- ನವೀನ್ ಮಂಡ್ಯ ರಾಜ್ಯದ ಸಾವಿರಾರು ಹಳ್ಳಿಗಳ ಗ್ರಾಮಠಾಣಾ ವ್ಯಾಪ್ತಿಯನ್ನು ವಿಸ್ತರಿಸುವ ಪ್ರಯತ್ನಕ್ಕೆ ಭೂಮಾಪನ ವ್ಯವಸ್ಥೆ ಮತ್ತು ದಾಖಲೆಗಳ ಇಲಾಖೆಯೇ ಕೊಕ್ಕೆ ಹಾಕಿದೆ. ರಾಜ್ಯದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಇ-ಸ್ವತ್ತು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೈಗೊಂಡಿದ್ದ ನಿರ್ಧಾರಕ್ಕೆ ಮತ್ತೆ ಎಳ್ಳುನೀರು ಬಿಟ್ಟಂತಾಗಿದೆ. ಬ್ರಿಟಿಷರ ಕಾಲದಲ್ಲಿ ನಿಗದಿಯಾಗಿದ್ದ ಗ್ರಾಮಠಾಣಾ ಗಡಿ ಬಳಿಕ ಪರಿಷ್ಕರಣೆ ಕಂಡಿಲ್ಲ. ಎಲ್ಲೆಡೆ ಜನವಸತಿ ಪ್ರದೇಶಗಳು ಗ್ರಾಮಠಾಣಾ ಗಡಿ ಮೀರಿ ವಿಸ್ತರಣೆಯಾಗಿವೆ. ಹೀಗಾಗಿ ಪ್ರಸ್ತುತ ವಿಸ್ತರಣೆಯಾಗಿ ರುವ ಪ್ರದೇಶವನ್ನು ಒಳಗೊಂಡಂತೆ ಹೊಸದಾಗಿ ಸರ್ವೇ ಮಾಡಿಸಿ ಗ್ರಾಮ ಠಾಣಾ ವ್ಯಾಪ್ತಿಯನ್ನು ಪುನರ್ ನಿಗದಿಪಡಿಸಲು ಗ್ರಾಮೀಣಾಭಿವೃದ್ಧಿ ಇಲಾಖೆ ನಿರ್ಧರಿಸಿತ್ತು. ಅದರಂತೆ 2016ರಲ್ಲಿ ಗ್ರಾಮೀಣಾಭಿವೃದಿಟಛಿ ಇಲಾಖೆ ಸಚಿವ, ಕಂದಾಯ ಸಚಿವರ ಜಂಟಿ ಅಧ್ಯಕ್ಷತೆಯಲ್ಲಿ ಇ-ಸ್ವತ್ತು ಯೋಜನೆ ಅನುಷ್ಠಾನದ ಬಗ್ಗೆ ನಡೆದ ಸಭೆಯಲ್ಲಿ ಗ್ರಾಮ ಠಾಣಾ ವ್ಯಾಪ್ತಿಯ ವಿಸ್ತರಣೆಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಬಳಿಕ ಈ ಕುರಿತು 10 ಅಂಶಗಳ ಸುತ್ತೋಲೆ ಹೊರಡಿಸಿ ನಿರ್ಣಯ ಅನುಷ್ಠಾನಕ್ಕೆ ಆದೇಶ ನೀಡಲಾಗಿತ್ತು. ಆದರೆ ಈಗ ಆರ್ಡಿಪಿಆರ್ ಚಿಂತನೆಯನ್ನೇ ವಿಫಲಗೊಳಿಸುವ ಸಲಹೆಯನ್ನು ಭೂಮಾಪನ ವ್ಯವಸ್ಥೆ ಮತ್ತು ದಾಖಲೆಗಳ ಇಲಾಖೆ ಆಯುಕ್ತರು ನೀಡಿದ್ದಾರೆ. ಅಧಿಕೃತ ವ್ಯಾಖ್ಯಾನ ಹಾಗೂ ರೂಢಿಯಲ್ಲಿರುವಂತೆ ‘ಗ್ರಾಮಠಾಣಾಧಿ’ ಎಂದರೆ ಭೂಮಾಪನ ಕಾರಾರಯಚರಣೆ ಕೈಗೊಂಡ ಸಮಯದಲ್ಲಿ ಅಳತೆಯಿಂದ ಕೈಬಿಟ್ಟಿರುವ ಭೂಮಿ. ಆ ಪ್ರದೇಶವನ್ನು ಉದ್ದೇಶಪೂರ್ವಕವಾಗಿಯೇ ಅಳತೆ ಯಿಂದ ಕೈಬಿಡಲಾಗಿರುತ್ತದೆ. ಹೀಗಾಗಿ ಈಗಾಗಲೇ ಸರ್ವೇ ನಂಬರ್ಗಳನ್ನು ನೀಡಿ ಅಳತೆಯಾಗಿ ನಿಗದಿಪಡಿ ಸಿರುವ ಪ್ರದೇಶವನ್ನು ಭೂಕಂದಾಯ ನಿಯಮಾವಳಿಗಳು ಮತ್ತು ಭೂಮಾಪನ ಕಾರ್ಯವಿಧಾನಗಳಡಿ ಗ್ರಾಮಠಾಣಾ ಎಂದು ಘೋಷಿಸಲಾಗದು ಎಂದು ಸ್ಪಷ್ಟಪಡಿಸಿದ್ದಾರೆ. ದಾಖಲೆಗಳ ಪ್ರಕಾರ ಗ್ರಾಮ ಠಾಣಾ ವ್ಯಾಪ್ತಿ ವಿಸ್ತರಣೆ ಸಾಧ್ಯವಿಲ್ಲವೆಂದು ಹೇಳಿರುವ ಭೂಮಾಪನ ವ್ಯವಸ್ಥೆ ಮತ್ತು ದಾಖಲೆಗಳ ಇಲಾಖೆ ಆಯುಕ್ತರು, ಇ-ಸ್ವತ್ತು ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ತೊಡಕುಗಳ ನಿವಾರಣೆ ಹೇಗೆಂಬುದನ್ನು ಹೇಳಿಲ್ಲ. ಹೀಗಾಗಿ ಶತಮಾನದ ಹಿಂದೆ ಬ್ರಿಟಿಷರು ನಿಗದಿಪಡಿಸಿದ್ದ ಗ್ರಾಮಠಾಣಾ ವ್ಯಾಪ್ತಿಯನ್ನೇ ನೆಚ್ಚಿಕೊಂಡು ಕೂರುವಂತಾಗಿದೆ. ವಿಸ್ತರಣೆಯಾಗದಿದ್ದರೆ ಏನು ಸಮಸ್ಯೆ?1. ಗ್ರಾಮಠಾಣಾ ವ್ಯಾಪ್ತಿ ಹೊರಗಿನ ಕಂದಾಯ ಜಮೀನುಗಳಲ್ಲಿ ಮನೆ/ಕಟ್ಟಡಗಳನ್ನು ಕಟ್ಟಿಕೊಂಡಿರುವ ಜನರು ತೊಂದರೆಯಿಂದ ಪರಿತಪಿಸುತ್ತಿದ್ದಾರೆ. ಅವರಿಗೆ ತಮ್ಮ ಆಸ್ತಿಗೆ ಸಂಬಂಧಿಸಿದ ‘9 ಮತ್ತು 11ಎ’ ಇ-ಸ್ವತ್ತು(ಕ್ರಮಬದಟಛಿ ಆಸ್ತಿ ದಾಖಲೆ) ಸಿಗುತ್ತಿಲ್ಲ. ಇದರಿಂದ ಅಂತಹ ಆಸ್ತಿಗಳ ಮಾಲೀಕರಿಗೆ ಹೊಸ ಮನೆ ನಿರ್ಮಾಣ/ದುರಸ್ತಿ/ವಿಸ್ತರಣೆಗಾಗಿ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ಸಿಗುತ್ತಿಲ್ಲ. 2. ಗ್ರಾಮಠಾಣಾದಿಂದ ಹೊರಗಿರುವ ಆಸ್ತಿಗಳ ಮಾರಾಟಕ್ಕೂ ಹಲವು ಕಾನೂನು ಸಮಸ್ಯೆಗಳು ಎದುರಾಗುತ್ತಿವೆ. 3. ಹತ್ತಾರು ವರ್ಷಗಳ ಹಿಂದೆ ‘ವಿಶ್ವಾಸ ಮತ್ತು ಬಾಯಿ ಮಾತಿನ ನಂಬಿಕೆ’ ಮೇಲೆ ಮಾರಾಟವಾಗಿದ್ದ ಆಸ್ತಿಗಳು ಖಾತೆಯಾಗದ ಕಾರಣ ಖರೀದಿದಾರರು ಅನುಭವ ದಲ್ಲಿರುವ ಸೊತ್ತಿನ ಆರ್ ಟಿಸಿ ಮತ್ತು ಇತರ ದಾಖಲೆ ಗಳು ಈಗಲೂ ಮೂಲ ಮಾಲೀಕರ ಹೆಸರಿನಲ್ಲಿವೆ. 4. ಬಹುತೇಕ ಪ್ರಕರಣಗಳಲ್ಲಿ ಒಂದೇ ಸ್ವತ್ತಿನ(ಖಾಲಿ ಭೂಮಿ) ದಾಖಲೆಗಳು ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ ಎರಡೂ ಕಡೆಯಿವೆ. ಇದರಿಂದ ಭೂ ವ್ಯಾಜ್ಯಗಳು ಸಹ ಸೃಷ್ಟಿಯಾಗುತ್ತಿವೆ. ಸ್ವತ್ತಿನ ಮಾದರಿ ದಾಖಲೀಕರಣ ಹೇಗೆ?ಗ್ರಾ.ಪಂ. ವ್ಯಾಪ್ತಿಯಾಚೆಗಿನ ಸ್ವತ್ತಿಗೆ ಅನ್ಯ ಉದ್ದೇಶ(ಅಲಿನೇಷನ್) ಅನುಮತಿ ಪಡೆದು, ಸಂಬಂಧಿಸಿದ ನಗರಾಭಿವೃದಿಟಛಿ ಪ್ರಾಧಿಕಾರ, ನಗರ ಯೋಜನಾ ಪ್ರಾಧಿಕಾರಗಳಿಂದ ನಕ್ಷೆ ಅನುಮೋದನೆ ಪಡೆದರೆ ಗ್ರಾ.ಪಂ.ಗಳಿಂದಲೇ ‘9 ಮತ್ತು 11ಎ’ ಇ-ಸ್ವತ್ತು(ಸಕ್ರಮ) ಲಭಿಸಿದೆ. ಆದರೆ, ಸ್ವತ್ತಿಗೆ ಅನ್ಯ ಉದ್ದೇಶಕ್ಕೆ ಬಳಕೆಗೆ ಅನುಮತಿ ಪಡೆದು ನಕ್ಷೆ ಅನುಮೋದನೆ ಆಗದಿದ್ದರೆ ಅದನ್ನು ಕ್ರಮಬದ್ಧವಲ್ಲದ ಆಸ್ತಿಯೆಂದೇ ಪರಿಗಣಿಸಿ ‘11ಬಿ’ (ಅಕ್ರಮ) ನಮೂನೆ ಕೊಡಲಾಗುತ್ತದೆ. ಅನ್ಯ ಉದ್ದೇಶ ಬದಲಾವಣೆ ಆಗದ ಸ್ವತ್ತಿಗೆ ‘11ಬಿ’ ನಮೂನೆಯೂ ಸಿಗುವುದಿಲ್ಲ. ಜನಸಂಖ್ಯೆ ಹೆಚ್ಚಿದಂತೆ ಜನವಸತಿ ಪ್ರದೇಶದ ವಿಸ್ತರಣೆಯಾಗುವುದು ನೈಸರ್ಗಿಕ ಕ್ರಿಯೆ. ಆದರದು ಕಾನೂನುಬದ್ಧವಾಗಿ ಆಗಬೇಕು. ಇದಕ್ಕಾಗಿ ಕೃಷಿ ಭೂಮಿ ಕೃಷಿಯೇತರ ಬಳಕೆಗೆಂದು ಪರಿವರ್ತನೆಯಾಗಬೇಕು. ಈ ನಿಟ್ಟಿನಲ್ಲಿ ಸರಕಾರ ಹಾಗೂ ಆರ್ಡಿಪಿಆರ್ ಇಲಾಖೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. - ಟಿ.ತಿಮ್ಮೇಗೌಡ, ಐಎಎಸ್ ನಿವೃತ್ತ ಅಧಿಧಿಕಾರಿ, ಮಂಡ್ಯ
from India & World News in Kannada | VK Polls https://ift.tt/2QmjOim