ಭಾರತಕ್ಕೆ ತಾಲಿ'ಬೇನೆ': ಉಗ್ರರ ಸರಕಾರಕ್ಕೆ ಚೀನಾ ಬೆಂಬಲ, ದೇಶಕ್ಕೆ ಮಗ್ಗುಲ ಮುಳ್ಳಾಗಲಿದೆ ಡೆಡ್ಲಿ ಜೋಡಿ

ಹೊಸದಿಲ್ಲಿ: ಅಫ್ಘಾನಿಸ್ತಾನದಲ್ಲಿ ಉಗ್ರರ ನೂತನ ಸರಕಾರ ರಚನೆ ಬೆನ್ನಲ್ಲೇ ಭಾರತಕ್ಕೆ ಹೊಸ ತಲೆ ನೋವು ಶುರುವಾಗಿದೆ. ಕಾಶ್ಮೀರ ವಿಚಾರದಲ್ಲಿ ತಟಸ್ಥ ಧೋರಣೆ ಅನುಸರಿಸುವುದಾಗಿ ಹೇಳಿದ್ದ ತಾಲಿಬಾನಿಗಳು ಯೂ-ಟರ್ನ್‌ ಮಾಡಿದ್ದು, ಶುಕ್ರವಾರ ಭಾರತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ ಉಗ್ರರ ಹೊಸ ಸರಕಾರಕ್ಕೆ ಬೆಂಬಲವು ಭಾರತಕ್ಕೆ ಮಗ್ಗುಲ ಮುಳ್ಳಾಗಿ ಪರಿಣಮಿಸುವ ಸಾಧ್ಯತೆಯಿದೆ. ಈ ಅವಳಿ ಅಪಾಯವನ್ನು ಎದುರಿಸಲು ಭಾರತ ಸಜ್ಜಾಗಬೇಕಿದೆ. ಈಗಾಗಲೇ ಆರ್ಥಿಕ ನೆರವಿನ ಮೂಲಕ ಪಾಕಿಸ್ತಾನವನ್ನು ಕೈಗೊಂಬೆ ಮಾಡಿಕೊಂಡಿರುವ ಚೀನಾ ತಾಲಿಬಾನಿಗಳನ್ನೂ ಇದೇ ಷಡ್ಯಂತ್ರದ ಮೂಲಕ ಬಲೆಗೆ ಬೀಳಿಸಿಕೊಂಡಿದೆ. ಚೀನಾ-ತಾಲಿಬಾನ್‌-ಪಾಕ್‌ ಸ್ನೇಹವು ಭಾರತದ ಪಾಲಿಗೆ ದುಷ್ಟಕೂಟವಾಗಿ ಕಾಡುವ ಸಾಧ್ಯತೆಯಿದೆ. ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಚೀನಾ ತಾಲಿಬಾನಿಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುವ ಸಾಧ್ಯತೆಯಿದೆ. ಇದಕ್ಕಾಗಿ ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನವನ್ನು ನೆಲೆಯಾಗಿ ಬಳಸಿಕೊಳ್ಳುವ ಅಪಾಯವಿದೆ. ಅಫ್ಘಾನಿಸ್ತಾನವನ್ನು ಬಳಸಿಕೊಂಡು ಚೀನಾ ಪರೋಕ್ಷವಾಗಿ ಉಪಟಳ ನೀಡಿದರೂ, ಭಾರತ ನೇರವಾಗಿ ಚೀನಾದತ್ತ ಬೊಟ್ಟು ಮಾಡಲಾಗದು. ಹಾಗೆಂದು ತಾಲಿಬಾನ್‌ ಉಗ್ರ ಸರಕಾರದ ಜತೆಗೆ ನೇರವಾಗಿ ಸ್ನೇಹ ಸಂಬಂಧ ಬೆಳೆಸಲೂ ಭಾರತಕ್ಕೆ ಸೈದ್ಧಾಂತಿಕ ವಿರೋಧಾಭಾಸಗಳು ಅಡ್ಡಿಯಾಗಲಿವೆ. ಅಲ್ಲದೆ, ಉಗ್ರರ ತಾಲಿಬಾನ್‌ ಆಡಳಿತದ ಅಫ್ಘಾನಿಸ್ತಾನವು ಜಾಗತಿಕ ಉಗ್ರರ ಬೀಡಾಗಿ ಪರಿವರ್ತನೆಯಾಗುವ ಅಪಾಯದ ಬಗ್ಗೆಯೂ ಹಲವು ದೇಶಗಳು ಈಗಾಗಲೇ ಕಳವಳ ವ್ಯಕ್ತಪಡಿಸಿವೆ. ಈಗಾಗಲೇ ಪಾಕ್‌ ಬೆಂಬಲಿತ ಅಲ್‌ಕೈದಾ ತಾಲಿಬಾನ್‌ಗೆ ಬಂಬಲ ಘೋಷಿಸಿದೆ. ಈ ಸವಾಲನ್ನು ಎದುರಿಸಲು ಭಾರತ ಹೊಸ ಮಾರ್ಗೋಪಾಯ ಹುಡುಕಬೇಕಿದೆ. ಚೀನಾ ದೋಸ್ತಿಗೆ ಮಣೆ ''ಚೀನಾ ನಮ್ಮ ಮಹತ್ವದ ಪಾಲುದಾರ ರಾಷ್ಟ್ರ. ಅಫ್ಘಾನಿಸ್ತಾನದಲ್ಲಿ ಚೀನಾ ಬೃಹತ್‌ ಹೂಡಿಕೆ ಮಾಡುವ ಮೂಲಕ ದೇಶದ ಹಸಿವು ಮತ್ತು ಬಡತನ ನಿವಾರಣೆಗೆ ಕೊಡುಗೆ ನೀಡಲಿದೆ ಎನ್ನುವ ವಿಶ್ವಾಸವಿದೆ. ದೇಶದಲ್ಲಿಸಮೃದ್ಧ ತಾಮ್ರದ ನಿಕ್ಷೇಪವಿದ್ದು, ಅದರ ಗಣಿಗಾರಿಕೆಯಲ್ಲಿ ಚೀನಾ ತೊಡಗಬಹುದಾಗಿದೆ,'' ಎಂದು ತಾಲಿಬಾನ್‌ ವಕ್ತಾರ ಜಬೀವುಲ್ಲಾ ಮುಜಾಹಿದ್‌ ಹೇಳಿದ್ದಾನೆ. ಕಾಶ್ಮೀರಿ ಮುಸ್ಲಿಮರ ಪರ ಧ್ವನಿ ''ಕಾಶ್ಮೀರಿ ಮುಸ್ಲಿಮರ ಹಕ್ಕುಗಳ ಪರವಾಗಿ ಧ್ವನಿ ಎತ್ತುವ ಹಕ್ಕು ಉಗ್ರ ನಮಗಿದೆ,'' ಎಂದು ತಾಲಿಬಾನ್‌ ಹೇಳಿದೆ. ಈ ಮುನ್ನ ಕಾಶ್ಮೀರ ಭಾರತದ ಆಂತರಿಕ ವಿಚಾರ. ಇದರಲ್ಲಿ ಮೂಗು ತೂರಿಸುವುದಿಲ್ಲ ಎಂದು ಹೇಳಿದ್ದ ತಾಲಿಬಾನ್‌ 'ಕಾಶ್ಮೀರವನ್ನೂ ಇಸ್ಲಾಂ ವಿರೋಧಿಗಳಿಂದ ಮುಕ್ತಗೊಳಿಸಬೇಕು' ಎಂದು ಅಲ್‌ಕೈದಾ ಆಗ್ರಹಿಸಿದ ಬೆನ್ನಲ್ಲಿಯೇ ನಿಲುವು ಬದಲಿಸಿದೆ. ಅಲ್ಲದೆ, ಆಫ್ಘನ್‌ ನಿರಾಶ್ರಿತರು ಹಾಗೂ ತಾಲಿಬಾನ್‌ ವಿರೋಧಿಗಳಿಗೆ ಭಾರತ ಆಶ್ರಯ ನೀಡಿದರೆ ತಕ್ಕ ಉತ್ತರ ನೀಡುತ್ತೇವೆ, ಎಂದೂ ತಾಲಿಬಾನ್‌ ಎಚ್ಚರಿಸಿದೆ. ಈ ಮಧ್ಯೆ, ''ಆಫ್ಘನ್‌ ನೆಲದಲ್ಲಿ ಕೂತು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಬಾರದು,'' ಎಂದು ಸಹ ಉಗ್ರರಿಗೆ ಸ್ಪಷ್ಟ ಸಂದೇಶ ರವಾನಿಸಿದೆ. ಸರಕಾರ ರಚನೆ ಶನಿವಾರ ಅಧಿಕೃತ ಘೋಷಣೆ ಅಫ್ಘಾನಿಸ್ತಾನದಲ್ಲಿ ಉಗ್ರರ ಸರಕಾರ ರಚನೆ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು, ಶನಿವಾರ ಅಧಿಕೃತ ಘೋಷಣೆ ಹೊರಬೀಳಲಿದೆ. ಧಾರ್ಮಿಕ ಸಮಿತಿಯಾದ 'ಶುರಾ' ಸರಕಾರದ ನೇತೃತ್ವ ವಹಿಸಿಕೊಂಡರೆ, ಉಗ್ರ ಸಂಘಟನೆ ಸಹ ಸಂಸ್ಥಾಪಕ ಮುಲ್ಲಾಅಬ್ದುಲ್‌ ಘನಿ ಬರಾದರ್‌ ಸರಕಾರದ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಸರಕಾರದಲ್ಲಿ ಹಕ್ಕಾನಿ ನೆಟ್‌ವರ್ಕ್ ಶೇ.50ರಷ್ಟು ಪಾಲು ಹೊಂದಿರಲಿದೆ ಎಂದು ಮೂಲಗಳು ತಿಳಿಸಿವೆ. ದೋಹಾದಲ್ಲಿರುವ ತಾಲಿಬಾನ್‌ ತಂಡವೇ ಸರಕಾರದಲ್ಲಿ ಶೇ.80ರಷ್ಟು ಪಾಲು ಪಡೆದಿವೆ ಎಂದು ಉಗ್ರ ಸಂಘಟನೆಯ ಉನ್ನತ ಮೂಲಗಳು ತಿಳಿಸಿವೆ.


from India & World News in Kannada | VK Polls https://ift.tt/3jGI7Gs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...