
ಹೊಸದಿಲ್ಲಿ: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮಂಗಳವಾರ ಹಲವು ಹೊಸತು ಹಾಗೂ ಕೆಲವು ಬದಲಾವಣೆಗಳೊಂದಿಗೆ 72ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನೆರವೇರಲಿದೆ. ವೀಕ್ಷಕರ ಸಂಖ್ಯೆಯನ್ನು ಒಂದೂವರೆ ಲಕ್ಷದ ಬದಲು 25 ಸಾವಿರಕಕ್ಕೆ ಸೀಮಿತಗೊಳಿಸಲಾಗಿದೆ. 15 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ ಪಾಲ್ಗೊಳ್ಳಲು ಅವಕಾಶವಿಲ್ಲ. ರಾಜಪಥದ ಪ್ರಮುಖ ಆಕರ್ಷಣೆಗಳಲ್ಲಿ ಒಂದೆನಿಸಿದ ಬೈಕ್ ಸ್ಟಂಟ್ ಇರುವುದಿಲ್ಲ. ಶೌರ್ಯ ಪ್ರಶಸ್ತಿ ವಿಜೇತ ಭದ್ರತಾ ಸಿಬ್ಬಂದಿ, ಮಕ್ಕಳು ಪರೇಡ್ ಭಾಗವಾಗಿರುವುದಿಲ್ಲ. ಉಗ್ರರ ದಾಳಿಯ ಭೀತಿಯ ಹಿನ್ನೆಲೆಯಲ್ಲಿ ದಿಲ್ಲಿಯಾದ್ಯಂತ ಭಾರಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದಿಲ್ಲಿ ಗಡಿಯಲ್ಲಿ ರೈತರು ಟ್ರ್ಯಾಕ್ಟರ್ ಪರೇಡ್ ನಡೆಸಲಿರುವ ಕಾರಣ ಅಹಿತಕರ ಘಟನೆಗಳನ್ನು ತಡೆಯಲು ದಿಲ್ಲಿ ಸುತ್ತಲೂ ಸರ್ಪಗಾವಲು ಹಾಕಲಾಗಿದೆ. ಪ್ರಧಾನಿ ಮೋದಿ ವಿಶ್! ಇನ್ನು ಭಾರತ 72ನೇ ಗಣರಾಜ್ಯೋತ್ಸವ ಆಚರಣೆಗೆ ಸಜ್ಜಾಗಿರುವ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಶುಭಾಶಯ ಕೋರಿದ್ದಾರೆ, "ದೇಶದ ಎಲ್ಲ ಜನರಿಗೆ ಗಣರಾಜ್ಯ ದಿನದ ಶುಭಾಶಯಗಳು, ಜೈ ಹಿಂದ್" ಎಂದು ಟ್ವೀಟ್ ಮಾಡಿದ್ದಾರೆ.
from India & World News in Kannada | VK Polls https://ift.tt/3sZyntx