ಪಂಜ್‌ಶೀರ್ ತಮ್ಮ ಹಿಡಿತದಲ್ಲಿದೆ ಎಂದ ತಾಲಿಬಾನ್!: ಅಫ್ಘನ್ ಜನರ ಏಕೈಕ ಭರವಸೆಯೂ ಮಣ್ಣುಪಾಲು?

ಕಾಬೂಲ್: ತಮಗೆ ತಲೆನೋವಾಗಿರುವ ಪ್ರಾಂತ್ಯವನ್ನು ಶುಕ್ರವಾರ ವಶಕ್ಕೆ ಪಡೆದುಕೊಂಡಿರುವುದಾಗಿ ಮೂಲಗಳು ಹೇಳಿಕೊಂಡಿವೆ. ಆದರೆ, ಉಗ್ರರ ವಿರುದ್ಧ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಪಡೆಯ ಮುಖ್ಯಸ್ಥರು ಅದನ್ನು ನಿರಾಕರಿಸಿದ್ದಾರೆ. ಒಂದು ವೇಳೆ ಪಂಜ್‌ಶೀರ್ ಪ್ರಾಂತ್ಯ ತಾಲಿಬಾನ್ ವಶವಾದರೆ, ಇಡೀ ಅಫ್ಘಾನಿಸ್ತಾನದ ಹಿಡಿತ ಅದರ ತೆಕ್ಕೆಗೆ ಬಂದಂತಾಗಲಿದೆ. 'ಸರ್ವಶಕ್ತ ಅಲ್ಲಾಹುವಿನ ಕೃಪೆಯಿಂದ, ನಾವು ಈಗ ಇಡೀ ಅಫ್ಘಾನಿಸ್ತಾನವನ್ನು ನಿಯಂತ್ರಣಕ್ಕೆ ಪಡೆದುಕೊಂಡಿದ್ದೇವೆ. ತೊಂದರೆ ನೀಡುವವರನ್ನು ಸೋಲಿಸಿದ್ದೇವೆ ಮತ್ತು ಪಂಜ್‌ಶೀರ್ ಈಗ ನಮ್ಮ ಹಿಡಿತಕ್ಕೆ ಸಿಕ್ಕಿದೆ' ಎಂದು ತಾಲಿಬಾನ್‌ನ ಒಬ್ಬ ಕಮಾಂಡರ್ ಹೇಳಿದ್ದಾನೆ. ಕಾಬೂಲ್‌ನ ತುಂಬೆಲ್ಲಾ ಗುಂಡುಗಳನ್ನು ಹಾರಿಸುವ ಮೂಲಕ ಸಂಭ್ರಮಾಚರಣೆ ಮಾಡಿದ ಸದ್ದು ಕೇಳಿಬಂದಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಪಂಜ್‌ಶೀರ್ ಪತನದ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ವರದಿಗಳು ಇನ್ನೂ ಖಚಿತವಾಗಿಲ್ಲ. ಇದು ನಿಜವಾದರೆ, ಸಂಪೂರ್ಣ ತಾಲಿಬಾನಿಗಳ ಕೈಗೆ ಸಿಕ್ಕಿದಂತಾಗಲಿದೆ. ಇದು 1996-2001ರವರೆಗೆ ಮೊದಲ ಬಾರಿ ತಾಲಿಬಾನ್ ದೇಶವನ್ನು ಆಳಿದಾಗಲೂ ಸಾಧ್ಯವಾಗಿರಲಿಲ್ಲ. ತಾಲಿಬಾನ್ ವಿರೋಧಿ ಪಡೆಯ ಮುಖ್ಯಸ್ಥರಲ್ಲಿ ಒಬ್ಬರಾಗಿರುವ, ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ , ತಮ್ಮ ಪಡೆ ಹೋರಾಟ ಕೈಬಿಟ್ಟಿಲ್ಲ ಎಂದಿದ್ದಾರೆ. 'ನಾವು ಸಂಕಷ್ಟದ ಸನ್ನಿವೇಶದಲ್ಲಿ ಇದ್ದೇವೆ ಎನ್ನುವುದರಲ್ಲಿ ಅನುಮಾನವಿಲ್ಲ. ನಾವು ತಾಲಿಬಾನ್ ದುರಾಕ್ರಮಣದಲ್ಲಿದ್ದೇವೆ. ನಾವು ಇಲ್ಲಿ ಹಿಡಿತವನ್ನು ಹೊಂದಿದ್ದೇವೆ. ಪ್ರತಿರೋಧ ಒಡ್ಡಿದ್ದೇವೆ' ಎಂದು ಅಮ್ರುಲ್ಲಾ ಅವರ ವಿಡಿಯೋ ಹೇಳಿಕೆಯನ್ನು ಬಿಬಿಸಿ ವರ್ಲ್ಡ್ ಪತ್ರಕರ್ತರೊಬ್ಬರು ಟ್ವೀಟ್ ಮಾಡಿದ್ದಾರೆ. ಪಂಜ್‌ಶೀರ್ ಪತನಗೊಂಡಿರುವುದನ್ನು ಇತರೆ ಅನೇಕ ಪ್ರತಿರೋಧ ಪಡೆಯ ನಾಯಕರು ಸಹ ನಿರಾಕರಿಸಿದ್ದಾರೆ. ತಮ್ಮ ಪ್ರಾದೇಶಿಕ ಸೇನಾ ಪಡೆಗಳ ಸಾವಿರಾರು ಹೋರಾಟಗಾರರು ಹಾಗೂ ಹಳೆಯ ಸರ್ಕಾರದ ಪಡೆಗಳ ತಂಡಗಳು ಜತೆಗೂಡಿವೆ ಎಂದು ಅವರು ಹೇಳಿದ್ದಾರೆ. 'ಪಂಜ್‌ಶೀರ್ ಕೈವಶದ ಸುದ್ದಿಗಳು ಪಾಕಿಸ್ತಾನ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ಶುದ್ಧ ಸುಳ್ಳು' ಎಂದು ಈ ಪಡೆಗಳ ಮುಖ್ಯಸ್ಥ ಅಹ್ಮದ್ ಮಸ್ಸೌದ್ ಹೇಳಿದ್ದಾರೆ. ಪಂಜ್‌ಶೀರ್ ಕಣಿವೆಯಲ್ಲಿ ಭಾರಿ ಕಾಳಗ ನಡೆಯುತ್ತಿದ್ದು, ಅಪಾರ ಸಾವು ನೋವು ಸಂಭವಿಸಿದೆ ಎಂದು ವರದಿಯಾಗಿದೆ. ಸಣ್ಣ ಪ್ರವೇಶ ದ್ವಾರದ ಹೊರತಾಗಿ ಪರ್ವತಗಳಿಂದ ಸಂರಕ್ಷಿತವಾಗಿರುವ ಈ ಪ್ರದೇಶಕ್ಕೆ ಮುತ್ತಿಗೆ ಹಾಕುವ ಮಾರ್ಗಗಳಿಲ್ಲ. ಈ ಹಿಂದೆ ಸೋವಿಯತ್ ಆಕ್ರಮಣದ ಸಂದರ್ಭದಲ್ಲಿಯೂ ಪಂಜ್‌ಶೀರ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಮ್ರುಲ್ಲಾ ಪರಾರಿ?ಈ ನಡುವೆ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಲೆಹ್, ಅಫ್ಘಾನಿಸ್ತಾನದಿಂದ ತಜಿಕಿಸ್ತಾನಕ್ಕೆ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನು ಸಲೆಹ್ ನಿರಾಕರಿಸಿದ್ದಾರೆ. ಈ ವರದಿಗಳು ಸಂಪೂರ್ಣ ಆಧಾರರಹಿತ. ಪ್ರತಿರೋಧವು ಮುಂದುವರಿಯಲಿದೆ ಮತ್ತು ಅಫ್ಘಾನಿಸ್ತಾನವನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ತೊಡಗಿಕೊಂಡಿರುವುದಾಗಿ ಹೇಳಿದ್ದಾರೆ. ಈ ಭಾಗದಲ್ಲಿನ ತನ್ನ ಎದುರಾಳಿ ಗುಂಪುಗಳ ಸಂವಹನಕ್ಕೆ ಅಡ್ಡಿಯುಂಟುಮಾಡಲು ತಾಲಿಬಾನಿಗಳು ದೂರವಾಣಿ ಮತ್ತು ಅಂತರ್ಜಾಲ ಸಂಪರ್ಕಗಳನ್ನು ಕಡಿತಗೊಳಿಸಿದ್ದಾರೆ. ಸಂವಹನ ಕೊರತೆ ಉಂಟಾದರೆ ಪಂಜ್‌ಶೀರ್ ಮೇಲೆ ಆಕ್ರಮಣ ಮಾಡುವುದು ಸುಲಭ ಎಂದು ತಾಲಿಬಾನಿಗಳು ಆಲೋಚಿಸಿದ್ದಾರೆ ಎಂದು ವರದಿಯಾಗಿದೆ. ಮುಲ್ಲಾ ಬರಾದಾರ್ ನಾಯಕತಾಲಿಬಾನ್ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅಫ್ಘಾನಿಸ್ತಾನ ಸರ್ಕಾರವನ್ನು ಮುನ್ನೆಡೆಸಲಿದ್ದು, ಶೀಘ್ರದಲ್ಲಿಯೇ ಅದರ ಅಧಿಕೃತ ಘೋಷಣೆಯಾಗಲಿದೆ. ಕತಾರ್‌ನಲ್ಲಿರುವ ತಾಲಿಬಾನ್‌ನ ರಾಜಕೀಯ ಕಚೇರಿಯ ಮುಖ್ಯಸ್ಥನಾಗಿರುವ ಬರಾದಾರ್ ಜತೆಗೆ ಸರ್ಕಾರದ ಪ್ರಮುಖ ಹುದ್ದೆಗಳಲ್ಲಿ ತಾಲಿಬಾನ್ ಸಂಸ್ಥಾಪಕ ಮುಲ್ಲಾ ಒಮರ್ ಮಗ ಮೊಹಮ್ಮದ್ ಯಾಕೂಬ್ ಹಾಗೂ ಸಂಘಟನೆಯ ಹಿರಿಯ ನಾಯಕ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜೈ ಅವರನ್ನು ನೇಮಿಸಲಾಗಿದೆ ಎಂದು ಮೂಲಗಳು ಹೇಳಿವೆ. ಸರ್ವಸಮ್ಮತ ಸರ್ಕಾರವನ್ನು ರಚಿಸಲು ತಾಲಿಬಾನ್ ಬಯಸಿದೆ. ಈಗ ಮಧ್ಯಂತರ ಸರ್ಕಾರವನ್ನು ರಚಿಸಲಾಗುತ್ತಿದ್ದು, ಅದು ತಾಲಿಬಾನ್ ಸದಸ್ಯರನ್ನು ಮಾತ್ರವೇ ಒಳಗೊಳ್ಳಲಿದೆ. ಸರ್ಕಾರವು 25 ಸಚಿವಾಲಯಗಳನ್ನು, ಒಂದು ಸಲಹಾ ಮಂಡಳಿ ಅಥವಾ ಶುರಾ ಒಳಗೊಂಡಿರಲಿದೆ. ಶುರಾದಲ್ಲಿ 12 ಮಂದಿ ಮುಸ್ಲಿಂ ವಿದ್ವಾಂಸರು ಸದಸ್ಯರಾಗಿರುತ್ತಾರೆ.


from India & World News in Kannada | VK Polls https://ift.tt/3BH3xcN

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...