from India & World News in Kannada | VK Polls https://ift.tt/3ofnXTF
ಕಲಬುರಗಿ: ಜಿಲ್ಲೆಯಲ್ಲಿ ಎಚ್ಐವಿ ಹರಡುವಿಕೆ ಗಣನೀಯವಾಗಿ ಇಳಿಕೆ ಕಂಡು ಬಂದಿದ್ದು, ವರ್ಷದಿಂದ ವರ್ಷಕ್ಕೆ ಸೋಂಕು ಇಳಿಕೆಯಾಗುತ್ತಿರುವುದು ಸಮಾಧಾನಕರ ವಿಷಯ. ಆದ್ರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಗರ್ಭಿಣಿಯರಲ್ಲಿ ಅಲ್ಪ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.ಎಚ್ಐವಿ ಸೋಂಕು ತಡೆಗೆ ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಏಡ್ಸ್ ಪೀಡಿತರ ಸಂಖ್ಯೆ ಇಳಿಮುಖದತ್ತ ಸಾಗಿದೆ ಎಂಬುದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳಿಂದ ಸಾಬೀತಾಗಿದೆ. ಪ್ರಮುಖವಾಗಿ ಗರ್ಭಿಣಿಯರಲ್ಲಿ ಎಚ್.ಐ.ವಿ ಸೋಂಕು ಶೇ.0.01ಕ್ಕೆ ಇಳಿದಿರುವುದನ್ನು 2019-20ರ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರಿಕ್ಷಾ ಕೇಂದ್ರಗಳಲ್ಲಿನ (ಐಸಿಟಿಸಿ) ಅಂಕಿ ಅಂಶಗಳಿಂದ ರುಜುವಾತಾಗಿದೆ.
ಕಲಬುರಗಿ:
ಜಿಲ್ಲೆಯಲ್ಲಿ ಎಚ್ಐವಿ ಹರಡುವಿಕೆ ಗಣನೀಯವಾಗಿ ಇಳಿಕೆ ಕಂಡು ಬಂದಿದ್ದು, ವರ್ಷದಿಂದ ವರ್ಷಕ್ಕೆ ಸೋಂಕು ಇಳಿಕೆಯಾಗುತ್ತಿರುವುದು ಸಮಾಧಾನಕರ ವಿಷಯ. ಆದ್ರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಗರ್ಭಿಣಿಯರಲ್ಲಿ ಅಲ್ಪ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಎಚ್ಐವಿ ಸೋಂಕು ತಡೆಗೆ ಆರೋಗ್ಯ ಇಲಾಖೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು, ಜನರಲ್ಲಿ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಏಡ್ಸ್ ಪೀಡಿತರ ಸಂಖ್ಯೆ ಇಳಿಮುಖದತ್ತ ಸಾಗಿದೆ ಎಂಬುದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳಿಂದ ಸಾಬೀತಾಗಿದೆ. ಪ್ರಮುಖವಾಗಿ ಗರ್ಭಿಣಿಯರಲ್ಲಿ ಎಚ್.ಐ.ವಿ ಸೋಂಕು ಶೇ.0.01ಕ್ಕೆ ಇಳಿದಿರುವುದನ್ನು 2019-20ರ ಸಮಗ್ರ ಆಪ್ತ ಸಮಾಲೋಚನೆ ಮತ್ತು ಪರಿಕ್ಷಾ ಕೇಂದ್ರಗಳಲ್ಲಿನ (ಐಸಿಟಿಸಿ) ಅಂಕಿ ಅಂಶಗಳಿಂದ ರುಜುವಾತಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಈ ಬಾರಿ ಗರ್ಭಿಣಿಯರಲ್ಲಿ ಸೋಂಕು ಅಲ್ಪ ಏರಿಕೆಯಾಗಿದೆ. 2019-20ರಲ್ಲಿ 88932 ಜನರಿಗೆ ಟೆಸ್ಟ್ ಮಾಡಿದರೆ 16 ಜನರಿಗೆ ಸೋಂಕು ತಗುಲಿತ್ತು. ಆದರೆ, 2020-21ರಲ್ಲಿ ಅಕ್ಟೋಬರ್ ಅಂತ್ಯದವರೆಗೆ ಕೇವಲ 34650 ಜನರನ್ನು ಟೆಸ್ಟ್ ಮಾಡಿದ್ದು ಇದರಲ್ಲಿ 17 ಜನರಿಗೆ ಸೋಂಕು ತಗುಲಿದ್ದು, ವರ್ಷಾಂತ್ಯದವರಿಗೆ ಸೋಂಕಿತರ ಸಂಖ್ಯೆ ಹೆಚ್ಚಳವಾಗುವ ಸಂಭವವೂ ಇರುವುದಕ್ಕೆ ಆತಂಕಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ 25 ಸಮಗ್ರ ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಈ ಕೇಂದ್ರಗಳಲ್ಲಿ ಎಚ್ಐವಿ ಪರೀಕ್ಷೆ ಮತ್ತು ಆಪ್ತ ಸಮಾಲೋಚನೆ ಮಾಡಲಾಗುತ್ತಿದೆ. 115 ಎಫ್ಐಸಿಟಿಸಿ ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ ಎಚ್ಐವಿ ಸ್ಕ್ರೀನಿಂಗ್ ಮಾಡಲಾಗುತ್ತದೆ. ಮೂರು ಎಆರ್ಟಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 18 ಲಿಂಕ್ ಎಆರ್ಟಿ ಕೇಂದ್ರಗಳು, 8 ರಕ್ತನಿಧಿ ಕೇಂದ್ರ, 1 ಸುರಕ್ಷಾ ಕ್ಲಿನಿಕ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

ಜಿಲ್ಲೆಯಲ್ಲಿ ಏಡ್ಸ್ ನಿಯಂತ್ರಣಕ್ಕೆ, ಸರಕಾರದ ಸೌಲಭ್ಯ, ಆಪ್ತ ಸಮಾಲೋಚನೆಗೆ ಐದು ಸ್ವಯಂ ಸೇವಾ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಜೀವನ ಜ್ಯೋತಿ ಮಹಿಳಾ ಅಭಿವೃದ್ಧಿ ಸಂಸ್ಥೆ, ಸ್ನೇಹಾ ಸೊಸೈಟಿ, ದಿವ್ಯ ಜೀವನ ಪಾಸಿಟಿವ್ ನೆಟ್ವರ್ಕ್, ಸಾಥಿ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಕಾರ್ಯನಿರ್ವಹಿಸುತ್ತಿವೆ.

ಕಾಲೇಜು ರೆಡ್ ರಿಬ್ಬನ್ ಕ್ಲಬ್ನಿಂದ ಜಿಲ್ಲೆಯಲ್ಲಿ ಒಟ್ಟು 68 ಕಾಲೇಜುಗಳಲ್ಲಿ ಆರ್ಆರ್ಸಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಶಾಲೆಯಲ್ಲಿ ಎಇಪಿ (ಆಡೊಲೆಸೆಂಟ್ ಎಜುಕೇಷನ್ ಪ್ರೋಗ್ರಾಮ್) ಯಿಂದ ಜಿಲ್ಲೆಯಲ್ಲಿ ಪ್ರತಿ ವರ್ಷ 250 ಶಾಲೆಗಳಲ್ಲಿ 50 ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನುರಿತ ತರಬೇತಿ, ಆಪ್ತ ಸಮಾಲೋಚಕರಿಂದ ಮಕ್ಕಳಿಗೆ ಆರೋಗ್ಯ ಶಿಕ್ಷಣ ನೀಡಲಾಗುತ್ತದೆ. ಜಿಲ್ಲೆಯ ಎಲ್ಲಆಶಾ ಕಾರ್ಯಕರ್ತೆಯರಿಗೆ ಎಚ್ಐವಿ ನಿಯಂತ್ರಣ ತರಬೇತಿ ನೀಡಿ ಇವರಿಂದ ಜಿಲ್ಲಾದ್ಯಂತ ಪ್ರತಿ ಮನೆಗಳಿಗೆ ಭೇಟಿ ನೀಡಿ ಎಚ್ಐವಿ ತಡೆಯ ಮಾಹಿತಿ ನೀಡಲಾಗಿದೆ.

ಜಿಲ್ಲೆಯಲ್ಲಿ ಒಟ್ಟು 4880 ಎಚ್ಐವಿ ಸೋಂಕಿತರಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲಬುರಗಿಯಲ್ಲಿ 1916, ಜೇವರ್ಗಿಯಲ್ಲಿ 734, ಆಳಂದದಲ್ಲಿ 526, ಅಫಜಲಪುರದಲ್ಲಿ 372, ಚಿತ್ತಾಪುರದಲ್ಲಿ 635, ಚಿಂಚೋಳಿಯಲ್ಲಿ 385, ಸೇಡಂನಲ್ಲಿ 312 ಸೋಂಕಿತರಿದ್ದಾರೆ.
ನಾಗಪ್ಪ ನಾಗನಾಯಕನಹಳ್ಳಿಬೆಂಗಳೂರು: ಅತ್ತ ಗ್ರಾಮ ಪಂಚಾಯಿತಿ, ಇತ್ತ ಬಿಬಿಎಂಪಿಯಿಂದ ಮೂಲ ಸೌಲಭ್ಯ ಸಿಗದೆ ತ್ರಿಶಂಕು ಸ್ಥಿತಿಯಲ್ಲಿದ್ದ ಗ್ರಾಮಗಳನ್ನು ಪಾಲಿಕೆಯ ತೆಕ್ಕೆಗೆ ಸೇರಿಸಲು ಸಚಿವ ಸಂಪುಟ ಸಭೆ ಕೈಗೊಂಡ ನಿರ್ಧಾರ ಗ್ರಾಮಗಳ ನಿವಾಸಿಗಳನ್ನು ನಿರಾಳರಾಗುವಂತೆ ಮಾಡಿದೆ. ಬಿಬಿಎಂಪಿ ಸೇರ್ಪಡೆ ಬೆನ್ನಲ್ಲೇ ಈಗ ಆಸ್ತಿಗಳ ಮೌಲ್ಯವೂ ಏರಿಕೆಯಾಗುವ ನಿರೀಕ್ಷೆ ಇದೆ.ಯಶವಂತಪುರ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೇಪುರ, ಕಾನ್ಷಿರಾಮ್ನಗರ ಹಾಗೂ ಲಕ್ಷ್ಮೇಪುರ ಗ್ರಾಮದ ಬಡಾವಣೆಗಳ ಜನರಿಗೆ ಪಾಲಿಕೆ ಸೇರುವ ಕನಸು ಸಾಕಾರಗೊಂಡಿದೆ. ಬಿಬಿಎಂಪಿ ಒಡಲು ಸೇರುತ್ತಿರುವ ಕಾನ್ಷಿರಾಮ್ನಗರ, ಲಕ್ಷ್ಮೇಪುರ ಸುತ್ತಲಿನ ಬಡಾವಣೆಗಳದ್ದು ಒಂದು ಕತೆಯಾದರೆ, ಮಲ್ಲಸಂದ್ರ ಮತ್ತು ಉತ್ತರಹಳ್ಳಿ ಮನವರ್ತೆ ಕಾವಲ್ನಲ್ಲಿನ ನಿವಾಸಿಗಳದ್ದು ಮತ್ತೊಂದು ವ್ಯಥೆ. ಶೆಟ್ಟಿಹಳ್ಳಿ ವಾರ್ಡ್ನ ಮಗ್ಗುಲಲ್ಲೇ ಇದ್ದರೂ ಕಾನ್ಷಿರಾಮ್ನಗರ ಮತ್ತು ಲಕ್ಷ್ಮೇಪುರಕ್ಕೆ ಪಾಲಿಕೆಗೆ ಸೇರುವ ಭಾಗ್ಯ ದಕ್ಕಿರಲಿಲ್ಲ. ಹೀಗಾಗಿ, ಸಂಪೂರ್ಣ ನಗರೀಕರಣಗೊಂಡಿದ್ದ ಈ ಪ್ರದೇಶಗಳು ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲೇ ಉಳಿದುಕೊಂಡು, ಅಗತ್ಯ ಮೂಲಸೌಕರ್ಯಗಳಿಲ್ಲದೆ ಸೊರಗಿ ಹೋಗಿದ್ದವು.ಲಾಬಿಯೋ ಅಥವಾ ಪ್ರಮಾದವೋ?: ರಾಜ್ಯ ಸರಕಾರವು ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್ನ ಭಾಗಶಃ ಪ್ರದೇಶಗಳು ಸೇರಿದಂತೆ ಒಟ್ಟು 111 ನಗರೀಕರಣಗೊಂಡ ಗ್ರಾಮಗಳನ್ನು ಬಿಬಿಎಂಪಿಗೆ ಸೇರಿಸಲು 2006ರ ನ. 2ರಂದು ಕರಡು ಅಧಿಸೂಚನೆ ಹೊರಡಿಸಿತು. ಆದರೆ, 2007ರ ಜ. 16ರಂದು ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಮಲ್ಲಸಂದ್ರ ಹಾಗೂ ಮನವರ್ತೆ ಕಾವಲ್ನ ಅರ್ಧ ಭಾಗವನ್ನೂ ಕೈಬಿಡಲಾಗಿತ್ತು. ತಲಘಟ್ಟಪುರ ಗ್ರಾಮ ಪಂಚಾಯಿತಿ ಅಧೀನದಲ್ಲಿದ್ದ ಎಲ್ಲಪ್ರದೇಶಗಳನ್ನು ಹೆಮ್ಮಿಗೆಪುರ ವಾರ್ಡ್ಗೆ ಸೇರ್ಪಡೆ ಮಾಡಲಾಯಿತು. ಆದರೆ, ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್ನ ಭಾಗಶಃ ಪ್ರದೇಶಗಳನ್ನು, ಸಂಬಂಧವೇ ಇಲ್ಲದ 10 ಕಿ.ಮೀ ದೂರದಲ್ಲಿರುವ ಕಗ್ಗಲೀಪುರ ಗ್ರಾಮ ಪಂಚಾಯಿತಿ ಮಡಿಲಿಗೆ ಹಾಕಲಾಗಿತ್ತು. ಈ ಗ್ರಾಮಗಳನ್ನು ಪಾಲಿಕೆಗೆ ಸೇರಿಸದಿರುವ ಕಾರಣವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಈ ಪ್ರದೇಶಗಳು ಪಾಲಿಕೆ ತೆಕ್ಕೆ ಸೇರದಂತೆ ವ್ಯವಸ್ಥಿತ ಸಂಚು ರೂಪಿಸಿದ್ದರ ಹಿಂದೆ ಪ್ರಭಾವಿ ಬಿಲ್ಡರ್ಸ್ಗಳ ಕೈವಾಡವಿತ್ತೆ ಎಂಬ ಶಂಕೆಯೂ ವ್ಯಕ್ತವಾಗಿದೆ.ಬಿಬಿಎಂಪಿಗೆ 7 ನಗರಸಭೆ, ಒಂದು ಪುರಸಭೆ ಮತ್ತು 110 ಹಳ್ಳಿಗಳನ್ನು ಸೇರ್ಪಡೆ ಮಾಡಿದ ಸಂದರ್ಭದಲ್ಲಿ ಭೌಗೋಳಿಕವಾಗಿ 552 ಎಕರೆ ವಿಸ್ತೀರ್ಣರುವ ಮಲ್ಲಸಂದ್ರ ಮತ್ತು ನೈಸ್ ರಸ್ತೆಗೆ ಹೊಂದಿಕೊಂಡಿರುವ ಯು.ಎಂ.ಕಾವಲ್ ಪ್ರದೇಶಗಳಲ್ಲಿ ಗಗನಚುಂಬಿ ಅಪಾರ್ಟ್ಮೆಂಟ್ಗಳ ನಿರ್ಮಾಣ ಪರ್ವ ಶುರುವಾಗಿತ್ತು. ಪಾಲಿಕೆಗೆ ಸೇರಿದರೆ ಕಟ್ಟಡ ನಕ್ಷೆ ಮಂಜೂರಾತಿ, ಒಸಿ, ಸಿಸಿ ಶುಲ್ಕ ಮತ್ತು ಕೋಟ್ಯಂತರ ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಅಲ್ಲದೇ ಅಧಿಕ ಅಂತಸ್ತುಗಳಿಗೆ ಅನುಮತಿ ಸಿಗುವುದಿಲ್ಲವೆಂಬ ಕಾರಣಕ್ಕೆ ರಿಯಲ್ ಎಸ್ಟೇಟ್ ಸಂಸ್ಥೆಗಳು, ಪ್ರಭಾವ ಬಳಸಿ ಈ ಎರಡೂ ಗ್ರಾಮಗಳು ಪಾಲಿಕೆಗೆ ಸೇರಿದಂತೆ ನೋಡಿಕೊಂಡಿವೆ ಎಂಬ ಆರೋಪ ಕೇಳಿಬಂದಿದೆ.
ನಾಗಪ್ಪ ನಾಗನಾಯಕನಹಳ್ಳಿ
ಬೆಂಗಳೂರು
:
ಅತ್ತ ಗ್ರಾಮ ಪಂಚಾಯಿತಿ, ಇತ್ತ ಬಿಬಿಎಂಪಿಯಿಂದ ಮೂಲ ಸೌಲಭ್ಯ ಸಿಗದೆ ತ್ರಿಶಂಕು ಸ್ಥಿತಿಯಲ್ಲಿದ್ದ ಗ್ರಾಮಗಳನ್ನು ಪಾಲಿಕೆಯ ತೆಕ್ಕೆಗೆ ಸೇರಿಸಲು ಸಚಿವ ಸಂಪುಟ ಸಭೆ ಕೈಗೊಂಡ ನಿರ್ಧಾರ ಗ್ರಾಮಗಳ ನಿವಾಸಿಗಳನ್ನು ನಿರಾಳರಾಗುವಂತೆ ಮಾಡಿದೆ. ಬಿಬಿಎಂಪಿ ಸೇರ್ಪಡೆ ಬೆನ್ನಲ್ಲೇ ಈಗ ಆಸ್ತಿಗಳ ಮೌಲ್ಯವೂ ಏರಿಕೆಯಾಗುವ ನಿರೀಕ್ಷೆ ಇದೆ.
ಯಶವಂತಪುರ ವಿಧಾನಸಭಾ ಕ್ಷೇತ್ರದ ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್, ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಲಕ್ಷ್ಮೇಪುರ, ಕಾನ್ಷಿರಾಮ್ನಗರ ಹಾಗೂ ಲಕ್ಷ್ಮೇಪುರ ಗ್ರಾಮದ ಬಡಾವಣೆಗಳ ಜನರಿಗೆ ಪಾಲಿಕೆ ಸೇರುವ ಕನಸು ಸಾಕಾರಗೊಂಡಿದೆ. ಬಿಬಿಎಂಪಿ ಒಡಲು ಸೇರುತ್ತಿರುವ ಕಾನ್ಷಿರಾಮ್ನಗರ, ಲಕ್ಷ್ಮೇಪುರ ಸುತ್ತಲಿನ ಬಡಾವಣೆಗಳದ್ದು ಒಂದು ಕತೆಯಾದರೆ, ಮಲ್ಲಸಂದ್ರ ಮತ್ತು ಉತ್ತರಹಳ್ಳಿ ಮನವರ್ತೆ ಕಾವಲ್ನಲ್ಲಿನ ನಿವಾಸಿಗಳದ್ದು ಮತ್ತೊಂದು ವ್ಯಥೆ. ಶೆಟ್ಟಿಹಳ್ಳಿ ವಾರ್ಡ್ನ ಮಗ್ಗುಲಲ್ಲೇ ಇದ್ದರೂ ಕಾನ್ಷಿರಾಮ್ನಗರ ಮತ್ತು ಲಕ್ಷ್ಮೇಪುರಕ್ಕೆ ಪಾಲಿಕೆಗೆ ಸೇರುವ ಭಾಗ್ಯ ದಕ್ಕಿರಲಿಲ್ಲ. ಹೀಗಾಗಿ, ಸಂಪೂರ್ಣ ನಗರೀಕರಣಗೊಂಡಿದ್ದ ಈ ಪ್ರದೇಶಗಳು ಸೋಮಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲೇ ಉಳಿದುಕೊಂಡು, ಅಗತ್ಯ ಮೂಲಸೌಕರ್ಯಗಳಿಲ್ಲದೆ ಸೊರಗಿ ಹೋಗಿದ್ದವು.
ಲಾಬಿಯೋ ಅಥವಾ ಪ್ರಮಾದವೋ?:
ರಾಜ್ಯ ಸರಕಾರವು ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್ನ ಭಾಗಶಃ ಪ್ರದೇಶಗಳು ಸೇರಿದಂತೆ ಒಟ್ಟು 111 ನಗರೀಕರಣಗೊಂಡ ಗ್ರಾಮಗಳನ್ನು ಬಿಬಿಎಂಪಿಗೆ ಸೇರಿಸಲು 2006ರ ನ. 2ರಂದು ಕರಡು ಅಧಿಸೂಚನೆ ಹೊರಡಿಸಿತು. ಆದರೆ, 2007ರ ಜ. 16ರಂದು ಹೊರಡಿಸಿದ ಅಂತಿಮ ಅಧಿಸೂಚನೆಯಲ್ಲಿ ಮಲ್ಲಸಂದ್ರ ಹಾಗೂ ಮನವರ್ತೆ ಕಾವಲ್ನ ಅರ್ಧ ಭಾಗವನ್ನೂ ಕೈಬಿಡಲಾಗಿತ್ತು. ತಲಘಟ್ಟಪುರ ಗ್ರಾಮ ಪಂಚಾಯಿತಿ ಅಧೀನದಲ್ಲಿದ್ದ ಎಲ್ಲಪ್ರದೇಶಗಳನ್ನು ಹೆಮ್ಮಿಗೆಪುರ ವಾರ್ಡ್ಗೆ ಸೇರ್ಪಡೆ ಮಾಡಲಾಯಿತು. ಆದರೆ, ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆ ಕಾವಲ್ನ ಭಾಗಶಃ ಪ್ರದೇಶಗಳನ್ನು, ಸಂಬಂಧವೇ ಇಲ್ಲದ 10 ಕಿ.ಮೀ ದೂರದಲ್ಲಿರುವ ಕಗ್ಗಲೀಪುರ ಗ್ರಾಮ ಪಂಚಾಯಿತಿ ಮಡಿಲಿಗೆ ಹಾಕಲಾಗಿತ್ತು. ಈ ಗ್ರಾಮಗಳನ್ನು ಪಾಲಿಕೆಗೆ ಸೇರಿಸದಿರುವ ಕಾರಣವು ಇಂದಿಗೂ ನಿಗೂಢವಾಗಿಯೇ ಉಳಿದಿದೆ. ಈ ಪ್ರದೇಶಗಳು ಪಾಲಿಕೆ ತೆಕ್ಕೆ ಸೇರದಂತೆ ವ್ಯವಸ್ಥಿತ ಸಂಚು ರೂಪಿಸಿದ್ದರ ಹಿಂದೆ ಪ್ರಭಾವಿ ಬಿಲ್ಡರ್ಸ್ಗಳ ಕೈವಾಡವಿತ್ತೆ ಎಂಬ ಶಂಕೆಯೂ ವ್ಯಕ್ತವಾಗಿದೆ.
ಬಿಬಿಎಂಪಿಗೆ 7 ನಗರಸಭೆ, ಒಂದು ಪುರಸಭೆ ಮತ್ತು 110 ಹಳ್ಳಿಗಳನ್ನು ಸೇರ್ಪಡೆ ಮಾಡಿದ ಸಂದರ್ಭದಲ್ಲಿ ಭೌಗೋಳಿಕವಾಗಿ 552 ಎಕರೆ ವಿಸ್ತೀರ್ಣರುವ ಮಲ್ಲಸಂದ್ರ ಮತ್ತು ನೈಸ್ ರಸ್ತೆಗೆ ಹೊಂದಿಕೊಂಡಿರುವ ಯು.ಎಂ.ಕಾವಲ್ ಪ್ರದೇಶಗಳಲ್ಲಿ ಗಗನಚುಂಬಿ ಅಪಾರ್ಟ್ಮೆಂಟ್ಗಳ ನಿರ್ಮಾಣ ಪರ್ವ ಶುರುವಾಗಿತ್ತು. ಪಾಲಿಕೆಗೆ ಸೇರಿದರೆ ಕಟ್ಟಡ ನಕ್ಷೆ ಮಂಜೂರಾತಿ, ಒಸಿ, ಸಿಸಿ ಶುಲ್ಕ ಮತ್ತು ಕೋಟ್ಯಂತರ ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಅಲ್ಲದೇ ಅಧಿಕ ಅಂತಸ್ತುಗಳಿಗೆ ಅನುಮತಿ ಸಿಗುವುದಿಲ್ಲವೆಂಬ ಕಾರಣಕ್ಕೆ ರಿಯಲ್ ಎಸ್ಟೇಟ್ ಸಂಸ್ಥೆಗಳು, ಪ್ರಭಾವ ಬಳಸಿ ಈ ಎರಡೂ ಗ್ರಾಮಗಳು ಪಾಲಿಕೆಗೆ ಸೇರಿದಂತೆ ನೋಡಿಕೊಂಡಿವೆ ಎಂಬ ಆರೋಪ ಕೇಳಿಬಂದಿದೆ.

ಮಲ್ಲಸಂದ್ರ ಗ್ರಾಮವು ಈಗಲೂ ಕಗ್ಗಲೀಪುರ ಗ್ರಾಮ ಪಂಚಾಯಿತಿಯಲ್ಲಿಯೇ ಇದೆ. ಸ್ವತ್ತುಗಳ ಮಾಲೀಕರು ಅಲ್ಲಿಯೇ ಕಂದಾಯ ಕಟ್ಟುತ್ತಿದ್ದಾರೆ. ಆದರೆ, ಪಂಚಾಯಿತಿಯಿಂದ ಏನೇನೂ ಸೌಲಭ್ಯಗಳು ದೊರಕುತ್ತಿಲ್ಲ. ಕಸ ನಿರ್ವಹಣೆ, ಬೀದಿದೀಪ, ಚರಂಡಿ, ಒಳಚರಂಡಿ, ಕುಡಿಯುವ ನೀರಿಗಾಗಿ ಈ ಗ್ರಾಮದ ಜನರು ಪರಿತಪಿಸುವಂತಾಗಿದೆ. ಇ-ಖಾತೆ ಕೂಡ ಸಿಕ್ಕಿಲ್ಲ. ಈ ಗ್ರಾಮದಲ್ಲಿನ ಆಸ್ತಿಗಳ ಮಾಲೀಕರು ಈವರೆಗೆ 68.52 ಲಕ್ಷ ರೂ. ಕಂದಾಯ ಪಾವತಿಸಿದ್ದಾರೆ.
ಮಲ್ಲಸಂದ್ರ ಗ್ರಾಮದಲ್ಲಿಈಗಾಗಲೇ ಹಲವು ಅಪಾರ್ಟ್ಮೆಂಟ್ಗಳು, ಶಿಕ್ಷಣ ಸಂಸ್ಥೆಗಳು ತಲೆ ಎತ್ತಿವೆ. ಹಲವು ವಸತಿ ಸಮುಚ್ಛಯಗಳು ನಿರ್ಮಾಣ ಹಂತದಲ್ಲಿವೆ. ಗೋದ್ರೇಜ್, ಸುರಭಿ, ಸಲಾರ್ಪುರಿಯಾ ಸತ್ವ, ಶ್ರೀರಾಮ್ ಸಿಂಪೋನಿ, ಪೂರ್ವಾಂಕರ ಹೈಲ್ಯಾಂಡ್ಸ್, ಪ್ರಾವಿಡೆಂಟ್ ಸೇರಿದಂತೆ ಹಲವು ರಿಯಲ್ ಎಸ್ಟೇಟ್ ಸಂಸ್ಥೆಗಳು ಸಾವಿರಾರು ಫ್ಲ್ಯಾಟ್ಗಳನ್ನು ನಿರ್ಮಿಸಿವೆ. ಈ ಗ್ರಾಮವು ಪಾಲಿಕೆಗೆ ಸೇರ್ಪಡೆಯಾಗುವುದರಿಂದ ನಿವೇಶನಗಳು, ಫ್ಲ್ಯಾಟ್ಗಳ ಮೌಲ್ಯವು ಜಾಸ್ತಿಯಾಗಲಿದೆ.
''ಪಾಲಿಕೆಗೆ ಸೇರಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸಿದೆವು. ಇದೀಗ ಶಾಸಕ, ಸಚಿವ ಎಸ್.ಟಿ.ಸೋಮಶೇಖರ್ ಅವರ ಪ್ರಯತ್ನದಿಂದ ಮಲ್ಲಸಂದ್ರ ಪಾಲಿಕೆಗೆ ಸೇರ್ಪಡೆಗೊಂಡಿದೆ,'' ಎಂದು ಶ್ರೀರಾಮ್ ಸಿಂಪೋನಿ ಅಪಾರ್ಟ್ಮೆಂಟ್ನ ಪ್ರೊ. ಸತ್ಯನಾರಾಯಣ, ಶ್ರೀರಾಮ್ ಬಾಲಸುಬ್ರಮಣ್ಯ ತಿಳಿಸಿದರು.

ಮಲ್ಲಸಂದ್ರ ಮತ್ತು ಉತ್ತರಹಳ್ಳಿ ಮನವರ್ತೆ ಕಾವಲ್ನಲ್ಲಿನ ನಿವಾಸಿಗಳ ಹೆಸರುಗಳು ಗ್ರಾಮ ಪಂಚಾಯಿತಿ ಮತದಾರರ ಪಟ್ಟಿಯಲ್ಲಿಲ್ಲ. ಇವರು ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ ಪಂಚಾಯಿತಿ ಚುನಾವಣೆಯಲ್ಲಿಮತವನ್ನೇ ಚಲಾಯಿಸಿಲ್ಲ. ಬದಲಿಗೆ ಇವರ ಹೆಸರುಗಳು ಪಾಲಿಕೆಯ ಹೆಮ್ಮಿಗೆಪುರ ವಾರ್ಡ್ನ ಮತದಾರರ ಪಟ್ಟಿಯಲ್ಲಿದ್ದು, ಪ್ರತಿ ಚುನಾವಣೆಯಲ್ಲಿಇಲ್ಲಿಯೇ ಮತ ಹಾಕುತ್ತಿದ್ದಾರೆ.

''2016ರ ನವೆಂಬರ್ನಲ್ಲಿಪಾಲಿಕೆಯ ಕಂದಾಯ ವಿಭಾಗದ ಅಧಿಕಾರಿಗಳು ಖಾತಾ ಮೇಳ ನಡೆಸಿ, ಅರ್ಜಿಗಳನ್ನು ಸ್ವೀಕರಿಸಿದ್ದರು. ಬಳಿಕ ಈ ಪ್ರದೇಶವು ಪಾಲಿಕೆಗೆ ಸೇರುವುದಿಲ್ಲವೆಂದು ಖಾತಾ ವಿತರಣೆ ತಡೆ ಹಿಡಿದರು. ಅಲ್ಲಿಂದ ಪಾಲಿಕೆಗೆ ಸೇರಿಸಬೇಕೆಂಬ ಹೋರಾಟ ಶುರು ಮಾಡಿದೆವು. ತೆರಿಗೆಯನ್ನಷ್ಟೇ ಕಟ್ಟಿಸಿಕೊಳ್ಳುವ ಪಾಲಿಕೆಯು ರಸ್ತೆ, ಬೀದಿದೀಪ ಸೇರಿದಂತೆ ಯಾವುದೇ ಮೂಲಸೌಕರ್ಯ ಕಲ್ಪಿಸುತ್ತಿಲ್ಲ. ಅತ್ತ ಗ್ರಾ.ಪಂ, ಇತ್ತ ಪಾಲಿಕೆಗೂ ಸೇರದ ಪ್ರದೇಶದಲ್ಲಿರುವ ನಾವು ಸೌಲಭ್ಯಕ್ಕಾಗಿ ಬೇಡುವ ಪರಿಸ್ಥಿತಿ ನಿರ್ಮಾಣವಾಗಿತ್ತು,'' ಎಂದು ಶೋಭಾ ಸನ್ಕ್ರೆಸ್ಟ್ನ ನಿವಾಸಿ ವಾಣಿ ಅಳಲು ತೋಡಿಕೊಂಡರು.
''ಅಧಿಕೃತ ದಾಖಲೆಗಳಲ್ಲಿ ಪಾಲಿಕೆ ಅಧೀನದಲ್ಲಿಲ್ಲದ್ದರೂ 2018ರವರೆಗೆ ತೆರಿಗೆ ಪಾವತಿಸಲಾಗಿದೆ. ಆದರೆ, ಪಾಲಿಕೆಯಿಂದ ಯಾವುದೇ ಮೂಲಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ, ಕೆಲವರು ತೆರಿಗೆ ಪಾವತಿ ಮಾಡುತ್ತಿಲ್ಲ. 'ಎ' ಖಾತಾ ನೀಡಲು ಅಧಿಕಾರಿಗಳು ನಿರಾಕರಿಸಿದಂದಿನಿಂದಲೇ ಪಾಲಿಕೆಗೆ ಸೇರಿಸುವಂತೆ ಹೋರಾಟ ಆರಂಭಿಸಿದೆವು. ಈಗ ಹೋರಾಟಕ್ಕೆ ಫಲ ಸಿಕ್ಕಿದೆ,'' ಎಂದು ಶೋಭಾ ಹಿಲ್ವ್ಯೂ ಅಪಾರ್ಟ್ ನಿವಾಸಿಗಳ ಸಂಘದ ಸದಸ್ಯರಾದ ಸುಬ್ರಮಣ್ಯ ಪೊಡಿಪಾಡಿ ಮತ್ತು ಚೈತನ್ಯಾ ಸುಬ್ರಮಣ್ಯ 'ವಿಜಯ ಕರ್ನಾಟಕ' ಬಳಿ ಸಂತಸ ಹಂಚಿಕೊಂಡರು.
ಬೆಂಗಳೂರು: ಆಸ್ತಿ ಮಾಲೀಕರ ಮೇಲೆ ‘ಕರ’ ಭಾರ, ಕೊರೊನಾ ಸಂಕಷ್ಟ ನಡುವೆ ನಗರ ವಾಸಿಗಳಿಗೆ ಮತ್ತೊಂದು ಶಾಕ್

ತಲಘಟ್ಟಪುರ ಸಮೀಪದ ಉತ್ತರಹಳ್ಳಿ ಮನವರ್ತೆ ಕಾವಲ್ನಲ್ಲಿನ ಶೋಭಾ ಹಿಲ್ವ್ಯೂ, ಸನ್ಸ್ಕೇಪ್, ಸನ್ಕ್ರೆಸ್ಟ್ ಅಪಾರ್ಟ್ಮೆಂಟ್ಗಳು ಹಾಗೂ ಸುತ್ತಮುತ್ತಲಿನ ನಿವಾಸಿಗಳಲ್ಲಿ ತಾವು ಪಾಲಿಕೆ ಅಥವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದ್ದೇವೆಯೇ ಎಂಬ ಗೊಂದಲದಲ್ಲಿ ಮುಳುಗಿ ಹೋಗಿದ್ದರು. ಬಿಬಿಎಂಪಿ ರಚನೆಯಾದ ಬಳಿಕ 2010-11 ಮತ್ತು 2011-12ರಲ್ಲಿ ಫ್ಲ್ಯಾಟ್ಗಳನ್ನು ಖರೀದಿ ಮಾಡಿದ್ದವರು ಕಗ್ಗಲೀಪುರ ಗ್ರಾ.ಪಂಚಾಯಿತಿಯಲ್ಲೇ ಕಂದಾಯ ಕಟ್ಟಿದ್ದರು. ಆನಂತರ ಪಾಲಿಕೆಯಲ್ಲಿಆಸ್ತಿ ತೆರಿಗೆ ಪಾವತಿಸಲು ಶುರು ಮಾಡಿದರು.
ಆಸ್ತಿ ತೆರಿಗೆ ಪಾವತಿಸದ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡುತ್ತಿದ್ದ ಪಾಲಿಕೆಯು, 'ಎ' ಖಾತಾ ಕೇಳಿದವರಿಗೆ 'ನೀವಿರುವ ಪ್ರದೇಶ ಪಾಲಿಕೆ ವ್ಯಾಪ್ತಿಗೆ ಬರುವುದಿಲ್ಲ, ಕಗ್ಗಲೀಪುರ ಗ್ರಾ.ಪಂ ವ್ಯಾಪ್ತಿಗೆ ಬರುತ್ತದೆ' ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಹೀಗಾಗಿ, ಬಹುತೇಕರು ಖಾತಾ ನೀಡದ ಹೊರತು ಆಸ್ತಿ ತೆರಿಗೆ ಕಟ್ಟುವುದಿಲ್ಲವೆಂದು ಹೋರಾಟ ನಡೆಸುತ್ತಿದ್ದಾರೆ. ಪಾಲಿಕೆ ಅಧೀನಕ್ಕೆ ಬಾರದ ಈ ಅಪಾರ್ಟ್ಮೆಂಟ್ನಲ್ಲಿನ ಹಲವು ಫ್ಲ್ಯಾಟ್ಗಳಿಗೆ 'ಬಿ' ಖಾತಾ ಹೇಗೆ ನೀಡಲಾಯಿತು ಎಂಬ ವಿಚಾರವು ಕುತೂಹಲ ಮೂಡಿಸಿದೆ. ಅಧಿಕಾರಿಗಳು ಲಂಚ ಪಡೆದು ನಕಲಿ 'ಬಿ' ಖಾತಾ ನೀಡಿದ್ದಾರೆ ಎಂಬ ಆರೋಪವಿದೆ.
ಕಸ ಎಸೆಯುವವರ ಮೇಲೆ ಕ್ಯಾಮೆರಾಗಳ ಕಣ್ಗಾವಲು: ಎಲ್ಲೆಂದರಲ್ಲಿ ಕಸ ಹಾಕಿದ್ರೆ ಸಿಕ್ಕಿ ಬೀಳ್ತೀರಿ ಹುಷಾರ್!
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...