ಮೋದಿ, ಅಮಿತ್‌ ಶಾ ದೇಶ ಹಾಳು ಮಾಡುತ್ತಿದ್ದಾರೆ: ಮಲ್ಲಿಕಾರ್ಜುನ ಖರ್ಗೆ ಕಿಡಿ

ಬೆಂಗಳೂರು: ನರೇಂದ್ರ ಮೋದಿ ಹಾಗೂ ಅಮಿತ್ ಶಾ ಸೇರಿ ಇಡೀ ದೇಶವನ್ನು ಹಾಳು ಮಾಡುತ್ತಿದ್ದಾರೆ. ಆರ್ಥಿಕ ಪರಿಸ್ಥಿತಿ ಹದಗೆಡಲು ಹಾಗೂ ಕೋವಿಡ್ ಸೋಂಕು ಹೆಚ್ಚಲು ಅವರ ನೀತಿಗಳು ಕಾರಣ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಆರೋಪಿಸಿದರು. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್‌ ಪದಗ್ರಹಣ ಮಾಡಿದ ಸಮಾರಂಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದರು. ಸಣ್ಣ ಕೈಗಾರಿಕೆಗಳಿಗೆ ಹೊಡೆತ ಹಾಗೂ ನಿರುದ್ಯೋಗ ಶುರುವಾಗಲು ಮೋದಿ ಮತ್ತ ಅಮಿತ್ ಶಾ ಕಾರಣ. ಆದರೆ ಮೋದಿ, ತಪ್ಪು ಮಾಡಿದ್ದೇವೆ ಎಂದು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ವಿರೋಧ ಪಕ್ಷದ ಮಾತೂ ಕೇಳುವುದಿಲ್ಲ ಎಂದು ಖರ್ಗೆ ವಾಗ್ದಾಳಿ ನಡೆಸಿದರು. ಆರ್ ಎಸ್ ಎಸ್ ಬಗ್ಗುಬಡಿಯುವವರೆಗೂ, ಮೋದಿ, ಅಮಿತ್‌‌ ಶಾ ಹತ್ತಿಕ್ಕುವವರೆಗೆ ದೇಶದ ಜನರಿಗೆ ಭವಿಷ್ಯ ಇಲ್ಲ. ಬಿಜೆಪಿಯದ್ದು ದ್ವೇಷದ ರಾಜಕಾರಣವಾಗಿದೆ. ಚೀನಾ ಸಂಸ್ಥೆ ರಾಜೀವ್ ಗಾಂಧಿ ಫೌಂಡೇಷನ್‌ಗೆ ದಾನ ಕೊಟ್ಟಿದೆ ಎಂದು ಆರೋಪಿಸುತ್ತಿದೆ. ಚೀನಾ ಎಂಬೆಸ್ಸಿಯಿಂದ ಹಣ ಪಡೆದಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ರಾಜೀವ್ ಗಾಂಧಿ ಫೌಂಡೇಶನ್ ಈ ಹಣವನ್ನು ಬಡವರ ಪರವಾಗಿ ಕೆಲಸ ಬಳಸಿದೆ ಎಂದು ಖರ್ಗೆ ತಿಳಿಸಿದರು. ಮೋದಿ ಹೊಸ ಟ್ರಸ್ಟ್, ಪಿಎಂ ಕೇರ್ ಫಂಡ್ ಕಲೆಕ್ಟ್ ಮಾಡಿದ್ದಾರೆ. . ಯಾರು ಯಾರ ಹತ್ರ ಹಣ ತೆಗೆದುಕೊಂಡಿದ್ದೀರಿ ಎಂಬುವುದಕ್ಕೆ ಲೆಕ್ಕ ಇಲ್ಲ. ಬೇರೆಯವರಿಗೆ ಲೆಕ್ಕ ಕೇಳ್ತೀರಿ ಆದರೆ ಪಿಎಂ ಕೇರ್ ಫಂಡ್‌ಗೆ ಯಾರು ಯಾರು ನೀಡಿದ್ದಾರೆ ಎಂಬ ಮಾಹಿತಿ ನೀಡ್ತಿಲ್ಲ. ಪಿಎಂ ಕೇರ್‌ಗೆ ಚೀನಾದ ವಿವಿಧ ಸಂಸ್ಥೆಗಳಿಂದ ಹಣ ಬಂದಿದೆ, ಪೇಟಿಎಂ 100 ಕೋಟಿ ರೂ. ಕೊಟ್ಟಿದೆ. ಕೋಟ್ಯಂತರ ದೇಣಿಗೆ ಚೀನಾದ ಸಂಸ್ಥೆಗಳಿಂದ ಬಂದಿದೆ ಎಂದ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.


from India & World News in Kannada | VK Polls https://ift.tt/2D1M2uO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...