ಲಂಡನ್: ವಿರುದ್ಧ ಲಾರ್ಡ್ಸ್ ಟೆಸ್ಟ್ ಪಂದ್ಯದ ಮೂರನೇ ದಿನ ವೇಗಿ ಜೇಮ್ಸ್ ಅಂಡರ್ಸನ್ ಹಾಗೂ ತಮ್ಮ ನಡುವೆ ನಡೆದಿದ್ದ ಮಾತಿನ ಚಕಮಕಿ ಬಗ್ಗೆ ತೆರೆದಿಟ್ಟಿರುವ ವೇಗಿ , ಈ ಘಟನೆಯು ಎದುರಾಳಿಗೆ 10 ಬಾರಿ ತೀರುಗೇಟು ನೀಡುವಂತೆ ಪ್ರೇರೇಪಿಸಿತ್ತು ಎಂದು ಹೇಳಿಕೊಂಡಿದ್ದಾರೆ. ದಿನೇಶ್ ಕಾರ್ತಿಕ್ ಜೊತೆ ಸ್ಕೈ ಸ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿರುವ ಜಸ್ಪ್ರಿತ್ ಬುಮ್ರಾ, ಜೇಮ್ಸ್ ಆಂಡರ್ಸನ್ಗೆ ಬೌನ್ಸರ್ ಹಾಕಿ ನೋವಿಸುವ ದುರುದ್ದೇಶ ನನಗಿರಲಿಲ್ಲ. ಆದರೆ, ಅಂದಿನ ದಿನ ಹಿರಿಯ ವೇಗಿಯ ಅಹಿತಕರ ಮಾತುಗಳು ನನಗಷ್ಟೇ ಅಲ್ಲದೆ, ಇಡೀ ತಂಡಕ್ಕೆ ತಿರುಗೇಟು ನೀಡಲು ಪ್ರೇರೇಪಿಸಿತ್ತು ಎಂದು ಲಾರ್ಡ್ಸ್ ಟೆಸ್ಟ್ ಅನುಭವವನ್ನು ಬುಮ್ರಾ ಹಂಚಿಕೊಂಡಿದ್ದಾರೆ. "ಈ ಘಟನೆಯ ಸಂಪೂರ್ಣ ಮಾಹಿತಿಗೆ ನಾನು ಹೋಗುವುದಿಲ್ಲ. ಆದರೆ, ನಾವು ಆಟದಲ್ಲಿ ತೊಡಗಿರುವಾಗ ಬ್ಯಾಟ್ಸ್ಮನ್ಗೆ ನೋವು ಮಾಡುವ ಅಥವಾ ಬ್ಯಾಟ್ಸ್ಮನ್ಗೆ ಚೆಂಡಿನಲ್ಲಿ ಹೊಡೆಯುವ ಉದ್ದೇಶ ಇರುವುದಿಲ್ಲ. ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಲು ಬೌನ್ಸರ್ ಹಾಕುವುದು ತಂತ್ರವಷ್ಟೆ. ಆಸ್ಟ್ರೇಲಿಯಾ ಅಥವಾ ದಕ್ಷಿಣ ಆಫ್ರಿಕಾಗೆ ನಾವು ಹೋದಾಗ ಇದನ್ನೇ ಮಾಡುತ್ತೇವೆ," ಎಂದರು. "ಆದರೆ, ಅಂದಿನ ದಿನದಾಟ ಮುಗಿದ ತಕ್ಷಣ ಕೆಲ ಅಹಿತಕರ ಪದಗಳು ವಿನಿಮಯವಾಗಿದ್ದವು. ಇದು ನಿಜವಾಗಿಯೂ ಆಹ್ಲಾದಕರವಲ್ಲ ಹಾಗೂ ಇದರ ಬಗ್ಗೆ ನಾವು ಸಂತೋಷವಾಗಿಲ್ಲ. ಅಂದಹಾಗೆ ಈ ಪದಗಳು ನನ್ನ ಕಿವಿಗೆ ಬಿದ್ದಿರಲಿಲ್ಲ. ಏಕೆಂದರೆ ತುಂಬಾ ಸುಸ್ತಾಗಿದ್ದ ನಾನು ಯಾವುದನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ. ಆದರೆ, ನನ್ನ ಸಹ ಆಟಗಾರರು ಈ ಪದಗಳನ್ನು ಕೇಳಿಸಿಕೊಂಡಿದ್ದರು. ಆದರೆ, ಇಂತಹ ವಿಷಯಗಳಿಗೆ ನಾನು ಜಗಳ ಮಾಡುವ ಅಥವಾ ಕೋಪಗೊಳ್ಳುವ ವ್ಯಕ್ತಿಯಲ್ಲ. ಆದರೆ, ಅವರು ಹೇಳಿದ್ದ ಪದ ನನ್ನ ಕಿವಿಗೆ ಬಿದ್ದಾಗ ನಿಜಕ್ಕೂ ಕೋಪಗೊಂಡಿದ್ದೆ," ಎಂದು ಬುಮ್ರಾ ವಿವರಿಸಿದರು. "ಒಂದು ವೇಳೆ ಇಂತಹ ಘಟನೆ ಮುಂದಿನ ಪಂದ್ಯಗಳಲ್ಲಿ ಎದುರಾದರೆ, ಖಂಡಿತಾ ನಾನು ಹಿಂದೆ ಸರಿಯುವುದಿಲ್ಲ ಹಾಗೂ 10 ಬಾರಿ ಅವರಿಗೆ ತಿರುಗೇಟು ನೀಡುತ್ತೇನೆ. ಅಂದಹಾಗೆ ತಂಡದ ಪ್ರತಿಯೊಬ್ಬರು ಇದರಿಂದ ಕೆರಳಿದ್ದರು ಹಾಗೂ ಕಠಿಣ ಹೋರಾಟ ನಡಸಲು ಸಿದ್ದರಾಗಿದ್ದರು. ಆದರೆ, ನಾವು ಇಲ್ಲಿಗೆ ಬಂದಿರುವುದು ಆಡುವುದಕ್ಕೇ ಹೊರತು ಮಾತಿಗೆ ಮಾತು ಕೊಟ್ಟ ವಿಷಯವನ್ನು ದೊಡ್ಡ ಮಾಡಲು ಅಲ್ಲ ಎಂಬುದು ನಮ್ಮ ಮನಸಿನಲ್ಲಿತ್ತು. ಆದರೆ, ನಮಗೆ ಅವಕಾಶ ಸಿಕ್ಕಾಗ ನಮ್ಮ ತಾಕತ್ತು ಏನೆಂಬುದು ತೋರಿಸಬೇಕೆಂದು ಅಂದುಕೊಂಡಿದ್ದೆವು ಹಾಗೂ ಅದರಂತೆ ತೋರಿಸಿದ್ದೇವೆ," ಎಂದರು. ನಡುವಿನ ಮಾತಿನ ಸಮರದಿಂದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಟಗಾರರು ಕೆರಳಿದ್ದರು. ಅದರಂತೆ ಮೊಹಮ್ಮದ್ ಶಮಿ ಹಾಗೂ ಜಸ್ಪ್ರಿತ್ ಬುಮ್ರಾ ದ್ವಿತೀಯ ಇನಿಂಗ್ಸ್ನಲ್ಲಿ 89 ರನ್ ಜೊತೆಯಾಟವಾಡಿದ್ದರು ಹಾಗೂ ಮೊಹಮ್ಮದ್ ಸಿರಾಜ್ ಅವರ ನಾಲ್ಕು ವಿಕೆಟ್ ಸಾಧನೆಯ ನೆರವಿನಿಂದ ಭಾರತ ದೊಡ್ಡ ಅಂತರದಲ್ಲಿ ಪಂದ್ಯವನ್ನು ಗೆದ್ದುಕೊಂಡಿತ್ತು. ಅಂದಹಾಗೆ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಮೂರನೇ ದಿನ ಮಂದ ಬೆಳಕಿನ ಕಾರಣ ಆಟವನ್ನು ನಿಲ್ಲಿಸುವ ಹೊತ್ತಿಗೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 92 ಓವರ್ಗಳಿಗೆ 3 ವಿಕೆಟ್ ಕಳೆದುಕೊಂಡು 270 ರನ್ ಗಳಿಸಿದೆ ಹಾಗೂ 171 ರನ್ ಮುನ್ನಡೆ ಪಡೆದಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zPe7hw