ರಾಮನಗರ ಇನ್ಮುಂದೆ 'ನವ ಬೆಂಗಳೂರು' ಆಗಲಿದೆ: ಮರುನಾಮಕರಣಕ್ಕೆ ಶುರುವಾಗಿದೆ ಚರ್ಚೆ..!

ರಾಮನಗರ: ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ್ದ ಕೆಲ ಭಾಗವನ್ನು ರಾಮನಗರಕ್ಕೆ ಸೇರಿಸಿ ಪ್ರತ್ಯೇಕ ಜಿಲ್ಲೆ ರಚಿಸಲಾಗಿತ್ತು. ಇದೀಗ ರಾಮನಗರನ್ನು ಮತ್ತೆ 'ನವ ಬೆಂಗಳೂರು' ಎಂದು ಮಾಡವ ಕಾರ್ಯ ಸದ್ದಿಲ್ಲದೇ ಆರಂಭವಾಗಿದೆ. ವಿಶ್ವ ಭೂಪಟ್ಟದಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳಲು ಹೊಸದೊಂದು ಯೋಜನೆಗೆ ಜಿಲ್ಲೆಯಿಂದ ಕೂಗು ಕೇಳಿಬಂದಿದೆ..! ಜಲಾಶಯಗಳು, ರಾಜಕೀಯ ಶಕ್ತಿ ಕೇಂದ್ರ, ಬೆಂಗಳೂರು-ಮೈಸೂರು ಹೆದ್ದಾರಿ, ದಾಬಸ್‌ಪೇಟೆ-ಹೊಸೂರು ಹೈವೆ...ಹೀಗೆ ಎಲ್ಲಸೌಲಭ್ಯಗಳನ್ನು ಒಳಗೊಂಡಿದ್ದರೂ, ನಿರೀಕ್ಷಿತ ಮಟ್ಟದಲ್ಲಿ ಕೈಗಾರಿಕಾ ಬೆಳವಣಿಗೆಯಾಗಿಲ್ಲ. ಕೈಗಾರಿಕಾ ವಲಯದಲ್ಲಿ ಹಿಂದೆ ಬೀಳಲು 'ರಾಮನಗರ' ಎಂಬ ಹೆಸರೇ ಕಾರಣ ಎನ್ನಲಾಗಿದೆ. ಹೀಗಾಗಿ, ಪಟ್ಟಣಕ್ಕೆ ‘ನವ ಬೆಂಗಳೂರು’ ಎಂದು ಮರುನಾಮಕರಣ ಮೂಲಕ ಬೆಂಗಳೂರು ಮಹಾನಗರವನ್ನು ಇನ್ನಷ್ಟು ವಿಸ್ತರಿಸಲು ಚಿಂತನೆ ನಡೆದಿದೆ. ವಿಶ್ವ ಭೂಪಟದಲ್ಲಿ ಬೆಂಗಳೂರಿಗೆ ಸ್ಥಾನ ಲಭಿಸಿದೆ. ಆದರೆ, ಅದರ ಕೂಗಳತೆ ದೂರದಲ್ಲೇ ಇರುವ ರಾಮನಗರ ಕಣ್ಮರೆಯಾಗಿದೆ. ವಿದೇಶಿ ಕಂಪನಿಗಳು ಮಾತ್ರವಲ್ಲ, ನೆರೆ ರಾಜ್ಯಗಳ ಕಾರ್ಖಾನೆಗಳು ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಮುಂದಾಗಿದ್ದಾರೆ. ಆದರೆ, ಪಕ್ಕದಲ್ಲಿನ ರಾಮನಗರ ಎಂಬ ಹೆಸರು ಕೇಳಿದರೆ ಸಾಕು ಹಿಂಜರಿಯುತ್ತಿದ್ದಾರೆ. ರಾಮನಗರ ಎಂಬುದು ಯಾವುದೊ ಒಂದು ಜಿಲ್ಲೆಎಂಬ ಮನೋಭಾವ ಬೀಡುಬಿಟ್ಟಿದೆ. ಬೆಂಗಳೂರು ಎಂಬ ಹೆಸರಿನಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಲು ಕಂಪನಿಗಳು ಸಿದ್ದವಾಗಿದೆ. ಹೀಗಾಗಿ, ಜಿಲ್ಲೆಯ ಹೆಸರನ್ನು ನವ ಬೆಂಗಳೂರು ಎಂದು ಬದಲಾಯಿಸುವ ಮೂಲಕ ಜಿಲ್ಲೆಯನ್ನು ‘ಇಂಡಸ್ಟ್ರಿಯಲ್‌ ಹಬ್‌’ ಮಾಡುವ ಚಿಂತನೆ ಸರಕಾರದ ಹಂತದಲ್ಲಿದೆ ಎನ್ನಲಾಗಿದೆ. ಈ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸೇರಿದ್ದ 4 ತಾಲೂಕುಗಳನ್ನು ಪ್ರತ್ಯೇಕಿಸಿ ರಾಮನಗರ ಜಿಲ್ಲೆಯನ್ನಾಗಿ 13ವರ್ಷದ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಇದಾದ ಬಳಿಕ ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಪರಿವರ್ತಿಸುವ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಬಿಜೆಪಿ ಸರಕಾರದ ಅವಯಲ್ಲಿನವ ಬೆಂಗಳೂರು ಜಿಲ್ಲೆಯನ್ನಾಗಿ ಘೋಷಣೆ ಮಾಡುವ ಚರ್ಚೆ ಮತ್ತೆ ಮುನ್ನಲೆಗೆ ಬಂದಿರುವುದು ವಿಶೇಷ. ಜಿಲ್ಲೆಯ ಹೆಸರಷ್ಟೆ ಬದಲಾವಣೆ: ನೂತನ ತಾಲೂಕಾದ ಹೋರೋಹಳ್ಳಿ ಸೇರಿಂದತೆ ಇನ್ನುಳಿದ 4 ತಾಲೂಕುಗಳು ತನ್ನ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಿವೆ. ರಾಮನಗರ ತಾಲೂಕು ಸಹ ಹಾಗೆಯೇ ಇರಲಿದೆ. ಜಿಲ್ಲಾ ಕೇಂದ್ರವು ರಾಮನಗರ ಪಟ್ಟಣವೇ ಇರಲಿದೆ. ಆದರೆ, ಜಿಲ್ಲೆಯ ಹೆಸರನ್ನು ಮಾತ್ರ ರಾಮನಗರದ ಬದಲಿಗೆ ನವ ಬೆಂಗಳೂರು ಎಂದು ಬದಲಾಯಿಸುವ ಮೂಲಕ ವಿಶ್ವದ ಭೂಪಟದಲ್ಲಿ ಮತ್ತೊಂದು ಬೆಂಗಳೂರು ಸಾರ್ವಭೌಮತ್ವ ಸ್ಥಾಪಿಸುವ ಸಂಬಂಧ ಚರ್ಚೆ ನಡೆಯುತ್ತಿದೆ ಎಂಬ ಮಾಹಿತಿ ವಿಕಗೆ ಲಭ್ಯವಾಗಿದೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ತಾಲೂಕುಗಳು ಸಹ ಈ ನವ ಬೆಂಗಳೂರು ಜಿಲ್ಲೆಗೆ ಸೇರಿಸಬೇಕೆ, ಬೇಡೆವೇ ಎಂಬ ಚರ್ಚೆ ಜೋರಾಗಿದೆ. ಬದಲಾದರೆ ಏನೇನು ಲಾಭ..!
  • * ದೇಶ, ವಿದೇಶಗಳ ಕಂಪನಿಗಳು ಕೋಟ್ಯಂತರ ರೂ., ಬಂಡವಾಳವನ್ನು ಜಿಲ್ಲೆಯಲ್ಲಿ ಹೂಡಿಕೆ ಮಾಡಲಿವೆ.
  • * ಸರ್ವತೋಮುಖ ರೀತಿಯಲ್ಲಿ ಜಿಲ್ಲೆಅಭಿವೃದ್ಧಿ ಸಾಧಿಸಲಿದೆ.
  • *ಬೆಂಗಳೂರು ಮಾದರಿಯಲ್ಲಿಯೇ ಜಿಲ್ಲೆಐಟಿ ಹಬ್‌ ಆಗಲಿದೆ.
  • * ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿದೆ.
  • * ರೈತರ ಭೂಮಿಗೆ ಚಿನ್ನದ ಬೆಲೆ ದೊರೆಯಲಿದೆ.
  • * ಪ್ರವಾಸೋಧ್ಯಮ ಅಭಿವೃದ್ಧಿಯಾಗಲಿದೆ.
ನಷ್ಟಗಳೇನು?
  • * ರಾಮನಗರ ಜಿಲ್ಲೆಎಂಬ ಹೆಸರು ಬದಲಾವಣೆ ರಾಜಕೀಯ ಜಂಗಿಕುಸ್ತಿಗೆ ವೇದಿಕೆಯಾಗಬಹುದು
  • * ರೇಷ್ಮೆ ಉತ್ಪಾದನೆ ಕುಂಠಿತಗೊಳ್ಳಬಹುದು
  • * ಅನ್ನದಾತರು ಕೃಷಿ ಬಿಟ್ಟು, ತಮ್ಮ ಜಮೀನುಗಳ ಬಾಡಿಗೆ ಹಣದಲ್ಲಿ ಸಂಸಾರ ನಡೆಸಬಹುದು
  • * ಐತಿಹಾಸಿಕ ಹಿನ್ನೆಲೆಯುಳ್ಳ ರಾಮನಗರ ಹೆಸರು ಕೇವಲ ತಾಲೂಕಿಗೆ ಸೀಮಿತಗೊಳ್ಳಲಿದೆ.
ಇದು ಹೊಸದೇನು ಅಲ್ಲ..! ಮಂಗಳೂರು ಜಿಲ್ಲಾ ಕೇಂದ್ರವಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರಿದೆ. ಉತ್ತರ ಕನ್ನಡ ಜಿಲ್ಲೆಯಾಗಿದ್ದರೂ, ಜಿಲ್ಲಾ ಕೇಂದ್ರ ಕಾರವಾರವಾಗಿದೆ. ಇನ್ನು ದೆಹಲಿಯ ಹೆಸರು ನ್ಯೂ ದೆಹಲಿ, ಬಾಂಬೆ ಹೆಸರು ಮುಂಬೈ ಆಗಿ ಬದಲಾಗಿವೆ. "ರಾಮನಗರ ಜಿಲ್ಲೆಯ ಬದಲಿಗೆ ನವ ಬೆಂಗಳೂರು ಎಂಬ ಹೆಸರು ಘೋಷಣೆ ಸಂಬಂಧ ಸಾಕಷ್ಟು ಚರ್ಚೆಗಳು ನಮ್ಮ ಇಲಾಖೆಗೆ ಬಂದಿವೆ. ರಾಮನಗರ ಜಿಲ್ಲೆಯಲ್ಲಿಎಲ್ಲ ಸೌಲಭ್ಯಗಳು ಇರುವುದರಿಂದ ಕೆಲ ಪ್ರಗತಿಪರರಿಂದ ಈ ರೀತಿ ಮನವಿಗಳು ಬಂದಿವೆ." -ಎಸ್‌.ಶಂಕರಪ್ಪ, ಪ್ರಭಾರ ಉಪನಿರ್ದೇಶಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ "ರಾಮನಗರ ಜಿಲ್ಲೆ ಮಾಡಿರುವುದು ಒಳ್ಳೆ ಕೆಲಸ. ಆದರೆ, ಜಿಲ್ಲೆಯ ಹೆಸರನ್ನು ಮಾತ್ರ ಬೆಂಗಳೂರು ದಕ್ಷಿಣ ಎಂದು ಮಾಡಬೇಕಿತ್ತು ಎಂದು ಕುಮಾರಸ್ವಾಮಿ ಅವರಿಗೆ ಕೇಳಿದ್ದೆ. ಬೆಂಗಳೂರು ಕಟ್ಟಿಸಿದ್ದು ನಾವು. ಬೆಂಗಳೂರು ನಮ್ಮದೆ." -ಡಿ.ಕೆ.ಶಿವಕುಮಾರ್‌, ಮಾಜಿ ಸಚಿವ (ಇತ್ತಿಚೆಗೆ ಕಾರ‍್ಯಕ್ರಮವೊಂದರಲ್ಲಿ ಹೇಳಿದ್ದು)


from India & World News in Kannada | VK Polls https://ift.tt/2sz50UQ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...