ಜಲಾಶಯ ನೀರಿನ ಮಟ್ಟ ಕುಸಿತ; ಸಿಎಂ ಬೊಮ್ಮಾಯಿಗೆ ಸಿಕ್ಕೀತೆ ಕೆಆರ್‌ಎಸ್‌ ಬಾಗಿನ ಸಲ್ಲಿಕೆ ಭಾಗ್ಯ?!

ಜಿ.ಎನ್‌.ರವೀಶ್‌ಗೌಡ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆಯ ಪ್ರಸಿದ್ಧ ಕೆಆರ್‌ಎಸ್‌ ಕನ್ನಂಬಾಡಿ ಅಣೆಕಟ್ಟೆ ಭರ್ತಿಯಾದಾಗ ಮುಖ್ಯಮಂತ್ರಿಗಳು ಆಗಮಿಸಿ ಅರ್ಪಿಸುವುದು ಸಂಪ್ರದಾಯ. ಆದರೆ, ಈ ಬಾರಿ ಅಣೆಕಟ್ಟೆ ಭರ್ತಿಯಾಗುವುದೇ ಅನುಮಾನವಾಗಿರುವುದರಿಂದ ಮುಖ್ಯಮಂತ್ರಿ ಅವರಿಗೆ ಬಾಗಿನ ಅರ್ಪಿಸುವ ಭಾಗ್ಯ ಸಿಗುವುದು ಅನುಮಾನವಾಗಿದೆ. ಕಳೆದ ವರ್ಷ ಆ. 21ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕೆಆರ್‌ಎಸ್‌ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದರು. ಆಗಸ್ಟ್‌ನಲ್ಲಿಯೇ ಭರ್ತಿಯಾಗುತ್ತಿದ್ದ ಜಲಾಶಯ ಈ ವರ್ಷ ಸೆಪ್ಟಂಬರ್‌ ಆರಂಭವಾದರೂ ಭರ್ತಿಯಾಗಿಲ್ಲ. 124.80 ಅಡಿ ಮಟ್ಟದ ಜಲಾಶಯ ಈ ಹಿಂದೆಯೇ ಭರ್ತಿಯಾಗುವ ಅವಕಾಶ ಇದ್ದರೂ ತಮಿಳುನಾಡಿಗೆ ನಿತ್ಯ 10 ಸಾವಿರ ಕ್ಯೂಸೆಕ್‌ ನೀರು ಹರಿಸಿದ ಪರಿಣಾಮ 122 ಅಡಿಯವರೆಗೂ ಭರ್ತಿಯಾಗಿದ್ದ ಜಲಾಶಯದಲ್ಲಿ ಇನ್ನೂ ಎರಡು ಅಡಿ ನೀರು ಏರಿಕೆಯಾಗಲಿಲ್ಲ. ಇದೀಗ 116 ಅಡಿಗೆ ಜಲಾಶಯದ ನೀರು ಕುಸಿದಿದೆ. ಜಲಾಶಯ ಮೇಲ್ಭಾಗದಲ್ಲಿರುವ ಕಾವೇರಿ ಉಗಮ ಸ್ಥಾನ ಮಡಿಕೇರಿಯಲ್ಲಿ ಮಳೆ ಸದ್ಯಕ್ಕೆ ಆಗದ ಪರಿಣಾಮ ಅಣೆಕಟ್ಟೆ ಭರ್ತಿಯಾಗುವ ಸಿದ್ಧತೆ ಕ್ಷೀಣಿಸಿದೆ. ಆಗಸ್ಟ್‌ನಲ್ಲಿ ಜಲಾಶಯ ಇನ್ನೇನೋ ಭರ್ತಿಯಾಯ್ತು ಎನ್ನುವ ವಾತಾವರಣ ಕಂಡು ಬಂದಾಗ ಮುಖ್ಯಮಂತ್ರಿ ಬದಲಾವಣೆಯಾಗಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅವರಿಂದ ಜಲಾಶಯಕ್ಕೆ ಬಾಗಿನ ಅರ್ಪಿಸುವ ಕಾರ‍್ಯಕ್ರಮಕ್ಕಾಗಿ ಮಂಡ್ಯ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿತ್ತು. ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಅಶ್ವಿನಿ ನೇತೃತ್ವದ ಪೊಲೀಸರ ತಂಡ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ದಿನಾಂಕವನ್ನು ನಿಗದಿ ಮಾಡಿಕೊಂಡಿತು. ಆದರೆ ಬಹಿರಂಗಪಡಿಸಿರಲಿಲ್ಲ. ಆದರೆ, ನಂತರದಲ್ಲಿ ನೀರಿನ ಮಟ್ಟ ಕ್ಷೀಣಿಸಿತು. ಈಗ ದಿನೇದಿನೆ ಕ್ಷಿಣಿಸುತ್ತಿದೆ. ಹಾಗಾಗಿ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸುವುದು ಅನುಮಾನ ಮೂಡಿಸಿದೆ. ಇವರ ತಂದೆ ಎಸ್‌.ಆರ್‌ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೂ ಬಾಗಿನ ಅರ್ಪಿಸಲು ಸಾಧ್ಯವಾಗಿರಲಿಲ್ಲ.


from India & World News in Kannada | VK Polls https://ift.tt/3DI89Br

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...