ಲಿಂಗ ಸ್ಪರ್ಶಕ್ಕೆ ಸೂರ್ಯನಿಗೆ ಮೋಡ ಅಡ್ಡಿಯಾಗಿದ್ದರಿಂದ ಯುದ್ಧಕಾಂಡ ನಡೆಯಬಹುದು: ಅರ್ಚಕ ಸೋಮಸುಂದರ್

ಬೆಂಗಳೂರು: ಗವಿಗಂಗಾಧರೇಶ್ವರನ ದೇವಾಲಯದಲ್ಲಿ ಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾಗಿದೆ. ಹೀಗಾಗಿ ಬೆಳಗ್ಗೆಯಿಂದಲೂ ಕೌತಕ ಕಾಣಲು ಕಾತರತೆಯಿಂದ ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗವಿಗಂಗಾಧರೇಶ್ವರ ದೇಗುಲದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್, ಗವಿಗಂಗಾಧರೇಶ್ವರನ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾಗಿದೆ ಆದರೆ ಭಾಸ್ಕರನು ಅಗೋಚರವಾಗಿ ಲಿಂಗ ಸ್ಪರ್ಶಿಸಿ ಹಾದುಹೋಗಿದ್ದಾನೆ ಎಂದು ತಿಳಿಸಿದರು. ದೈವ ನಿರ್ಣಯ ದೇವರಿಗೆ ಮಾತ್ರ ಗೊತ್ತಿರುತ್ತದೆ. ನನ್ನ 53 ವರ್ಷಗಳ ಅನುಭವದಲ್ಲಿ ಇದೇ ಮೊದಲ ಬಾರಿ ಹೀಗಾಗುತ್ತಿದೆ. ಕಳೆದ ವರ್ಷ ಈಶ್ವರನ ಮೇಲೆ 2.36 ನಿಮಿಷ ಸೂರ್ಯ ಕಿರಣವಿತ್ತು. ಹಾಗಾಗಿ, ಕಳೆದ ವರ್ಷ ಕೊರೊನಾ ಇಡೀ ವಿಶ್ವವನ್ನು ಕಾಡಿತ್ತು. 2020ರ ವರ್ಷದ ಇಡೀ ವಿಶ್ವಕ್ಕೆ ಸಂಕಷ್ಟದ ವರ್ಷವಾಗಿತ್ತು. ಈ ವರ್ಷ ಅಗೋಚರವಾಗಿ ಸೂರ್ಯ ಪೂಜೆ ಮಾಡಿದ್ದಾನೆ. ಅಗೋಚರ ಸ್ಪರ್ಶವಾಗಿದ್ದರಿಂದ ಯಾವುದೇ ಸಮಸ್ಯೆಯಿಲ್ಲ. 2019 ವರ್ಷದಂತೆ 2021ರ ವರ್ಷ ಶುಭಮಯವಾಗಿರುತ್ತದೆ. ಪ್ರಕೃತಿಯಲ್ಲಿ ಉಂಟಾಗಿದ್ದ ಕೊರೊನಾ ಮಾರಿ ತೊಲಗಲಿದೆ. 20 ನಿಮಿಷಗಳ ಮುಂಚೆ ದಕ್ಷಿಣಾಯಣದಲ್ಲಿ ಸೂರ್ಯನಿದ್ದನು. ಈಗ ಉತ್ತರಾಯಣ ಕಾಲ ಆರಂಭವಾಗಿದೆ ಎಂದು ಸೋಮಸುಂದರ್ ದೀಕ್ಷಿತ್ ತಿಳಿಸಿದರು. ಯುದ್ಧ ಸಾಧ್ಯತೆ! ಇನ್ನು ಗಂಗಾಧರನಿಗೆ ಸೂರ್ಯ ರಶ್ಮಿ ಸ್ಪರ್ಶಕ್ಕೆ ಮೋಡ ಅಡ್ಡವಾಗಿದೆ. ಮೋಡ ಅಡ್ಡ ಬಂದಿದ್ದರಿಂದ ಯುದ್ಧಕಾಂಡ ನಡೆಯಬಹುದು. ಶಿವನ ಕ್ಷೇತ್ರಗಳಲ್ಲಿ ಮೃತ್ಯುಂಜಯ ಪೂಜೆಯಿಂದ ಮೋಕ್ಷ ಲಭಿಸುತ್ತದೆ. ಮಾಘಮಾಸದಲ್ಲಿ ಅತಿರುದ್ರ ಮಹಾಯಾಗ ಮಾಡುತ್ತೇವೆ. ಸ್ವಾಮಿ ಸನ್ನಿಧಿಯಲ್ಲಿ ಮಹಾಯಾಗದಿಂದ ಒಳ್ಳೆಯದಾಗಲಿದೆ. ಜಗದೋದ್ಧಾರಕ ಶಿವನು ಎಲ್ಲರನ್ನೂ ಸಂತುಷ್ಟಗೊಳಿಸುತ್ತಾನೆ. ಆಲಯದ ಅರ್ಧದವರೆಗೆ ಸೂರ್ಯ ರಶ್ಮಿ ಪ್ರವೇಶವಾಗಿತ್ತು. ಹಾಗಾಗಿ, ಅಗೋಚರವಾಗಿ ಸೂರ್ಯ ಪೂಜೆ ಸಲ್ಲಿಸಿದ್ದಾನೆ. ಪರಮೇಶ್ವರನ ಕೃಪೆ ಎಲ್ಲರ ಮೇಲೂ ಇರಲಿದೆ ಎಂದು ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ. 53 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸೂರ್ಯ ರಶ್ಮಿ ಗೋಚರವಾಗದೆ ಭಕ್ತರಿಗೆ ಭಾರಿ ನಿರಾಸೆಯಾಗಿದೆ. ಮೋಡ ಅಡ್ಡ ಬಂದ ಕಾರಣ ಸೂರ್ಯನ ಕಿರಣ ಅಗೋಚರವಾಗಿ ಸ್ಪರ್ಶಿಸಿದೆ. ಇದರಿಂದ ಸೂರ್ಯನ ರಶ್ಮಿಯೊಂದಿಗೆ ಸ್ವಾಮಿ ದರ್ಶನ ಮಾಡುವುದನ್ನು ನೋಡಲು ಬೆಳಗ್ಗಿನಿಂದಲೇ ದೇವಾಲಯದ ಆವರಣದಲ್ಲಿ ಕಾದು ಕುಳಿತಿದ್ದ ಭಕ್ತರಿಗೆ ನಿರಾಸೆಯಾಯಿತು. ಸಂಜೆ 5.25ರಿಂದ 5.27ರ ಸಮಯದಲ್ಲಿ ಸೂರ್ಯಕಿರಣ ನಂದಿ ಮೂಲಕ ಸ್ವಾಮಿಯೆಡೆಗೆ ಹಾದು ಹೊಗಬೇಕಾಗಿತ್ತು. ಆದರೆ, ಮೋಡ ಅಡ್ಡ ಬಂದ ಪರಿಣಾಮ ಸೂರ್ಯನಕಿರಣ ಗೋಚರವಾಗಿಲ್ಲ


from India & World News in Kannada | VK Polls https://ift.tt/3qnqAUg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...