ಶ್ರೀನಗರ: ಕಳೆದ 30 ವರ್ಷಗಳಲ್ಲಿಯೇ ಕಾಶ್ಮೀರದ ಶ್ರೀನಗರದಲ್ಲಿಅತೀ ತೀವ್ರ ಚಳಿ ದಾಖಲಾಗಿದ್ದು, ವಿಶ್ವ ಪ್ರಸಿದ್ಧ ಭಾಗಶಃ ಮಂಜುಗಡ್ಡೆಯಾಗಿದೆ. ನಗರದಲ್ಲಿ ಕನಿಷ್ಠ ತಾಪಮಾನ ಗುರುವಾರ ಮೈನಸ್ 8.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ರಕ್ತ ಹೆಪ್ಪುಗಟ್ಟಿಸುವಂತಹ ಚಳಿಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ರಸ್ತೆಗಳು ಹಿಮದಿಂದ ಆವೃತ್ತವಾಗಿದ್ದು, ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಿದೆ. ಹಿಮದ ಬಂಡೆಯಂತಾಗಿರುವ ದಾಲ್ ಸರೋವರದ ಮೇಲೆ ಯಾರೂ ಓಡಾಡಬಾರದು ಎಂದು ಸ್ಥಳೀಯ ಆಡಳಿತ ಸೂಚನೆ ಹೊರಡಿಸಿದೆ. ಪ್ರವಾಸಿಗರ ಮೇಲೆ ನಿಗಾ ಇಡಲು ಸರೋವರದ ಸುತ್ತಲೂ ಸೇನೆಯನ್ನು ನಿಯೋಜಿಸಲಾಗಿದೆ. ಶೀತ ಮಾರುತಗಳ ಪ್ರಭಾವದಿಂದ ಉತ್ತರ ಭಾರತದಲ್ಲಿಚಳಿ ತೀವ್ರವಾಗಿದೆ. ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ1995ರಲ್ಲಿಮೈನಸ್ 8.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಅದು ಬಿಟ್ಟರೆ 1991ರಲ್ಲಿ ಮೈನಸ್ 11.3 ಹಾಗೂ 1893ರಲ್ಲಿಮೈನಸ್ 14.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಸರೋವರ ಭಾಗಶಃ ಮಂಜುಗಡ್ಡೆಯಾದ ಹಿನ್ನೆಲೆ ಮಕ್ಕಳು ಸಮುದ್ರದ ಮೇಲೆಯೇ ಕ್ರಿಕೆಟ್ ಆಡುವ ವಿಡಿಯೋ ವೈರಲ್ ಆಗಿದೆ. ಅಲ್ಲದೆ ಸರೋವರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ವಿಸ್ಮಯವನ್ನು ಕಂಡ ಜನರು ಖುಷಿಗೊಂಡಿದ್ದಾರೆ.
from India & World News in Kannada | VK Polls https://ift.tt/3bGXpaA