ಮಿಥುನ್ 'ಸಮರ್ಥ' ಆಟ; ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ

ಮುಂಬಯಿ: 'ಎ' ಹಾಗೂ 'ಬಿ' ಗುಂಪಿನ ಪಂದ್ಯದಲ್ಲಿ ಮುಂಬಯಿ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ ಮಹತ್ವದ ಮುನ್ನಡೆ ದಾಖಲಿಸಿದೆ. ಮುಂಬಯಿನ 194 ರನ್‌ಗಳಿಗೆ ಉತ್ತರವಾಗಿ (86) ಸಮಯೋಜಿತ ಆಟದ ನೆರವಿನಿಂದ ಕರ್ನಾಟಕ 218 ರನ್ ಗಳಿಸಿತು. ಈ ಮೂಲಕ 24 ರನ್‌ಗಳ ಮುನ್ನಡೆ ದಾಖಲಿಸಿತು. ಬಳಿಕ ಅನುಭವಿ ವೇಗದ ಬೌಲರ್ (52ಕ್ಕೆ 3 ವಿಕೆಟ್) ದಾಳಿಗೆ ತತ್ತರಿಸಿರುವ ಮುಂಬಯಿ ಎರಡನೇ ದಿನದಂತ್ಯಕ್ಕೆ ಐದು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿ ಸಂಕಷ್ಟದಲ್ಲಿದೆ. ಅಲ್ಲದೆ 85 ರನ್‌ಗಳ ಮುನ್ನಡೆಯನ್ನು ದಾಖಲಿಸಿದೆ. ಒಂದು ಹಂತದಲ್ಲಿ 26ಕ್ಕೆ ನಾಲ್ಕು ವಿಕೆಟ್ ಕಳೆದುಕೊಂಡ ಮುಂಬಯಿ ಭಾರಿ ಸಂಕಷ್ಟಕ್ಕೆ ಸಿಲುಕಿತ್ತು. ಮಿಥುನ್ ಹಾಗೂ ವಿ ಕೌಶಿಕ್ ನಿಖರ ದಾಳಿಗೆ ಅಜಿಂಕ್ಯ ರಹಾನೆ (1), ಆದಿತ್ಯ ತಾರೆ (6), ಸಿದ್ದೇಶ್ ಲಾಡ್ (4) ಹಾಗೂ ಸೂರ್ಯಕುಮಾರ್ ಯಾದವ್ (10) ಬಳಿ ಉತ್ತರವಿರಲಿಲ್ಲ. ಈ ಹಂತದಲ್ಲಿ ಜತೆಗೂಡಿದ ಸರ್ಫರಾಜ್ ಖಾನ್ ಹಾಗೂ ಶಮ್ಸ್ ಮುಲಾನಿ 83 ರನ್‌ಗಳ ಮಹತ್ವದ ಜತೆಯಾಟದಲ್ಲಿ ಭಾಗಿಯಾಗುವ ಮೂಲಕ ನೆರವಾದರು. ದಿನದಾಟದ ಕೊನೆಯಲ್ಲಿ ಮುಲಾನಿ ಹೊರದಬ್ಬುವಲ್ಲಿ ಕೌಶಿಕ್ ಯಶಸ್ವಿಯಾದರು. ಇದರೊಂದಿಗೆ 109ಕ್ಕೆ ಐದನೇ ವಿಕೆಟ್ ಪತನಗೊಂಡಿತು. ಇನ್ನೊಂದೆಡೆ ಅಜೇಯ ಅರ್ಧಶತಕ ಸಿಡಿಸಿರುವ ಸರ್ಫರಾಜ್ ಖಾನ್ (53*) ಮುಂಬಯಿ ತಂಡಕ್ಕೆ ಆಸರೆಯಾಗಿದ್ದಾರೆ. ಕರ್ನಾಟಕ ಪರ ಮಿಥುನ್ ಮೂರು ಹಾಗೂ ಕೌಶಿಕ್ ಎರಡು ವಿಕೆಟ್ ಪಡೆದರು. ಈ ಮೊದಲು 79/3 ಎಂಬಲ್ಲಿದ್ದ ದಿನದಾಟ ಮುಂದುವರಿಸಿದ ಕರ್ನಾಟಕಕ್ಕೆ ಆರಂಭಿಕ ರವಿಕುಮಾರ್ ಸಮರ್ಥ್ ಆಸರೆಯಾದರು. 139 ಎಸೆತಗಳನ್ನು ಎದುರಿಸಿದ ಸಮರ್ಥ್ 13 ಬೌಂಡರಿಗಳ ನೆರವಿನಿಂದ 86 ರನ್ ಗಳಿಸಿ ಶತಕ ವಂಚಿತವಾದರು. ಕೆಳ ಕ್ರಮಾಂಕದಲ್ಲಿ ಶ್ರೇಯಸ್ ಗೋಪಾಲ್ (31) ಹಾಗೂ ವಿಕೆಟ್ ಕೀಪರ್ ಶರತ್ ಬಿಆರ್ (46) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಮುಂಬಯಿ ಪರ ಶಶಾಂಕ್ ಅಟ್ಟಾರ್ಡೆ ಐದು ಹಾಗೂ ಶಮ್ಸ್ ಮುಲಾನಿ ಮೂರು ವಿಕೆಟ್ ಕಿತ್ತು ಮಿಂಚಿದರು. ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬಯಿ ಸೂರ್ಯ ಕುಮಾರ್ (77) ಹೋರಾಟದ ಹೊರತಾಗಿಯೂ 194 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಇದೀಗ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಮುಂಬಯಿ ತಂಡವನ್ನು ಬೇಗನೇ ಕಟ್ಟಿಹಾಕಿದರೆ ಕರ್ನಾಟಕಕ್ಕೆ ಪಂದ್ಯ ಗೆಲ್ಲುವ ಉತ್ತಮ ಅವಕಾಶವಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35hbXHi

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...