ ಎನ್‌ಐಎ ಆರೋಪಪಟ್ಟಿ ಸಲ್ಲಿಸಿದೆ.


from India & World News in Kannada | VK Polls https://ift.tt/3n2XBqA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...