ಕಾಶ್ಮೀರದ ಮುಸ್ಲಿಮರ ಪರ ಧ್ವನಿ ಎತ್ತುವುದು ನಮ್ಮ ಹಕ್ಕು ಎಂದ ತಾಲಿಬಾನ್

ಕಾಬೂಲ್: ನೆಲವನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಭಯೋತ್ಪಾದಕರು ಬಳಸಬಹುದು ಎಂಬ ಭೀತಿಯ ನಡುವೆಯೇ, ಕಾಶ್ಮೀರದ ಜನರು ಸೇರಿದಂತೆ ಮುಸ್ಲಿಮರ ಪರ ಧ್ವನಿ ಎತ್ತುವ ಅಧಿಕಾರ ತನಗೆ ಇದೆ ಎಂದು ಉಗ್ರ ಸಂಘಟನೆ ಹೇಳಿದೆ. ಆದರೆ ಯಾವುದೇ ದೇಶದ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬಳಸುವ ನೀತಿಯನ್ನು ತಾನು ಹೊಂದಿಲ್ಲ ಎಂದು ಅದು ತಿಳಿಸಿದೆ. ಬಿಬಿಸಿ ಉರ್ದು ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ತಾಲಿಬಾನ್ ವಕ್ತಾರ ಸುಹೈಲ್ ಶಹೀನ್, 'ಮುಸ್ಲಿಮರಾಗಿ, ಭಾರತದ ಕಾಶ್ಮೀರದಲ್ಲಿರುವ ಹಾಗೂ ಇತರೆ ಯಾವುದೇ ದೇಶದಲ್ಲಿರುವ ಮುಸ್ಲಿಮರ ಪರ ನಮ್ಮ ಧ್ವನಿ ಎತ್ತಲು ನಮಗೆ ಹಕ್ಕು ಇದೆ' ಎಂದಿದ್ದಾನೆ. 'ಮುಸ್ಲಿಮರು ನಿಮ್ಮದೇ ಜನರು, ನಿಮ್ಮದೇ ದೇಶದ ನಾಗರಿಕರು. ಅವರಿಗೆ ನಿಮ್ಮ ಕಾನೂನುಗಳ ಅಡಿಯಲ್ಲಿ ಸಮಾನ ಹಕ್ಕುಗಳನ್ನು ಪಡೆಯುವ ಅಧಿಕಾರ ಇದೆ ಎಂದು ನಮ್ಮ ಧ್ವನಿಗಳನ್ನು ಎತ್ತುತ್ತೇವೆ' ಎಂದು ಆತ ಹೇಳಿದ್ದಾನೆ. ಕಾಶ್ಮೀರವು ದ್ವಿಪಕ್ಷೀಯ ಹಾಗೂ ಆಂತರಿಕ ವಿಚಾರ. ಈ ವಿಚಾರದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಕಾಬೂಲ್ ಅನ್ನು ನಿಯಂತ್ರಣಕ್ಕೆ ಪಡೆದ ದಿನಗಳಲ್ಲಿ ತಾಲಿಬಾನ್ ಹೇಳಿತ್ತು. ಆದರೆ ಅದಕ್ಕೆ ವಿರುದ್ಧವಾಗಿ ಸುಹೈಲ್ ಹೇಳಿಕೆ ನೀಡಿದ್ದಾನೆ. ಮುಂದಿನ ಗುರಿ ಎಂದ ಅಲ್ ಕೈದಾಅಫ್ಘಾನಿಸ್ತಾನವನ್ನು ಅಮೆರಿಕದ ಆಕ್ರಮಣದಿಂದ ತಾಲಿಬಾನ್ ಮೋಚನೆಗೊಳಿಸಿದೆ. ಇನ್ನು ಜಾಗತಿಕ ಮುದಾಯಗಳು ಇತರೆ 'ಮುಸ್ಲಿಂ ಭೂಮಿ'ಗಳನ್ನು ಮುಕ್ತಗೊಳಿಸಬೇಕಿದೆ. ಜಾಗತಿಕ ಜಿಹಾದ್‌ನ ಮುಂದಿನ ಗುರಿಯಾಗಿ ಕಾಶ್ಮೀರವನ್ನು ಪರಿಗಣಿಸಬೇಕು ಎಂದು ಅಲ್ ಕೈದಾ ಉಗ್ರ ಸಂಘಟನೆ ಹೇಳಿತ್ತು. ಭಾರತದ ಕಾಶ್ಮೀರ ಅಲ್ಲದೆ ಅದು ಇರಾಕ್, ಸಿರಿಯಾ, ಜೋರ್ಡಾನ್ ಮತ್ತು ಲೆಬನಾನ್‌ ಅನ್ನು ಒಳಗೊಂಡ ಮೆಡಿಟೇರಿಯನ್ ಪ್ರದೇಶ ಅಥವಾ ಲೆವಾಂಟ್; ಲಿಬಿಯಾ, ಮೊರಾಕ್ಕೋ, ಅಲ್ಜೀರಿಯಾ, ಮೌರಿಟಾನಿಯಾ, ಟ್ಯುನಿಷಿಯಾ ಮತ್ತು ಸೋಮಾಲಿಯಾಗಳನ್ನು ಒಳಗೊಂಡ ವಾಯವ್ಯ ಆಫ್ರಿಕಾದ ಇಸ್ಲಾಮಿಕ್ ಮಘ್ರೆಬ್; ಯೆಮೆನ್ ದೇಶಗಳನ್ನು ತನ್ನ ಗುರಿಗಳಲ್ಲಿ ಪಟ್ಟಿ ಮಾಡಿದೆ. ಆದರೆ ಅದು, ಮುಸ್ಲಿಂ ಬಾಹುಳ್ಯವಿರುವ ಚೀನಾದ ಕ್ಸಿಂಜಿಯಾಂಗ್ ಮತ್ತು ರಷ್ಯಾದ ಚೆಚ್ನ್ಯಾ ಪ್ರದೇಶಗಳನ್ನು ತನ್ನ ಪಟ್ಟಿಯಿಂದ ಹೊರಗಿರಿಸಿದೆ. ಅಲ್ ಕೈದಾ ಸಂಘಟನೆಯ ಈ ಹೇಳಿಕೆ ಹಿಂದೆ ಪಾಕಿಸ್ತಾನದ ಕೈವಾಡ ಇರುವುದು ನಿಶ್ಚಿತ ಎಂದು ಕೇಂದ್ರ ಸರ್ಕಾರ ಹೇಳಿದೆ.


from India & World News in Kannada | VK Polls https://ift.tt/3tdFH5B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...