ಕರ್ನಾಟಕ ಬೌಲರ್‌ಗಳ ಮಿಂಚು; ಮುಂಬಯಿ 194ಕ್ಕೆ ಆಲೌಟ್

ಮುಂಬಯಿ: ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ 'ಎ' ಮತ್ತು 'ಬಿ' ಗುಂಪಿನ ತನ್ನ ನಾಲ್ಕನೇ ಪಂದ್ಯದಲ್ಲಿ ಬಲಿಷ್ಠ ವಿರುದ್ಧ ಮೊದಲ ದಿನದಾಟದಲ್ಲಿ ಬೌಲರ್‌ಗಳು ಮೇಲುಗೈ ಸಾಧಿಸಿದ್ದಾರೆ. ಕರ್ನಾಟಕ ಬೌಲರ್‌ಗಳ ನಿಖರ ದಾಳಿಗೆ ಸಿಲುಕಿದ ಮುಂಬಯಿ 55.5 ಓವರ್‌ಗಳಲ್ಲೇ 194 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕರ್ನಾಟಕ ಪರ ವಿ ಕೌಶಿಕ್ ಮೂರು ಮತ್ತು ಅಭಿಮನ್ಯು ಮಿಥುನ್, ರೋನಿತ್ ಮೋರೆ ಹಾಗೂ ಪ್ರತೀಕ್ ಜೈನ್ ತಲಾ ಎರಡು ವಿಕೆಟ್‌ಗಳನ್ನು ಪಡೆದು ಮಿಂಚಿದರು. ಮುಂಬಯಿ ತಂಡದ ನಾಯಕ ಸೂರ್ಯ ಕುಮಾರ್ ಯಾದವ್ 77 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಒಂದೆಡೆ ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ಕೆಳ ಕ್ರಮಾಂಕದ ಶಶಾಂಕ್ ಅಟ್ಟಾರ್ಡೆ (35) ಜೊತೆ ಏಳನೇ ವಿಕೆಟ್‌ಗೆ 88 ರನ್‌ಗಳ ಅಮೂಲ್ಯ ಜತೆಯಾಟ ನೀಡಿ ಗಮನ ಸೆಳೆದರು. 94 ಎಸೆತಗಳನ್ನು ಎದುರಿಸಿದ ಸೂರ್ಯ ಕುಮಾರ್ 10 ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 77 ರನ್ ಗಳಿಸಿದರು. ಒಂದು ಹಂತದಲ್ಲಿ 60 ರನ್ನಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಮುಂಬಯಿ ಮೂರಂಕಿಯ ಗಡಿ ದಾಟುವುದು ಅನುಮಾನವೆನಿಸಿತ್ತು. ಈ ಹಂತದಲ್ಲಿ ಸೂರ್ಯ ಕುಮಾರ್ ಯಾದವ್ ಮುಂಬಯಿ ಪರ ಆಪತ್ಬಾಂಧವ ಎನಿಸಿದರು. ಉದೋನ್ಮುಖ ಆರಂಭಿಕ ಪೃಥ್ವಿ ಶಾ 29 ಹಾಗೂ ಅನುಭವಿ ಅಜಿಂಕ್ಯ ರಹಾನೆ 7 ರನ್ ಗಳಿಸಿ ನಿರಾಸೆ ಮೂಡಿಸಿದರು. ವಿಕೆಟ್ ಕೀಪರ್ ಆರಂಭಿಕ ಬ್ಯಾಟ್ಸ್‌ಮನ್ ಆದಿತ್ಯ ತಾರೆ (0), ಸಿದ್ದೇಶ್ ಲಾಡ್ (4) ಹಾಗೂ ಸರ್ಫರಾಜ್ ಖಾನ್ (8) ಬ್ಯಾಟ್ ಕೂಡಾ ಸದ್ದು ಮಾಡಲಿಲ್ಲ. ಇಲ್ಲಿಯ ತನಕ ಆಡಿರುವ ಮೂರು ಪಂದ್ಯಗಳಲ್ಲಿ ಕರುಣ್‌ ನಾಯರ್‌ ನೇತೃತ್ವದ ಕರ್ನಾಟಕ ತಂಡ ಕೇವಲ ಒಂದು ಗೆಲುವು ಕಂಡಿದೆ. ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಹೀಗಾಗಿ ಕರ್ನಾಟಕ ತಂಡದ ಖಾತೆಯಲ್ಲೀಗ ಕೇವಲ ಹತ್ತು ಅಂಕಗಳಿವೆ. ಮುಂಬಯಿ ತಂಡ ಆಡಿದ 2 ಪಂದ್ಯಗಳಲ್ಲಿ ಗೆಲುವು ಮತ್ತು ಸೋಲಿನ ಮಿಶ್ರ ಫಲ ಕಂಡಿದ್ದು, ಆರು ಅಂಕ ಗಳಿಸಿದೆ. ತಮಿಳುನಾಡು ವಿರುದ್ಧ ಗೆಲುವು ಸಾಧಿಸಿದ್ದ ಕರ್ನಾಟಕ, ನಂತರ ಉತ್ತರ ಪ್ರದೇಶ ಮತ್ತು ಹಿಮಾಚಲ ಪ್ರದೇಶ ವಿರುದ್ಧ ಡ್ರಾಗಷ್ಟೇ ತೃಪ್ತಿಪಟ್ಟಿದೆ. ಅದರಲ್ಲೂ ಮೈಸೂರಿನಲ್ಲಿ ನಡೆದ ಹಿಮಾಚಲ ಪ್ರದೇಶ ವಿರುದ್ಧ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಕರುಣ್‌ ಪಡೆ, ಇನಿಂಗ್ಸ್‌ ಹಿನ್ನಡೆಗೊಳಗಾಗಿ ಕೇವಲ ಒಂದು ಅಂಕಕ್ಕೆ ಸಮಾಧಾನಪಟ್ಟುಕೊಂಡಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MSM4aj

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...