ಪ್ರಥಮ ಟೆಸ್ಟ್‌: ಟೀಮ್ ಇಂಡಿಯಾದ ಬಲಿಷ್ಠ ಪ್ಲೇಯಿಂಗ್ XI ಕಟ್ಟಿದ ಜಾಫರ್‌!

ಬೆಂಗಳೂರು: ಆತಿಥೇಯ ಇಂಗ್ಲೆಂಡ್‌ ಎದುರು ನಾಟಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ, ಮಾಜಿ ಕ್ರಿಕೆಟಿಗ ಬಲಿಷ್ಠ ಪ್ಲೇಯಿಂಗ್ ಇಲೆವೆನ್‌ ಪ್ರಕಟ ಮಾಡಿದ್ದಾರೆ. ಕಳೆದ ಒಂದು ವರ್ಷದಲ್ಲಿ ಟ್ವಿಟರ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ಜಾಫರ್‌, ತಮ್ಮ ಹಾಸ್ಯ ಭರಿತ ಟ್ವೀಟ್‌ಗಳ ಮೂಲಕ ಹಲವರಿಗೆ ಟಾಂಗ್‌ ಕೊಟ್ಟಿದ್ದಾರೆ. ಅದರಲ್ಲು ಪದೇ ಪದೇ ಅನಗತ್ಯ ರೀತಿಯಲ್ಲಿ ಟೀಮ್ ಇಂಡಿಯಾವನ್ನು ಕೆಣಕುವ ಮೈಕಲ್‌ ವಾನ್‌ಗೆ ಜಾಫರ್‌ ಬಿಸಿ ಮುಟ್ಟಿಸಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ ಕೂಡ. ಈಗ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಜಾಫರ್‌ ತಮ್ಮದೇ ಶೈಲಿಯಲ್ಲಿ ಪ್ಲೇಯಿಂಗ್‌ ಇಲೆವೆನ್ ಪ್ರಕಟ ಮಾಡಿದ್ದಾರೆ. ಸಿನಿಮಾ ತಾರೆಯ ಫೊಟೊಗಳನ್ನು ಪ್ರಕಟಿಸಿ ಅವರ ಹೆಸರಿನೊಂದಿಗೆ ಭಾರತ ತಂಡದ ಆಟಗಾರರ ಅರ್ಥ ಬರುವಂತೆ ಅತ್ಯಂತ ಜಾಣ್ಮೆಯ ಟ್ವೀಟ್‌ ಒಂದನ್ನು ಮಾಡಿದ್ದಾರೆ. ಜಾಫರ್‌ ತಮ್ಮ ಟ್ವೀಟ್‌ನಲ್ಲಿ ರೋಹಿತ್‌ ಶರ್ಮಾ ಅವರನ್ನು ಹೃತಿಕ್‌ ರೋಶನ್‌ಗೆ, ಕೆಎಲ್‌ ರಾಹುಲ್‌ ಅವರನ್ನು ಶಾರುಖ್ ಖಾನ್‌ಗೆ ಹೋಲಿಕೆ ಮಾಡಿದ್ದಾರೆ. ಪೂಜಾರ ಅವರನ್ನು ಸ್ಟೋನ್‌ ಕೋಲ್ಡ್‌ ಎಂದು, ಎರುಟ್ರುಲ್ ಘಾಜಿ ವೆಬ್‌ ಸೀರೀಸ್‌ನ ಹೀರೊಗೆ ವಿರಾಟ್‌ ಕೊಹ್ಲಿಯನ್ನ ಹೋಲಿಕೆ ಮಾಡಿ ತೋರಿಸಿದ್ದಾರೆ. ಹೀಗೆ ಪ್ರತಿಯೊಬ್ಬ ಆಟಗಾರನನ್ನು ಪ್ರತಿಬಿಂಬಿಸುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಪ್ರಥಮ ಟೆಸ್ಟ್‌ಗೆ ಜಾಫರ್‌ ಆಯ್ಕೆಯ ಟೀಮ್ ಇಂಡಿಯಾ ಇಲೆವೆನ್ ಹೀಗಿದೆ 1. ರೋಹಿತ್‌ ಶರ್ಮಾ (ಓಪನರ್‌) 2. (ಓಪನರ್‌) 3. ಚೇತೇಶ್ವರ್ ಪೂಜಾರ (ಬ್ಯಾಟ್ಸ್‌ಮನ್‌) 4. ವಿರಾಟ್‌ ಕೊಹ್ಲಿ (ನಾಯಕ/ಬ್ಯಾಟ್ಸ್‌ಮನ್) 5. ಅಜಿಂಕ್ಯ ರಹಾನೆ (ಬ್ಯಾಟ್ಸ್‌ಮನ್‌) 6. ರಿಷಭ್ ಪಂತ್‌ (ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್) 7. ರವೀಂದ್ರ ಜಡೇಜಾ (ಆಲ್‌ರೌಂಡರ್‌) 8. ಆರ್‌ ಅಶ್ವಿನ್‌ (ಆಫ್‌ ಸ್ಪಿನ್ನರ್‌) 9. ಮೊಹಮ್ಮದ್ ಶಮಿ (ಬಲಗೈ ವೇಗಿ) 10. ಇಶಾಂತ್‌ ಶರ್ಮಾ (ಬಲಗೈ ವೇಗಿ) 11. ಜಸ್‌ಪ್ರೀತ್‌ ಬುಮ್ರಾ (ಬಲಗೈ ವೇಗಿ) ಪ್ರಥಮ ಟೆಸ್ಟ್‌ಗೆ ಮಯಾಂಕ್ ಅಲಭ್ಯನಾಟಿಂಗ್‌ಹ್ಯಾಮ್‌ ಟೆಸ್ಟ್‌ ಸಲುವಾಗಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ಓಪನರ್‌ ಮಯಾಂಕ್‌ ಅಗರ್ವಾಲ್‌ ತಲೆಗೆ ಮೊಹಮ್ಮದ್‌ ಸಿರಾಜ್‌ ಅವರ ಬೌನ್ಸರ್‌ ಬಡಿದಿದೆ. ಮಯಾಂಕ್ ಅವರಲ್ಲಿ ಕನ್ಕಷನ್‌ ಗುಣಲಕ್ಷಣ ಇರುವ ಕಾರಣ ಆಗಸ್ಟ್‌ 4ರಂದು ಶುರುವಾಗಲಿರುವ ಮೊದಲ ಪಂದ್ಯದಿಂದ ಮಯಾಂಕ್ ಹೊರಗುಳಿದಿದ್ದಾರೆ. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಗೆ ಭಾರತದ ಪರಿಷ್ಕೃತ ತಂಡರೋಹಿತ್‌ ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್‌ಕೀಪರ್‌), ಆರ್‌ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಜಸ್‌ಪ್ರೀತ್‌ ಬುಮ್ರಾ, ಇಶಾಂತ್‌ ಶರ್ಮಾ, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್, ಶಾರ್ದುಲ್‌ ಠಾಕೂರ್‌, ಉಮೇಶ್‌ ಯಾದವ್, ಕೆಎಲ್‌ ರಾಹುಲ್, ವೃದ್ಧಿಮಾನ್‌ ಸಹಾ (ವಿಕೆಟ್‌ಕೀಪರ್‌), ಅಭಿಮನ್ಯು ಈಶ್ವರನ್, ಪೃಥ್ವಿ ಶಾ, ಸೂರ್ಯಕುಮಾರ್‌ ಯಾದವ್. ಕಾಯ್ದಿರಿಸಲ್ಪಟ್ಟ ಆಟಗಾರರು: ಪ್ರಸಿಧ್ ಕೃಷ್ಣ ಮತ್ತು ಅರ್ಝಾನ್‌ ನಾಗವಾಸವಾಲ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zXvOuE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...