ಖಾತೆ ಹಂಚಿಕೆ ಸೋಮವಾರಕ್ಕೆ ಪೂರ್ಣ: ಮಹಾ ಖಾತೆಗಳು ಯಾರಿಗೆ?

ಮುಂಬಯಿ: ಸಂಪುಟ ವಿಸ್ತರಣೆ ವಿಚಾರದಲ್ಲಿ ಯಾವುದೇ ವಿಧವಾದ ಆಂತರಿಕ ಕಲಹಗಳಿಲ್ಲ ಎಂದು ಎನ್‌ಸಿಬಿ ನವಾಬ್‌ ಮಲಿಕ್‌ ಸ್ಪಷ್ಟಪಡಿಸಿದ್ದಾರೆ. ಶಿವ ಸೇನೆ, ಕಾಂಗ್ರೆಸ್‌ ಮತ್ತು ಎನ್‌ಸಿಪಿಯಲ್ಲಿ ಹೊಸ ಖಾತೆಗಳ ಹಂಚಿಕೆಯ ವಿಚಾರದಲ್ಲಿ ಗೊಂದಲಗಳಿಲ್ಲ. ಯಾರಿಗೆ ಯಾವ ಖಾತೆ ಎಂಬ ವಿಚಾರದಲ್ಲಿ ವಿಚಾರ ವಿಮರ್ಶೆ ನಡೆಯುತ್ತಿದೆ. ಜ.6 ರೊಳಗಾಗಿ ಖಾತೆಗಳ ಹಂಚಿಕೆ ಕಾರ್ಯ ಪೂರ್ಣವಾಗಲಿದೆ ಎಂದು ನವಾಬ್‌ ಮಲಿಕ್‌ ಹೇಳಿದ್ದಾರೆ. 2019, ಡಿ.30 ರಂದು ಮಹಾ ಮೈತ್ರಿ ಸರಕಾರ ಸಂಪುಟ ವಿಸ್ತರಣೆ ನಡೆಸಿದ್ದು, ಎನ್‌ಸಿಪಿಯಿಂದ ಅತಿಹೆಚ್ಚು ಸಚಿವರನ್ನು ಆಯ್ಕೆ ಮಾಡಲಾಗಿತ್ತು. ಅಂತೆಯೇ ಶಿವಸೇನೆಗೆ 15, ಕಾಂಗ್ರೆಸ್‌ 12 ಸಚಿವ ಸ್ಥಾನಗಳನ್ನು ಹಂಚಿಕೆ ಮಾಡಲಾಗಿತ್ತು. ಮಹಾರಾಷ್ಟ್ರದ ಒಟ್ಟಾರೆ 288 ಸ್ಥಾನಗಳ ಪೈಕಿ, ಶಿವಸೇನೆಗ 56, ಎನ್‌ಸಿಪಿ 54 ಹಾಗೂ ಕಾಂಗ್ರೆಸ್‌ 44 ಸೀಟುಗಳನ್ನು ಗಳಿಸಿತ್ತು. ಮೂಲಗಳ ಪ್ರಕಾರ ಮಹಾ ಮೈತ್ರಿ ಸರಕಾರದಲ್ಲಿ ಗೃಹ, ಹಣಕಾಸು, ನೀರಾವರಿ, ವಸತಿ ಸಚಿವಾಲಯ ಎನ್‌ಸಿಪಿಗೆ ನೀಡುವಂತೆ ಸರಕಾರಕ್ಕೆ ಬೇಡಿಕೆ ಇಡಲಾಗಿತ್ತು ಎನ್ನಲಾಗಿದೆ. ಇಷ್ಟೇ ಅಲ್ಲದೆ, ಖಾತೆ ಹಂಚಿಕೆಯಲ್ಲಿ ಇನ್ನಷ್ಟು ಹೆಸರುಗಳೂ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಅಂತಿಮ ಪಟ್ಟಿಗೆ ವಿಳಂಬ ಮಾಡಲಾಗುತ್ತಿದೆ ಎನ್ನಲಾಗಿದೆ. ಎನ್‌ಸಿಪಿಯ ಅನಿಲ್‌ ದೇಶ್‌ಮುಖ್‌ ಗೃಹ ಇಲಾಖೆಯ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಮಾಹಿತಿಯೂ ಇದ್ದು, ನಗರಾಭಿವೃದ್ಧಿಯ ಹೊಣೆಗಾರಿಕೆ ಶಿವಸೇನೆಯ ಏಕ್‌ನಾಥ್‌ ಶಿಂಧೆಗೆ ಹೆಗಲಿಗೆ, ಕೈಗಾರಿಕಾ ಇಲಾಖೆ ಶಿವಸೇನೆಯ ಸುಭಾಶ್‌ ಸೇಸಾಯಿ ಹಾಗೂ ಕಾಂಗ್ರೆಸ್‌ನ ಬಾಲಸಾಹೇಬ್‌ಗೆ ಕಂದಾಯ ಇಲಾಖೆ ಜವಾಬ್ದಾರಿ ಸಿಗಲಿದೆ ಎಂದು ತಿಳಿದು ಬಂದಿದೆ. ಎನ್‌ಸಿಪಿಯ ದಿಲೀಪ್‌ ವಾಲ್ಸೆ ಪಾಟೀಲ್‌ ಅವರಿಗೆ ಅಬಕಾರಿ ಹಾಗೂ ಕಾರ್ಮಿಕ ಇಲಾಖೆ, ಜಿತೇಂದ್ರ ಅಹವಾದ್‌ಗೆ ವಸತಿ ಹಾಗೂ ಕಾಂಗ್ರೆಸ್‌ನ ವರ್ಷ ಗಾಯಕ್‌ವಾಡ್‌ಗೆ ವೈದ್ಯಕೀಯ ಶಿಕ್ಷಣ ಇಲಾಖೆ ದಕ್ಕಲಿದೆ. ಎನ್‌ಸಿಪಿಯ ಧನಂಜಯ್‌ ಮುಂಡೆ ಸಾಮಾಜಿಕ ನ್ಯಾಯ ಸಚಿವಾಲಯ ಹಾಗೂ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಹಣಕಾಸು ಇಲಾಖೆ ನೋಡಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.


from India & World News in Kannada | VK Polls https://ift.tt/39GLwxW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...