ಖಡಕ್ ಕುಸ್ತಿಪಟು ರವಿ ದಹಿಯಾ ಬಗ್ಗೆ ತಿಳಿದುಕೊಳ್ಳಲೇ ಬೇಕಾದ ವಿಚಾರಗಳು!

ಬೆಂಗಳೂರು: ಒಲಿಂಪಿಕ್‌ ಸ್ಪರ್ಧೆಯಲ್ಲಿ ಭಾರತೀಯ ಕುಸ್ತಿಪಟುಗಳು ಪದಕ ಗೆಲ್ಲುವ ಫೇವರಿಟ್‌ಗಳಲ್ಲಿ ಒಬ್ಬರಾಗಿರುತ್ತಾರೆ. ಸತತ ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕುಸ್ತಿ ಕ್ರೀಡೆಯಲ್ಲಿ ಪದಕ ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬುಧವಾರ (ಆಗಸ್ಟ್‌ 4) ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಕುಸ್ತಿಪಟು ರವಿ ಕುಮಾರ್‌ ದಹಿಯಾ ಪುರುಷರ 57 ಕೆಜಿ ವಿಭಾಗದಲ್ಲಿ ಫೈನಲ್‌ ತಲುಪುವ ಮೂಲಕ ಭಾರತಕ್ಕೆ ಕನಿಷ್ಠ ಕಂಚಿನ ಪದಕ ಖಾತ್ರಿ ಪಡಿಸಿದ್ದಾರೆ. ಹರಿಯಾಣದ ಸೋನಿಪತ್‌ ಮೂಲದ 23 ವರ್ಷದ ಯುವ ಕುಸ್ತಿಪಟು ಆಗಸ್ಟ್‌ 6ರಂದು ಸ್ವರ್ಣ ಪದಕ ಸಲುವಾಗಿ ಪೈಪೋಟಿ ನಡೆಸಲಿದ್ದಾರೆ. ಆ ಪಂದ್ಯದಲ್ಲಿ ಸೋತರೂ ಬೆಳ್ಳಿ ಪದಕಕ್ಕೆ ಕೊರಳೊಡ್ಡಲಿದ್ದಾರೆ. ಸೆಮಿಫೈನಲ್‌ನಲ್ಲಿ ಕಝಖಸ್ತಾನದ ನುರಿಸ್ಲಾಮ್‌ ಸನಯೆವ್ ವಿರುದ್ಧ ಆರಂಭಿಕ ಹಿನ್ನಡೆ ಅನುಭವಿಸಿದರೂ ಭರ್ಜರಿ ಕಮ್‌ಬ್ಯಾಕ್‌ ಮಾಡುವ ಮೂಲಕ ರೋಚಕ ಗೆಲುವಿನೊಂದಿಗೆ ಫೈನಲ್‌ ಅರ್ಹತೆ ಪಡೆದುಕೊಂಡರು. ಇದಕ್ಕೂ ಮುನ್ನ ಕೊಲಂಬಿಯಾ ಮತ್ತು ಬಲ್ಗೇರಿಯಾದ ಕುಸ್ತಿಪಟುಗಳನ್ನು ಮಣಿಸಿ ಅಂತಿಮ ನಾಲ್ಕರ ಘಟ್ಟ ತಲುಪಿದ್ದರು. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದುಕೊಟ್ಟಿದ್ದರು. ಅದೇ ವರ್ಷ ಯೋಗೀಶ್ವರ್‌ ದತ್‌ ಕಂಚಿನ ಪದಕ ಗೆದ್ದರೆ, 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಸಾಕ್ಷಿ ಮಲಿಕ್‌ ಕಂಚಿನ ಸಾಧನೆ ಮರೆದಿದ್ದರು. ಇವೆಲ್ಲದಕ್ಕೂ ಮುನ್ನ 1952ರಲ್ಲಿ ಭಾರತಕ್ಕೆ ಕುಸ್ತಿಯಲ್ಲಿ ಮೊದಲ ಪದಕ ಗೆದ್ದುಕೊಟ್ಟ ಹೆಗ್ಗಳಿಕೆ ಕೆ.ಡಿ ಜಾಧವ್ ಅವರದ್ದು. ಈ ಪಟ್ಟಿಗೆ ಈಗ ರವಿ ದಹಿಯಾ ಸೇರ್ಪಡೆಯಾಗಿದ್ದಾರೆ. ಸ್ವರ್ಣ ಗೆದ್ದರೆ ಈ ಸಾಧನೆ ಮಾಡಿದ ಮೊದಲ ಭಾರತೀಯ ಕುಸ್ತಿಪಟು ಎನಿಸಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ರವಿ ಕುಮಾರ್‌ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲ ಪ್ರಮುಖ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.
  • ಹೆಸರು: ರವಿ ಕುಮಾರ್‌ ದಹಿಯಾ
  • ಕ್ರೀಡೆ: ಕುಸ್ತಿ (ಪುರುಷರ 57 ಕೆ.ಜಿ ಫ್ರೀಸ್ಟೈಲ್)
  • ವಯಸ್ಸು: 23 (1997)
  • ಹುಟ್ಟಿದ ಸ್ಥಳ: ಹರಿಯಾಣ, ಸೋನಿಪತ್ ಜಿಲ್ಲೆ, ನಹ್ರಿ ಗ್ರಾಮ
ಪ್ರಮುಖ ಸಾಧನೆ
  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕನಿಷ್ಠ ಬೆಳ್ಳಿ ಪದಕ ಖಾತ್ರಿ.
  • 2019ರ ವಿಶ್ವ ಚಾಂಪಿಯನ್‌ಷಿಪ್‌ನ 57 ಕೆಜಿ ವಿಭಾಗದಲ್ಲಿ ಕಂಚು.
  • 2020ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ.
  • 2021ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಸ್ವರ್ಣ ಸಾಧನೆ.
  • 2018ರ ಅಂಡರ್ 23 ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ.
ಎದುರಾಳಿ ಕಚ್ಚಿದರೂ ಪಟ್ಟು ಬಿಡದ ರವಿ ಸೆಮಿಫೈನಲ್ ಪಂದ್ಯದಲ್ಲಿ ಕಝಖಸ್ತಾನದ ನುರಿಸ್ಲಾಮ್‌ ಸನಯೆವ್ ಹೇಗಾದರೂ ಮಾಡಿ ಗೆಲ್ಲಲೇ ಬೇಕು ಎಂಬ ಪ್ರಯತ್ನದಲ್ಲಿ ರವಿ ಕುಮಾರ್‌ ಅವರ ಬಲ ತೋಳನ್ನು ಬಲವಾಗಿ ಕಚ್ಚಿದ್ದರು. ಪದಕ ಗೆಲ್ಲುವ ಉತ್ಸಾಹದಲ್ಲಿ ಎದುರಾಳಿ ಕಚ್ಚಿದ ನೋವನ್ನು ಲೆಕ್ಕಿಸದ ರವಿ, ತಮ್ಮ ಪಟ್ಟು ಬಿಡದೆ ಅಂಕಗಳನ್ನು ಗಳಿಸುವ ಮೂಲಕ ಫೈನಲ್‌ ಟಿಕೆಟ್‌ ತಮ್ಮದಾಗಿಸಿಕೊಂಡರು. ಪಂದ್ಯದ ಬಳಿಕ ಬಿಡುಗಡೆಯಾದ ಫೊಟೊಗಳಲ್ಲಿ ಎದುರಾಳಿ ರವಿ ಅವರೊಗೆ ಕಚ್ಚಿರುವುದು ಸ್ಪಷ್ಟವಾಗಿ ಕಾಣಿಸುತ್ತಿತ್ತು. ಈ ಫೋಟೊಗಳು ಸೋಷಿಯಲ್ ಮಿಡಿಯಾಗಳಲ್ಲಿ ವೈರಲ್‌ ಆಗಿವೆ. ನೋವನ್ನು ಲೆಕ್ಕಿಸದೇ ಆಡಿದ ಭಾರತೀಯ ಕುಸ್ತಿಪಟುವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಾಡಿ ಹೊಗಳಲಾಗಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3jpZtGi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...