ಎಲ್ಲೆಡೆ ಹರಡಿದೆ ಚೈನ್‌ಲಿಂಕ್‌ ಜಾಲ..! ಹಣ ದುಪ್ಪಟ್ಟಿನ ಆಸೆಗೆ ಬಲಿಯಾಗಿದ್ದಾರೆ ಅಸಂಖ್ಯಾತ ಅಮಾಯಕರು..!

ವಿನೋದ್‌ ಕುಶಾಲನಗರ ಕುಶಾಲನಗರ: ಹಣ ದ್ವಿಗುಣ, ಚೈನ್‌ಲಿಂಕ್‌, ಸಾಲ ಕೊಡಿಸುವ ಆಮಿಷ, ಕಡಿಮೆ ದುಡ್ಡಿಗೆ ಉಡುಗೊರೆ, ಕಂತಿನಲ್ಲಿ ಸಾಮಗ್ರಿ ಹೀಗೆ ಒಂದಿಲ್ಲೊಂದು ವಂಚನೆ ಪ್ರಕರಣಗಳು ಜಿಲ್ಲೆಯಲ್ಲಿ ಆಗಾಗ್ಗೆ ವರದಿಯಾಗುತ್ತಿದೆ. ಸಾಕಷ್ಟು ಮಂದಿ ಈಗಾಗಲೇ ಇದರಲ್ಲಿ ಹಣ ಕಳೆದುಕೊಂಡಿದ್ದಾರೆ. ಕೆಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಮಾತ್ರ ಪೊಲೀಸರಲ್ಲಿ ದೂರು ದಾಖಲಾಗಿದೆ. ಜಿಲ್ಲೆಯ ವಾಣಿಜ್ಯ ನಗರಿ ಕುಶಾಲನಗರ ಕೇಂದ್ರೀಕೃತವಾಗಿ ಈ ವಂಚನೆ ಜಾಲ ಹಬ್ಬಿದೆ ಎನ್ನುವ ಆರೋಪ ಕೇಳಿಬಂದಿದೆ. ದಿಢೀರ್‌ ಶ್ರೀಮಂತರಾಗಬೇಕು ಎನ್ನುವ ಜನಸಾಮಾನ್ಯರ ದೌರ್ಬಲ್ಯವನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ವಂಚಕರು ದಿನಕ್ಕೊಂದು ವೇಷ ಹಾಕಿಕೊಂಡು ಮೋಸ ಮಾಡುತ್ತಾ ಹಣ ಸಂಪಾದಿಸುತ್ತಿದ್ದಾರೆ. ಮೊಬೈಲ್‌ ಮತ್ತಿತರ ಆಧುನಿಕತೆಯ ಅನಿವಾರ್ಯತೆಗಳೂ ವಂಚಕರ ಕೆಲಸವನ್ನು ಸುಲಭವಾಗಿಸುತ್ತಿದೆ. ಆ್ಯಪ್‌, ಸಾಫ್ಟ್‌ವೇರ್‌ಗಳ ಮೂಲಕ ನಾಜೂಕಾಗಿ ವಂಚನೆಯ ಜಾಲ ಹೆಣೆದು ಮುಗ್ಧರನ್ನು ಬಲಿ ಬೀಳಿಸುತ್ತಿದ್ದಾರೆ. ಕೊಡಗಿನಲ್ಲಿ ಹಣಕಾಸಿನ ವಂಚನೆ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ವಿವಿಧ ರೀತಿಯಲ್ಲಿ ಜನಸಾಮಾನ್ಯರನ್ನು ಮರಳು ಮಾಡಿ ತಮ್ಮ ಖಜಾನೆ ಭರ್ತಿ ಮಾಡಿಕೊಂಡು ಮತ್ತೊಂದು ಊರಿಗೆ ಸ್ಥಳ ಬದಲಾಯಿಸಿ ಅಲ್ಲಿಯೂ ಕೈ ಚಳಕ ತೋರಿಸುತ್ತಿದ್ದಾರೆ. ವಂಚನೆಗೆ ಒಳಗಾದವರಲ್ಲಿ ಹೆಚ್ಚಿನವರು ಪೊಲೀಸರಿಗೆ ದೂರು ನೀಡಲು ಹಿಂಜರಿಯುವುದರಿಂದ ವಂಚಕರ ದುಷ್ಕೃತ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತಿದೆ. ಜಿಲ್ಲೆಯಲ್ಲಿಯೇ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣ ಹೆಗ್ಗಳಿಕೆಯ ಕುಶಾಲನಗರ ಕೇಂದ್ರೀಕೃತವಾಗಿ ಕೊಡಗಿನಲ್ಲಿ ವಂಚಕರ ಜಾಲ ಬಲವಾಗಿ ಬೇರು ಬಿಟ್ಟಿದೆ ಎನ್ನಲಾಗುತ್ತಿದೆ. ಹಣ ದ್ವಿಗುಣಗೊಳಿಸುವ ದಂಧೆ, ಸಾಲದ ಸ್ಕೀಂ, ಅಕ್ರಮ ಚೀಟಿ ವ್ಯವಹಾರ ಇಲ್ಲಿ ಸಕ್ರಿಯವಾಗಿರುವ ಬಗ್ಗೆ ಮಾಹಿತಿ ಇದೆ. ಹಲವರು ಇಂತಹ ವಂಚನೆಗಳಿಂದ ಹಣ ಕಳೆದುಕೊಂಡಿದ್ದಾರೆ. ಪೊಲೀಸ್‌ ಠಾಣೆಯಲ್ಲೂ ಕೆಲವು ದೂರುಗಳು ದಾಖಲಾಗಿವೆ. ನಿಲ್ಲದ ಚೈನ್‌ಲಿಂಕ್‌ ಕೋಟ್ಯಂತರ ಮೊತ್ತದ ವಹಿವಾಟು ನಡೆಸುತ್ತಿದ್ದ ಚೈನ್‌ಲಿಂಕ್‌ ಒಂದರ ಬಗ್ಗೆ ಸಂಶಯ ಮೂಡಿದ ಕಾರಣ ಪರಿಶೀಲನೆ ನಡೆಸಿದ ಪೊಲೀಸರಿಗೆ ಸಮರ್ಪಕ ದಾಖಲೆಗಳು ಲಭ್ಯವಾಗಿಲ್ಲ. ಹಾಗಾಗಿ ಸದ್ಯದ ಮಟ್ಟಿಗೆ ವ್ಯವಹಾರ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಆದರೆ ಇಲ್ಲಿ ವ್ಯವಹಾರ ನಿಲ್ಲಿಸಿದ್ದರೂ ಇದೇ ಸಂಸ್ಥೆ ಮೈಸೂರಿನಲ್ಲಿ ವ್ಯವಹಾರ ಆರಂಭಿಸಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹಣ ದ್ವಿಗುಣ ಆಮಿಷಕುಶಾಲನಗರ ಮೂಲದ ತಂಡವೊಂದು ಹಣ ದ್ವಿಗುಣಗೊಳಿಸುವ ವ್ಯವಹಾರಕ್ಕೆ ಬೆಂಗಳೂರಿನಲ್ಲಿ ಮೊಬೈಲ್‌ ಆ್ಯಪ್‌ ಸಿದ್ಧಪಡಿಸಿ ಜಿಲ್ಲೆಯ ಜನರನ್ನು ಸೆಳೆದು ವ್ಯವಹಾರ ಆರಂಭಿಸಿತ್ತು. ಠೇವಣಿ ಮೊತ್ತಕ್ಕೆ ದುಪ್ಪಟ್ಟು ಹಣ ನೀಡುವ ಆಮಿಷ ಒಡ್ಡಿದ್ದ ವಂಚಕರ ತಂಡ ಆರಂಭದಲ್ಲಿ ಹಲವರಿಗೆ ತನ್ನ ಭರವಸೆಯಂತೆ ಹಣವನ್ನೂ ಕೊಟ್ಟಿತ್ತು. ಆದರೆ ನಂತರದ ದಿನಗಳಲ್ಲಿ ಹಣ ಹಂಚಿಕೆ ಸ್ಥಗಿತಗೊಳ್ಳುತ್ತಿದ್ದಂತೆಯೇ ಸಂತ್ರಸ್ತರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. 16 ಲಕ್ಷ ರೂ. ವಂಚನೆಬೆಂಗಳೂರು ಮೂಲದ ವ್ಯಕ್ತಿಯೊಬ್ಬ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಸಂಸ್ಥೆಯೊಂದನ್ನು ನಡೆಸುತ್ತಿರುವುದಾಗಿ ಸ್ಥಳೀಯ ವ್ಯಕ್ತಿಗೆ ನಂಬಿಸಿ 16 ಲಕ್ಷದಷ್ಟು ಹಣ ಪಡೆದು ವಂಚಿಸಿರುವುದೂ ಇದೆ. ಆಕರ್ಷಕ ಹೆಸರಿನ ಸಂಸ್ಥೆಗಳೂ ಏಜೆಂಟರ ಮೂಲಕ ಸಾರ್ವಜನಿಕರಿಂದ ಹಣ ಪಡೆದು ಕೋಟ್ಯಂತರ ಮೊತ್ತದ ಹಣ ವಂಚಿಸಲಾಗಿದೆ. ಸಾಲವೂ ಇಲ್ಲ, ಹಣವೂ ಇಲ್ಲತಲಾ 1 ಲಕ್ಷ ಸಾಲ ಕೊಡುವುದಾಗಿ ಸಹಕಾರ ಸಂಘದ ಹೆಸರಿನಲ್ಲಿ ಮಹಿಳೆಯರಿಂದ ತಲಾ 5 ಸಾವಿರ ಮುಂಗಡ ಪಡೆದುಕೊಂಡು ಕುಶಾಲನಗರದಲ್ಲಿ ಸಂಸ್ಥೆಯೊಂದು ವಂಚಿಸಿದ ಪ್ರಕರಣ ಹೊಸ ವರ್ಷದ ಆರಂಭದಲ್ಲೇ ನಡೆದಿದೆ. 250 ಕ್ಕೂ ಅಧಿಕ ಮಂದಿಯಿಂದ ತಲಾ 5 ಸಾವಿರ ಪಡೆದುಕೊಳ್ಳಲಾಗಿದ್ದು, ಸಾಲವೂ ಕೊಡದೆ, ಪಡೆದ ಹಣವೂ ಹಿಂತಿರುಗಿಸದೆ ಸಂಸ್ಥೆಯ ಕಚೇರಿಗೆ ಬೀಗ ಹಾಕಲಾಗಿದೆ.


from India & World News in Kannada | VK Polls https://ift.tt/2KcQyKU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...