ಈರುಳ್ಳಿ ಬಿಸಿಗೆ ಬಾಡಿದ ತರಕಾರಿ ಮಾರ್ಕೆಟ್‌ : ಬೆಲೆ ಇಳಿದರೂ ಬಾರದ ಗ್ರಾಹಕ

ಐತಿಚಂಡ ರಮೇಶ್‌ ಉತ್ತಪ್ಪಮೈಸೂರು: ತರಕಾರಿ ದರ ಇಳಿದರೂ ಈರುಳ್ಳಿಯಿಂದಾಗಿ ಗ್ರಾಹಕರು ಅಂಗಡಿಯತ್ತ ಆಗಮಿಸದ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ವ್ಯಾಪಾರ ದಿಢೀರ್‌ ಕುಸಿದಿದೆ. ಕೆಲ ತಿಂಗಳ ಹಿಂದೆ ಕೇವಲ ಈರುಳ್ಳಿ ಮಾತ್ರವಲ್ಲದೆ ತರಕಾರಿ ಬೆಲೆ ಕೂಡ ತುಟ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಹಕರು ಖರೀದಿಗೆ ಹೆಚ್ಚು ಆಸಕ್ತಿ ತೋರುತ್ತಿರಲಿಲ್ಲ. ಆದರೆ, ಇದೀಗ ನುಗ್ಗೆ ಹೊರತುಪಡಿಸಿದಂತೆ ಬಹುತೇಕ ಎಲ್ಲಾ ತರಕಾರಿಗಳ ಬೆಲೆ ಗಣನೀಯವಾಗಿ ಕುಸಿದಿವೆ. ಆದರೆ, ಈರುಳ್ಳಿ ದರ ಇಳಿಯದ ಹಿನ್ನೆಲೆಯಲ್ಲಿ ಅದೇ ನೆಪಕ್ಕೆ ಗ್ರಾಹಕರು ಅಂಗಡಿಯತ್ತ ಬರುತ್ತಿಲ್ಲಎಂದು ವರ್ತಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ''ಕಳೆದ ಒಂದು ತಿಂಗಳಿನಿಂದ ಬೀನ್ಸ್‌, ಅವರೆ, ಬದನೆ ಸೇರಿದಂತೆ ಹಲವು ತರಕಾರಿಗಳು ಕೈಗೆಟಕುತ್ತಿವೆ. ಈ ಹಿನ್ನೆಲೆಯಲ್ಲಿಉತ್ತಮ ವ್ಯಾಪಾರ ಆಗಬಹುದು ಎನ್ನುವ ಕಾರಣದಿಂದ ಸಾಕಷ್ಟು ಪ್ರಮಾಣದಲ್ಲಿ ತರಕಾರಿ ತಂದು ಇಟ್ಟರೂ ಗ್ರಾಹಕರು ತಿರುಗಿ ನೋಡುತ್ತಿಲ್ಲ. ಇದಕ್ಕೆ ಕಾರಣ ಈರುಳ್ಳಿ'' ಎಂದು ಹೇಳುತ್ತಾರೆ ಕುವೆಂಪುನಗರದ ತರಕಾರಿ ವ್ಯಾಪಾರಿ ಮೋಹನ್‌. ''ಕೆಲವು ಗ್ರಾಹಕರು ತರಕಾರಿ ಅಂಗಡಿಗೆ ಬರಲು ಅಂಜುತ್ತಿದ್ದಾರೆ. ಬೈಕ್‌ ಹಾಗೂ ಕಾರುಗಳಲ್ಲಿ ಅಂಗಡಿಯ ಎದುರು ನಿಂತು ಅಲ್ಲಿಂದಲೇ ಈರುಳ್ಳಿ ಬೆಲೆಯನ್ನು ಇಣುಕಿ ನೋಡಿ ಹೊರಟು ಹೋಗುತ್ತಾರೆ. ಇದಕ್ಕಾಗಿ ಅಂಗಡಿಯಲ್ಲಿ ತರಕಾರಿ ಬೆಲೆ ಹಾಕುವುದನ್ನೇ ಬಿಟ್ಟಿದ್ದೇವೆ. ಆದರೂ ಬಂದ ಕೂಡಲೇ ಕೇಳುವುದು ಈರುಳ್ಳಿ ಬೆಲೆಯನ್ನು. ಅದನ್ನು ಕೇಳಿದ ಕೂಡಲೇ ಬಂದ ದಾರಿ ಹಿಡಿಯುತ್ತಾರೆ'' ಎಂದು ವಿವೇಕಾನಂದ ನಗರದ ರಾಮಯ್ಯ ಹೇಳುತ್ತಾರೆ. ''ಕಡಿಮೆ ಬೆಲೆಯ ಚಿಕ್ಕ ಈರುಳ್ಳಿಯನ್ನು ತಂದಿಟ್ಟರೆ ಅದನ್ನು ಹೋಟೆಲ್‌ನವರು ತೆಗೆದುಕೊಳ್ಳುವುದಿಲ್ಲ. ಅವರು ಹೆಚ್ಚು ಪ್ರಮಾಣದಲ್ಲಿ ಖರೀದಿಸುವುದರಿಂದ ಅವರನ್ನು ಕಳೆದುಕೊಳ್ಳಲು ನಮಗೆ ಇಷ್ಟವಿಲ್ಲ. ಅದಕ್ಕಾಗಿ ಹೊರ ರಾಷ್ಟ್ರಗಳಿಂದ ಬರುವ ಕಪ್ಪು ಬಣ್ಣದ ದಪ್ಪನೆಯ ಈರುಳ್ಳಿ ತರುತ್ತಿದ್ದೇವೆ. ಅದಕ್ಕೆ ಕನಿಷ್ಠ 100 ರೂ. ಇದೆ. ಆದರೆ, ಇದನ್ನು ಇಟ್ಟರೆ ಸಾಮಾನ್ಯ ಗ್ರಾಹಕರು ಬರುವುದಿಲ್ಲ. ಇದರಿಂದ ಕೆಲವು ತಿಂಗಳುಗಳಿಂದ ಧರ್ಮಸಂಕಟದಲ್ಲಿದ್ದೇವೆ. ಗ್ರಾಹಕರನ್ನು ಸೆಳೆಯಲು ನಮ್ಮಲ್ಲಿ ಯಾವ ಮಾರ್ಗವೂ ಉಳಿದಿಲ್ಲ'' ಎನ್ನುವುದು ಗೋಕುಲಂನ ಯುವ ವರ್ತಕ ಶರಣು ಅವರ ಅಳಲು. ಗ್ರಾಹಕರಲ್ಲಿಈರುಳ್ಳಿ ಮೂಡಿಸಿದ ಆತಂಕ ಇನ್ನೂ ದೂರವಾಗಿಲ್ಲ. ಇದರಿಂದಾಗಿ ಕಳೆದ ಸಾಕಷ್ಟು ವರ್ಷಗಳಿಂದ ಅತೀ ಕಡಿಮೆ ಪ್ರಮಾಣದಲ್ಲಿತರಕಾರಿ ಮಾರಾಟವಾಗುತ್ತಿದೆ. ಕಳೆದ ವರ್ಷ ಇದೇ ಸಮಯಕ್ಕೆ ನಿತ್ಯ ದಿನಕ್ಕೆ 10ರಿಂದ 15 ಸಾವಿರ ರೂ. ತರಕಾರಿ ಸಾಮಾನ್ಯ ಅಂಗಡಿಯಲ್ಲಿ ಮಾರಾಟವಾಗುತ್ತಿತ್ತು. ಆದರೆ, ಈರುಳ್ಳಿ ದರ ಏರಿ ಗ್ರಾಹಕರು ಅಂಗಡಿಗೆ ಬರುವುದು ಕಡಿಮೆ ಮಾಡಿದ ಹಿನ್ನೆಲೆಯಲ್ಲಿಈ ಪ್ರಮಾಣ 4000 ರೂ. ದಾಟುತ್ತಿಲ್ಲಎನ್ನುತ್ತಾರೆ. ಎಲ್ಲದಕ್ಕೂ ಕಾರಣ ಈರುಳ್ಳಿಈರುಳ್ಳಿ ಬೆಲೆ ಹೊರತುಪಡಿಸಿ ಉಳಿದ ತರಕಾರಿ ದರ ಇಳಿದರೂ ಗ್ರಾಹಕರು ಏಕೆ ಖರೀದಿಸುತ್ತಿಲ್ಲ ಎಂದು ಕೇಳಿದರೆ ಶ್ರೀರಾಂಪುರದ ಗೃಹಿಣಿ ಅನು ವಸಂತ್‌ ಅವರು ಹೇಳುವ ಮಾತಿನಲ್ಲಿ ಅರ್ಥವೂ ಇದೆ. ಎಲ್ಲಾಅಡುಗೆಗೆ ಮೂಲ ಈರುಳ್ಳಿ. ಅದನ್ನು ಬಿಟ್ಟು ಅಡುಗೆ ಮಾಡಲು ಸಾಧ್ಯವಿಲ್ಲ. ಉಳಿದ ತರಕಾರಿ ಬೆಲೆ ಕಡಿಮೆ ಎಂದು ಖರೀದಿಸಿ ಈರುಳ್ಳಿ ಇಲ್ಲದಿದ್ದರೆ ಏನು ಮಾಡುವುದು? ಅದಕ್ಕೆ ಈರುಳ್ಳಿ ಬೆಲೆ ಕಡಿಮೆಯಾಗುವ ತನಕ ತರಕಾರಿ ಖರೀದಿಸುವುದಿಲ್ಲ. ಪರ್ಯಾಯ ಅಡುಗೆಯತ್ತ ಗಮನ ಹರಿಸಿದ್ದೇವೆ ಎಂದು ನಗುತ್ತಾರೆ. ತರಕಾರಿ ಬೆಲೆ ಹೀಗಿದೆ
  • ಈರುಳ್ಳಿ 80 ರಿಂದ 100 ರೂಪಾಯಿ
  • ಬದನೆ 16 ರೂ.
  • ಎಲೆಕೂಸು 12 ರೂ.
  • ಬೀನ್ಸ್‌ 25 ರೂ.
  • ಟೊಮೆಟೊ 13 ರೂ.
  • ಹಸಿಮೆಣಸಿನ ಕಾಯಿ 20 ರೂ.
  • ಆಲೂಗೆಡ್ಡೆ 28 ರೂ.
  • ಕ್ಯಾರೆಟ್‌ 40 ರೂ.


from India & World News in Kannada | VK Polls https://ift.tt/39B4Vk0

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...