from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2SfigXW
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ರಂಗೇರಿದೆ. ಎಲೆಕ್ಷನ್ಗೆ 35 ದಿನಗಳಷ್ಟೇ ಬಾಕಿ ಇದ್ದು ಭಾರೀ ರೀತಿಯಲ್ಲಿ ಉಭಯ ಪಕ್ಷಗಳ ನಾಯಕರು ಪ್ರಚಾರಗಳು ನಡೆಸುತ್ತಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡನ್ ನಡುವೆ ಬಹಿರಂಗ ಚರ್ಚೆ ನಡೆದಿದ್ದು, ಮಾತಿನ ಮೂಲಕ ಉಭಯ ನಾಯಕರು ಕಿತ್ತಾಡಿಕೊಂಡಿದ್ದಾರೆ. ಟಿವಿಯಲ್ಲಿ ನೇರಪ್ರಸಾರವಾಗುವ ಈ ಚರ್ಚೆಯಲ್ಲಿ ಉಭಯ ನಾಯಕರು ಅಕ್ಷರಶಃ ಕಿಡಿಕಾರಿಕೊಂಡಿದ್ದಾರೆ. ಕೊರೊನಾ ವೈರಸ್, ಆರ್ಥಿಕತೆ, ಕಪ್ಪು ವರ್ಣೀಯರು ಸೇರಿ ಹಲವು ವಿಚಾರಗಳ ಬಗ್ಗೆ ಸವಾಲು ಉತ್ತರಗಳ ಸಮ್ಮಿಲನವು ವೇದಿಕೆಯಲ್ಲಿ ನಡೆಯಿತು.
ವಾಷಿಂಗ್ಟನ್:
ಅಮೆರಿಕ ಅಧ್ಯಕ್ಷೀಯ ಸ್ಥಾನದ ಚುನಾವಣೆಗೆ ರಂಗೇರಿದೆ. ಎಲೆಕ್ಷನ್ಗೆ 35 ದಿನಗಳಷ್ಟೇ ಬಾಕಿ ಇದ್ದು ಭಾರೀ ರೀತಿಯಲ್ಲಿ ಉಭಯ ಪಕ್ಷಗಳ ನಾಯಕರು ಪ್ರಚಾರಗಳು ನಡೆಸುತ್ತಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಮತ್ತು ಜೋ ಬಿಡನ್ ನಡುವೆ ಬಹಿರಂಗ ಚರ್ಚೆ ನಡೆದಿದ್ದು, ಮಾತಿನ ಮೂಲಕ ಉಭಯ ನಾಯಕರು ಕಿತ್ತಾಡಿಕೊಂಡಿದ್ದಾರೆ. ಟಿವಿಯಲ್ಲಿ ನೇರಪ್ರಸಾರವಾಗುವ ಈ ಚರ್ಚೆಯಲ್ಲಿ ಉಭಯ ನಾಯಕರು ಅಕ್ಷರಶಃ ಕಿಡಿಕಾರಿಕೊಂಡಿದ್ದಾರೆ. ಕೊರೊನಾ ವೈರಸ್, ಆರ್ಥಿಕತೆ, ಕಪ್ಪು ವರ್ಣೀಯರು ಸೇರಿ ಹಲವು ವಿಚಾರಗಳ ಬಗ್ಗೆ ಸವಾಲು ಉತ್ತರಗಳ ಸಮ್ಮಿಲನವು ವೇದಿಕೆಯಲ್ಲಿ ನಡೆಯಿತು.

ಅಮೆರಿಕದಲ್ಲಿ ಕೊರೊನಾ ತಾಂಡವ ಆಡುತ್ತಿದೆ. ಸರಕಾರಕ್ಕೆ ಸರಿಯಾಗಿ ಮಾಹಿತಿಯು ಇಲ್ಲ ಎಂದು ಸರಕಾರ ಹಾಗೂ ಟ್ರಂಪ್ ವಿರುದ್ಧ ಜೋ ಬಿಡನ್ ಕಿಡಿಕಾರಿದರು. ಇದಕ್ಕೆ ಉತ್ತರ ನೀಡುವ ವೇಳೆ ಭಾರತ, ಚೀನಾವನ್ನು ಎಳೆತಂದ ಡೊನಾಲ್ಡ್ ಟ್ರಂಪ್, ಚೀನಾ, ರಷ್ಯಾ, ಭಾರತದಲ್ಲಿ ಕೋವಿಡ್ -19 ನಿಂದ ಎಷ್ಟು ಜನರು ಸತ್ತರು ಎಂಬುದು ನಮಗೆ ತಿಳಿದಿಲ್ಲ. ಏಕೆಂದರೆ ಅವರು ಸರಿಯಾದ ಉತ್ತರಗಳನ್ನು ನೀಡುತ್ತಿಲ್ಲ. ಅವರು ಸರಿಯಾದ ಸಂಖ್ಯೆಗಳನ್ನು ನೀಡುವುತ್ತಿಲ್ಲ ಎಂದು ಪ್ರಶ್ನೆಯನ್ನು ತಿರುಗಿಸುವ ಯತ್ನ ನಡೆಸಿದರು. ಅಲ್ಲದೆ ಮತ್ತೆ ಚೀನಾ ವಿರುದ್ಧ ಕಿಡಿಕಾರಿದ ಅವರು, ನಮ್ಮ ದೇಶದಲ್ಲಾಗುವ ಈ ಎಲ್ಲಾ ಸಾವು ನೋವುಗಳಿಗೆ ಚೀನಾವೇ ಕಾರಣ ಎಂದು ಕಿಡಿಕಾರಿದರು.
ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ಚುನಾವಣೆ, ಪಾಕ್ ನಡೆಗೆ ಪ್ರತಿಭಟನೆ ದಾಖಲಿಸಿದ ಭಾರತ

ಚೀನಾದಂತೆ ರಷ್ಯಾವು ಅಮೆರಿಕದ ಸಾಂಪ್ರಾದಯಕ ವಿರೋಧಿ ಅನ್ನುವ ಮಾತುಗಳು ಆಗಾಗೇ ಕೇಳಿ ಬರುತ್ತಲೆ ಇರುತ್ತದೆ. ಇದೀಗ ರಷ್ಯಾ ಹಾಗೂ ಟ್ರಂಪ್ ನಡುವೆ ಯಾವ ರೀತಿಯ ಸಂಬಂಧ ಇದೆ ಎನ್ನುವುದನ್ನು ಜೋ ಬಿಡೆನ್ ಅಮೆರಿಕದ ಜನರಿಗೆ ತೋರಿಸಿ ಕೊಡುವ ಕೆಲಸ ಮಾಡಿದ್ದಾರೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಎದುರಿಸಲು ಡೊನಾಲ್ಡ್ ಟ್ರಂಪ್ಗೆ ಸಾಧ್ಯವಾಗಿಲ್ಲ ಎಂದು ಬಿಡನ್ ಆರೋಪಿಸಿದ್ದು, ಟ್ರಂಪ್ ಅಧ್ಯಕ್ಷ ಪುಟಿನ್ನ 'ಪಪ್ಪಿ' ( ಮರಿ ಶ್ವಾನ) ಆಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿಂದೆ ಟ್ರಂಪ್, ಬಿಡೆನ್ ಅವರನ್ನು ಚೀನಾದ ಕೈಗೊಂಬೆ ಎಂದಿದ್ದರು.
ಕೊರೊನಾದಿಂದ ನಲುಗುತ್ತಿರುವ ಮಹಾರಾಷ್ಟ್ರದಲ್ಲೀಗ ಕಾಂಗೊ ಜ್ವರದ ಭೀತಿ! ಏನಿದು ಹೊಸ ರೋಗ?

ಇನ್ನು ಚರ್ಚೆ ವೇಳೆ ಉಭಯ ನಾಯಕರು ಪರಸ್ಪರ ಕುಟುಂಬದವರನ್ನು ಎಳೆ ತಂದ ಘಟನೆಯು ನಡೆಯಿತು. ಜೋ ಬಿಡನ್ ಪುತ್ರ ಹಂಟರ್ ಬಿಡೆನ್ ಬಗ್ಗೆ ಪ್ರಸ್ತಾಪಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಂಟರ್ ಬಿಡೆನ್ ಚೀನಾ ಮತ್ತು ಇತರ ಸಾಗರೋತ್ತರ ಹಿತಾಸಕ್ತಿಗಳಿಂದ ಲಕ್ಷಾಂತರ ಲಾಭವನ್ನು ಗಳಿಸಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಬಿಡೆನ್ ಇದು ಯಾವುದೂ ನಿಜವಲ್ಲ. ಟ್ರಂಪ್ ಅವರ ಕುಟುಂಬದ ಸಾಹಸಗಾಥೆಗಳ ಬಗ್ಗೆ ಮಾತನಾಡುವುದಾದರೆ ನಾವು ರಾತ್ರಿಯಿಡಿ ಮಾತನಾಡಬಹುದು ಎಂದು ಕಾಲೆಳೆದರು. ಹೀಗೆ ಕುಟುಂಬದ ಬಗ್ಗೆ ಇನ್ನಷ್ಟು ಚರ್ಚೆ ನಡೆಯಿತು.
ಬೆಂಗಳೂರು: ಮಾದಕ ವಸ್ತುಗಳಿಗೆ ಕಡಿವಾಣ ಹಾಕುತ್ತಿರುವ ಮಾದಕವಸ್ತು ನಿಯಂತ್ರಣ ದಳ(ಎನ್ಸಿಬಿ) ಅಧಿಕಾರಿಗಳು ಇದೀಗ ಭರ್ಜರಿ ಬೇಟೆಯೊಂದನ್ನು ಮಾಡಿದ್ದಾರೆ. ಡಾರ್ಕ್ನೆಟ್ ಮೂಲಕ ಆರ್ಡರ್ ಮಾಡಿ, ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿ, ನೆದರ್ಲ್ಯಾಂಡ್ನಿಂದ ಕೊರಿಯರ್ ಮೂಲಕ ತರಿಸಲಾಗಿದ್ದ 750 ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಿರುವ ಮಾದಕವಸ್ತು ನಿಯಂತ್ರಣ ದಳ(ಎನ್ಸಿಬಿ) ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.
ಬೆಂಗಳೂರು:
ಮಾದಕ ವಸ್ತುಗಳಿಗೆ ಕಡಿವಾಣ ಹಾಕುತ್ತಿರುವ ಮಾದಕವಸ್ತು ನಿಯಂತ್ರಣ ದಳ(ಎನ್ಸಿಬಿ) ಅಧಿಕಾರಿಗಳು ಇದೀಗ ಭರ್ಜರಿ ಬೇಟೆಯೊಂದನ್ನು ಮಾಡಿದ್ದಾರೆ. ಡಾರ್ಕ್ನೆಟ್ ಮೂಲಕ ಆರ್ಡರ್ ಮಾಡಿ, ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿ, ನೆದರ್ಲ್ಯಾಂಡ್ನಿಂದ ಕೊರಿಯರ್ ಮೂಲಕ ತರಿಸಲಾಗಿದ್ದ 750 ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಿರುವ ಮಾದಕವಸ್ತು ನಿಯಂತ್ರಣ ದಳ(ಎನ್ಸಿಬಿ) ಅಧಿಕಾರಿಗಳು ನಾಲ್ವರನ್ನು ಬಂಧಿಸಿದ್ದಾರೆ.

2020ರ ಜು.30ರಂದು ನೆದರ್ಲ್ಯಾಂಡ್ನ ವಿದೇಶಿ ಅಂಚೆ ಕಚೇರಿಯಿಂದ ಭಾರತಕ್ಕೆ ಪಾರ್ಸೆಲ್ವೊಂದನ್ನು ರವಾನಿಸಲಾಗಿತ್ತು. ಆದರೆ, ಪಾರ್ಸೆಲ್ ಸ್ವೀಕರಿಸಬೇಕಿದ್ದ ಸಂಸ್ಥೆ ಅಥವಾ ವ್ಯಕ್ತಿಯ ಹೆಸರು, ವಿಳಾಸ ನಮೂದು ಮಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ತಾಂತ್ರಿಕ ಮಾಹಿತಿ ಸಹಿತ ಎನ್ಸಿಬಿ ತಂಡಗಳು ವಿವರವಾಗಿ ತನಿಖೆ ನಡೆಸಿದಾಗ ಪಾರ್ಸೆಲ್ ಸ್ವೀಕರಿಸಬೇಕಿದ್ದ ಮಾದಕವಸ್ತು ಜಾಲದ ಆರೋಪಿ ಕೆ.ಪ್ರಮೋದ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ನಂತರ ಜಾಲದ ಮಾಸ್ಟರ್ಮೈಂಡ್ ಫಾಹೀಂ ಮತ್ತು ಆತನ ಸಹಚರರಾದ ಎ.ಹಶೀರ್ ಮತ್ತು ಎಸ್.ಎಸ್.ಶೆಟ್ಟಿ ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿಯಾಗಿರುವ ಫಾಹೀಂ ವೆಬ್ ಸೀರೀಸ್ನಿಂದ ಪ್ರೇರಿತನಾಗಿ ಡಾರ್ಕ್ನೆಟ್ ಮೂಲಕ ಮಾದಕವಸ್ತುಗಳನ್ನು ಅರ್ಡರ್ ಮಾಡುವ ಐಡಿಯಾ ಕಲಿತಿದ್ದ.
ಅಶ್ಲೀಲ ವೆಬ್ಸೈಟ್ಗೆ ಶಿಕ್ಷಕಿ, ಸಹಪಾಠಿಗಳ ಫೋಟೋ ಅಪ್ಲೋಡ್ ಮಾಡಿದ ಕಾನೂನು ವಿದ್ಯಾರ್ಥಿ; ಮತ್ತೇನಾಯ್ತು?

ಆರೋಪಿ ಫಾಹೀಂ ದೇಶದ ವಿವಿಧ ಸ್ಥಳಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದ. ಉಡುಪಿಯ ಮಣಿಪಾಲ್ ವಿವಿ, ಎನ್ಎಂಎಎಂಐಟಿ ಕಾಲೇಜು, ಮಣಿಪಾಲದಲ್ಲಿನ ಕ್ಲಬ್ಗಳು, ಚೆನ್ನೈನ ಎಸ್ಆರ್ಎಂ ವಿವಿ ಸೇರಿದಂತೆ ಹಲವು ಸ್ಥಳಗಳಿಗೆ ಮಾದಕವಸ್ತುಗಳನ್ನು ಪೂರೈಸುತ್ತಿದ್ದ.ಈ ಮಾದಕವಸ್ತುಗಳ ಜಾಲ ಕಳೆದ ಎರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಬಂಧಿತ ಫಾಹೀಂ ಮತ್ತು ಪ್ರಮೋದ್ ಕೇರಳ ಮೂಲದವರಾಗಿದ್ದಾರೆ. ಎ.ಹಶೀರ್ ಮತ್ತು ಎಸ್.ಎಸ್.ಶೆಟ್ಟಿ ಕರ್ನಾಟಕದವರಾಗಿದ್ದಾರೆ. ಜಾಲದೊಂದಿಗೆ ನಂಟು ಹೊಂದಿರುವವರಿಗಾಗಿ ಶೋಧ ಮುಂದುವರಿದಿದೆ ಎಂದು ಎನ್ಸಿಬಿ ತಿಳಿಸಿದೆ.
ಅ.1ರಂದು ಹಸಿರು ಮಾರ್ಗದಲ್ಲಿ ಮೆಟ್ರೋ ಸೀಮಿತ ಸಂಚಾರ, ಜಕ್ಕೂರು ವಾಯುನೆಲೆ ಬಳಿ ಕಾಮಗಾರಿಗೆ ಹೈಕೋರ್ಟ್ ನಿರ್ಬಂಧ

ಪ್ರಮುಖ ಆರೋಪಿಯಾಗಿರುವ ಫಾಹೀಂ, ಡ್ರಗ್ಸ್ ಕುರಿತಾದ ಜನಪ್ರಿಯ ವೆಬ್ ಸೀರೀಸ್ ನೋಡಿ ಪ್ರೇರಿತನಾಗಿ ಡಾರ್ಕ್ನೆಟ್ ಮೂಲಕ ಮಾದಕವಸ್ತುಗಳನ್ನು ಆರ್ಡರ್ ಮಾಡುವ ಐಡಿಯಾ ಕಲಿತಿದ್ದ. ಮೊದಲು ಕ್ರಿಪ್ಟೋ ಕರೆನ್ಸಿ ಖರೀದಿಸುವುದು, ಆ ಕ್ರಿಪ್ಟೋ ಕರೆನ್ಸಿ ಮೂಲಕ ಹಣ ಪಾವತಿಸಿ ಡಾರ್ಕ್ನೆಟ್ನಲ್ಲಿ ಮಾದಕವಸ್ತುಗಳಿಗೆ ಆರ್ಡರ್ ಮಾಡುತ್ತಿದ್ದ ಎಂದು ಎನ್ಸಿಬಿ ತಿಳಿಸಿದೆ.
ವಿ.ಜೆ.ರಾಜೇಶ್ ಆಲ್ದೂರು (ಚಿಕ್ಕಮಗಳೂರು)ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದನ್ನು ಅರಿತ ಕೆಲವು ಉತ್ಸಾಹಿ ಯುವ ರೈತರು ಜೀರಿಗೆ ಮೆಣಸನ್ನು ವ್ಯವಸ್ಥಿತವಾಗಿ ಬೆಳೆಯಲು ಮುಂದಾಗಿದ್ದಾರೆ. ಮನೆ ಬಳಿ, ಕಾಫಿ, ಅಡಕೆ ತೋಟಗಳಲ್ಲಿನಾಲ್ಕೈದು ಗಿಡಗಳಿಗೆ ಸೀಮಿತವಾಗಿದ್ದ ಜೀರಿಗೆ ಮೆಣಸನ್ನು ಈಗ ಎಕರೆಗಟ್ಟಲೆ ಬೆಳೆಯಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಹಿತ್ತಿಲಿಗಷ್ಟೇ ಸೀಮಿತವಾಗಿದ್ದ, ಮಾಂಸಾಹಾರಿ ಅಡುಗೆ, ಉಪ್ಪಿನಕಾಯಿ ಹಾಕುವುದಕ್ಕೆ ಮಾತ್ರ ಉಪಯೋಗಿಸುತ್ತಿದ್ದ ಜೀರಿಗೆ ಮೆಣಸ್ಸಿನ ಮಹತ್ವ ಬಹುತೇಕ ಜನರಿಗೆ ಗೊತ್ತಿರಲಿಲ್ಲ. ವಿಪರೀತ ಖಾರ ಎಂಬ ಕಾರಣಕ್ಕೆ ಬಳಕೆ ಬಹಳ ಕಡಿಮೆ ಇತ್ತು. ಆದರೆ, ಜೀರಿಗೆ ಮೆಣಸು ಆರೋಗ್ಯವರ್ಧಕ ಎಂಬುದು ಗೊತ್ತಾಗುತ್ತಿದ್ದಂತೆ ಸಾಮಾನ್ಯ ಮೆಣಸಿಗಿಂತ ಜೀರಿಗೆ ಮೆಣಸಿಗೆ ಬೇಡಿಕೆ ಹೆಚ್ಚಾಗಿದೆ. ತಾನಾಗಿಯೇ ಹುಟ್ಟಿ ಬೆಳೆಯುವ ಜೀರಿಗೆ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿಶೇಷ ಆರೈಕೆ, ಹೆಚ್ಚಿನ ನೀರಾವರಿ ಅಗತ್ಯವಿಲ್ಲದ ಬೆಳೆ. ಹಲವು ರೈತರು ಜೀರಿಗೆ ಮೆಣಸಿನ ಗಿಡಗಳನ್ನು ನೆಟ್ಟು ಬೆಳೆಸುವುದಿಲ್ಲ. ಹಕ್ಕಿಗಳು ತಿಂದು ಬೀಳಿಸಿದ ಬೀಜಗಳಿಂದ ಸಸಿಗಳು ತೋಟದಲ್ಲಿ ತಾವಾಗಿಯೇ ಹುಟ್ಟುತ್ತವೆ. ಅದರ ಪಾಡಿಗೆ ಬೆಳೆದು ಕಾಯಿ ಬಿಡುತ್ತವೆ.ಚೂರು ಮೆಣಸು, ಗಾಂಧಾರಿ ಮೆಣಸು, ನುಚ್ಚು ಮೆಣಸು, ಸಣ್ಣಮೆಣಸು, ಕಾಂತರಿ ಜೀರಿಗೆ ಮೆಣಸು, ಅಥವಾ ಬರ್ಡ್ ಐ ಚಿಲ್ಲಿ ಹೆಸರಿನಿಂದ ಕರೆಯುವ ಈ ಮೆಣಸಿನಕಾಯಿ ಮಲೆನಾಡಿನ ರೈತರ ಉಪ ಬೆಳೆಯಾಗಿ ಉತ್ತಮ ಆದಾಯ ಕೊಡುತ್ತಿದೆ.
ವಿ.ಜೆ.ರಾಜೇಶ್ ಆಲ್ದೂರು (ಚಿಕ್ಕಮಗಳೂರು)
ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವುದನ್ನು ಅರಿತ ಕೆಲವು ಉತ್ಸಾಹಿ ಯುವ ರೈತರು ಜೀರಿಗೆ ಮೆಣಸನ್ನು ವ್ಯವಸ್ಥಿತವಾಗಿ ಬೆಳೆಯಲು ಮುಂದಾಗಿದ್ದಾರೆ. ಮನೆ ಬಳಿ, ಕಾಫಿ, ಅಡಕೆ ತೋಟಗಳಲ್ಲಿನಾಲ್ಕೈದು ಗಿಡಗಳಿಗೆ ಸೀಮಿತವಾಗಿದ್ದ ಜೀರಿಗೆ ಮೆಣಸನ್ನು ಈಗ ಎಕರೆಗಟ್ಟಲೆ ಬೆಳೆಯಲಾಗುತ್ತಿದೆ. ಮಲೆನಾಡು ಭಾಗದಲ್ಲಿ ಹಿತ್ತಿಲಿಗಷ್ಟೇ ಸೀಮಿತವಾಗಿದ್ದ, ಮಾಂಸಾಹಾರಿ ಅಡುಗೆ, ಉಪ್ಪಿನಕಾಯಿ ಹಾಕುವುದಕ್ಕೆ ಮಾತ್ರ ಉಪಯೋಗಿಸುತ್ತಿದ್ದ ಜೀರಿಗೆ ಮೆಣಸ್ಸಿನ ಮಹತ್ವ ಬಹುತೇಕ ಜನರಿಗೆ ಗೊತ್ತಿರಲಿಲ್ಲ. ವಿಪರೀತ ಖಾರ ಎಂಬ ಕಾರಣಕ್ಕೆ ಬಳಕೆ ಬಹಳ ಕಡಿಮೆ ಇತ್ತು. ಆದರೆ, ಜೀರಿಗೆ ಮೆಣಸು ಆರೋಗ್ಯವರ್ಧಕ ಎಂಬುದು ಗೊತ್ತಾಗುತ್ತಿದ್ದಂತೆ ಸಾಮಾನ್ಯ ಮೆಣಸಿಗಿಂತ ಜೀರಿಗೆ ಮೆಣಸಿಗೆ ಬೇಡಿಕೆ ಹೆಚ್ಚಾಗಿದೆ. ತಾನಾಗಿಯೇ ಹುಟ್ಟಿ ಬೆಳೆಯುವ ಜೀರಿಗೆ ಮೆಣಸಿನಕಾಯಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ. ವಿಶೇಷ ಆರೈಕೆ, ಹೆಚ್ಚಿನ ನೀರಾವರಿ ಅಗತ್ಯವಿಲ್ಲದ ಬೆಳೆ. ಹಲವು ರೈತರು ಜೀರಿಗೆ ಮೆಣಸಿನ ಗಿಡಗಳನ್ನು ನೆಟ್ಟು ಬೆಳೆಸುವುದಿಲ್ಲ. ಹಕ್ಕಿಗಳು ತಿಂದು ಬೀಳಿಸಿದ ಬೀಜಗಳಿಂದ ಸಸಿಗಳು ತೋಟದಲ್ಲಿ ತಾವಾಗಿಯೇ ಹುಟ್ಟುತ್ತವೆ. ಅದರ ಪಾಡಿಗೆ ಬೆಳೆದು ಕಾಯಿ ಬಿಡುತ್ತವೆ.ಚೂರು ಮೆಣಸು, ಗಾಂಧಾರಿ ಮೆಣಸು, ನುಚ್ಚು ಮೆಣಸು, ಸಣ್ಣಮೆಣಸು, ಕಾಂತರಿ ಜೀರಿಗೆ ಮೆಣಸು, ಅಥವಾ ಬರ್ಡ್ ಐ ಚಿಲ್ಲಿ ಹೆಸರಿನಿಂದ ಕರೆಯುವ ಈ ಮೆಣಸಿನಕಾಯಿ ಮಲೆನಾಡಿನ ರೈತರ ಉಪ ಬೆಳೆಯಾಗಿ ಉತ್ತಮ ಆದಾಯ ಕೊಡುತ್ತಿದೆ.

ಮಲೆನಾಡಿನ ಬಹುತೇಕ ಮನೆಗಳಲ್ಲಿ ಸಾಮಾನ್ಯವಾಗಿ ಒಂದಾದರೂ ಜೀರಿಗೆ ಮೆಣಸಿನ ಗಿಡ ಇರುತ್ತದೆ. ಸಣ್ಣ ಸಣ್ಣ ಎಲೆಗಳೊಂದಿಗೆ ಉದ್ದವಾಗಿ ಬೆಳೆಯುವ ಗಿಡದಲ್ಲಿಕೆಜಿಗಟ್ಟಲೆ ಜೀರಿಗೆ ಮೆಣಸು ಬೆಳೆಯುತ್ತವೆ. ನೇರವಾಗಿ ಜೀರಿಗೆ ಮೆಣಸು ಕಚ್ಚಿದರೆ ವಿಪರೀತ ಖಾರ. ಇಂಗ್ಲಿಷ್ನಲ್ಲಿ ಇದನ್ನು ಬರ್ಡ್ ಐ ಚಿಲ್ಲಿ ಎಂದರೆ, ಕೆಲವು ಕಡೆ ಗಾಂಧಾರಿ ಮೆಣಸು ಎಂಬುದಾಗಿಯೂ ಕರೆಯಲಾಗುತ್ತದೆ.
ಆಹಾರಕ್ಕೆ ಅದ್ಭುತ ರುಚಿ ನೀಡುವ ಜೀರಿಗೆ ಮೆಣಸು ಅತಿಹೆಚ್ಚು ಔಷಧೀಯ ಗುಣ ಹೊಂದಿದೆ. ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡುವ ಜತೆಗೆ ದೇಹದ ಬೊಜ್ಜನ್ನೂ ಕರಗಿಸುತ್ತದೆ. ಕಷಾಯ, ಮಾಂಸದ ಅಡುಗೆಯಲ್ಲಿ ಹೆಚ್ಚಾಗಿ ಜೀರಿಗೆ ಮೆಣಸು ಬಳಸಲಾಗುತ್ತದೆ. ಈಗೀಗ ಮಲೆನಾಡು ಭಾಗದಲ್ಲಿ ಚಟ್ನಿ ಸೇರಿದಂತೆ ಬಹುತೇಕ ಅಡುಗೆಗಳಲ್ಲಿ ಜೀರಿಗೆ ಮೆಣಸಿನ ಬಳಕೆ ಹೆಚ್ಚಾಗಿದೆ.

ಮನೆ ಬಳಕೆಗೆ ಸೀಮಿತವಾಗಿದ್ದ ಜೀರಿಗೆ ಮೆಣಸು ಈಗ ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಒಣಗಿದ ಜೀರಿಗೆ ಮೆಣಸು ಆನ್ಲೈನ್ನಲ್ಲಿ ಕೆಜಿಗೆ 4-5 ಸಾವಿರ ರೂ.ಗೆ ಮಾರಾಟವಾಗುತ್ತಿದೆ. ಹಾವೇರಿ ಜಿಲ್ಲೆ ಬ್ಯಾಡಗಿ, ಶಿವಮೊಗ್ಗ, ಬೆಳಗಾವಿ ಸೇರಿದಂತೆ ಹಲವು ಕಡೆ ಜೀರಿಗೆ ಮೆಣಸು ಪೂರೈಕೆಯಾಗುತ್ತಿದೆ. ಕೆಂಪು, ಹಸಿರು ಕಾಯಿಗಳನ್ನು ಬೇರ್ಪಡಿಸಿ, ಒಣಗಿಸಿ, ಪ್ಯಾಕ್ ಮಾಡಿದರೆ ಉತ್ತಮ ಧಾರಣೆ ಲಭ್ಯವಾಗುತ್ತದೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಪಂಜಾಬ್ ರಾಜ್ಯಗಳು, ಜಪಾನ್, ಅಮೆರಿಕ, ಅರಬ್ ದೇಶಗಳಿಗೂ ಜೀರಿಗೆ ಮೆಣಸು ರಫ್ತಾಗುತ್ತಿದೆ. ಬೆಂಗಳೂರಿನ ಫಲದ ಇಂಡಸ್ಟ್ರೀಸ್ ಸೇರಿದಂತೆ ಹಲವು ಕಂಪನಿಗಳು ಮಾರುಕಟ್ಟೆ ಒದಗಿಸುತ್ತಿವೆ. ಹಸಿ ಜೀರಿಗೆ ಮೆಣಸಿಗೆ ಸ್ಥಳೀಯವಾಗಿ 500 ರೂ.ಗಳವರೆಗೆ ಧಾರಣೆ ಇದೆ. ಹೊರ ರಾಜ್ಯಗಳಲ್ಲಿಒಂದು ಸಾವಿರ ರೂ.ಗೂ ಹೆಚ್ಚು ಧಾರಣೆ ಸಿಗುತ್ತದೆ. ಮಲೆನಾಡಿನಲ್ಲಿ ಜೀರಿಗೆ ಮೆಣಸನ್ನು ಉಪ ಬೆಳೆಯಾಗಿ ಬೆಳೆಯಬಹುದು. ಇದು ಹೆಚ್ಚು ಶ್ರಮ ಅಥವಾ ಪೋಷಕಾಂಶಗಳನ್ನು ಬೇಡದ, ಕಾಡು ಬೆಳೆಯಂತೆ ಬೆಳೆಯುವುದರಿಂದ ಹೆಚ್ಚು ವೆಚ್ಚವೂ ತಗಲುವುದಿಲ್ಲ

ಜೀರಿಗೆ ಮೆಣಸಿಗೆ ಉತ್ತಮ ಧಾರಣೆ ಇದ್ದ ಕಾರಣ ಒಂದು ಎಕರೆಯಲ್ಲಿ 1200 ಗಿಡ ಬೆಳೆಸಿದ್ದೆ. 5-6 ತಿಂಗಳಿಗೆ ಫಸಲು ಬಂದಿದ್ದು, 4.26 ಕ್ವಿಂಟಾಲ್ಗೆ 3.60 ಲಕ್ಷ ರೂ. ಸಿಕ್ಕಿತು. ಖರ್ಚು ಕಳೆದು 2 ಲಕ್ಷ ರೂ. ಆದಾಯ ಬಂದಿದೆ. ನೂರಾರು ತಳಿಗಳಿದ್ದು, ಉತ್ತಮ ತಳಿಗೆ ಉತ್ತಮ ಧಾರಣೆ ಇದೆ. ಈ ಬಾರಿ ಉತ್ತಮ ತಳಿಯ ಸಸಿ ಮಡಿ ಸಿದ್ಧಪಡಿಸಿ, 2 ಎಕರೆಯಲ್ಲಿ ಬೆಳೆಯಲು ನಿರ್ಧರಿಸಿದ್ದೇನೆ.
ಉದಯಕುಮಾರ್, ಸಿರವಾಸೆ
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...