ಶ್ರಾವಣದಲ್ಲೂ ತರಕಾರಿ ಬೆಲೆಗೆ ಗ್ರಹಣ; ಬೆಳೆಗಾರರು ಕಂಗಾಲು: ಇಲ್ಲಿದೆ ದರ ಪಟ್ಟಿ!

ಆದರ್ಶ ಕೋಡಿ ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ: ಕೊರೊನಾ ಎರಡನೇ ಅಲೆಯ ಹೊಡೆತದಿಂದ ಬೇಡಿಕೆಯಿಲ್ಲದೆ ಸಂಕಷ್ಟದಲ್ಲಿದ್ದ ಬೆಳೆಗಾರರು ಅನ್‌ಲಾಕ್‌ ಬಳಿಕ ಕೊಂಚ ಬೇಡಿಕೆ ದೊರೆತಿತ್ತು. ಶ್ರಾವಣ ಮಾಸದ ಹಬ್ಬಗಳ ಸಮಯದಲ್ಲಿ ತರಕಾರಿಗಳ ದರವು ಕೊಂಚ ಏರಿಕೆ ಕಂಡು ರೈತರಿಗೆ ಆದಾಯದ ಭರವಸೆ ಮೂಡಿತ್ತು. ಆದರೆ ಕಳೆದ 20 ದಿನದ ಹಿಂದೆ ಇದ್ದ ಇದೀಗ ಮತ್ತೆ ಕುಸಿತ ಕಂಡಿದೆ. ಜಿಲ್ಲೆಯಾದ್ಯಂತ ಉತ್ತಮ ತರಕಾರಿ ಬೆಳೆಯಾಗಿದ್ದು, ಇತರೆಡೆಯಿಂದ ಬಂದ ತರಕಾರಿಗಳಿಂದ ಸ್ಥಳೀಯವಾಗಿ ತರಕಾರಿ ಬೆಲೆಯಲ್ಲಿ ಭಾರಿ ಇಳಿಕೆ ಕಾಣುತ್ತಿದೆ. ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ತರಕಾರಿ ಬೇಡಿಕೆ ಹೆಚ್ಚುವ ನಿರೀಕ್ಷೆಯಿದ್ದರೂ ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಕೆಲವೆಡೆ ಬೆಳೆ ಹಾನಿಯಾಗಿದೆ. ಮುಂದಿನ 15 ದಿನ ಅವಧಿಯಲ್ಲಿ ಮಳೆ ಪರಿಣಾಮ ತರಕಾರಿ ಬೆಳೆ ನಷ್ಟದಿಂದ ದರ ಏರಿಕೆ ಸಂಭವವಿದೆ. ಹುಸಿಯಾದ ಬೆಲೆ ಏರಿಕೆ ನಿರೀಕ್ಷೆ ಬಹುತೇಕರು ಶ್ರಾವಣದಲ್ಲಿ ಹಬ್ಬ ಹರಿದಿನ, ಶುಭ ಸಮಾರಂಭಗಳು ನಡೆಯುವುದರಿಂದ ತರಕಾರಿಗೆ ಬೇಡಿಕೆ ಬಂದು, ಪ್ರತಿ ವರ್ಷ ತರಕಾರಿ ಬೆಲೆ ಸ್ವಲ್ಪ ಮಟ್ಟಿಗೆ ಏರಿಕೆಯಾಗುತ್ತಿತ್ತು. ಈ ಬಾರಿ ಶ್ರಾವಣದಲ್ಲಿ ದೇವಾಲಯಗಳಲ್ಲಿ ಭಕ್ತರ ಪ್ರವೇಶವಿಲ್ಲದೆ, ವಿಶೇಷ ಕಾರ‍್ಯಕ್ರಮಗಳಿಲ್ಲದೆ ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆರಂಭವಾಗದ ಸಭೆ ಸಮಾರಂಭ ಮದುವೆ, ಗೃಹಪ್ರವೇಶ, ಜಾತ್ರೆಯಂತಹ ಕಾರ್ಯಕ್ರಮಗಳು ಹೆಚ್ಚಾಗಿ ತರಕಾರಿಗಳಿಗೆ ಬೇಡಿಕೆ ತಂದುಕೊಡುತ್ತದೆ. ಆದರೆ ಕೊರೊನಾ 3ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಸರಳ ಆಚರಣೆಗೆ ಸರಕಾರ ಆದೇಶಿಸಿದ ಪರಿಣಾಮ ತರಕಾರಿಗೆ ಬೇಡಿಕೆ ಕುಸಿದಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಬೆಲೆ ಕೊಂಚ ಏರಿಕೆ ಕಂಡಿತ್ತಾದರೂ ಇದೀಗ ಮತ್ತೆ ಇಳಿಕೆ ಕಂಡು ನಿರಾಸೆ ಮೂಡಿಸಿದೆ. ಖರ್ಚು ಹೆಚ್ಚು, ಆದಾಯ ಕುಸಿತಜಿಲ್ಲೆಯಲ್ಲಿ ತರಕಾರಿ ಬೆಳೆಗಾರಿಗೆ ಒಂದೆಡೆ ತರಕಾರಿಗಳ ಬೇಡಿಕೆಯಿಲ್ಲದೆ ಬೆಲೆ ಇಳಿಕೆಯಾಗಿ ಸಮಸ್ಯೆ ಎದುರಾಗಿದೆ. ಇನ್ನೊಂದೆಡೆ ತರಕಾರಿ ಬೆಳೆ ಖರ್ಚು ವೆಚ್ಚವು ಹೆಚ್ಚಿದೆ. ಜತೆಗೆ ಜಮೀನಿಂದ ಮಾರುಕಟ್ಟೆಗೆ ತರಲು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಯಿಂದ ವಾಹನಗಳ ಬಾಡಿಗೆ ದರ ಏರಿಕೆಯಾಗಿದೆ. ಇದರಿಂದ ತರಕಾರಿ ಬೆಳೆಗಳ ನಿರ್ವಹಣೆ ಖರ್ಚು ಹೆಚ್ಚಾಗಿ ಆದಾಯ ಕುಸಿದಿದೆ. ಹೂ ಬೆಳೆಗಾರರಿಗೂ ಸಂಕಷ್ಟ ಜಿಲ್ಲೆಯಲ್ಲಿ ಶ್ರಾವಣದಲ್ಲಿ ತರಕಾರಿ ಜತೆ ಹೂಗಳ ಬೆಲೆ ಕೂಡಾ ಇಳಿಕೆ ಕಂಡಿದೆ. ಶುಭ ಸಮಾರಂಭ ಇಲ್ಲದೆ, ಅಕಾಲಿಕ ಮಳೆ ರೈತರನ್ನು ಕಂಗಾಲಾಗಿಸಿದೆ.
ತರಕಾರಿ ಹಳೆಯ ದರ( ಕೆಜಿಗೆ) ಹೊಸ ದರ (ಕೆಜಿಗೆ)
ಟೊಮೇಟೊ 10-15 9-10
ಕ್ಯಾರೆಟ್‌ 50-60 25-30
ಹೀರೆಕಾಯಿ 20-30 8-15
ಬೀನ್ಸ್‌ 30-40 20-25
ಬದನೆಕಾಯಿ 10-20 5 -8
ಮೆಣಸಿನಕಾಯಿ 50-70 30-40
ಕ್ಯಾಪ್ಸಿಕಂ 30-40 15-20
ಹೂಕೋಸು 40-45 25
ಮಾರುಕಟ್ಟೆಗೆ ಇದೀಗ ಹೆಚ್ಚಿನ ತರಕಾರಿಗಳು ಬರುತ್ತಿದ್ದು, ಬೇಡಿಕೆ ಕುಸಿದಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಬೆಳೆ ಹಾನಿಯಿಂದ ತರಕಾರಿ ದರ ಕೆಲದಿನಗಳ ನಂತರ ಹೆಚ್ಚುವ ಸಾಧ್ಯತೆಯಿದೆ. ಚಿನ್ನಪ್ಪ, ತರಕಾರಿ ವ್ಯಾಪಾರಿ ಕೊರೊನಾ ಸಂಕಷ್ಟದಿಂದ ಚೇತರಿಸಿಕೊಳ್ಳುವ ಸಮಯದಲ್ಲಿ ತರಕಾರಿ ಬೆಲೆ ಇಳಿಕೆಯಾಗಿದ್ದು, ಮತ್ತಷ್ಟು ಸಮಸ್ಯೆಗೆ ದಾರಿ ಮಾಡಿಕೊಟ್ಟಿದೆ. ಜತೆಗೆ ಬೆಳೆ ನಿರ್ವಹಣೆ ವೆಚ್ಚವು ಹೆಚ್ಚಿದೆ. ಶಂಕರ್‌, ತರಕಾರಿ ಬೆಳೆಗಾರರು


from India & World News in Kannada | VK Polls https://ift.tt/3kYrc1w

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...