ಯುದ್ಧನೌಕೆ ವಿಕ್ರಮಾದಿತ್ಯ ಎಲ್ಲೆಲ್ಲಿ, ಏನೇನು ಮಾಡುತ್ತಿದೆಯೆಂದು ವಿದೇಶಿ ಟ್ವಿಟ್ಟರ್‌ನಲ್ಲಿ ಲೀಕ್‌?

- ಗುರುದತ್ತ ಭಟ್‌, ಇಲ್ಲಿನ ಕದಂಬ ನೌಕಾನೆಲೆಯ ಇಬ್ಬರು ನೌಕಾಸೈನಿಕರು ಹನಿ ಟ್ರ್ಯಾಪ್‌ಗೆ ಬಲಿಯಾಗಿ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ವಿದೇಶಿ ಟ್ವಿಟ್ಟರ್‌ ಹ್ಯಾಂಡಲ್‌ ಒಂದರ ಮೂಲಕ ಯುದ್ಧ ನೌಕೆಯ ಚಲನವಲನಗಳ ಮಾಹಿತಿ ನಿರಂತರವಾಗಿ ಪ್ರಕಟವಾಗುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಬೆಳಕಿಗೆ ಬಂದ ನೌಕಾಸೈನಿಕರ ಹನಿ ಟ್ರ್ಯಾಪ್‌ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಹೈದರಾಬಾದಿನ ಸೈಬರ್‌ ಕ್ರೈಂ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಒಟ್ಟು 11 ನೌಕಾಸೈನಿಕರನ್ನು ಪ್ರಕರಣದಲ್ಲಿ ಬಂಧಿಸಲಾಗಿದ್ದು, ಇವರಲ್ಲಿ ಇಬ್ಬರು ಕಾರವಾರದ ಕದಂಬ ನೌಕಾ ಸೈನಿಕರು ಇದ್ದಾರೆ. ನೌಕಾಧಿಕಾರಿಗಳು ಹೇಳೋದೇನು?: ಈ ಕುರಿತು ಪ್ರತಿಕ್ರಿಯಿಸಿದ ಕದಂಬ ನೌಕಾನೆಲೆಯ ಪ್ಲಾತ್ರ್ಯಗ್‌ ಆಫೀಸರ್‌ ರಿಯರ್‌ ಅಡ್ಮಿರಲ್‌ ಮಹೇಶ ಸಿಂಗ್‌, ''ನೌಕಾಸೇನೆಯ ಗುಪ್ತಚರ ವಿಭಾಗವು ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ರಹಸ್ಯಗಳನ್ನು ಸೋರಿಕೆ ಮಾಡುವ ವೆಬ್‌ಸೈಟ್‌ಗಳು ಕಂಡುಬಂದಲ್ಲಿ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿ ಅಂಥವುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತದೆ'' ಎಂದು ತಿಳಿಸಿದರು. ''ಇತ್ತೀಚೆಗಿನ ಹನಿ ಟ್ರ್ಯಾಪ್‌ ಪ್ರಕರಣದ ಬಳಿಕ ಕದಂಬ ನೌಕಾನೆಲೆಯ ಕಚೇರಿಗಳ ವ್ಯಾಪ್ತಿಯಲ್ಲಿ ಸ್ಮಾರ್ಟ್‌ಫೋನ್‌ ನಿಷೇಧಿಸಲಾಗಿದೆ. ಆದಾಗ್ಯೂ ಯುವ ಜನತೆಯಲ್ಲಿ ಸಾಮಾಜಿಕ ಜಾಲತಾಣಗಳ ಬಗ್ಗೆ ಜಾಗೃತಿಯ ಕೊರತೆ ಸವಾಲಾಗುತ್ತದೆ. ಯುವ ಜನತೆ ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸಿದರೆ ಇಂಥ ಸಮಸ್ಯೆಗಳು ಉದ್ಭವಿಸುವುದಿಲ್ಲ'' ಎಂದರು. ಟ್ವಿಟ್ಟರ್‌ ಹ್ಯಾಂಡಲ್‌ ಮೂಲಕ ವಿಕ್ರಮಾದಿತ್ಯ ಚಲನವಲನ ಪ್ರಸಾರವಾಗುತ್ತಿರುವುದು ದೇಶದ ಭದ್ರತೆಯ ದೃಷ್ಟಿಯಿಂದ ಬಹಳ ಗಂಭೀರವಾದದ್ದಾಗಿದೆ. ಇದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. - ರಿಯರ್‌ ಅಡ್ಮಿರಲ್‌ ಮಹೇಶ ಸಿಂಗ್‌, ಕದಂಬ ನೌಕಾನೆಲೆಯ ಪ್ಲಾತ್ರ್ಯಗ್‌ ಆಫೀಸರ್‌


from India & World News in Kannada | VK Polls https://ift.tt/2IlvMUA

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...