from India & World News in Kannada | VK Polls https://ift.tt/3dnZbLN
ಪೊಲೀಸ್ ಅಧಿಕಾರಿಯ ದರ್ಪದ ವರ್ತೆನೆಯಿಂದ ಸಂಭವಿಸಿರುವ ಕಪ್ಪು ವರ್ಣೀಯನ ಸಾವು, ಅಮೆರಿಕವನ್ನು ಅಕ್ಷರಶ: ನಲುಗಿಸಿದೆ. ಅಮೆರಿಕದಾದ್ಯಂತ ಆಕ್ರೋಶ ಕಟ್ಟೆ ಒಡೆದಿದ್ದು, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಭಾರೀ ಪ್ರಮಾಣದಲ್ಲಿ ಘರ್ಷಣೆ ಸಂಭವಿಸಿವೆ. ಅಧ್ಯಕ್ಷರ ಅಧಿಕೃತ ಕಚೇರಿ ಶ್ವೇತಭವನದ ಬಳಿಯೂ ಹಿಂಸಾತ್ಮಕ ಪ್ರತಿಭಟನೆ ನಡೆದಿರುವುದು ವಿಷಾದನೀಯ. ವೈಟ್ಹೌಸ್ ಮುಂದೆ ಭಾರೀ ಸಂಖ್ಯೆಯಲ್ಲಿ ಜಮಾಯಿಸಿರುವ ಪ್ರತಿಭಟನಾಕಾರರು, ಡೊನಾಲ್ಡ್ ಟ್ರಂಪ್ ವಿರುದ್ಧ ನಿರಂತರವಾಗಿ ಘೋಷಣೆಗಳನ್ನು ಕೂಗುತ್ತಿದ್ದಾರೆ. ಈ ವೇಳೆ ಸಂಭವಿಸಿದ ಘರ್ಷಣೆಯಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ. ಶ್ವೇತಭವನದ ಮುಂದೆ ಪ್ರತಿಭಟನೆ ಅದೆಷ್ಟು ಜೋರಾಗಿದೆ ಎಂದರೆ ಮುಂಜಾಗ್ರತಾ ಕ್ರಮವಾಗಿ ಟ್ರಂಪ್ ಅವರನ್ನು ಭೂಗತ ಬಂಕರ್ನಲ್ಲಿ ಮುಚ್ಚಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾದರೆ ಅಮೆರಿಕದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಕುರಿತು ನೋಡುವುದಾದರೆ...ಕಪ್ಪು ವರ್ಣೀಯನ ಸಾವು ಅರಾಜಕತೆಯನ್ನೇ ಸೃಷ್ಟಿಸಿದೆ. ಜಾರ್ಜ್ ಫ್ಲಾಯ್ಡ್ ಸಾವು ಖಂಡಿಸಿ ಬೀದಿಗಿಳಿದಿರುವ ಲಕ್ಷಾಂತರ ಅಮೆರಿಕನ್ನರು, ಪೊಲೀಸರೊಂದಿಗೆ ನೇರ ಸಂಘರ್ಷಕ್ಕಿಳಿದಿದ್ದಾರೆ. ಇದುವರೆಗೂ ಮಿನ್ನಿಯಾಪೊಲೀಸ್ಗಷ್ಟೇ ಸೀಮಿತವಾಗಿದ್ದ ಪ್ರತಿಭಟನೆ ಇದೀಗ 15 ಕ್ಕೂ ಹೆಚ್ಚಿನ ರಾಜ್ಯಗಳಿಗೆ ವ್ಯಾಪಿಸಿದೆ.
ಲಾಸ್ ಎಂಜಲೀಸ್, ನ್ಯೂಯಾರ್ಕ್, ವಾಷಿಂಗ್ಟನ್ ಡಿಸಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಜನ ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಿರತವಾಗಿದ್ದಾರೆ. ಕರ್ಫ್ಯೂ ಹೇರಲಾಗಿದ್ದರೂ, ಜನ ಬೀದಿಗಿಳಿದು ಬಂದಿರುವುದು ಪೊಲೀಸರನ್ನು ಹೈರಾಣಾಗಿಸಿದೆ.
ಜನಾಂಗೀಯ ದ್ವೇಷದಲ್ಲಿ ಹತ್ಯೆ ಆರೋಪ, ಅಮೆರಿಕಾದಲ್ಲಿ ಭುಗಿಲೆದ್ದ ಆಕ್ರೋಶ
ಶ್ವೇತಭವನದ ಮುಂದೆಯೇ ನಡೆದಿರುವ ಪ್ರತಿಭಟನೆ ಸಮಸ್ಯೆಯ ಗಂಭೀರತೆಯನ್ನು ಹೇಳುತ್ತಿದ್ದು, ಪ್ತತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ ಘಟನೆಯೂ ನಡೆದಿದೆ. ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಪ್ರತಿಭಟನೆಯ ಕಾವನ್ನು ಡೊನಾಲ್ಡ್ ಟ್ರಂಪ್ ಸರ್ಕಾರ ಈ ಕೂಡಲೇ ತಗ್ಗಿಸಬೇಕಿದೆ.
ಕಪ್ಪು ವರ್ಣೀಯನ ಸಾವು ಹಚ್ಚಿರುವ ಕಿಚ್ಚಿನ ಪರಿಣಾಮವಾಗಿ ಅಮೆರಿಕದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೇರ ಸಂಘರ್ಷ ಏರ್ಪಟ್ಟಿದೆ. ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣನಾದ ಪೊಲೀಸ್ ಅಧಿಕಾರಿ ಡೆರಿಕ್ ಚೊವಿನ್ನನ್ನು ಬಂಧಿಸಲಾಗಿದ್ದರೂ, ಪ್ರತಿಭಟನಾಕಾರರ ಕೋಪ ತಣ್ಣಗಾಗಿಲ್ಲ.
ಅಮೆರಿಕದಲ್ಲಿ ಭುಗಿಲೆದ್ದ ಜನಾಂಗೀಯ ಪ್ರತಿಭಟನೆ: ಜಾರ್ಜ್ ಫ್ಲಾಯ್ಡ್ ಸಾವು ದುರಂತ ಎಂದ ಟ್ರಂಪ್!
ಪ್ರಮುಖ ನಗರಗಳಲ್ಲಿ ಪೊಲೀಸರೊಂದಿಗೆ ನೇರವಾಗಿ ಸಂಘರ್ಷಕ್ಕೆ ಇಳಿದಿರುವ ಪ್ರತಿಭಟನಾಕಾರರು, ಕಪ್ಪು ವರ್ಣೀಯರ ಮೇಲಿನ ದೌರ್ಜನ್ಯ ಸಹಿಸುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಪೊಲೀಸರು ಕೂಡ ಪ್ರತಿಭಟನೆಯನ್ನು ಹತ್ತಿಕ್ಕಲು ಹರಸಾಹಸ ಪಡುತ್ತಿದ್ದು, ಹಿಂಸೆಯಲ್ಲಿ ನಿರತರಾಗಿರುವ ಮೇಲೆ ಬಲಪ್ರಯೋಗ ಮಾಡುತ್ತಿದ್ದಾರೆ.
ಇನ್ನು ಅಮೆರಿಕದ ಅಧ್ಯಕ್ಷರ ಅಧಿಕೃತ ಕಚೇರಿ ಶ್ವೇತಭವನದ ಮುಂದೆಯೂ ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮುಂಜಾಗ್ರತಾ ಕ್ರಮದ ಭಾಗವಾಗಿ ಶ್ವೇತಭವನದಲ್ಲಿರುವ ಭೂಗತ ಬಂಕರ್ನಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು.
ಶ್ವೇತಭವನದ ಹೊರಗೆ ಪ್ರತಿಭಟನೆ ಜೋರಾಗುತ್ತಿದ್ದಂತೇ ಟ್ರಂಪ್ ಅವರನ್ನು ಭೂಗತ ಬಂಕರ್ಗೆ ಕರೆದೊಯ್ದ ಭದ್ರತಾ ಸಿಬ್ಬಂದಿ, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬಂಕರ್ನಲ್ಲಿಯೇ ಸುರಕ್ಷಿತವಾಗಿ ಇರಿಸಿದ್ದರು.
ವೈಟ್ಹೌಸ್ ಮುಂದೆ ಭಾರೀ ಪ್ರತಿಭಟನೆ: ಗುಪ್ತ ಬಂಕರ್ನಲ್ಲಿ ಟ್ರಂಪ್ರನ್ನು ಮುಚ್ಚಿಟ್ಟ ಸಿಬ್ಬಂದಿ!
ವಿಪತ್ತಿನ ಪರಿಸ್ಥಿತಿಯಲ್ಲಿ ಬಳಕೆಗೆಂದೇ ನಿರ್ಮಿಸಲಾದ ಭೂಗತ್ ಬಂಕರ್ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಕೆಲಕಾಲ ಇಡಲಾಗಿತ್ತು ಎಂದು ಶ್ವೇತಭವನದ ಸಿಬ್ಬಂದಿ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದಾದ್ಯಂತ ಹಬ್ಬುತ್ತಿರುವ ಜನಾಂಗೀಯ ಪ್ರತಿಭಟನೆಯ ಕಿಚ್ಚನ್ನು ತಗ್ಗಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಪ್ರತಿಭಟನೆಯನ್ನು ಕೈಬಿಡುವಂತೆ ಖುದ್ದು ಡೊನಾಲ್ಡ್ ಟ್ರಂಪ್ ಮನವಿ ಮಾಡಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.
ಮೊದಲೇ ಕೊರೊನಾ ವೈರಸ್ ಹಾವಳಿಯಿಂದ ಕಂಗೆಟ್ಟಿರುವ ಟ್ರಂಪ್ ಸರ್ಕಾರ, ಮಾರಕ ವೈರಾಣುವನ್ನು ನಿಯಂತ್ರಿಸಲು ಹೆಣಗುತ್ತಿದೆ. ಅಮೆರಿಕದಲ್ಲಿ ಲಕ್ಷಕ್ಕೂ ಅಧಿಕ ಸಾವು ಸಂಭವಿಸಿದ್ದು, ಕೊರೊನಾ ನಿರ್ಮೂಲನೆಗೆ ಟ್ರಂಪ್ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ.
ಈ ಮಧ್ಯೆ ಆರಂಭವಾಗಿರುವ ಜನಾಂಗೀಯ ಪ್ರತಿಭಟನೆ ಟ್ರಂಪ್ ಸರ್ಕಾರವನ್ನು ಮತ್ತಷ್ಟು ಹೈರಾಣು ಮಾಡಿರುವುದು ಸುಳ್ಳಲ್ಲ. ಹಿಂಸಾತ್ಮಕ ಪ್ರತಿಭಟನೆಗಳನ್ನು ತಗ್ಗಿಸುವುದು ಟ್ರಂಪ್ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಒಟ್ಟಿನಲ್ಲಿ ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿದ್ದ ಅಮೆರಿಕ ಇದೀಗ ಜನಾಂಗೀಯ ಪ್ರತಿಭಟನೆಯ ಬೆಂಕಿಯಲ್ಲಿ ಬೇಯುತ್ತಿರುವುದು ವಿಪರ್ಯಾಸವೇ ಸರಿ.
ಹಲವು ದಶಕಗಳಿಂದ ಜನಪ್ರಿಯವಾಗಿರುವ ಹಾಗೂ ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ 27 ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ಕರಡು ಪ್ರಸ್ತಾವನೆ ಸಿದ್ಧಪಡಿಸಿದೆ. ಇವುಗಳಲ್ಲಿ ಹೆಚ್ಚಿನವು ಕಡಿಮೆ ಅಪಾಯಕಾರಿಯಾಗಿರುವ ಅಗ್ಗದ ಜನರಿಕ್ ಕೀಟನಾಶಕಗಳೇ ಆಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.ಈಗಾಗಲೇ ಅಧಿಕ ನಿರ್ವಹಣಾ ವೆಚ್ಚ ಹಾಗೂ ಬೆಳೆದ ಉತ್ಪನ್ನಗಳಿಗೆ ದರ ಕುಸಿತದಿಂದ ಹೈರಾಣಾಗಿರುವ ರೈತರು, ದುಬಾರಿ ದರ ತೆತ್ತು ಹೊಸ ಕೀಟನಾಶಕ ಖರೀದಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಸರಕಾರದ ನಡೆಯ ವಿರುದ್ಧ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ.'ಮಾನವ ಹಾಗೂ ಪ್ರಾಣಿಗಳಿಗೆ ಅಪಾಯಕಾರಿಯಾಗಿರುವ 27 ಮಾದರಿಯ ಕೀಟನಾಶಕಗಳ ಆಮದು, ಉತ್ಪಾದನೆ, ಮಾರಾಟ, ಸಾಗಾಟ, ವಿತರಣೆ ಹಾಗೂ ಬಳಕೆ ನಿಷೇಧಿಸಲು ನಿರ್ಧರಿಸಲಾಗಿದೆ. ಇವುಗಳ ಬದಲಿಗೆ ಹೊಸ ಕೀಟನಾಶಕಗಳ ಬಳಕೆಗೆ ಅವಕಾಶವಿರುತ್ತದೆ. ನಿಷೇಧ ಕುರಿತು ಆಕ್ಷೇಪಣೆ ಸಲ್ಲಿಸುವವರಿಗೆ 45 ದಿನಗಳ ಅವಕಾಶವಿದೆ' ಎಂದು ಮೇ 14ರಂದು ಸರಕಾರ ತಿಳಿಸಿದೆ. ಈ ಬಗ್ಗೆ ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೂ ಮಾಹಿತಿ ರವಾನಿಸಿ ಸಲಹೆ ನೀಡುವಂತೆ ಸೂಚಿಸಿದೆ. ತರಕಾರಿ, ಹೂವುಗಳಿಂದ ಆರಂಭವಾಗಿ, ಭತ್ತ, ರಾಗಿ, ಗೋಧಿ, ಜೋಳ, ದವಸ ಧಾನ್ಯಗಳು, ಕಬ್ಬು, ಹತ್ತಿ, ಕಾಫಿ, ಕಾಳುಮೆಣಸು, ಅಡಕೆ, ಏಲಕ್ಕಿ, ಮಾವು, ದ್ರಾಕ್ಷಿ, ಸೇಬು, ದಾಳಿಂಬೆ ಹೀಗೆ ದೇಶದಲ್ಲಿ ಬೆಳೆಯಲ್ಪಡುವ ಎಲ್ಲ ಮಾದರಿಯ ಕೃಷಿಗೂ ಈ ಕೀಟನಾಶಕ, ಕಳೆನಾಶಕ ಹಾಗೂ ಶಿಲೀಂದ್ರ ನಾಶಕಗಳೇ ಸದ್ಯ ಹೆಚ್ಚಾಗಿ ಬಳಕೆಯಾಗುತ್ತಿವೆ.ವಿಕ ವಿಶೇಷ ವರದಿ: ಕಿರಣ್ ಕುಮಾರ್ ಡಿ. ಕೆ ಬೆಂಗಳೂರುತಾಜಾ ತರಕಾರಿ ಸಂಗ್ರಹಕ್ಕೆ ಬರಲಿದೆ ವೆಂಡಿಂಗ್ ವ್ಯಾನ್, ತೋಟಗಾರಿಕಾ ಸಂಸ್ಥೆಯಿಂದ ವ್ಯವಸ್ಥೆಕೀಟನಾಶಕಗಳನ್ನು ಸಾಮಾನ್ಯವಾಗಿ ಅತಿಹೆಚ್ಚು ಅಪಾಯಕಾರಿ (ಕೆಂಪು), ಹೆಚ್ಚಿನ ಅಪಾಯಕಾರಿ(ಹಳದಿ), ಮಧ್ಯಮ ಅಪಾಯಕಾರಿ(ನೀಲಿ) ಹಾಗೂ ಅಲ್ಪ ಪ್ರಮಾಣದ ಅಪಾಯಕಾರಿ (ಹಸಿರು)ಗಳೆಂದು 4 ವಿಭಾಗಗಳಲ್ಲಿ ಗುರುತಿಸಲಾಗುತ್ತದೆ. ಇದೀಗ ನಿಷೇಧಕ್ಕೆ ಮುಂದಾಗಿರುವ ಕೀಟನಾಶಕಗಳಲ್ಲಿ ಕೆಂಪು ವಿಭಾಗದವು ಕಡಿಮೆ. ಇದು ಸರಕಾರದ ಪರಾಮರ್ಶೆ ವಿಧಾನದ ಕುರಿತು ಅನುಮಾನ ಮೂಡಿಸಿದೆ.
ಕಾಲಕಾಲಕ್ಕೆ ಕೀಟನಾಶಕಗಳ ನಿಷೇಧ ಮಾಡಲಾಗುತ್ತದೆಯಾದರೂ ಈ ಬಾರಿ ಪಟ್ಟಿಯಲ್ಲಿರುವ ಹೆಚ್ಚಿನ ಕೀಟನಾಶಕಗಳು ಅಗ್ಗದ ದರದವು ಮತ್ತು ಹಲವು ದಶಕಗಳಿಂದ ರೈತರು ಬಳಸುತ್ತ ಪ್ರಮಾಣಿತ ಫಲಿತಾಂಶ ಹೊಂದಿರುವ ಕೀಟನಾಶಕಗಳು. ಹೀಗಿರುವಾಗ ಜಾಗೃತಿಯನ್ನೂ ಮೂಡಿಸದೆ ಏಕಾಏಕಿ ನಿಷೇಧಕ್ಕೆ ಮುಂದಾದರೆ ಹೊಸ ಮಾಲಿಕ್ಯೂಲ್ ಉತ್ಪಾದಿಸುವ ಸಂಸ್ಥೆಗಳು ಇದರ ಲಾಭ ಪಡೆದು ರೈತರ ಮೇಲೆ ಸವಾರಿ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.
ಅಸಿಫೇಟ್, ಅಟ್ರಾಝೈನ್, ಮೆಲಾಥಿಯನ್, ಮ್ಯಾಂಕೋಝೆಬ್, ಮೋನೋಕ್ರೊಟೊಪಾಸ್, ಕ್ವಿನಲ್ಫಾಸ್, ಕ್ಯಾಪ್ಟೈನ್, ಕಾರ್ಬೆಂಡೇಝಿಮ್, ಬುಟಾಕ್ಲೋರ್, ಕಾರ್ಬೋಫರಾನ್, ಕ್ಲೋರೋಫೆರಿಫಾಸ್, ಟು 4 ಡಿ, ಡೆಲ್ಟಾಮೆಥ್ರಿನ್, ಡಿಕೋಫೊಲ್, ಡೈಮಿಥೇಟ್, ಬೆನ್ಫರಾಕರ್ಬ್, ಡಿನೋಕ್ಯಾಪ್, ಡ್ಯುರಾನ್, ಮೆಥಾಮಿಲ್, ಆಕ್ಷಿಫ್ಲೋರ್ಫೆನ್, ಪೆಂಡಿಮೆಥಾಲಿನ್, ಸಲ್ಫೋಸಲ್ಫರಾನ್, ಥಿಯೋಡಿಕಾರ್ಬ್, ಥಿಯೋಫಾನಟ್ ಎಮಿಥಿಲ್, ಥಿರಮ್, ಝೈನೆಬ್, ಝಿರಮ್.
ಮಾವು ಮಾಗಿಸಲು ಬಂದಿದೆ ಪರಿಣಾಮಕಾರಿ ಸಾವಯವ ವಿಧಾನ!
ದೇಶಾದ್ಯಂತ ಆತಂಕ ಸೃಷ್ಟಿಸಿರುವ ಮಿಡತೆಗಳ ನಾಶಕ್ಕೆ ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚಿಸಿರುವ ಕೀಟನಾಶಕಗಳಲ್ಲಿ ಇದೀಗ ನಿಷೇಧದ ಪಟ್ಟಿಯಲ್ಲಿರುವ ಕ್ರಿಮಿನಾಶಕಗಳೇ ಅಗ್ರ ಸ್ಥಾನದಲ್ಲಿವೆ. ಮೆಲಾಥಿಯನ್, ಡೆಲ್ಟಾಮೆಥ್ರಿನ್, ಕ್ಲೋರೋಫೆರಿಫಾಸ್, ಲಾಂಬ್ಡಾ ಸೈಹಾಲೋಥ್ರಿನ್, ಫಿಪ್ರೋನಿಲ್, ಬ್ಯಾಂಡಿಯೋಕಾರ್ಬ್ ಎಂಬ 6 ವಿಧದ ಕೀಟನಾಶಕಗಳ ಬಳಕೆಗೆ ಸೂಚಿಸಲಾಗಿದ್ದು, ಇದರಲ್ಲಿ ಮೊದಲ ಮೂರು ನಿಷೇಧದ ಪ್ರಸ್ತಾವನೆಯಲ್ಲಿದೆ.
ಎಲ್ಲ ಕೀಟನಾಶಕಗಳು ಸಕಲ ಜೀವಿಗಳಿಗೂ ಅಪಾಯಕಾರಿ. ಹಾಗಾಗಿ ಕೀಟನಾಶಕಕ್ಕೆ ರಾಸಾಯನಿಕ ಬಳಕೆ ಕಡಿಮೆ ಜೈವಿಕ ಉತ್ಪನ್ನ ಬಳಕೆ ಹೆಚ್ಚಿಸುವ ಉದ್ದೇಶ ನಿಷೇಧದ ಹಿಂದಿದೆ. ಆದರೆ ಅಗ್ಗದ ದರದ ಈ ದೇಸಿ ರಾಸಾಯನಿಕ ನಿಷೇಧಿಸಿ ವಿದೇಶಿ ಕಂಪನಿಗಳಿಗೆ ಮಣೆ ಹಾಕಿದರೆ ದುಬಾರಿ ಸಾಧ್ಯತೆ ಹೆಚ್ಚಿದೆ. ದೇಸಿ ಉತ್ಪಾದನೆಗೆ ಹೊಡೆತ ಬೀಳಲಿದೆ. ವಿದೇಶಿ ಕಂಪನಿಗಳ ಪಾರಮ್ಯ ಸಾಧಿಸುತ್ತವೆ. ಪರ್ಯಾಯವಾಗಿ ರೈತರು ಅನಿವಾರ್ಯವಾದ ಕೀಟನಾಶಕಗಳಿಗೆ ದುಬಾರಿ ಬೆಲೆಯ ಔಷಧಿಗಳಿಗೆ ಮೊರೆ ಹೋಗಬೇಕಾಗುತ್ತದೆ.
ಕೋಲಾರದ ರೈತನಿಂದ ಹೈಟೆಕ್ ಕೃಷಿ: ಮಾರುಕಟ್ಟೆ, ವಹಿವಾಟು ಇಲ್ಲದೆ ಸಂಕಷ್ಟ
ಒಂದೆಡೆ ಈಗ ಕಂಡುಬಂದಿರುವ ಮಿಡತೆಗಳ ಹತ್ಯೆಗೆ ಈ ಕೀಟನಾಶಕಗಳನ್ನೇ ಬಳಸುವಂತೆ ಸೂಚಿಸುತ್ತ, ಇನ್ನೊಂದೆಡೆ ಇವುಗಳ ನಿಷೇಧಕ್ಕೆ ಪ್ರಸ್ತಾವನೆ ಸಲ್ಲಿಸುತ್ತ ಕೇಂದ್ರ ಸರಕಾರ ದ್ವಂದ್ವ ನಿಲುವು ವ್ಯಕ್ತಪಡಿಸುತ್ತಿದೆ. ನಿಷೇಧ ಪ್ರಸ್ತಾವನೆಗೆ ನಾವು ಆಕ್ಷೇಪಣೆ ಸಲ್ಲಿಸಲಿದ್ದೇವೆ.
- ಸಿದ್ದಪ್ಪ ರೆಡ್ಡಿ, ಅಧ್ಯಕ್ಷರು, ಕರ್ನಾಟಕ ಕೀಟನಾಶಕ ಉತ್ಪಾದಕರ ಸಂಘ(ಕೆಪಿಎಂಎ)
ಜನರಿಕ್ ಕೀಟನಾಶಕಗಳ ನಿಷೇಧ ಮಾಡಿದರೆ ಹೊಸ ಉತ್ಪನ್ನಗಳಿಗೆ ಒಗ್ಗಿಕೊಳ್ಳಲು ರೈತರಿಗೆ ಒಂದಷ್ಟು ಕಾಲಾವಕಾಶ ಬೇಕಾಗಬಹುದು. ಆದರೆ ಭವಿಷ್ಯದ ದೃಷ್ಟಿಯಿಂದ ಗಮನಿಸಿದರೆ ಕೀಟನಾಶಕಗಳ ನಿಷೇಧ ಉತ್ತಮ ನಿರ್ಧಾರ.
- ವೆಂಕಟರಾಮ ರೆಡ್ಡಿ ಪಾಟೀಲ್, ಅಪರ ಕೃಷಿ ನಿರ್ದೇಶಕರು
ಆಯ್ದ ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧಾರ ಮಾಡಿದೆ. ಸದ್ಯ ಈ ಕುರಿತ ಪ್ರಸ್ತಾವನೆ ಸಾರ್ವಜನಿಕ ಡೊಮೈನ್ನಲ್ಲಿದ್ದು, ಅಭಿಪ್ರಾಯ ಹಾಗೂ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ.
- ಡಿ.ವಿ. ಸದಾನಂದಗೌಡ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು
ಗಡಿ ಕ್ಯಾತೆ ತೆಗೆದು ಲಡಾಖ್ನಲ್ಲಿ ಸಮಸ್ಯೆ ಸೃಷ್ಟಿಸಿರುವ ಚೀನಾದೊಂದಿಗೆ ಭಾರತ ನಿರ್ದಿಷ್ಟ ಯೋಜನೆಗಳೊಂದಿಗೆ ವ್ಯವಹರಿಸುತ್ತಿದೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳಿಗೆ ಮಹತ್ವ ನೀಡಿರುವ ಭಾರತ, ಇವುಗಳ ಆಧಾರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ಇಟ್ಟುಕೊಂಡಿದೆ. ಚೀನಾದೊಂದಿಗೆ ಗಡಿ ಸಮಸ್ಯೆ ಆರಂಭವಾದಾಗಿನಿಂದಲೂ ಸಂಯಮದಿಂದಲೇ ವರ್ತಿಸುತ್ತಿರುವ ಭಾರತ, ಗಡಿ ಸುರಕ್ಷತೆಗೆ ಒತ್ತು ನೀಡುವುದರ ಜೊತೆಗೆ ಚೀನಾದೊಂದಿಗೆ ರಾಜತಾಂತ್ರಿಕ ಮಾತುಕತೆಗಳಿಗೆ ಹೆಚ್ಚಿನ ಮಹತ್ವ ನೀಡಿದೆ. ಗಡಿ ಸಮಸ್ಯೆಯನ್ನು ಶಾಂತಿಯುತವಾಗಿಯೇ ಬಗೆಹರಿಸುವ ಇರಾದೆ ಹೊಂದಿರುವ ಭಾರತ, ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಮತ್ತೊಂದೆಡೆ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೈನ್ಯ ಜಮಾವಣೆಗೊಳಿಸಿರುವ ಚೀನಾ, ರಾಜತಾಂತ್ರಿಕ ಮಾತುಕತೆ ನಡೆಸುತ್ತಿದೆಯಾದರೂ, ಗಡಿಯಿಂದ ಸೇನೆಯನ್ನು ಹಿಂಪಡೆಯುವ ಕುರಿತು ಸ್ಪಷ್ಟನೆ ನೀಡಿಲ್ಲ. ಈ ಮಧ್ಯೆ ಚೀನಾದೊಂದಿಗೆ ಮಿಲಿಟರಿ ಹಾಗೂ ರಾಜತಾಂತ್ರಿಕ ಮತುಕತೆಗಳು ಮುಂದುವರೆದಿವೆ ಎಂದು ಹೇಳಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗಡಿ ಸಮಸ್ಯೆ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಕುರಿತಾದ ಇದುವರೆಗಿನ ಬೆಳವಣಿಗೆಗಳನ್ನು ಗಮನಿಸುವುದಾದರೆ..ಭಾರತ-ಚೀನಾ ಗಡಿ ಸಮಸ್ಯೆ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗಡಿ ಸಮಸ್ಯೆ ಕುರಿತು ಚೀನಾದೊಂದಿಗೆ ಮಿಲಿಟರಿ ಹಾಗೂ ರಾಜತಾಂತ್ರಿಕ ಮಾತುಕತೆಗಳು ಮುಂದುವರೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಡಿಯಲ್ಲಿ ಉಭಯ ಸೇನೆಯ ಹಿರಿಯ ಸೇನಾಧಿಕಾರಿಗಳು ನಿರಂತರವಾಗಿ ಮಾತುಕತೆಯಲ್ಲಿ ತೊಡಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರವಹಿಸಿದ್ದಾರೆ. ಇತ್ತ ರಾಜತಾಂತ್ರಿಕ ಶಾಂತಿ ಮಾತುಕತೆಗಳೂ ವೇಗ ಪಡೆದುಕೊಂಡಿವೆ ಎಂದು ರಾಜನಾಥ್ ಹೇಳಿದ್ದಾರೆ.
ಚೀನಾದೊಂದಿಗೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ: ರಾಜನಾಥ್ ಸಿಂಗ್!
ಅಲ್ಲದೇ ಚೀನಾದೊಂದಿಗಿನ ಗಡಿ ಸಮಸ್ಯೆ ಶೀಘ್ರದಲ್ಲೇ ಇತ್ಯರ್ಥವಾಗಲಿದ್ದು, ದ್ವಿಪಕ್ಷೀಯ ಮಾತುಕತೆ ಫಲಪ್ರದವಾಗಲಿದೆ ಎಂದು ರಾಜನಾಥ್ ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನು ಭಾರತ-ಚೀನಾ ನಡುವೆ ಉದ್ಭವವಾಗಿರುವ ಗಡಿ ಬಿಕ್ಕಟ್ಟನ್ನು ಪರಿಹರಿಸಲು ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಟ್ರಂಪ್ ಮಧ್ಯಸ್ಥಿಕೆ ಆಹ್ವಾನವನ್ನು ಭಾರತ-ಚೀನಾ ಎರಡೂ ರಾಷ್ಟ್ರಗಳೂ ತಿರಸ್ಕರಿಸಿವೆ.
ನಮ್ಮಿಮ್ಮರ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಾವಿಬ್ಬರೂ ಸಶಕ್ತರಾಗಿದ್ದೇವೆ ಎಂದು ಚೀನಾ ಖಡಾಖಂಡಿತವಾಗಿ ಟ್ರಂಪ್ ಮಧ್ಯಸ್ಥಿಕೆ ಆಫರ್ನ್ನು ತಿರಸ್ಕರಿಸಿದೆ.
ಸಮಸ್ಯೆ ನಮ್ಮ ನಡುವೆ ಇರುವಾಗ ನೀವೇಕೆ ಬಗೆಹರಿಸುವಿರಿ?: ಟ್ರಂಪ್ ಮಧ್ಯಸ್ಥಿಕೆ ಆಫರ್ ತಿರಸ್ಕರಿಸಿದ ಚೀನಾ!
ಈ ವಿಚಾರವಾಗಿ ತುಸು ನಯವಾಗಿ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ದ್ವಿಪಕ್ಷೀಯ ಮಾತುಕತೆಗಳ ಮೂಲಕವೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲಾಗುವುದು ಅಮೆರಿಕ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಸ್ಪಷ್ಟಪಡಿಸಿರುವುದಾಗಿ ಹೇಳಿದ್ದಾರೆ.
ಸದ್ಯ ಉದ್ಭವವಾಗಿರುವ ಗಡಿ ಸಮಸ್ಯೆಯನ್ನು ರಾಜತಾಂತ್ರಿಕ ಶಾಂತಿ ಮಾತುಕತೆಗಳ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂಬ ಸತ್ಯವನ್ನು ಎರಡೂ ರಾಷ್ಟ್ರಗಳು ಚೆನ್ನಾಗಿ ಬಲ್ಲವು. ಇದೇ ಕಾರಣಕ್ಕೆ ಭಾರತದ ಶಾಂತಿ ಮಾತುಕತೆಗಳಿಗೆ ಚೀನಾ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ.
ಒಂಟಿಯಾಗುತ್ತಿದೆ ಚೀನಾ: ಸೈಲೆಂಟಾಗಿಯೇ ಅಮೆರಿಕ ಬೆಂಬಲ ಗಿಟ್ಟಿಸಿಕೊಂಡ ಮೋದಿ!
ಆದರೆ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಜಮಾವಣೆಗೊಂಡಿರುವ ಸೈನ್ಯವನ್ನು ವಾಪಸ್ ಪಡೆಯುವ ಕುರಿತು ಚೀನಾ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಇದೇ ಕಾರಣಕ್ಕೆ ಭಾರತ ಕೂಡ ಗಡಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದೆ. ಆದರೆ ಮುಂದಿನ ಮಾತುಕತೆಗಳಲ್ಲಿ ಸೈನ್ಯವನ್ನು ವಾಪಸ್ ಕರೆಸಿಕೊಳ್ಳುವ ಕುರಿತು ಮಾತುಕತೆಗಳು ನಡೆದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಭಾರತ-ಚೀನಾ ನಡುವಿನ ಗಡಿ ಸಮಸ್ಯೆ ಉಲ್ಬಣಗೊಂಡ ದಿನದಿಂದ, ಭಾರತ ಈ ಕುರಿತು ನೀಡುತ್ತಿರುವ ಎಚ್ಚರಿಕೆಯ ಹೇಳಿಕೆಗಳು ವಿಶ್ವದ ಗಮನ ಸೆಳೆದಿವೆ. ಪ್ರಮುಖವಾಗಿ ಗಡಿಯಲ್ಲಿ ಚೀನಿ ಸೈನಿಕರ ಉದ್ರೇಕಕಾರಿ ವರ್ತನೆಯ ಹೊರತಾಗಿಯೂ ಭಾರತೀಯ ಸೈನಿಕರು ತಮ್ಮ ಸಂಯಮವನ್ನು ಕಾಪಾಡಿಕೊಂಡಿರುವುದು ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
'ಗಡಿ'ಬಿಡಿ ಚೀನಾಗೆ ಬೇಡುವ ಪರಿಸ್ಥಿತಿ ಬರಲಿದೆ: ಮೋದಿ ಸಭೆಯಲ್ಲಿ ಫೈನಲ್ ಸ್ಟ್ಯಾಟರ್ಜಿ!
ಸೇನೆಯಂತೆ ಸರ್ಕಾರ ಕೂಡ ಸಂಯಮದ ವರ್ತನೆಯನ್ನೇ ತೋರುತ್ತಿದ್ದು, ರಾಜತಾಂತ್ರಿಕ ಶಾಂತಿ ಮಾತುಕತೆಗಳಿಗೆ ಮನ್ನಣೆ ನೀಡಿದೆ. ಆದರೆ ಯಾವುದೇ ಕಾರಣಕ್ಕೆ ಭಾರತದ ಸಾರ್ವಭೌಮತ್ವ ಮತ್ತು ಗಡಿ ಸುರಕ್ಷತೆಗೆ ಕಿಂಚಿತ್ತೂ ಧಕ್ಕೆ ಬಾರದಂತೆ ಸರ್ಕಾರ ಈ ನಿಟ್ಟಿನಲ್ಲಿ ಮುಂದುವರೆಯುತ್ತಿರುವುದು ಸ್ಪಷ್ಟ.
ಹೊಸದಿಲ್ಲಿ: ಕಳೆದ ಮಾರ್ಚ್ನಲ್ಲಿ ಬರ ಸಿಡಿಲಿನಂತೆ ಭಾರತಕ್ಕೆ ಕೊರೊನಾ ವೈರಸ್ ಅಪ್ಪಳಿಸಿದ್ದು, ಕೋವಿಡ್-19 ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಭಾರತ ಸರಕಾರ ವಿವಿಧ ಹಂತಗಳಲ್ಲಿ ಲಾಕ್ಡೌನ್ ಜಾರಿಗೆ ತಂದಿತ್ತು. ಇದೀಗ ವೈರಸ್ನಿಂದಾಗಿ ದೇಶದ ಆರ್ಥಿಕತೆಗೆ ಇನ್ನಿಲ್ಲದ ಹೊಡೆತ ಕೂಡ ಬಿದ್ದಿರುವ ಕಾರಣ, ಹಂತ ಹಂತವಾಗಿ ಜನಜೀವನವನ್ನು ಯಥಾಸ್ಥಿತಿಗೆ ತರಲು ಕಠಿಣ ನಿಯಮಗಳೊಂದಿಗೆ 'ಅನ್ಲಾಕ್' ಅಸ್ತ್ರ ಬಳಕೆ ಮಾಡಲು ಮುಂದಾಗಿದೆ. ಮೇ 31ಕ್ಕೆ ಲಾಕ್ಡೌನ್ 4.0 ಅಂತ್ಯಗೊಳ್ಳಲಿದ್ದು, ಜೂನ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ಕೇಂದ್ರ ಗೃಹಸಚಿವಾಲಯ ಘೋಷಿಸಿದೆ. ಇದರ ಪ್ರಕಾರ ಇನ್ನು ಮುಂದೆ ಲಾಕ್ಡೌನಮ್ ನಿಯಮಗಳು ಕೇವಲ ಕಂಟೈನ್ಮೆಂಟ್ ವಯಲಗಳಲ್ಲಿ ಮಾತ್ರ ಜೂನ್ 30ರವರೆಗೆ ಮುಂದುವರಿಯಲಿದೆ. ಕಂಟೈನ್ಮೆಂಟ್ ಅಲ್ಲದೇ ಇರುವ ವಲಯಗಳಲ್ಲಿ ಜೂನ್ 8ರ ಬಳಿಕ ಜನಜೀವನ ಹಂತ ಹಂತವಾಗಿ ಕಟ್ಟುನಿಟ್ಟಿನ ನಿಯಮಗಳೊಂದಿಗೆ ಯಥಾಸ್ಥಿತಿಗೆ ಮರಳಲಿದೆ ಎಂದು ಗೃಹಸಚಿವಾಲಯ ಹೇಳಿದೆ.ಟ್ವಿಟರ್ ಖಾತೆಗೆ ಕನ್ನ, ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ಪಾಕ್ನ ಮಾಜಿ ನಾಯಕ!"ಧಾರ್ಮಿಕ ಸ್ಥಳಗಳು, ಪ್ರಾರ್ಥನಾ ಮಂದಿರಗಳಿಗೆ ಸಾರ್ವಜನಿಕರು ಪ್ರವೇಶಿಸಬಹುದು. ಹೋಟೆಲ್ ಮತ್ತು ರೆಸ್ಟೊರೆಂಟ್ಗಳು ಮರಳಿ ಕಾರ್ಯಾಚರಣೆ ಆರಂಭಿಸಲಿವೆ. ಜೂನ್ 8ರ ಬಳಿಕ ಮಾಲ್ಗಳು ಕೂಡ ತೆರೆಯಲಾಗುತ್ತವೆ. ಇಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ಸರಕಾರ ಶೀಘ್ರವೇ ಸರಕಾರ ಬಿಡುಗಡೆ ಮಾಡಲಿದೆ," ಎಂದು ಗೃಹಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ದೇವರು ಎಲ್ಲೆಡೆ ಇದ್ದಾನೆ ಅಲ್ಲವೆ: ಆಕಾಶ್ ಛೋಪ್ರ: ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಆಕಾಶ್ ಛೋಪ್ರ, ಧಾರ್ಮಿಕ ಸ್ಥಳಗಳು ಮತ್ತು ಪ್ರಾರ್ಥನಾ ಮಂದಿರಗಳನ್ನು ತೆರೆಯುವುದರಿಂದ ಹೆಚ್ಚಿನ ಜನರು ಒಟ್ಟಾಗಿ ಸೇರಿ ಸೋಂಕು ಹರಡುವ ಸಾಧ್ಯತೆ ಇದೆ. ಈ ನಿರ್ಧಾರ ಎಷ್ಟು ಸರಿ? ಎಂದು ಪ್ರಶ್ನೆ ಮಾಡಿದ್ದರು. ಇದೇ ವೇಳೆ ಮಾಲ್ಗಳು ಮತ್ತು ರೆಸ್ಟೋರೆಂಟ್ಗಳನ್ನು ತೆರೆಯುವುದರಲ್ಲಿ ಅರ್ಥವಿದೆ. ಇದರಿಂದ ಆರ್ಥಿಕತೆ ಸುಧಾರಣೆಗೆ ನೆರವಾಗುತ್ತದೆ. ಆದರೆ ಧಾರ್ಮಿಕ ಸ್ಥಳಗಳನ್ನು ಮರಳಿ ಆರಂಭಿಸುವುದರಿಂದ ಆಗುವ ಪ್ರಯೋಜನವಾದರೂ ಏನು? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದರು."ಮಾಲ್ಗಳು, ರೆಸ್ಟೋರೆಂಟ್ ಮತ್ತು ಮೊದಲಾದುವುಗಳಿಂದ ಹಣಕಾಸಿನ ವ್ಯವಹಾರ ಸುಧಾರಣೆ ಆಗಲಿದೆ. ಆದ್ದರಿಂದಲೇ ಅವುಗಳನ್ನು ಶಾಶ್ವತವಾಗಿ ಮುಚ್ಚಲು ಸಾಧ್ಯವಿಲ್ಲ. ಆದರೆ ಪ್ರಾರ್ಥನಾ ಸ್ಥಳಗಳನ್ನು ಸಾರ್ವಜನಿಕರಿಗೆ ಮುಕ್ತವನ್ನಾಗಿಸಿರುವುದು ಏಕೆ? ದೇವರು ಎಲ್ಲೆಡೆ ಇದ್ದಾನೆ ಅಲ್ಲವೆ??," ಎಂದು ಛೋಪ್ರ ತಮ್ಮ ಟ್ವೀಟ್ನಲ್ಲಿ ಬರೆದಿದ್ದಾರೆ.ಕೆ.ಎಲ್ ರಾಹುಲ್ ಅವರಿಂದ ಕೊರೊನಾ ವಾರಿಯರ್ಸ್ಗೆ 'ಪೂಮಾ ಶೂ' ಕೊಡುಗೆಭಾರತ ಟೆಸ್ಟ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ಮನ್ ಹಾಗೂ ಜನಪ್ರಿಯ ಕಾಮೆಂಟೇಟರ್ ಆಗಿರುವ ಆಕಾಶ್ ಛೋಪ್ರಾ ಅವರ ಈ ಟ್ವೀಟ್ ಅಭಿಮಾನಿಗಳಿಗೆ ಬೇಸರ ತಂದಿದ್ದು, ಟ್ವಿಟರ್ನಲ್ಲಿ ಹಿಗ್ಗಾಮಗ್ಗ ಜಾಡಿಸಿ ದೇಶದ ಆರ್ಥಿಕತೆಗೆ ಧಾರ್ಮಿಕ ಸ್ಥಳ ಮತ್ತು ಪ್ರಾರ್ಥನಾ ಮಂದಿರಗಳಿಂದಲೂ ಸಾಕಷ್ಟು ನೆರವು ಲಭ್ಯವಾಗುತ್ತಿದೆ ಎಂಬುದರ ಸತ್ಯಾಂಶದ ಅರಿವು ಮೂಡಿಸಿದ್ದಾರೆ.ಧಾರ್ಮಿಕ ಸ್ಥಳಗಳು ಯಾವುದೇ ಕೈಗಾರಿಕೆಗಳಿಗೇನು ಕಡಿಮೆಯಿಲ್ಲ: ಆಕಾಶ್ ಅವರ ಟ್ವೀಟ್ಗೆ ಉತ್ತರಿಸಿರುವ ಅಭಿಮಾನಿಯೊಬ್ಬ ಧಾರ್ಮಿಕ ಕ್ಷೇತ್ರಗಳು ಮತ್ತು ಪ್ರಾರ್ಥನಾ ಮಂದಿರಗಳು ಯಾವುದೇ ಕೈಗಾರಿಕೆಗಳಿಗೆ ಏನೂ ಕಡಿಮೆ ಇಲ್ಲ ಎಂದಿದ್ದಾನೆ. "ಸರ್, ಎಲ್ಲ ರೀತಿಯ ಗೌರವದೊಂದಿಗೆ ಹೇಳುವುದೇನೆಂದರೆ ಧಾರ್ಮವು ಯಾವುದೇ ಕೈಗಾರಿಕೆಗಿಂತ ಕಡಿಮೆಯೇನಿಲ್ಲ. ಇಲ್ಲಿ ಎಲ್ಲ ರೀತಿಯ ಕೆಲಸಗಾರರಿದ್ದಾರೆ, ವ್ಯಾಪಾರಿಗಳಿದ್ದಾರೆ ಮತ್ತು ಸರಕು ಸಾಗಣಿಕೆಯ ಕೆಲಸಗಾರರಿದ್ದಾರೆ. ಬಹುತೇಕ ಧಾರ್ಮಿಕ ಸ್ಥಳಗಳು ಉಳಿದಿರುವಿದೇ ಇವುಗಳಿಂದ. ಅವರು ಕೂಡ ಧಾರ್ಮಿಕ ಸ್ಥಳಗಳನ್ನೇ ಅವಲಂಬಿಸಿದ್ದಾರೆ ಕೂಡ. ಈ ಬಗ್ಗೆಯೂ ನಾವು ಆಲೋಚಿಸಬೇಕಾಗುತ್ತದೆ ಅಲ್ಲವೆ," ಎಂದು ಆಕಾಶ್ ಛೋಪ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ.ಇಂಗ್ಲೆಂಡ್ ಪ್ರವಾಸಕ್ಕೆ ಗ್ರೀನ್ ಸಿಗ್ನಲ್ ನೀಡಿದ ಕ್ರಿಕೆಟ್ ವೆಸ್ಟ್ ಇಂಡೀಸ್ಎಲ್ಲರಿಂದಲೂ ಆರ್ಥಿಕತೆಗೆ ಕೊಡುಗೆ ಲಭ್ಯವಾಗುತ್ತಿದೆ!: ಛೋಪ್ರಾ ಅವರ ಟ್ವೀಟ್ನಿಂದ ಅಭಿಮಾನಿಗಳ ಧಾರ್ಮಿಕ ಭಾವನೆಗೆ ಪೆಟ್ಟಾದಂತಿದ್ದು, ಒಬ್ಬಾತ ಆಕಾಶ್ ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ ಎಂದಿದ್ದಾರೆ. "ಆಕಾಶ್ ನಿಮ್ಮಿಂದ ಈ ರೀತಿಯ ಏಕಮುಖವಾದ ಹೇಳಿಕೆಯನ್ನು ನಿರೀಕ್ಷಿಸರಲಿಲ್ಲ. ಮಂದಿರಗಳು ಆಫೀಸ್ ಮಾದರಿಯಲ್ಲಿ ಇಲ್ಲದೇ ಇರಬಹುದು. ಆದರೆ ಹಲವು ಕುಟುಂಬಗಳು ತಮ್ಮ ಜೀವನ ಸಲುವಾಗಿ ಮಂದಿರಗಳನ್ನೇ ಆಧಾರಿಸಿವೆ. ಹೂವು ಮಾರುವವರು, ಪ್ರಸಾದದ ಅಂಗಡಿಯವರು, ಪಂಡಿತರು ಹೀಗೆ ಎಲ್ಲರ ಜೀವನ ಇದ್ನನೇ ಆಧರಿಸಿದೆ. ಜೀವಿಸುತ್ತಿರುವ ಪ್ರತಿಯೊಬ್ಬರು ಕೂಡ ಭಾರತದ ಆರ್ಥಿಕತೆಗೆ ಕೊಡುಗೆ ಸಲ್ಲಿಸುತ್ತಿದ್ದಾನೆ," ಎಂದು ಜಾಡಿಸಿದ್ದಾರೆ.ಮಾಲ್ಗಳಿಂದ ಸೋಂಕು ಹರಡುವುದಿಲ್ಲವೆ?: ಮತ್ತೊಬ್ಬ ಅಭಿಮಾನಿ ಆಕಾಶ್ಗೆ ಹಲವು ಪ್ರಶ್ನೆಗಳ ಬೌನ್ಸರ್ಗಳನ್ನೇ ಎಸೆದಿದ್ದಾನೆ. "ಆಯ್ತು ಸರ್, ಹಾಗಿದ್ದರೆ ಮಾಲ್ ಮತ್ತು ರೆಸ್ಟೋರೆಂಟ್ಗಳನ್ನು ತೆರೆಯುವುದೇಕೆ? ಎಲ್ಲವನ್ನೂ ಈಗ ಆನ್ ಲೈನ್ ಮೂಲಕ ಖರೀದಿಸಬಹುದಲ್ಲವೆ. ಹಾಗೆಯೆ ಬೇಕ್ಕಾದ ಆಹರ ಪದಾರ್ಥಗಳನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿ ಪಡೆಯಬಹುದು. ಸಿನಿಮಾ ಎಲ್ಲವೂ ಇಂದು ಆನ್ಲೈನ್ನಲ್ಲಿ ಲಭ್ಯವಾಗುತ್ತಿವೆ. ಇನ್ನು ಧಾರ್ಮಿಕ ಸ್ಥಳಗಳನ್ನು ತೆರೆಯಬೇಕು ಏಕೆಂದರೆ ಅದು ನಮ್ಮ ಸಂಕೃತಿ. ಮಾಲ್ಗಳು ನಮ್ಮ ಸಂಸ್ಕೃತಿಯಲ್ಲ," ಎಂದು ಆಕಾಶ್ಗೆ ತಿಳಿಸಿಕೊಟ್ಟಿದ್ದಾರೆ.
Malls, Restuarants etc. have financial implications...and perhaps, that’s why it’s not feasible to keep them shut f… https://t.co/AohVSpsnqd
— Aakash Chopra (@cricketaakash) 1590851869000
@cricketaakash Okay then sir Why to open malls, resto etc then? You can order the stuff you get in mall online And… https://t.co/Q99s8xsh1x
— SMVAIDYA (@SmitVaidya2) 1590859875000
@cricketaakash Akash..Didn't expected such one-sided thinking from you. Temples might not be like offices, but many… https://t.co/evBUpmW22R
— Home Sapiens (@athomosapien) 1590852432000
@cricketaakash Sir, with due respect the religion is not less than any industry. All the workers, buisness man, tra… https://t.co/atW87Rdcr9
— Saurav Malla (@SauravMalla7) 1590852166000
ಅಮೆರಿಕದಲ್ಲಿ ಕಪ್ಪು ವರ್ಣೀಯರ ಮೇಲೆ ಜನಾಂಗೀಯ ದಾಳಿಗಳು ಹೆಚ್ಚುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ಭುಗಿಲೆದ್ದಿದೆ. ಪೊಲೀಸ್ ಅಧಿಕಾರಿಯ ದರ್ಪದ ವರ್ತನೆ ಪರಿಣಾಮವಾಗಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೃತಪಟ್ಟ ಬಳಿಕ, ಪ್ರಮುಖ ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಲಾಸ್ ಎಂಜಲೀಸ್, ಚಿಕಾಗೋ, ಮಿನ್ನಿಯಾಪೊಲೀಸ್ ಸೇರಿದಂತೆ ಅಮೆರಿಕದ ಪ್ರಮುಖ ನಗರಗಳಲ್ಲಿ ಕರ್ಫ್ಯೂ ಹೇರಲಾಗಿದ್ದು, ಎಲ್ಲೆಡೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವನ್ನು ದುರಂತ ಎಂದು ಬಣ್ಣಿಸಿರುವ ಟ್ರಂಪ್, ಇದೇ ಘಟನೆಯನ್ನು ನೆಪ ಮಾಡಿಕೊಂಡು ಪ್ರತಿಭಟನೆ ಹೆಸರಲ್ಲಿ ಲೂಟಿಕೋರರು ಅರಾಜಕತೆ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದೂ ಕಿಡಿಕಾರಿದ್ದಾರೆ. ಸದ್ಯ ಜಾರ್ಜ್ ಪ್ಲಾಯ್ಡ್ ಸಾವಿಗೆ ಕಾರಣವಾಗಿರುವ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್ನನ್ನು ಕೊಲೆ ಪ್ರಕರಣದಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಘಟನೆಯ ಕುರಿತಾದ ಬೆಳವಣಿಗೆಗಳತ್ತ ಗಮನಹರಿಸುವುದಾದರೆ...ಅಮೆರಿಕದ ಮಿನ್ನಿಯಾಪೊಲೀಸ್ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಬಂಧಿಸಿದ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್, ವಿನಾಕಾರಣ ಜಾರ್ಜ್ಗೆ ಹಿಂಸೆ ನೀಡಿ ಆತನ ಸಾವಿಗೆ ಕಾರಣವಾಗಿದ್ದ. ಕಪ್ಪು ವರ್ಣೀಯರ ವಿರುದ್ಧ ಡೆರಿಕ್ಗಿದ್ದ ಜನಾಂಗೀಯ ದ್ವೇಷವೇ ಜಾರ್ಜ್ ಸಾವಿಗೆ ಕಾರಣ ಎಂದು ಅಂದಾಜಿಸಲಾಗಿದೆ.
ಜನಾಂಗೀಯ ದ್ವೇಷದಲ್ಲಿ ಹತ್ಯೆ ಆರೋಪ, ಅಮೆರಿಕಾದಲ್ಲಿ ಭುಗಿಲೆದ್ದ ಆಕ್ರೋಶ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೇ ಮಿನ್ನಿಯಾಪೊಲೀಸ್ನಲ್ಲಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟನೆ ಆರಂಭಿಸಿದ್ದರು. ಇದೀಗ ಅಮೆರಿಕದ ಇತರೆಡೆಯೂ ಈ ಪ್ರತಿಭಟನೆ ಭುಗಿಲೆದ್ದಿದ್ದು, ತೀವ್ರ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿದೆ.
ಇನ್ನು ಮಿನ್ನಿಯಾಪೊಲೀಸ್ನಲ್ಲಿ ಆರಂಭವಾದ ಜನಾಂಗೀಯ ಪ್ರತಿಭಟನೆ ಅಮೆರಿಕದ ಪ್ರಮುಖ ನಗರಗಳಿಗೂ ಹಬ್ಬಿದೆ. ಲಾಸ್ ಎಂಜಲೀಸ್, ಚಿಕಾಗೋ ಮುಂತಾದ ಪ್ರಮುಖ ನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಪೊಲೀಸರೊಂದಿಗೆ ಘರ್ಷಣೆಯೂ ಸಂಭವಿಸಿದೆ.
ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದಂತೇ ಈ ನಗರಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ. ಆದರೂ ಕರ್ಫ್ಯೂ ಉಲ್ಲಂಘಿಸಿ ಜನ ರಸ್ತೆಗಿಳಿದು ಹಿಂಸಾತ್ಮಕ ಪ್ರತಿಭಟನೆಯಲ್ಲಿ ನಿರತರಾಗಿದ್ದಾರೆ.
ಸದ್ಯ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿಗೆ ಕಾರಣವಾಗಿರುವ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್ನನ್ನು ಬಂಧಿಸಿರುವ ಪೊಲೀಸರು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನು ಕಪ್ಪಿ ವರರ್ಣೀಯ ಜಾರ್ಜ್ ಫ್ಲಾಯ್ಡ್ ಸಾವನ್ನು ದುರಂತ ಬಣ್ಣಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಪ್ಪಿತಸ್ಥ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮದ ಭರವಸೆ ನೀಡಿದ್ದಾರೆ. ಅಲ್ಲದೇ ಹಿಂಸಾತ್ಮಕ ಪ್ರತಿಭಟನೆಯನ್ನು ಕೈಬಿಟ್ಟು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.
ಇದೇ ವೇಳೆ ಹಿಂಸಾತ್ಮಕ ಪ್ರತಿಭಟನೆಯಲ್ಲಿ ತೊಡಗಿರುವವರನ್ನು ಲೂಟಿಕೋರರು ಎಂದು ಕರೆದಿರುವ ಟ್ರಂಪ್, ಘಟನೆಯನ್ನೇ ನೆಪ ಮಾಡಿಕೊಂಡು ಅರಾಜಕತೆ ಸೃಷ್ಟಿಸಲು ಕೆಲವರು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳುವ ಯಾರೇ ಆದರೂ ಅವರ ವಿರುದ್ಧ ಕಠಿಣ ಕ್ರಮ ಶತಸಿದ್ಧ ಎಂದೂ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದಲ್ಲಿ ಕಪ್ಪು ವರ್ಣಿಯ ವಿರುದ್ಧದ ತಾರತಮ್ಯ ನೀತಿ ಮತ್ತು ದೌರ್ಜನ್ಯಕ್ಕೆ ಶತಮಾನಗಳ ಇತಿಹಾಸವಿದೆ. ಗುಲಾಮರಾಗಿ ದೇಶಕ್ಕೆ ಬಂದ ಕಪ್ಪು ವರ್ಣೀಯರನ್ನು ತಮ್ಮ ಸಮಾನ ಎಂದು ಒಪ್ಪಿಕೊಳ್ಳಲು ಅಮೆರಿಕದ ಕೆಲವು ಶ್ವೇತ ವರ್ಣಪರ ಜನ ಒಪ್ಪಿಕೊಳ್ಳಲು ಸಿದ್ಧರಿಲ್ಲ.
ಇದೇ ಕಾರಣಕ್ಕೆ ಆಗಾಗ ಕಪ್ಪು ಹಾಗೂ ಶ್ವೇತ ವರ್ಣಿಯರ ನಡುವೆ ಹಿಂಸಾತ್ಮಕ ಘರ್ಷಣೆಗಳು ಸಂಭವಿಸುವುದುಂಟು. ಅಮೆರಿಕದಲ್ಲಿ ಕಪ್ಪು ವರ್ಣೀಯರ ವಿರುದ್ಧ ನಡೆಯುತ್ತಿದ್ದ ದೌರ್ಜನ್ಯ ಖಂಡಿಸಿ ಮಾರ್ಟಿನ್ ಲೂಥರ್ ಕಿಂಗ್ ನೇತೃತ್ವದಲ್ಲಿ ಬೃಹತ್ ಚಳುವಳಿಯೇ ನಡೆದಿರುವುದನ್ನು ಇಲ್ಲಿ ಸ್ಮರಿಸಬಹುದು.
ಸದ್ಯ ಅಮೆರಿಕದಲ್ಲಿ ಕಪ್ಪು ವರ್ಣೀಯರೂ ಸಮಾನ ಅಧಿಕಾರವನ್ನು ಪಡೆದಿರುವುದು ನಿಜವಾದರೂ ಆಗಾಗ ಈ ಎರಡೂ ಸಮದಾಯಗಳ ನಡುವೆ ಘರ್ಷಣೆ ಸಂಭವಿಸುವುದುಂಟು. ಟ್ರಂಪ್ ಆಡಳಿತಾವಧಿಯಲ್ಲಿ ದೇಶದ ಹಲವು ಭಾಗಗಳಲ್ಲಿ ಕಪ್ಪು ವರ್ಣಿಯರ ಮೇಲೆ ದಾಳಿಗಳು ನಡೆದಿವೆ.
ಹೊಸದಿಲ್ಲಿ: ಲಾಕ್ಡೌನ್ 5.0 ಮಾರ್ಗಸೂಚಿಗಳನ್ನು ಕೇಂದ್ರ ಗೃಹ ಇಲಾಖೆ ಶನಿವಾರ ಬಿಡುಗಡೆ ಮಾಡಿದ್ದು, ಕಂಟೈನ್ಮೆಂಟ್ ಝೋನ್ಗಳಲ್ಲಿ ಜೂನ್ 30ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ಉಳಿದ ಕಡೆಗಳಲ್ಲಿ ಹಂತ ಹಂತವಾಗಿ ಚಟುವಟಿಕೆಗಳನ್ನು ಆರಂಭಿಸುವಂತೆ ಮಾರ್ಗಸೂಚಿಯಲ್ಲಿ ಹೇಳಲಾಗಿದೆ.ಲಾಕ್ಡೌನ್ ಮುಖ್ಯಾಂಶಗಳೆಂದರೆ ಜೂನ್ 8ರಿಂದ ಹೋಟೆಲ್, ಮಾಲ್, ಧಾರ್ಮಿಕ ಸ್ಥಳಗಳು ಸಾರ್ವಜನಿಕರಿಗೆ ತೆರೆಯಲಿವೆ. ಶಾಲಾ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಜುಲೈನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಂತಾರಾಷ್ಟ್ರೀಯ ವಿಮಾನ, ಥಿಯೇಟರ್, ಜಿಮ್ ಸದ್ಯಕ್ಕೆ ಆರಂಭವಾಗಲ್ಲ. ಅಂತಾರಾಜ್ಯ ಪ್ರಯಾಣಿಕರಿಗೆ ಯಾವುದೇ ಇನ್ನು ಮುಂದೆ ಯಾವುದೇ ಪಾಸ್ಗಳ ಅಗತ್ಯವಿರುವುದಿಲ್ಲ. ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ 'ಅನ್ಲಾಕ್ 1'ರ ಮಾರ್ಗಸೂಚಿಗಳು ಈ ಕೆಳಗಿನಂತಿವೆ.ಮೊದಲ ಹಂತದಲ್ಲಿ ಜೂನ್ 8ರಿಂದ ಧಾರ್ಮಿಕ ಸ್ಥಳಗಳು, ಶಾಪಿಂಗ್ ಮಾಲ್, ಹೋಟೆಲ್ - ರೆಸ್ಟೋರೆಂಟ್ ಮತ್ತು ಆತಿಥ್ಯ ಸೇವೆಗಳನ್ನು (ಲಾಡ್ಜ್, ರೆಸಾರ್ಟ್) ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರತ್ಯೇಕವಾಗಿ ಬಿಡುಗಡೆ ಮಾಡಲಿದೆ ಎಂದು ಗೃಹ ಇಲಾಖೆ ಹೇಳಿದೆ.
ಶಾಲೆ, ಕಾಲೇಜು, ಶೈಕ್ಷಣಿಕ ಸಂಸ್ಥೆಗಳು, ಕೋಚಿಂಗ್ ಸೆಂಟರ್ಗಳನ್ನು ತೆರೆಯುವ ಬಗ್ಗೆ ಜುಲೈನಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಇಲಾಖೆ ಹೇಳಿದೆ. ರಾಜ್ಯಗಳು ಮತ್ತು ಕೇಂದ್ರಾಡಾಳಿತ ಪ್ರದೇಶಗಳ ಜೊತೆ ಸಮಾಲೋಚನೆ ನಡೆಸಿ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ.
ಈ ತೀರ್ಮಾನ ತೆಗೆದುಕೊಳ್ಳುವ ಮೊದಲು ಶಾಲೆ-ಕಾಲೇಜುಗಳನ್ನು ತೆರೆಯುವ ಸಂಬಂಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಸರಕಾರಗಳು ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಜೊತೆ ಸಮಾಲೋಚನೆ ನಡೆಸಬಹುದು ಎಂದು ಸೂಚಿಸಲಾಗಿದೆ.
ಪರಿಸ್ಥಿತಿಯನ್ನು ಅವಲೋಕಿಸಿ ಅಂತಾರಾಷ್ಟ್ರೀಯ ವಿಮಾನ, ಮೆಟ್ರೋ ರೈಲು, ಸಿನಿಮಾ ಮಂದಿರಗಳು, ಜಿಮ್, ಈಜುಕೊಳಗಳನ್ನು ತೆರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದಾಗಿ ಸರಕಾರ ಹೇಳಿದೆ. ಇದರ ಜೊತೆಗೆ ಸಾಮಾಜಿಕ, ರಾಜಕೀಯ ಮತ್ತು ಧಾರ್ಮಿಕ ಕಾರ್ಯಕ್ರಮಗಳು, ಕ್ರೀಡಾಕೂಟಗಳು ಹಾಗೂ ಮನರಂಜನಾ ಕಾರ್ಯಕ್ರಮಗಳಿಗೆ ಅನುಮತಿ ನೀಡುವ ಬಗ್ಗೆ ಸದ್ಯಕ್ಕೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಜೂನ್ 30ರ ವರೆಗೆ ಕಂಟೈನ್ಮೆಂಟ್ ಝೋನ್ಗಳಲ್ಲಿ ಲಾಕ್ಡೌನ್ ಎಂದಿನಂತೆ ಮುಂದುವರಿಯಲಿದೆ. ಈ ಪ್ರದೇಶದಿಂದ ಹೊರಗೆ ಮತ್ತು ಒಳಗೆ ಜನ ಓಡಾಡದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ನಿರ್ಬಂಧಿತ ಪ್ರದೇಶದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಸಚಿವಾಲಯ ಕಟ್ಟಪ್ಪಣೆ ಹೊರಡಿಸಿದೆ. ಈ ಪ್ರದೇಶಗಳಲ್ಲಿ ಮನೆ ಮನೆ ಸಮೀಕ್ಷೆ, ಸಂಪರ್ಕಿತರ ತೀವ್ರ ಶೋಧ ನಡೆಸುವಂತೆಯೂ ಹೇಳಲಾಗಿದೆ.
ಕಂಟೈನ್ಮೆಂಟ್ ಝೋನ್ ಹೊರಗೆ ಬೇಕಿದ್ದರೆ ರಾಜ್ಯ ಸರಕಾರಗಳು ಬಫರ್ ಜೋನ್ ಗುರುತು ಮಾಡಬಹುದು. ಇದಲ್ಲದೆ ಕಂಟೈನ್ಮೆಂಟ್ ಝೋನ್ ಹೊರತಾಗಿಯೂ ರಾಜ್ಯ ಸರಕಾರಗಳು ಅಗತ್ಯಬಿದ್ದರೆ ಇತರ ಚಟುವಟಿಕೆಗಳಿಗೂ ಕಡಿವಾಣ ಹಾಕಲು ಅವಕಾಶ ನೀಡಲಾಗಿದೆ.
ಅಂತಾರಾಜ್ಯ ಪ್ರಯಾಣಕ್ಕೆ ವ್ಯಕ್ತಿಗಳು ಮತ್ತು ಸರಕು ವಾಹನಗಳಿಗೆ ಯಾವುದೇ ಪಾಸ್ ಅಗತ್ಯವಿರುವುದಿಲ್ಲ. ಆದರೆ ರಾಜ್ಯ ಸರಕಾರಗಳು ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಜನರು ಮತ್ತು ವಾಹನಗಳ ಓಡಾಟದ ಮೇಲೆ ನಿಯಂತ್ರಣ ಹೇರಬಹುದು. ಆದರೆ ಹಾಗೆ ಮಾಡುವ ಮೊದಲು ಈ ಸಂಬಂಧ ಜನರಿಗೆ ಮೊದಲೇ ತಿಳಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.
ಇನ್ನು ಶ್ರಮಿಕ ರೈಲು, ಪ್ರಯಾಣಿಕ ರೈಲು ಮತ್ತು ದೇಶದೊಳಗಿನ ವಿಮಾನಗಳ ನಿಯಂತ್ರಿತ ಸಂಚಾರ ಇರಲಿದೆ. ಯಾವುದೇ ರಾಜ್ಯ ಸರಕಾರಗಳು ಅಕ್ಕ ಪಕ್ಕದ ರಾಷ್ಟ್ರಗಳಿಂದ ಬರುವ ಅಥವಾ ತೆರಳುವ ಸರಕು ವಾಹನಗಳ ಸಂಚಾರವನ್ನು ತಡೆಯುವಂತಿಲ್ಲ ಎಂದು ಆದೇಶಿಸಲಾಗಿದೆ.
ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ಜನರ ಸಂಚಾರವನ್ನು ಕಟ್ಟು ನಿಟ್ಟಾಗಿ ನಿರ್ಬಂಧಿಸಲಾಗಿದೆ. ಈ ಸಂಬಂಧ ಸಿಆರ್ಪಿಸಿ ಸೆಕ್ಷನ್ 144ರ ಅಡಿ ಸ್ಥಳೀಯ ಅಧಿಕಾರಿಗಳು ಅಥವಾ ಸಂಸ್ಥೆಗಳು ನಿಷೇಧಾಜ್ಞೆಯನ್ನೂ ಹೇರಬಹುದು ಎಂದು ಹೇಳಲಾಗಿದೆ.
65 ವರ್ಷ ಮೇಲ್ಪಟ್ಟ ಹಿರಿಯರು, ಗರ್ಭಿಣಿಯರು, 10 ವರ್ಷ ಕೆಳಗಿನ ಮಕ್ಕಳಿಗೆ ತುರ್ತು ಅಗತ್ಯಗಳನ್ನು ಹೊರತುಪಡಿಸಿ ಮನೆಯಲ್ಲೇ ಇರುವಂತೆ ಸೂಚಿಸಲಾಗಿದೆ.
ಆರೋಗ್ಯ ಸೇತು ಆಪ್ನ್ನು ಉದ್ಯೋಗಿಗಳೆಲ್ಲರೂ ಇನ್ಸ್ಟಾಲ್ ಮಾಡಲೇಬೇಕು. ರಾಜ್ಯ ಸರಕಾರಗಳು ಕೇಂದ್ರ ಸರಕಾರ ಹೊರಡಿಸಿರುವ ನಿಯಮಾವಳಿಗಳನ್ನು ಯಾವುದೇ ಕಾರಣಕ್ಕೂ ಸಡಿಲಗೊಳಿಸುವಂತಿಲ್ಲ. ಗೃಹ ಇಲಾಖೆ ಹೊರಡಿಸಿರುವ ನಿಯಮಾವಳಿಗಳನ್ನು ಮೀರುವ ವ್ಯಕ್ತಿಗಳು ಶಿಕ್ಷೆಗೆ ಅರ್ಹರಾಗಿರುತ್ತಾರೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಇನ್ನು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಮದುವೆಗೆ ಗರಿಷ್ಠ 50 ಜನ, ಅಂತ್ಯ ಸಂಸ್ಕಾರಕ್ಕೆ 20 ಜನ ಮಿತಿಯನ್ನು ಮುಂದುವರಿಸಲಾಗಿದೆ. ಜನಸೇರುವ ದೊಡ್ಡ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು, ಗುಟ್ಕಾ ಪಾನ್ ಮಸಾಲ ಸೇವನೆ, ಮದ್ಯ ಸೇವನೆಗೆ ನಿಷೇಧ ಮುಂದುವರಿದಿದೆ.
ಸಾಧ್ಯವಾದಷ್ಟು ವರ್ಕ್ ಫ್ರಂ ಹೋಮ್ ಮುಂದುವರಿಸುವುದು. ಕಚೇರಿಗಳಲ್ಲಿ ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ಬಳಸುವುದು, ಸ್ವಚ್ಛತೆ ಕಾಪಾಡುವುದು, ಆಗಾಗಾ ಕಚೇರಿಗಳನ್ನು ಸ್ಯಾನಿಟೈಸೇಷನ್ ಮಾಡುವಂತೆ ಸೂಚಿಸಲಾಗಿದೆ.
ಕೊರೊನಾ ವೈರಸ್ ಸೋಂಕು ಹಾಗೂ ಲಾಕ್ಡೌನ್ ಕಾರಣದಿಂದ ನಗರದಲ್ಲಿ ಉದ್ಯೋಗ ಕಳೆದುಕೊಂಡ ಹಲವರು ಗ್ರಾಮಾಂತರ ಪ್ರದೇಶಕ್ಕೆ ತೆರಳಿ ಕೃಷಿ, ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಆಸಕ್ತಿ ತೋರುತ್ತಿದ್ದಾರೆ. ಅಂತಹವರ ಪಾಲಿಗೆ ಅಕ್ಷಯಕಲ್ಪ ಹೊಸ ಆಶಾಕಿರಣವಾಗಿದೆ. ಸಾವಯವ ಹಾಲಿನ ಪ್ರಯೋಜನಗಳನ್ನು ಅರಿತವರಿಂದ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಹೈನೋದ್ಯಮ ಅತ್ಯುತ್ತಮ ಆಯ್ಕೆಯಾಗಿದೆ. ಲಾಭದಾಯಕವಾಗಿಸಿಕೊಂಡು, ಉದ್ಯಮಿಯಾಗಿ ಬೆಳೆಯಬೇಕು ಎಂಬ ಗುರಿ ಹೊಂದಿರುವವರಿಗೆ ಅಕ್ಷಯಕಲ್ಪ ಸಂಸ್ಥೆ ಮಾರ್ಗದರ್ಶನ ನೀಡುವ ಮೂಲಕ ಕೃಷಿಗೆ ಒತ್ತು ನೀಡಿ ದಾರಿ ದೀಪವಾಗುತ್ತಿದೆ. ಬೆಂಗಳೂರಿನಲ್ಲಿ ಬೇಡಿಕೆಯಲ್ಲಿರುವ ಸಾವಯವ ಹಾಲಿನ ಶೇ.97ರಷ್ಟು ಮಾರುಕಟ್ಟೆಯನ್ನು ಹೊಂದಿರುವ ಮತ್ತು ಚೆನ್ನೈನಲ್ಲಿ ತನ್ನ ಮಾರುಕಟ್ಟೆ ವಿಸ್ತರಿಸಿರುವ ಅಕ್ಷಯಕಲ್ಪ, ಬರುವ ದಿನಗಳಲ್ಲಿ ಗ್ರಾಹಕರಿಂದ ಮತ್ತಷ್ಟು ಉತ್ತಮ ಸ್ಪಂದನೆಯ ನಿರೀಕ್ಷೆಯಲ್ಲಿದೆ.ಆರ್ಗಾನಿಕ್ ವರ್ಲ್ಡ್, ಸಾರಾ ಆರ್ಗಾನಿಕ್, ಲೂಮಿಯಾ, ನೆಫ್ಲರ್ ಸೂಪರ್ ಮಾರ್ಕೆಟ್, ಫುಡ್ ಹಾಲ್ ಸೇರಿದಂತೆ ಬೆಂಗಳೂರಿನ 256 ಸ್ಟೋರ್ಗಳಲ್ಲಿ ಅಕ್ಷಯಕಲ್ಪ ಹಾಲು ಮತ್ತು ಹಾಲಿನ ಉತ್ಪನ್ನಗಳು ಲಭ್ಯ ಇವೆ. ಹಾಲಿನ ಬೆಲೆ ಇತರೆ ಬ್ರಾಂಡ್ಗಳಿಗಿಂತ ಕಡಿಮೆ ಇದೆ. ಆದರೆ, ಗುಣಮಟ್ಟದಲ್ಲಿ ಮಾತ್ರ ರಾಜಿ ಇಲ್ಲ. ಶುದ್ಧ ಹಾಲು ಮತ್ತು ಸ್ಲಿಮ್ ಹಾಲು ಲಭ್ಯವಿದೆ. ಅದರ ಜೊತೆಗೆ ಮೊಸರು, ಪನೀರ್, ಚೀಸ್ ಕೂಡ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಖರೀದಿಗೆ ಅನುಕೂಲವಾಗುವಂತೆ ಕಂಪನಿ ಪ್ರತ್ಯೇಕ ಆ್ಯಪ್ ಕೂಡ ಹೊಂದಿದೆ.ಅಕ್ಷಯಕಲ್ಪ ಸಂಸ್ಥೆ ಸ್ಥಾಪನೆ ಹಿಂದೆ ರೋಚಕ ಕಥೆ ಇದೆ. ಹೈನೋದ್ಯಮದ ಸ್ಥಾಪಕರಾದ ಶಶಿಕುಮಾರ್ ಬೆಂಗಳೂರು ನಗರ ಜಿಲ್ಲೆಅತ್ತಿಬೆಲೆ ಸಮೀಪದ ಗುಡ್ಡಹಟ್ಟಿ ಗ್ರಾಮದ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿದರು. ಶಶಿಕುಮಾರ್ ಅವರು ಉನ್ನತ ವ್ಯಾಸಂಗದ ಇಚ್ಛೆ ಹೊಂದಿದ್ದರೂ ಪಾಲಕರು ಶಕ್ತರಾಗಿರಲಿಲ್ಲ. ಕೊನೆಗೆ ಸಂಬಂಧಿಕರ ನೆರವು ಪಡೆದು ಸತತ ಪರಿಶ್ರಮದಿಂದ ಉತ್ತಮ ವ್ಯಾಸಂಗ ಮಾಡಿ ಅಮೆರಿಕದ ಶಿಕಾಗೋದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದರು.
ವಿಪ್ರೊ ಕಂಪನಿಯಲ್ಲಿಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿ ದೇಶ-ವಿದೇಶದಲ್ಲಿ20 ವರ್ಷಗಳ ಕಾಲ ಅದೇ ಕ್ಷೇತ್ರದಲ್ಲಿ ದುಡಿದರು. ಆದರೆ ಕೃಷಿ ಕ್ಷೇತ್ರದ ಆಕರ್ಷಣೆ ಶಶಿಕುಮಾರ್ ಅವರನ್ನು ಸೆಳೆಯುತ್ತಲೇ ಇತ್ತು. ಕೃಷಿಯಲ್ಲಿಏನನ್ನಾದರೂ ಸಾಧಿಸಬೇಕು ಎಂಬ ಆಲೋಚನೆ ದೃಢವಾಯಿತು. ಎಂಜಿನಿಯರಿಂಗ್ ಕ್ಷೇತ್ರದ ರೀತಿ ಕೃಷಿ ಕ್ಷೇತ್ರದಲ್ಲೂ ರೋಲ್ ಮಾಡೆಲ್ಗಳನ್ನು ರೂಪಿಸಬೇಕೆಂದು ಯೋಚಿಸಿ ಉದ್ಯೋಗ ತೊರೆದು ಹೈನುಗಾರಿಕೆ ಬೆಳವಣಿಗೆ ಮತ್ತು ಸಂಶೋಧನೆಗೆ ಒತ್ತು ನೀಡಿದರು.
2010ರಲ್ಲಿ ಅಕ್ಷಯಕಲ್ಪ ಹೆಸರಿನ ಎನ್ಜಿಒ ಆರಂಭಿಸಿದರು. ನಂತರ ಬೆಳವಣಿಗೆಯನ್ನು ಗಮನಿಸಿ ಸಂಸ್ಥೆಯಾಗಿ ರೂಪಿಸಿದರು. ಮಹಿಳಾ ಸ್ವಸಹಾಯ ಕಲ್ಪನೆಯಲ್ಲಿ ಹೈನೋದ್ಯಮ ಆರಂಭಿಸಲು ಉತ್ತೇಜನ ನೀಡಲಾಯಿತು. ಆರಂಭದಲ್ಲಿಮಹಿಳೆಯರ ಉದ್ಯೋಗಕ್ಕೆ ಸಾಮಾಜಿಕ ಸಮಸ್ಯೆಗಳು ಎದುರಾದವು. ಎಲ್ಲವನ್ನೂ ಎದುರಿಸಿ ಕುಟುಂಬ ಸದಸ್ಯರನ್ನು ಕೌನ್ಸೆಲಿಂಗ್ ಮಾಡುವ ಮೂಲಕ ಹಾದಿಯನ್ನು ಸುಲಭಗೊಳಿಸಲಾಯಿತು. ಇದೀಗ ಅಕ್ಷಯಕಲ್ಪವು ನೂರಾರು ಉದ್ಯೋಗಿಗಳಿಗೆ, ಹೈನುಗಾರರಿಗೆ ದಾರಿದೀಪವಾಗುವ ಸಂಸ್ಥೆಯಾಗಿ ಬೆಳೆದಿದೆ.
'ಅಕ್ಷಯಕಲ್ಪವು ಹೈನೋದ್ಯಮ ಆರಂಭಿಸಲು ಸಾಲ ಸೌಲಭ್ಯ ಒದಗಿಸಿಕೊಡುವ ಜತೆಗೆ ಗೊಬ್ಬರ, ಮೇವಿನ ವ್ಯವಸ್ಥೆ ಮಾಡಲಿದೆ. ನೂರಾರು ಸಂಖ್ಯೆಯಲ್ಲಿಹಸುಗಳನ್ನು ಸಾಕಲು ಅವಕಾಶ ಇಲ್ಲ. ಬದಲಿಗೆ ಗರಿಷ್ಠ 20 ಹಸುಗಳನ್ನು ಮಾತ್ರ ಸಾಕಲು ಅವಕಾಶ ನೀಡಲಾಗುತ್ತದೆ'' ಎಂದು ಶಶಿಕುಮಾರ್ ತಿಳಿಸಿದರು.
''ತಾವು ಖರೀದಿಸುವ ಹಾಲಿನ ಮೂಲ, ಅದರ ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಪೂರೈಕೆ ಹೀಗೆ ಪ್ರತಿ ಹಂತದ ಬಗ್ಗೆ ಗ್ರಾಹಕ ತಿಳಿದುಕೊಳ್ಳುವ ಹಕ್ಕು ಹೊಂದಿದ್ದಾನೆ. ರೈತನಿಗೆ ಇದರಿಂದ ಎಷ್ಟು ಲಾಭ ಸಿಗುತ್ತದೆ ಎನ್ನುವುದು ಕೂಡ ಗ್ರಾಹಕ ಅರಿಯಬೇಕು. ರೈತನಿಗೆ ಅನುಕೂಲವಾಗುತ್ತಿದೆ ಎಂದಾಗ ಆ ಹಾಲು, ಹೈನೋತ್ಪನ್ನಗಳ ಖರೀದಿ ಮತ್ತು ಬಳಕೆಯಿಂದ ಗ್ರಾಹಕರಿಗೂ ಸಂತೋಷವಾಗುತ್ತದೆ. ಹೀಗಾಗಿ, ಗ್ರಾಹಕರು ಹಾಲು ಖರೀದಿಗೆ ಮೊದಲು ಅವುಗಳನ್ನು ಎಲ್ಲಿಂದ ಖರೀದಿ ಮಾಡಲಾಗುತ್ತಿದೆ, ರೈತರಿಗೆ ಎಷ್ಟು ಲಾಭ ಆಗುತ್ತಿದೆ ಎಂದು ಯೋಚಿಸಿ ಖರೀದಿಸಬೇಕು,'' ಎಂದು ಶಶಿಕುಮಾರ್ ಹೇಳಿದರು.
ಭವಿಷ್ಯದ ಆಲೋಚನೆಗಳು :
''ಹೈನೋದ್ಯಮದ ಕುರಿತು ಅತ್ಯಾಧುನಿಕ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರ ಆರಂಭಿಸಬೇಕು, ಫಾಡರ್ಫೀಡ್ ಟೆಸ್ಟ್ ಸೆಂಟರ್ಆರಂಭ ಮಾಡಬೇಕು, ಜಾಗತಿಕ ಮಟ್ಟದ ರೈತರನ್ನು ಬೆಳೆಸಬೇಕು, ಸಂಶೋಧನಾ ಕೇಂದ್ರದಲ್ಲಿಅವರನ್ನೇ ನೇಮಕ ಮಾಡಿಕೊಳ್ಳಬೇಕು ಎಂಬ ಗುರಿ ಹೊಂದಲಾಗಿದೆ. ಈ ಎಲ್ಲ ಕೆಲಸಗಳಿಗೆ ಇನ್ನೂ 2 ವರ್ಷ ಕಾಲ ಹಿಡಿಯಬಹುದು,'' ಎಂದು ಶಶಿಕುಮಾರ್ ತಿಳಿಸಿದರು.
''ಹಾಲಿ ಅಕ್ಷಯಕಲ್ಪ ಸಂಸ್ಥೆಯು ಒಟ್ಟು 50 ಸಾವಿರ ಲೀಟರ್ ಹಾಲು ಮತ್ತು ಹೈನೋತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಿದೆ. ಈ ತಿಂಗಳ ಅಂತ್ಯದಲ್ಲಿಇನ್ನೂ 20,000 ದಿಂದ 30,000 ಲೀಟರ್ ಹಾಲಿಗೆ ಬೇಡಿಕೆ ಬರುವ ನಿರೀಕ್ಷೆ ಇದೆ,'' ಎಂದು ಶಶಿಕುಮಾರ್ ತಿಳಿಸಿದರು.
ಯೋಜನೆ ಸದುಪಯೋಗ ಅಗತ್ಯ
''ಕೃಷಿ ಮತ್ತು ಹೈನೋದ್ಯಮದಲ್ಲಿ ತೊಡಗಿಸಿಕೊಳ್ಳುವವರಿಗೆ ಸರಕಾರದಿಂದ ಸಾಕಷ್ಟು ಯೋಜನೆಗಳಿವೆ. ಸಹಾಯಧನ ಸಿಗುತ್ತದೆ. ಹೀಗಾಗಿ, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಗುಣಮಟ್ಟ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿಕೆಲಸ ಮಾಡಬೇಕಾಗಿದೆ,'' ಎನ್ನುತ್ತಾರೆ ಶಶಿಕುಮಾರ್.
''ಅಮೆರಿಕದಲ್ಲಿ ನಾನು 14 ವರ್ಷ ಕೆಲಸ ಮಾಡಿದ್ದೇನೆ. ಸಾವಯವ ಕೃಷಿ ಉತ್ಪನ್ನಗಳು, ಹೈನೋತ್ಪನ್ನಗಳಿಗೆ ಬೇಡಿಕೆ ಇದೆ. ಅದು ಇತ್ತೀಚೆಗೆ ಇನ್ನಷ್ಟು ಹೆಚ್ಚಾಗುತ್ತಿದೆ. ಅಮೆರಿಕದಲ್ಲಿಪೂರೈಕೆಯಾಗುವ ಹಾಲಿನಲ್ಲಿಶೇ. 16ರಷ್ಟು ಸಾವಯವ ಹಾಲಿನ ಪಾಲಿದೆ. ಸಾವಯವ ಹಾಗೂ ಗುಣಮಟ್ಟದ ಹಾಲು ಪೂರೈಕೆಯಲ್ಲಿ ನ್ಯೂಜಿಲ್ಯಾಂಡ್ ಮುಂಚೂಣಿಯಲ್ಲಿದೆ. ನಂತರ ಆಸ್ಪ್ರೇಲಿಯಾ ಇದೆ. ಗುಣಮಟ್ಟದ ಕಾರಣ ಅಮೆರಿಕ ಸೇರಿದಂತೆ ಹಲವು ಮಾರುಕಟ್ಟೆಗಳನ್ನು ನ್ಯೂಜಿಲ್ಯಾಂಡ್ ನಿಭಾಯಿಸುತ್ತಿವೆ. ಆದರೆ, ನಮ್ಮ ದೇಶದ ಹಾಲಿನ ಉತ್ಪನ್ನಗಳು ಜಾಗತಿಕ ಮಟ್ಟದ ಗುಣಮಟ್ಟಕ್ಕೆ ದೊಡ್ಡ ಪ್ರಮಾಣದಲ್ಲಿ ತಲುಪಿಲ್ಲ. ಕಳೆದ 15 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ, ಗುಣಮಟ್ಟ ಸುಧಾರಣೆಯಾಗಿದೆ. ಆದರೆ, ಗುಣಮಟ್ಟ ಇನ್ನಷ್ಟು ಹೆಚ್ಚಳವಾಗಬೇಕು. ಆಗ ಅಮೆರಿಕ, ಯೂರೋಪ್ ಸೇರಿದಂತೆ ವಿವಿಧ ರಾಷ್ಟ್ರಗಳಿಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ರಫ್ತು ಮಾಡಲು ವಿಫುಲ ಅವಕಾಶಗಳು ದೊರೆಯುತ್ತವೆ. ಇದರಿಂದ ರೈತರ ಆದಾಯದ ಜೊತೆಗೆ ದೇಶದ ಕರೆನ್ಸಿ ಮೌಲ್ಯ ಹೆಚ್ಚಳದಲ್ಲಿ ರೈತರು ಕೊಡುಗೆ ನೀಡಿದಂತಾಗುತ್ತದೆ'' ಎಂದು ಶಶಿಕುಮಾರ್ ಹೇಳಿದರು.
''ಕಳೆದ ವರ್ಷದಲ್ಲಿ(2019) ಅಕ್ಷಯಕಲ್ಪ ಬರೋಬ್ಬರಿ 65 ಕೋಟಿ ರೂ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷಗಳಲ್ಲಿ ಕ್ರಮವಾಗಿ 29 ಕೋಟಿ ರೂ., 19 ಕೋಟಿ ರೂ. ಮತ್ತು 14 ಕೋಟಿ ರೂ. ಮೌಲ್ಯದ ಉತ್ಪನ್ನಗಳು ಮಾರಾಟವಾಗಿವೆ. ಆದರೆ, ಸಂಸ್ಥೆಗೆ ಈವರೆಗೆ ಲಾಭವಾಗಿಲ್ಲ. ಹಾಲು ಮಾರಾಟ ಪ್ರಮಾಣ 1 ಲಕ್ಷ ಲೀಟರ್ಗೆ ಏರಿದರೆ ಸಂಸ್ಥೆಗೆ ಲಾಭ ಸಿಗಬಹುದು. ಈವರೆಗೆ ಕೇವಲ ಹೂಡಿಕೆ ಮಾತ್ರ ಮಾಡುತ್ತಿದ್ದೇವೆ. ಆದರೆ, ಬೆಳವಣಿಗೆ ಇದೆ. ಹಿಂದಿನ ಎರಡು ವರ್ಷಗಳಲ್ಲಿಅಕ್ಷಯ ಕಲ್ಪ ಹಾಲಿನ ಮಾರಾಟವೂ ದುಪ್ಪಟ್ಟಾಗಿದೆ. ಜನರಲ್ಲಿಸಾವಯವ ಹಾಲಿನ ಬಗ್ಗೆ ಹೆಚ್ಚಿನ ಅರಿವು ಮೂಡುತ್ತಿದೆ. ಹಾಲಿನ ಗುಣಮಟ್ಟ, ರುಚಿ ಸವಿದವರು ಮತ್ತೆ ಅದೇ ಹಾಲು ಖರೀದಿಸಲು ಬಯಸುವರು'' ಎಂದು ಶಶಿಕುಮಾರ್ ತಿಳಿಸಿದರು.
ಕೃಷಿಕರು ರೋಲ್ ಮಾಡೆಲ್ ಆಗಬೇಕು:
''ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಕೃಷಿಯೇತರ ವಲಯಗಳಲ್ಲಿರೋಲ್ಮಾಡೆಲ್ಗಳು ಇರುವಂತೆ ಹೈನೋದ್ಯಮ, ಕೃಷಿಯಲ್ಲೂಮಾದರಿ ಕೃಷಿಕರು ಬೆಳೆಯಬೇಕು. ವ್ಯವಸಾಯ, ಹೈನೋದ್ಯಮವನ್ನು ಉದ್ದಿಮೆಯಂತೆ ಅಭಿವೃದ್ಧಿಪಡಿಸಬೇಕು. ನಗರಕ್ಕೆ ಹೋಗಿ ಏನಾದರೂ ಕೆಲಸ ಮಾಡಿ ಬೆಳೆಯುತ್ತೇನೆ ಎನ್ನುವಂತೆ ವ್ಯವಸಾಯ ಮಾಡುತ್ತೇನೆ ಎನ್ನುವ ಧೈರ್ಯ ಬರಬೇಕು. ರೈತರಿಗೆ ಲಾಭ ಇರಬೇಕು. ಅದಕ್ಕೆ ತಕ್ಕಂತೆ ಗ್ರಾಹಕರು ಇರಬೇಕು. ರೈತರಿಗೆ ಅನುಕೂಲ ಆಗುತ್ತದೆ ಎಂಬ ಭಾವನೆಯೊಂದಿಗೆ ಗ್ರಾಹಕರು ರೈತರ ಬೆಳವಣಿಗೆಗೆ ಸಹಕರಿಸಬೇಕು,'' ಎಂದು ಶಶಿಕುಮಾರ್ ಹೇಳಿದರು.
ಅಕ್ಷಯ ಕಲ್ಪ ಸಂಸ್ಥೆಯು ಪ್ರತಿ ಲೀಟರ್ ಹಾಲಿಗೆ 47 ರೂ. ನೀಡುತ್ತದೆ. ಆರಂಭಿಕ ಹಂತದಲ್ಲಿಹೈನೋದ್ಯಮ ಆರಂಭಿಸುವವರು ಹೂಡಿಕೆ ಮಾಡಬೇಕಾಗುತ್ತದೆ. ನಂತರದಲ್ಲಿಉತ್ತಮ ಆದಾಯ ಇರುತ್ತದೆ.
ನಿರಂತರ ನೀರು, ಮೇವು ಪೂರೈಕೆ ಇರಲಿ:
ಗುಣಮಟ್ಟದ ಹಾಲು ಮತ್ತು ಉತ್ಪಾದನೆ ಹೆಚ್ಚಳ ಆಗಬೇಕೆಂದರೆ ಹಸುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗಬಾರದು. ಸೂಕ್ತ ರೀತಿಯಲ್ಲಿಪೂರೈಸಿದರೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಲಾ 4 ಲೀಟರ್ನಂತೆ ಒಂದು ಹಸುವಿನಿಂದ 8 ಲೀಟರ್ ಹಾಲು ಕರೆಯಬಹುದು.
ಆಸಕ್ತರಿಗೆ ಅವಕಾಶ:
ಅಕ್ಷಯಕಲ್ಪ ಸಂಸ್ಥೆಯ ನೆರವಿನೊಂದಿಗೆ ಹೈನೋದ್ಯಮ ಮಾಡುತ್ತೇವೆ ಎನ್ನುವ ಎಲ್ಲರನ್ನೂ ಸೇರಿಸಿಕೊಳ್ಳುವ ಬದಲು ಕೆಲವರನ್ನು ಮಾತ್ರ ಅಥವಾ ಗ್ರಾಮದಲ್ಲಿಒಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಕೃಷಿಯಲ್ಲಿಆಸಕ್ತಿ ಹೊಂದಿದ್ದು ಸುಮಾರು 3ರಿಂದ 5 ಎಕರೆ ಜಮೀನು, ಸಾವಯವ ಕೃಷಿ ಕ್ರಮಗಳ ಅಳವಡಿಕೆ, ಸೆಗಣಿ ಗೊಬ್ಬರ ಉತ್ಪಾದನೆ, ಹಸುಗಳಿಗೆ ಮೇವು ಮತ್ತು ನೀರು ಪೂರೈಕೆ, ಹಾಲನ್ನು ನೇರವಾಗಿ ಯಂತ್ರದ ಮೂಲಕ ಕರೆದು ಸಂಸ್ಕರಣಾ ಘಟಕಕ್ಕೆ ತಲುಪಿಸುವ ಕುರಿತು ತರಬೇತಿ ಪಡೆದುಕೊಂಡು ಅದನ್ನು ಅಳವಡಿಸಿಕೊಳ್ಳುವವರಿಗೆ ಆದ್ಯತೆ ನೀಡಲಾಗುತ್ತದೆ.
ಅಕ್ಷಯಕಲ್ಪ ಸಂಸ್ಥೆಯಿಂದ ಸಾವಯವ ಕೃಷಿಯಲ್ಲಿತೊಡಗಿಸಿಕೊಂಡಿರುವ 200 ರೈತರು ಎಲ್ಲಖರ್ಚುಗಳನ್ನು ಕಳೆದು ತಿಂಗಳಿಗೆ ಸರಾಸರಿ 65 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. 200 ಜನರಲ್ಲಿ89 ಜನ ಮಹಿಳೆಯರಿದ್ದಾರೆ. ಕೃಷಿ ಭೂಮಿ ಇದ್ದರೂ ವಿವಿಧ ಕಾರಣಗಳಿಂದ ಕೃಷಿ ಮಾಡಲಾಗದೆ ಕ್ಯಾಬ್ ಚಾಲನೆ ಹಾಗೂ ಇನ್ನಿತರ ಕೆಲಸ ಅರಸಿ ನಗರದತ್ತ ತೆರಳಿ ವಾಪಸ್ ಬಂದು ಅಕ್ಷಯ ಕಲ್ಪ ಸಂಸ್ಥೆಯ ಮೂಲಕ ಹೈನೋದ್ಯಮದಲ್ಲಿತೊಡಗಿಸಿಕೊಂಡವರು 62 ಜನರಿದ್ದಾರೆ.
300 ಜನರಿಗೆ ಉದ್ಯೋಗ:
ಅಕ್ಷಯಕಲ್ಪ ಹೈನೋದ್ಯಮದಲ್ಲಿ200 ರೈತರು ಸೇರಿ 300 ಉದ್ಯೋಗಿಗಳಾಗಿದ್ದಾರೆ. ತಿಪಟೂರಿನಲ್ಲಿಹಾಲಿನ ಘಟಕ ಇದೆ. ತಿಪಟೂರಿನಿಂದ 50 ಕಿ.ಮೀ ಸುತ್ತಲಿನ ಪ್ರದೇಶಗಳಲ್ಲಿನ ಗ್ರಾಮಗಳ ರೈತರನ್ನು ಆಯ್ಕೆ ಮಾಡಿ ಹೈನೋದ್ಯಮದಲ್ಲಿತೊಡಗಿಸಿಕೊಳ್ಳಲಾಗಿದೆ. ತಿಪಟೂರಿನಿಂದ ಹಾಲು ಬೆಂಗಳೂರಿಗೆ ಬರುತ್ತದೆ. ಸಾವಯವ ಹಾಲಿನ ದರ 70 ರೂ. ಇದೆ. ಚೆನ್ನೈನಲ್ಲೂಅಕ್ಷಯ ಕಲ್ಪ ಹಾಲು ಮಾರಾಟ ಮತ್ತು ಹೈನೋದ್ಯಮ ಆರಂಭಿಸಲು ಯೋಜಿಸಲಾಗಿದೆ.
30 ಸಾವಿರ ಲೀಟರ್ಹಾಲು, 5000 ಲೀಟರ್ ಮೊಸರು, 2000 ಲೀಟರ್ ಪನ್ನೀರ್ ಮತ್ತು ಚೀಸ್ ಮತ್ತಿತರ ಉತ್ಪನ್ನಗಳ ರೂಪದಲ್ಲಿಮಾರಾಟವಾಗುತ್ತಿದೆ. ''ಸಾವಯವ ವಸ್ತುಗಳಿಗೆಂದೇ ಮಾರುಕಟ್ಟೆ ಇಲ್ಲ. ಆದರೆ, ನಾವು ಅದನ್ನು ಸೃಷ್ಟಿ ಮಾಡಬೇಕು. ಜನರಿಗೆ ಈ ಕುರಿತು ಅರಿವು, ಜ್ಞಾನ ಮೂಡಿದಾಗ ಮಾತ್ರ ಅವುಗಳನ್ನು ಖರೀದಿಸುತ್ತಾರೆ,'' ಎನ್ನುವುದು ಶಶಿಕುಮಾರ್ ಅವರ ಅಭಿಪ್ರಾಯ.
ಅಕ್ಷಯಕಲ್ಪ ಹಾಲು ಕರೆಯುವ ಕೇಂದ್ರದಲ್ಲಿ ಸ್ವಚ್ಛತೆಗೆ ಅತಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಯಂತ್ರದ ಮೂಲಕ ಹಾಲು ಕರೆದು ಅದೇ ಸ್ಥಳದಲ್ಲೇ ಪರೀಕ್ಷೆಗೆ ಒಳಪಡಿಸಿ ಆ್ಯಂಟಿ ಬಯೋಟಿಕ್ ಪರೀಕ್ಷೆಯನ್ನು ಕೂಡ ಅಲ್ಲೇ ಮಾಡಲಾಗುತ್ತದೆ. ಈ ಡೇಟಾವನ್ನು ಕ್ಲೌಡ್ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಪ್ರತಿ ಹೊಲದಲ್ಲೂ ಶೀತಲೀಕರಣ ಘಟಕ ಇರುತ್ತದೆ. ಹೀಗಾಗಿ, ಹಾಲನ್ನು ಅಲ್ಲೇ ಸಂಗ್ರಹಿಸಿಡಲಾಗುತ್ತದೆ. ಹೊಲದಿಂದ ಹಾಲು ಘಟಕ ತಲುಪುತ್ತದೆ. ಘಟಕದಲ್ಲಿವಿವಿಧ ಹೆಸರುಗಳು ಮತ್ತು ಗುಣಮಟ್ಟದ ಆಧಾರದ ಮೇಲೆ ಗ್ರಾಹಕರ ಬೇಡಿಕೆ ಮತ್ತು ಅಗತ್ಯಕ್ಕೆ ತಕ್ಕಂತೆ ಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಸಾವಯವ ಹಾಲಿನಲ್ಲಿ ಕೊಬ್ಬಿನಂಶವನ್ನು ತೆಗೆಯುವುದಿಲ್ಲ.
ಸಾವಯವ ಗುಣಮಟ್ಟ ಪ್ರಮಾಣಪತ್ರ
ಕೇಂದ್ರ ಕೃಷಿ ಇಲಾಖೆಯಿಂದ ಮಾನ್ಯತೆ ಪಡೆದಿರುವ ಅಫಿಡಾ ಎಂಬ ಸಂಸ್ಥೆ ಹಾಲಿನ ಗುಣಮಟ್ಟವನ್ನು ಪ್ರಮಾಣೀಕರಿಸುತ್ತದೆ. ವರ್ಷಕ್ಕೊಮ್ಮೆ ಮತ್ತು ದಿಢೀರ್ ಆಗಿಯೂ ಆಡಿಟ್ ಮಾಡಬಹುದು. ಸಾವಯವ ಹಾಲಿಗೆ ಚಿಕ್ಕಮಗಳೂರಿನ ಕಡೂರಿನಿಂದ ಹಿಡಿದು ಚಿತ್ರದುರ್ಗವರೆಗಿನ ದೇಶಿಯ ಸೀಮೆ ಹಸುಗಳನ್ನು ಬಳಸಲಾಗುತ್ತದೆ. ಅದೇ ರೀತಿ ಕ್ರಾಸ್ ಬ್ರೀಡ್, ಹಳ್ಳಿ ಕಾಡು, ಅಮೃತ್ಮಹಲ್ ತಳಿ ಕೂಡ ಇವೆ.
ಕೊರೊನಾ ಭೀತಿಯ ಬಳಿಕ ಪ್ರತಿದಿನ 20 ಕ್ಕೂ ಹೆಚ್ಚು ಜನರು ಕರೆ ಮಾಡಿ ಅಕ್ಷಯ ಕಲ್ಪ ಹೈನೋದ್ಯಮ ಕಾರ್ಯಕ್ರಮದಲ್ಲಿಭಾಗವಹಿಸಬಹುದೇ ಎಂದು ಕೇಳುತ್ತಿದ್ದಾರೆ. ನೇರ ತರಬೇತಿ ಸಾಧ್ಯವಿಲ್ಲ. ಹೀಗಾಗಿ, ವರ್ಚುವಲ್ ತರಬೇತಿ ನೀಡುತ್ತಿದ್ದೇವೆ. ಮುಂದಿನ ವರ್ಷಗಳಲ್ಲಿನಮ್ಮ ಸಂಸ್ಥೆಯಲ್ಲಿಇನ್ನು 500 ಜನ ಕೆಲಸ ಮಾಡಬಹುದು. ಈ ನಿಟ್ಟಿನಲ್ಲಿಕೆಲಸ ಮಾಡುತ್ತಿದ್ದೇವೆ. ತಿಪಟೂರು ಸುತ್ತಮುತ್ತ ಹೆಚ್ಚಿನ ಗಮನ ಹರಿಸಿದ್ದೇವೆ ಎನ್ನುತ್ತಾರೆ ಶಶಿಕುಮಾರ್.
ಕೊರೊನಾ ವೇಳೆ ಪೂರೈಕೆ ವ್ಯತ್ಯಯವಿಲ್ಲ:
ಬೆಂಗಳೂರಿನಲ್ಲಿ 45 ಸಾವಿರ ಮನೆಗಳಿಗೆ 42 ಸಾವಿರ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಕೊರೊನಾ ಭೀತಿಯ ಕಾರಣದಿಂದ ಹಾಲಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಹಾಲಿನ ಪೂರೈಕೆ ನಿರಂತರವಾಗಿರುವಂತೆ ನೋಡಿಕೊಳ್ಳಲಾಗಿದೆ. ಸ್ವಚ್ಛತೆ ಹಾಗೂ ಸುರಕ್ಷತೆ ಕಾಪಾಡಿಕೊಂಡು, ಸ್ಯಾನಿಟೈಸೇಷನ್, ಮಾತ್ರ ಬಳಕೆ ಮಾಡಿಕೊಂಡು ಪೂರೈಕೆ ಮಾಡಲಾಗುತ್ತದೆ. ಅಕ್ಷಯ ಕಲ್ಪ ಹಾಲು ಉತ್ಪಾದಿಸುವ ರೈತನ ಹೊಲಕ್ಕೆ ಕಾಲಿಡುವ ಮೊದಲೇ ಸ್ಯಾನಿಟೈಸೇಷನ್ ಪ್ರಕ್ರಿಯೆ ಮಾಡಲಾಗುತ್ತದೆ.
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...