ಆರ್.ಸಿ.ಭಟ್ ಮಂಗಳೂರು: ದೇಶದಲ್ಲಿ ಕಳೆದ ನಾಲ್ಕೈದು ತಿಂಗಳಿನಿಂದ ಹಾಲಿನ ಪುಡಿ ಅಭಾವ ಕಂಡುಬಂದಿದ್ದು, ಅದನ್ನೇ ಅವಲಂಬಿಸಿರುವ ಐಸ್ಕ್ರೀಂ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ರಾಜ್ಯ ಮತ್ತು ದೇಶದ ನಾನಾ ಭಾಗಗಳಲ್ಲಿ ಕಂಡು ಬಂದ ಮತ್ತು ಭೀಕರ ನೆರೆಯಿಂದಾಗಿ ಹಾಲು ಉತ್ಪಾದನೆ ಕುಂಠಿತವಾಗಿರುವುದು ಹಾಲಿನ ಪುಡಿ ಉತ್ಪಾದನೆ ಕಡಿಮೆಯಾಗಲು ಕಾರಣ. ಇತ್ತೀಚಿನ ವರ್ಷಗಳಲ್ಲಿಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿಸಾಮಾನ್ಯವಾಗಿ ಬೇಡಿಕೆಗಿಂತ ಹೆಚ್ಚು ಹಾಲು ಉತ್ಪಾದನೆ ಆಗುತ್ತಿತ್ತು. ಇದನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿತ್ತು. ಆದರೆ, ನೆರೆಯ ಬಳಿಕ ಕೆಲವರು ಹೈನುಗಾರಿಕೆಯನ್ನೇ ಬಿಟ್ಟಿದ್ದರಿಂದ ಹಾಲು ಪೂರೈಕೆ ಕಡಿಮೆಯಾಗಿತ್ತು. ದುಬಾರಿ ಬೆಲೆ: ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿಅತಿ ಹೆಚ್ಚು ಹಾಲು ಸಂಗ್ರಹವಾಗುತ್ತದೆ. ಇದರಿಂದ ಕೆಎಂಎಫ್ನಲ್ಲಿಹಾಲಿನ ಪುಡಿ ಹೆಚ್ಚುವರಿ ಉತ್ಪಾದನೆಯಾಗಿ ಕಡಿಮೆ ಬೆಲೆಯಲ್ಲಿಹಾಲಿನ ಪುಡಿ ಮಾರುಕಟ್ಟೆಯಲ್ಲಿಲಭ್ಯವಾಗುತ್ತಿತ್ತು. ಇದೀಗ ಹಾಲಿನ ಪುಡಿ ಕೊರತೆಯಿಂದ ಮಾರುಕಟ್ಟೆಯಲ್ಲಿದಿಢೀರ್ ಬೆಲೆ ಏರಿಕೆಯಾಗಿದೆ. ಕಳೆದ ಬೇಸಿಗೆಯಲ್ಲಿಒಂದು ಕೆಜಿ ಹಾಲಿನ ಪುಡಿಗೆ 140-150 ರೂ. ಇದ್ದ ಬೆಲೆ ಈಗ ಏಕಾಏಕಿ 315-320 ರೂ.ಗೇರಿದೆ. ಕೇಂದ್ರ ಸಚಿವರಿಗೆ ಮೊರೆ: ಹಾಲಿನ ಪುಡಿ ಕೊರತೆಯಿಂದ ಐಸ್ಕ್ರೀಂ ಉದ್ಯಮಕ್ಕಾಗುತ್ತಿರುವ ಸಮಸ್ಯೆ ಬಗ್ಗೆ ಭಾರತೀಯ ಐಸ್ಕ್ರೀಂ ತಯಾರಕ ಸಂಘ(ಐಐಸಿಎಂಎ) ಇತ್ತೀಚೆಗೆ ಹೊಸದಿಲ್ಲಿಯಲ್ಲಿಕೇಂದ್ರ ಪಶುಸಂಗೋಪನಾ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಅವರನ್ನು ಭೇಟಿ ಮಾಡಿ ಸಂಕಷ್ಟಕ್ಕೆ ಸಿಲುಕಿರುವ ಐಸ್ಕ್ರೀಂ ಉದ್ಯಮಕ್ಕೆ ಚೈತನ್ಯ ಕೊಡುವ ನಿಟ್ಟಿನಲ್ಲಿಕ್ರಮ ವಹಿಸಬೇಕು ಎಂದು ಮನವಿ ಮಾಡಿದೆ. ಈಗ ಕಂಡು ಬಂದಿರುವ ಸಮಸ್ಯೆ ಮುಂದಿನ ನಾಲ್ಕೈದು ತಿಂಗಳುಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಸುದೀರ್ಘ ಕಾಲದ ವರೆಗೆ ಹಾಲಿನ ಪುಡಿ ಕೊರತೆ ಕಂಡುಬಂದರೆ ಸಣ್ಣ ಸಣ್ಣ ಐಸ್ಕ್ರಿಂ ಉದ್ಯಮಗಳು ಬಾಗಿಲು ಮುಚ್ಚುವ ಸಂದರ್ಭ ಉದ್ಭವಿಸಬಹುದು. ಹಾಲಿನ ಪುಡಿ ಕೊರತೆ ಐಸ್ಕ್ರೀಂ ಉದ್ಯಮದ ಮೇಲೆ ನೇರ ಪರಿಣಾಮ ಬೀರುತ್ತಿದೆ. ಬೆಲೆಯೂ ಶೇ.110ರಷ್ಟು ಏರಿಕೆಯಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಐಸ್ಕ್ರೀಂ ತಯಾರಕ ಸಂಘ ಕೇಂದ್ರ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. -ಮುಕುಂದ್ ಕಾಮತ್, ಐಡಿಯಲ್ ಐಸ್ಕ್ರೀಂ ಆಡಳಿತ ಪಾಲುದಾರ ಇಡೀ ರಾಷ್ಟ್ರದಲ್ಲೇ ಹಾಲಿನ ಸಂಗ್ರಹ ಪ್ರಮಾಣ ಶೇ.1ರಷ್ಟು ಕಡಿಮೆಯಾಗಿದೆ. ಮೇ, ಜೂನ್ನಲ್ಲಿಸಮಯಕ್ಕೆ ಸರಿಯಾಗಿ ಮಳೆ ಬಂದಿಲ್ಲ, ಆ ಬಳಿಕ ನೆರೆ ಪರಿಸ್ಥಿತಿಯಿಂದಾಗಿ ಹಾಲಿನ ಸಂಗ್ರಹ ಇಳಿಕೆಯಾಗಿದೆ. ಆದರೆ ಈ ಕೊರತೆ ತಾತ್ಕಾಲಿಕವಾಗಿದ್ದು, ಇದನ್ನೇ ಮುಂದಿಟ್ಟು ವಿದೇಶಗಳಿಂದ ಹಾಲಿನ ಉತ್ಪನ್ನಕ್ಕೆ ಅವಕಾಶ ನೀಡಬಾರದು. -ಬಿ.ಸಿ. ಸತೀಶ್, ಕೆಎಂಎಫ್ ಆಡಳಿತ ನಿರ್ದೇಶಕ, ಬೆಂಗಳೂರು
from India & World News in Kannada | VK Polls https://ift.tt/37tBsXg