ಹಣ್ಣು ತರಕಾರಿ ರಕ್ಷಣೆಗೆ ಕೋಲ್ಡ್ ಸ್ಟೋರೇಜ್; ನನಸಾಗಿದೆ ರಾಮನಗರ ರೈತರ ಬಹು ವರ್ಷಗಳ ಕನಸು!

ಆರ್‌.ಶ್ರೀಧರ್‌ ರಾಮನಗರ: ರಾಮನಗರ ಜಿಲ್ಲೆಯ ರೈತರ ಬಹುವರ್ಷಗಳ ಕನಸು ಸಾಕಾರಗೊಂಡಿದೆ. ಚನ್ನಪಟ್ಟಣದಲ್ಲಿ ಮತ್ತು ತರಕಾರಿಗಳನ್ನು ಸಂರಕ್ಷಿಸಿ ಇಡಬಹುದಾದಂತಹ ಶೀಥಲ ಸಂಗ್ರಹಾಗಾರ(ಕೋಲ್ಡ್‌ ಸ್ಟೋರೇಜ್‌) ನಿರ್ಮಿಸಲಾಗಿದೆ. ರೈತರು ತಾವು ಬೆಳೆದ ಹಣ್ಣು ಮತ್ತು ತರಕಾರಿಗಳನ್ನು ಈ ಶೀಥಲಾಗಾರದಲ್ಲಿಸಂರಕ್ಷಿಸಿಟ್ಟು ಉತ್ತಮ ಬೆಲೆ ಬಂದಾಗ ಮಾರಾಟ ಮಾಡಬಹುದಾಗಿದೆ. ಕರೆಂಟ್‌ ಬೇಕಿಲ್ಲ, ಬಿಸಿಲು ಸಾಕು ವಿಶೇಷವೆಂದರೆ ಈ ಶೀಥಲ ಗೋದಾಮಿಗೆ ಕರೆಂಟ್‌ ಬೇಕಿಲ್ಲ. ಸೌರಶಕ್ತಿ(ಬಿಸಿಲು)ಯಿಂದ ಈ ಘಟಕ ಕಾರ‍್ಯನಿರ್ವಹಿಸುತ್ತದೆ. ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಸೆಲ್ಕೋ ಪ್ರತಿಷ್ಠಾನವು ತನ್ನ ಸಿಎಸ್‌ಆರ್‌ ನಿಧಿಯಡಿ 12 ಲಕ್ಷ ರೂ. ವೆಚ್ಚದಲ್ಲಿ ಕೆಂಗಲ್‌ ರೈತ ಉತ್ಪಾದಕರ ಕಂಪನಿ ಮೂಲಕ 5 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸಿದೆ. ಬಹುದಿನಗಳ ಬೇಡಿಕೆ ರಾಮನಗರ ಜಿಲ್ಲೆಯ ಪ್ರಮುಖ ಬೆಳೆ ಎಂದರೆ ಹಣ್ಣು ಮತ್ತು . ಇವುಗಳ ಶೀಘ್ರವೇ ಕೆಟ್ಟು ಹೋಗುವುದರಿಂದ ಬೆಳೆ ಬಂದಾಗ ಎಷ್ಟು ಬೆಲೆ ಇದೆಯೋ ಅಷ್ಟಕ್ಕೆ ಮಾರಿ ರೈತರು ಕೈತೊಳೆದುಕೊಳ್ಳಬೇಕಿತ್ತು. ಬಹುತೇಕ ಸಮಯ ರೈತರಿಗೆ ಬೆಳೆ ಬೆಳೆದ ಅಸಲೂ ಹುಟ್ಟುತ್ತಿರಲಿಲ್ಲ. ಈ ಸಮಸ್ಯೆಗೊಂದು ಪರಿಹಾರ ದೊರೆಯಬೇಕು. ಹಣ್ಣು ಮತ್ತು ತರಕಾರಿಗಳನ್ನು ಸಂಗ್ರಹಿಸಿಟ್ಟು, ಉತ್ತಮ ಬೆಲೆ ಬಂದಾಗ ಮಾರಾಟ ಮಾಡುವ ವ್ಯವಸ್ಥೆ ಬೇಕು ಎಂಬುದು ರೈತರ ಬಹುದಿನಗಳ ಬೇಡಿಕೆ ಯಾಗಿತ್ತು. ರೈತರಿಗೆ ವರದಾನಈ ಕೋಲ್ಡ್‌ ಸೋರೇಜ್‌ ಚನ್ನಪಟ್ಟಣ ತಾಲೂಕಿನ ರೈತರಿಗೆ ವರದಾನ ಎನ್ನಬಹುದು. ಜಿಲ್ಲೆಯಲ್ಲಿ ಇದುವರೆಗೆ ಒಂದೇ ಒಂದು ಕೋಲ್ಡ್‌ ಸ್ಟೋರೇಜ್‌ ಇರಲಿಲ್ಲ. ಈ ಕೋಲ್ಡ್‌ ಸ್ಟೋರೇಜ್‌ನಲ್ಲಿ ತರಕಾರಿ, ಹೂವು, ಹಣ್ಣುಗಳನ್ನು ಸಂರಕ್ಷಿಸಿ ಇಡಬಹುದು. ಇದರಿಂದ 10 ಸಾವಿರಕ್ಕೂ ಹೆಚ್ಚು ರೈತ ಕುಟುಂಬಗಳಿಗೆ ಅನುಕೂಲವಾಗಲಿದೆ. ಸಾವಿರ ಸದಸ್ಯರು ಈಗಾಗಲೇ ಕೆಂಗಲ್‌ ಎಫ್‌ಪಿಒದಲ್ಲಿ ಒಂದು ಸಾವಿರ ಮಂದಿ ರೈತ ಸದಸ್ಯರಿದ್ದಾರೆ. ಸದಸ್ಯರು ಮಾತ್ರವಲ್ಲದೇ ಸದಸ್ಯರಲ್ಲದ ರೈತರಿಗೂ ತಮ್ಮ ಬೆಳೆಗಳ ದಾಸ್ತಾನಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದಕ್ಕಾಗಿ ಕೆಂಗಲ್‌ ಎಫ್‌ಪಿಒ ಅನ್ನು ರೈತರು ಸಂಪರ್ಕಿಸಬೇಕು. ಅವರು ಸೂಚನೆ ನೀಡಿದಂತೆ ಯಾವ ಬೆಳೆಯನ್ನು ಎಷ್ಟು ದಿನ ಸ್ಟೋರ್‌ ಮಾಡಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ. ಲಾಕ್‌ಡೌನ್‌ನಂತಹ ಪರಿಸ್ಥಿತಿಯಲ್ಲಿಅನುಕೂಲಲಾಕ್‌ಡೌನ್‌ ವೇಳೆ ರೈತರು ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಇಲ್ಲದೇ ನಷ್ಟ ಅನುಭವಿಸಿದ್ದರು. ಕೋಲ್ಡ್‌ ಸ್ಟೋರೇಜ್‌ನಿಂದ ಈ ಸಮಸ್ಯೆಗೆ ಸ್ವಲ್ಪ ಪರಿಹಾರ ದೊರೆಯಲಿದೆ. ಹಣ್ಣ ತರಕಾರಿಗಳನ್ನು ರಕ್ಷಿಸಿಕೊಂಡು, ಮಾರುಕಟ್ಟೆ ತೆರೆದಾಗ ಮಾರಾಟ ಮಾಡಬಹುದು. ಬೇಬಿಕಾರ್ನ್‌, ಮಾವಿನ ಹಣ್ಣು, ಹಸಿ ಶುಂಠಿಯಂತಹ ಬೆಳೆಗಳನ್ನು ದೀರ್ಘಕಾಲ ಸಂರಕ್ಷಿಸಿ ಇಡಬಹುದು. ಬಾಡಿಗೆಗೆ ಲಭ್ಯಈ ಕೋಲ್ಡ್‌ ಸ್ಟೋರೇಜ್‌ ಸೌರಶಕ್ತಿಯಿಂದ ನಡೆಯುವುದರಿಂದ ಇದರ ನಿರ್ವಹಣೆ ಸುಲಭ. ಕರೆಂಟ್‌ ಸಂಪರ್ಕ, ಪವರ್‌ಕಟ್‌ ವೇಳೆ ಜನರೇಟರ್‌ ಸೌಲಭ್ಯದ ಅಗತ್ಯ ಇರುವುದಿಲ್ಲ. ರೈತರು ಬಾಡಿಗೆ ನೀಡಿ ಕೋಲ್ಡ್‌ ಸ್ಟೋರೇಜ್‌ನಲ್ಲಿ ತಮ್ಮ ಉತ್ಪನ್ನವನ್ನು ರಕ್ಷಿಸಿ ಇಡಬಹುದು. ಕೆಜಿ ಬಾಳೆಗೆ ದಿನಕ್ಕೆ 50ರಿಂದ 60 ಪೈಸೆ ದರ ವಿಧಿಸುವ ಸಾಧ್ಯತೆ ಇದೆ. ಇದರೊಟ್ಟಿಗೆ ಇನ್ನಿತರ ಬೆಳೆಗಳಿಗೆ ನಿರ್ಧಿಷ್ಟ ದರ ನಿಗದಿಯಾಗಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆ ಕೋಲ್ಡ್‌ ಸ್ಟೋರೇಜ್‌ಗಳನ್ನು ಜಿಲ್ಲೆಯಲ್ಲಿ ಇನ್ನಷ್ಟು ನಿರ್ಮಿಸಲಾಗುವುದು. ತಾಲೂಕಿಗೆ ಒಂದರಂತೆ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸುವ ಯೋಚನೆ ಇದೆ. ಇದಕ್ಕಾಗಿ ಬೃಹತ್‌ ಉದ್ಯಮಗಳು ಹಾಗೂ ಎನ್‌ಜಿಒಗಳ ಸಿಎಸ್‌ಆರ್‌ ನಿಧಿ ಬಳಸಿಕೊಳ್ಳಲಾಗುವುದು ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ. ಚನ್ನಪಟ್ಟಣದ ಬೈರಾಪಟ್ಟಣದಲ್ಲಿ ಮಾವು ಸಂಸ್ಕರಣ ಘಟಕ ತೆರೆಯಬೇಕು ಎಂಬ ಕೂಗು ಇನ್ನಷ್ಟು ಹೆಚ್ಚಾಗಿದೆ. ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್‌ ಸಹ ಗುರುವಾರ ರಾಮನಗರ ಜಿಲ್ಲಾಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್‌.ಅಶ್ವತ್‌ ನಾರಾಯಣ್‌ ಸಹ ಬೈರಾಪಟ್ಟಣದಲ್ಲಿನ ಸ್ಥಳ ಪರಿಶೀಲನೆ ನಡೆಸಿದ್ದು, ಶೀಘ್ರವೇ ಮಾವು ಸಂಸ್ಕರಣ ಘಟಕ ತೆರೆಯುವ ಭರವಸೆಯನ್ನು ನೀಡಿದ್ದಾರೆ. ಲಾಭಗಳೇನು?
  • ಗುಲಾಬಿಯನ್ನು 48 ಗಂಟೆಗಳವರೆಗೆ ಕೋಲ್ಡ್‌ ಸ್ಟೋರೆಜ್‌ನಲ್ಲಿಟ್ಟರೆ, ಹೂವಿನ ಗಾತ್ರ ಹಿಗ್ಗುತ್ತದೆ.
  • ಬೇಬಿಕಾರ್ನ್‌ ಗಾತ್ರವೂ ಹಿಗ್ಗಿ ಉತ್ತಮ ದರ ದೊರೆಯುತ್ತದೆ.
  • ಮಾವು ಮತ್ತು ಬಾಳೆ ಹಣ್ಣುಗಳನ್ನು ದೀರ್ಘಕಾಲ ರಕ್ಷಿಸಬಹುದು
  • ಕೋಲ್ಡ್‌ ಸ್ಟೋರೇಜ್‌ನಲ್ಲಿ ಉತ್ಪನ್ನ ಸಂರಕ್ಷಿಸಿ, ಉತ್ತಮ ಬೆಲೆ ದೊರೆತಾಗ ಮಾರಬಹುದು
ಸೆಲ್ಕೋ ಪ್ರತಿಷ್ಠಾನವು 12 ಲಕ್ಷ ವೆಚ್ಚದಲ್ಲಿ ಕೆಂಗಲ್‌ನಲ್ಲಿ ಎಫ್‌ಪಿಒ ಮೂಲಕ 5 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಸೋಲಾರ್‌ ಕೋಲ್ಡ್‌ ಸ್ಟೋರೇಜ್‌ ನಿರ್ಮಿಸಿದೆ. ಇಲ್ಲಿ ರೈತರು ತಮ್ಮ ಬೆಳೆಗಳನ್ನು ಶೇಖರಿಸಿಡಬಹುದು. ಎಫ್‌ಪಿಒ ಕೋಲ್ಡ್‌ ಸ್ಟೋರೇಜ್‌ ನಿರ್ವಹಿಸಲಿದೆ. ಇದರಿಂದ ಚನ್ನಪಟ್ಟಣ ಭಾಗದ ರೈತರಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ. ಮುನೇಗೌಡ, ಉಪನಿರ್ದೇಶಕ ತೋಟಗಾರಿಕಾ ಇಲಾಖೆ, ರಾಮನಗ


from India & World News in Kannada | VK Polls https://ift.tt/3BM5chr

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...