ಹೊಸದಿಲ್ಲಿ: ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಥಾನಕ್ಕೆ ಹೊಸ ಆಟಗಾರನನ್ನು ಕಂಡು ಹುಡುಕಿದೆ. ಕಳೆದ ಆಸ್ಟ್ರೇಲಿಯಾ ವಿರುದ್ಧದ ಯಶಸ್ಸಿನ ಬಳಿಕ ಹೊಸ ಯೋಜನೆಯೊಂದಿಗೆ ಕಣಕ್ಕಿಳಿದಿದೆ. ಅದೇ ಹೊತ್ತಿಗೆ ತಮಗೆ ಲಭಿಸಿದ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ. ಅತ್ತ ಉದಯೋನ್ಮುಖ ರಿಷಬ್ ಪಂತ್ ಅವಕಾಶ ವಂಚಿತವಾಗಿದ್ದಾರೆ. ನೂತನ ಯೋಜನೆಯಿಂದ ತಂಡವು ಉತ್ತಮ ಸಮತೋಲನವನ್ನು ಕಾಪಾಡಿಕೊಂಡಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಥಾನಕ್ಕೆ ಕೆಎಲ್ ರಾಹುಲ್ ಹಾಗೂ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂಬುದಕ್ಕೆ ಸಂಬಂಧಪಟ್ಟಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ಕೆಎಲ್ ರಾಹುಲ್ ಪಾತ್ರವನ್ನು ನಾಯಕ ವಿರಾಟ್ ಕೊಹ್ಲಿ ಹಾಗೂ ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸುತ್ತಾರೆ ಎಂದು ದಾದಾ ತಿಳಿಸಿದರು. ಏಕದಿನ ಹಾಗೂ ಟ್ವೆಂಟಿ-20 ಕ್ರಿಕೆಟ್ನಲ್ಲಿ ರಾಹುಲ್ ಉತ್ತಮವಾಗಿ ಆಡುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲೂ ಉತ್ತಮ ಆರಂಭ ಪಡೆದಿದ್ದರು. ಬಳಿಕ ಅಲ್ಪ ಹಿನ್ನೆಡೆ ಎದುರಿಸಿದರು. ಆದರೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ನಿಜಕ್ಕೂ ಅತ್ಯುತ್ತಮವಾಗಿ ಆಡುತ್ತಿದ್ದಾರೆ. ಇದೇ ರೀತಿ ಉತ್ತಮ ಪ್ರದರ್ಶನ ಮುಂದುವರಿಸುವ ನಿರೀಕ್ಷೆಯಿದೆ. ನಾನು ಹೇಳಿದಂತೆಯೇ ರಾಹುಲ್ ಯಾವ ಪಾತ್ರವನ್ನು ವಹಿಸಬೇಕೆಂಬುದನ್ನು ತಂಡವು ನಿರ್ಧರಿಸಲಿದೆ ಎಂದರು. ಮುಂಬರುವ ಟ್ವೆಂಟಿ-20 ವಿಶ್ವಕಪ್ ಹಿನ್ನೆಲೆಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಸ್ಪರ್ಧೆಯ ವಿಚಾರವನ್ನು ಪ್ರಶ್ನಿಸಿದಾಗ, ಇವೆಲ್ಲವನ್ನು ಆಯ್ಕೆಗಾರರು, ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿ ಶಾಸ್ತ್ರಿ ನಿರ್ಧರಿಸುತ್ತಾರೆ. ಅವರು ಏನೇ ಯೋಚನೆ ಮಾಡಿದರೂ ಅದೇ ರೀತಿಯಾಗಿ ನಡೆಯಲಿದೆ ಎಂದರು. ಈ ಮೊದಲು ತಮಗೆ ವಹಿಸಿಕೊಟ್ಟಿರುವ ನೂತನ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಆನಂದಿಸುತ್ತಿರುವುದಾಗಿ ಕೆಎಲ್ ರಾಹುಲ್ ತಿಳಿಸಿದ್ದರು. ವಿಕೆಟ್ ಹಿಂದುಗಡೆ ಕೀಪಿಂಗ್ ಮಾಡುವದರಿಂದ ಪಿಚ್ ಅನ್ನು ಹತ್ತಿರದಿಂದ ಗ್ರಹಿಸಲು ಮತ್ತು ಇದರಿಂದ ಉತ್ತಮ ಬ್ಯಾಟಿಂಗ್ ಮಾಡಲು ನೆರವಾಗುತ್ತಿದೆ. ಅಲ್ಲದೆ ಪಿಚ್ ಹೇಗೆ ವರ್ತಿಸುತ್ತಿದೆ ಎಂಬ ಸಂದೇಶವನ್ನು ತಂಡಕ್ಕೆ ಹಂಚಿಕೊಳ್ಳುತ್ತಿರುವುದಾಗಿ ರಾಹುಲ್ ಸೇರಿಸಿದ್ದರು. ಅಂತಿಮವಾಗಿ ರಿಷಬ್ ಪಂತ್ ತಂಡದಲ್ಲಿ ಕಾಣಿಸಿಕೊಳ್ಳುವರೇ ಎಂಬುದನ್ನು ಕೇಳಿದಾಗ, ಇದರ ಬಗ್ಗೆ ನನಗೆ ಗೊತ್ತಿಲ್ಲ ಎಂದಷ್ಟೇ ರಾಹುಲ್ ಉತ್ತರಿಸಿದ್ದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2uA1da5