ಗೋಣಿಕೊಪ್ಪ (): ಶಾಸಕರು ದಿಲ್ಲಿಯಲ್ಲಿ ಇದ್ದಾರೆ. ನಾನು ಹಳ್ಳಿಯಲ್ಲಿ ಇದ್ದೇನೆ. ಯಾವುದೇ ಅಧಿಕಾರಕ್ಕೆ ಹೇರಿಲ್ಲ. ವರಿಷ್ಠರು ಗಮನಹರಿಸಿ ಅಧಿಕಾರ ನೀಡಿದರೆ ಉತ್ತಮ ರೀತಿಯಲ್ಲಿ ನಿಭಾಯಿಸುತ್ತೇನೆ ಎಂದು ಶಾಸಕ ಕೆ.ಜಿ. ಹೇಳಿದರು. ಕುಟ್ಟ ಗಡಿ ಭಾಗದಲ್ಲಿ ಕೊರೊನಾ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವ ಕುರಿತು ಪರಿಶೀಲನೆ ವೇಳೆ ಮಾತನಾಡಿದ ಅವರು, 'ಸಚಿವ ಸ್ಥಾನ ನೀಡಿ ಎಂದು ಪಕ್ಷದ ಪ್ರಮುಖರಲ್ಲಿ ಒತ್ತಾಯ ಮಾಡಿಲ್ಲ. ಸ್ಥಾನದ ಅಧಿಕಾರ ಇಲ್ಲದಿದ್ದರೂ ಶಾಸಕನಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದೇನೆ' ಎಂದು ಹೇಳಿದರು. 'ಪಕ್ಷದಲ್ಲಿನ ನನ್ನ ಪ್ರಾಮಾಣಿಕತೆ ಮತ್ತು ಕ್ಷೇತ್ರದಲ್ಲಿ ಜನತೆಯ ಸೇವೆಯನ್ನು ಪರಿಗಣಿಸಿ ವರಿಷ್ಠರು ಅಧಿಕಾರವನ್ನು ನೀಡಿದರೆ ಕ್ಷೇತ್ರವನ್ನು ಮತ್ತಷ್ಟು ಅನುದಾನದೊಂದಿಗೆ ಅಭಿವೃದ್ಧಿಗೊಳಿಸಲಾಗುವುದು' ಎಂದು ಶಾಸಕ ಕೆ. ಜಿ. ಬೋಪಯ್ಯ ಹೇಳಿದರು. 'ಸಚಿವ ಸ್ಥಾನ ನೀಡಿಲ್ಲ ಎಂದು ಯಾವುದೇ ಕಾರಣಕ್ಕೂ ನಿರಾಸೆಯಾಗುವುದಿಲ್ಲ. ಪ್ರತಿ ವಾರದಂತೆ ಈ ಬುಧವಾರವೂ (ಆಗಸ್ಟ್ 4 ರಂದು) ನಾನು ಬೆಂಗಳೂರಿಗೆ ಕಾರ್ಯ ನಿಮಿತ್ತ ತೆರಳುತ್ತಿದ್ದೇನೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿ ಅಲ್ಲ' ಎಂದು ಬೋಪಯ್ಯ ಸ್ಪಷ್ಟಪಡಿಸಿದರು.
from India & World News in Kannada | VK Polls https://ift.tt/3xojdyW